ವೈಕುಂಠ ಏಕಾದಶಿ: ವೃತ್ತಿ- ಆರ್ಥಿಕ ಸಮಸ್ಯೆ, ಮನೆಯಲ್ಲಿ ನೆಮ್ಮದಿಯಿಲ್ಲ ಈ ಸಮಸ್ಯೆಗಳಿಗೆ ಈ ದಿನ ಯಾವ ಪರಿಹಾರ ಒಳ್ಳೆಯದು?

ವೈಕುಂಠ ಏಕಾದಶಿ ಆಚರಣೆ ಮಾಡುವುದರಿಂದ ವೈಕುಂಠದ ಬಾಗಿಲು ನಮಗೆ ತೆರೆಯುತ್ತದೆ, ನಾವು ಮೋಕ್ಷವನ್ನು ಪಡೆಯುತ್ತೇವೆ ಎಂಬುವುದು ಧಾರ್ಮಿಕ ನಂಬಿಕೆ. ಈ ದಿನ ಉಪವಾಸವಿದ್ದು ವೈಕುಂಠ ಏಕಾದಶಿ ಆಚರಣೆ ಮಾಡಿದರೆ ಅವರ ಇಷ್ಟರ್ಥಗಳು ನೆರವೇರುವುದು.

ನಾವು ಈ ಏಕಾದಶಿಯಂದು ಏಕಾದಶಿ ನಿಯಮಗಳನ್ನು ಪಾಲಿಸಿ ಶ್ರೀವಿಷ್ಣುವಿನ ಬಳಿ ಏನು ಬೇಡಿಕೊಳ್ಳುತ್ತೇವೋ ಅದೆಲ್ಲಾ ನೆರವೇರಲಿದೆ.

ಇನ್ನು ನಮ್ಮ ವೃತ್ತಿ ಬದುಕಿನಲ್ಲಿ ಏನಾದರು ಸಮಸ್ಯೆವಿದ್ದರೆ, ಸಂಬಂಧದಲ್ಲಿ ಸಮಸ್ಯೆವಿದ್ದರೆ ಅಥವಾ ಆರ್ಥಿಕ ಸ್ಥಿತಿಯಲ್ಲಿ ಇಳಿಕೆ ಕಂಡು ಬರುತ್ತಿದ್ದರೆ ಈ ಕಷ್ಟಗಳ ನಿವಾರಣೆಗೆ ವೈಕುಂಠ ಏಕಾದಶಿಯಂದು ಕೆಲವೊಂದು ನಿರ್ದಿಷ್ಟ ಪರಿಹಾರ ಮಾಡಬೇಕು, ಅದನ್ನು ಮಾಡಿದರೆ ಸಮಸ್ಯೆ ಬಗೆಹರಿಯಲಿದೆ :

Vaikunta Ekadashi 2025

ವೈಕುಂಠ ಏಕಾದಶಿ
2025ರ ಮೊದಲ ಏಕಾದಶಿಯನ್ನು ಜನವರಿ 10ರಂದು ಆಚರಿಸಲಾಗುವುದು, ಈ ದಿನ ಉಪವಾಸವಿದ್ದು ಶ್ರೀವಿಷ್ಣುವಿ ಸ್ಮರಣೆ ಮಾಡುತ್ತಾ ವೈಕುಂಠ ಏಕಾದಶಿ ಆಚರಣೆ ಮಾಡುತ್ತಾರೆ:

ಆರ್ಥಿಕ ಸಮಸ್ಯೆ ನಿವಾರಣೆಗೆ ಏಕಾದಶಿಯ ಪರಿಹಾರ
ವೈಕುಂಠ ಏಕಾದಶಿಯಂದು ದಾನವನ್ನು ಮಾಡಿ, ಅಗ್ಯತವಿರುವವರಿಗೆ ವಸ್ತ್ರ, ಆಹಾರಗಳನ್ನು ದಾನವನ್ನಾಗಿ ನೀಡಿ. ಇನ್ನು ಶ್ರೀ ವಿಷ್ಣುವಿನ ಜೊತೆಗೆ ಲಕ್ಷ್ಮಿಯನ್ನು ಆರಾಧಿಸಿ. ಶುಕ್ರವಾರದ ದಿನವೇ ಏಕಾದಶಿ ಕೂಡ ಬಂದಿರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದು ಶ್ರೇಷ್ಠ ದಿನವಾಗಿದೆ. ಲಕ್ಷ್ಮಿಯನ್ನು ಸಂಜೆ ಹೊತ್ತಿನಲ್ಲಿ ತುಪ್ಪದ ದೀಪ ಹಚ್ಚಿ ಆರಾಧನೆ ಮಾಡಿ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿನ ಸವಾಲು ದೂರಾಗುವುದು, ಶ್ರೀ ವಿಷ್ಣುವಿನ ಕೃಪೆಯಿಂದ ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುವುದು.

ವೃತ್ತಿ ಬದುಕಿನಲ್ಲಿ ಪ್ರಗತಿ ಸಾಧಿಸಲು
ವೃತ್ತಿ ಬದುಕಿನಲ್ಲಿ ಪ್ರಗತಿ ತುಂಬಾನೇ ಮುಖ್ಯ, ವೃತ್ತಿ ಬದುಕಿನಲ್ಲಿ ಏರಳಿತವಿದ್ದರೆ ಮಾನಸಿಕ ಒತ್ತಡ ಹೆಚ್ಚಾಗುವುದು, ಆರ್ಥಿಕ ಅಭದ್ರತೆ ಕಾಡುವುದು. ಅದೇ ವೃತ್ತಿ ಬದುಕಿನ ಪ್ರಗತಿ ನಮ್ಮ ಬದುಕನ್ನು ಸುಧಾರಿಸುತ್ತದೆ. ವೃತ್ತಿ ಬದುಕಿನ ಸವಾಲುಗಳು ದೂರಾಗಲು ವೈಕುಂಠ ಏಕಾದಶಿಯಂದು ಹಳದಿ ಬಣ್ಣದ ವಸ್ತ್ರ ಧರಿಸಿ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಮಂತ್ರಗಳನ್ನು ಪಠಿಸುತ್ತಾ ಶ್ರೀ ವಿಷ್ಣುವಿನ ಆರಾಧನೆ ಮಾಡಿ.

ಮನೆಯ ನೆಮ್ಮದಿಗಾಗಿ
ವೈಕುಂಠ ಏಕಾದಶಿಯಂದು ಮನೆಮುಂದೆ ತುಳಸಿ ಗಿಡ ನೆಟ್ಟು ಅದನ್ನು ಆರೈಕೆ ಮಾಡಿ. ಇದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ. ಮನೆಯಲ್ಲಿ ನೆಮ್ಮದಿ ಇರಲಿದೆ. ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯ ಬಗೆಹರಿಯಲಿದೆ.

ಈ ಮಂತ್ರಗಳ ಪಠಣೆ ಮಾಡಿ

ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ ವ

ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್

ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ,
ಮೇಘವರ್ಣಂ ಶುಭಾಂಗಂ ಲಕ್ಷ್ಮಿಂಕಾತಂ ಕಮಲಾನಯನಂ,
ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ

ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ
ಬಂಧುಶ್‌ ಚ ಸಖಾ ತ್ವಮೇವ ತ್ವಮೇವ
ವಿದ್ಯಾ ದ್ರವಿಣಂ ತ್ವಮೇವ ತ್ವಮೇವ
ಸರ್ವಂ ಮಮ ದೇವದೇವ

English summary

Vaikunta Ekadashi 2025:Remedies For Financial And Job Related Problem

Vaikunta Ekadashi 2025: These remedies make your life better,
Story first published: Thursday, January 9, 2025, 21:31 [IST]
X
Desktop Bottom Promotion