Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಉತ್ತರಾಖಂಡ್ನಲ್ಲಿ ಯುಸಿಸಿ ಜಾರಿ..! ವಿವಾಹ, ವಿಚ್ಛೇದನ, ಆಸ್ತಿಹಕ್ಕಿನಲ್ಲಿ ಏನೆಲ್ಲಾ ಬದಲಾವಣೆ ಗೊತ್ತಾ?
ದೇಶದಾದ್ಯಂತ ಸದ್ಯ ಹೆಚ್ಚು ಸುದ್ದಿಯಾಗುತ್ತಿರುವ ಏಕರೂಪ ನಾಗರಿಕ ಸಂಹಿತೆಯು ಮೊದಲ ಬಾರಿಗೆ ಅನುಷ್ಠಾನಕ್ಕೆ ಬರುತ್ತಿದೆ. ಉತ್ತರಾಖಂಡ್ ರಾಜ್ಯವು ಈ ನಾಗರಿಕ ಸಂಹಿತೆಯನ್ನು ಜಾರಿ ಮಾಡಿದೆ. ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಏಕರೂಪ ನಾಗರಿಕ ಸಂಹಿತೆಯ ಪೋರ್ಟಲ್ ಅನ್ನು ಕೂಡ ಉದ್ಘಾಟಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ನಿಯವನ್ನು ಅಧಿಕೃತವಾಗಿ ಆರಂಭಿಸುವ ಸೂಚನೆ ನೀಡಿದ್ದಾರೆ.
ಆದ್ರೆ ಈ ನಿಯಮ ಜಾರಿಗೆ ಪ್ರಸ್ತಾವನೆಯಾಗಿದ್ದ ಕಾಲದಿಂದಲೂ ವಿರೋಧವಂತು ಕೇಳಿಬಂದಿದೆ. ದೇಶದಲ್ಲಿ ಹಲವು ವಿರೋಧ ಪಕ್ಷಗಳು ಇದು ಅಸಂವಿಧಾನಿಕ ನಡೆ ಎಂದು ಆರೋಪಿಸುತ್ತಾ ಬಂದಿವೆ. ಹಾಗಾದ್ರೆ ನಾವಿಂದು ಈ ನಿಯಮ ಜಾರಿಯಿಂದ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಅದರಲ್ಲೂ ಮದುವೆ, ವಿಚ್ಚೇದನ, ಆಸ್ತಿ ಹಂಚಿಕೆ ವಿಚಾರದಲ್ಲಿ ಯಾವ ರೀತಿಯ ಬದಲಾವಣೆ ನೋಡಬಹುದು ಎಂಬುದನ್ನು ಇಂದು ತಿಳಿಯೋಣ. ಇದಕ್ಕೂ ಮೊದಲು ಯುಸಿಸಿ ಅಥವಾ ಏಕರೂಪ ನಾಗರಿಕ ಸಂಹಿತೆ ಅಂದರೆ ಏನು ಎಂಬುದನ್ನು ತಿಳಿಯೋಣ.
ಏಕರೂಪ ನಾಗರಿಕ ಸಂಹಿತೆ ಅಥವಾ ಯುನಿಫಾರ್ಮ್ ಸಿವಿಲ್ ಕೋಡ್ ಅಂದರೆ ಏನು?
ಯಾವುದೇ ವ್ಯಕ್ತಿ ತನ್ನ ಧರ್ಮ, ವಾಸ ಸ್ಥಳದ ಆಧಾರದ ಮೇಲೆ ವೈಯಕ್ತಿಕ ಕಾನೂನು ಹೊಂದಿರದೆ ಕೇವಲ ಏಕ ಕಾನೂನು ಅನುಸರಿಸುವ ವಿಧಾನ. ಅದರಲ್ಲೂ ವಿವಾಹ ಕಾಯ್ದೆ, ಉತ್ತರಾಧಿಕಾರ ಕಾಯ್ದೆಗಳು ಪ್ರತ್ಯೇಕವಾಗಿ ಅನುಸರಿಸಲಾಗುತ್ತಿದೆ. ಈ ಕ್ರಮದ ಬದಲಾಗಿ ಒಂದೇ ಕಾನೂನು ಜಾರಿ ಮಾಡುವ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಧರ್ಮಕ್ಕೂ ಒಂದೇ ಕಾನೂನು ಜಾರಿ ಮಾಡುವ ಸಂಹಿತೆ ಇದಾಗಿದೆ. ಈ ಕಾನೂನಿನ ಪ್ರಕಾರ ಮದುವೆ, ಉತ್ತರಾಧಿಕಾರ, ವಿಚ್ಛೇದನಕ್ಕೆ ಒಂದೇ ಕಾನೂನು ಅನ್ವಯವಾಗಲಿದೆ.
ಹಾಗಾದ್ರೆ ಯಾವೆಲ್ಲಾ ನಿಮಯ ಬದಲಾಗುತ್ತಿದೆ?
ಎಲ್ಲಾ ಧರ್ಮದವರಿಗೂ ಒಂದೇ ಸಂಹಿತೆ ಅನ್ವಯ. ವಿವಾಹ ನೋಂದಣಿ ಕಡ್ಡಾಯವಾಗಿ ಮಾಡಬೇಕಿದೆ. ಈ ಮೊದಲು ವಿವಾಹ ನೋಂದಣಿ ಕಡ್ಡಾಯವಾಗಿ ಹಲವರು ಮಾಡುತ್ತಿರಲಿಲ್ಲ. ಆಯಾ ಧರ್ಮದ ಅನುಸಾರವಾಗಿ ವಿವಾಹ ನೋಂದಣಿ ಮಾಡುವಂತಿಲ್ಲ. ಎಲ್ಲಾ ಧರ್ಮದವರಿಗೂ ವಿವಾಹ ವಿಚ್ಛೇದನಕ್ಕೆ ಒಂದೇ ಕಾನೂನು ಅನ್ವಯವಾಗಲಿದೆ. ಹಾಗೆಯೇ ಮದುವೆಯ ನೋಂದಣಿಯಂತೆ ಲಿವ್ -ಇನ್ ರಿಲೇಷನ್ಶಿಪ್ನಲ್ಲಿದ್ದರೂ ಕೂಡ ನೋಂದಣಿ ಕಡ್ಡಾಯ. ಹಾಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾಗ ಮಗು ಜನಿಸಿದರು ಕೂಡ 7 ದಿನಗಳ ಒಳಗೆ ನೋಂದಣಿ ಮಾಡಿಸುವುದು ಕಡ್ಡಾಯ ಆಗಿರಲಿದೆ.
ಹಾಗೆ ಆಸ್ತಿ ಸಂಬಂಧ ಉಯಿಲು ಬರೆಯುವವರು ತಮ್ಮ ಸಂಪೂರ್ಣ ಮಾಹಿತಿಯನ್ನು ದಾಖಲು ಮಾಡಬೇಕಾಗುತ್ತದೆ. ಆಧಾರ್ ನಂಬರ್ ನೀಡಿ ಉಹಿಲು ಬರೆಸುವುದು ಕಡ್ಡಾಯವಾಗಲಿದೆ.
ಈ ಕಾನೂನು ಉತ್ತರಾಖಂಡ್ನಲ್ಲಿ ನೆಲೆಸಿರುವ ನಾಗರಿಕರಿಗೆ ಅನ್ವಯವಾಗಲಿದೆ, ಹಾಗೆ ರಾಜ್ಯದ ಜನರು ಬೇರೆ ರಾಜ್ಯದಲ್ಲಿ ನೆಲೆಸಿದ್ದರೂ ಕೂಡ ಈ ಕಾನೂನು ಅನ್ವಯವಾಗಲಿದೆ.
ಈ ಕಾನೂನು ಜಾರಿಯಿಂದ ಯಾರೊಬ್ಬರಿಗೂ ಸಮಸ್ಯೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆಯೇ ಹೇಳಿದ್ದರು. ಇದು ಯಾರ ವೈಯಕ್ತಿಕ ಕಾನೂನನ್ನು ಹಾನಿಗೊಳಿಸುವುದಿಲ್ಲ, ಅವರ ಹಕ್ಕನ್ನು ಕೂಡ ಕಸಿಯುವುದಿಲ್ಲ ಎಂದಿದ್ದರು.



Click it and Unblock the Notifications











