Just In
- 16 min ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 1 hr ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 5 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 7 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
Don't Miss
- News ಆರ್ಥಿಕ ಸಾಮರ್ಥ್ಯ ಆಧರಿಸಿ ಮಗು ಸುಪರ್ದಿ ನಿರ್ಧರಿಸಲಾಗುವುದಿಲ್ಲ-ಹೈಕೋರ್ಟ್ ಆದೇಶ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಲಗಡಲೆ ಕದ್ದವನಿಗೆ ಬುದ್ಧಿವಂತಿಕೆಯಿಂದ ಪಾಠ ಕಲಿಸಿದ ಬಡ ವ್ಯಾಪಾರಿ: ವೈರಲ್ ವೀಡಿಯೋ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಲಗಡಲೆ ಮಾರುವ ವ್ಯಾಪಾರಿಯ ವೀಡಿಯೊಂದು ಸಕತ್ ವೈರಲ್ ಆಗಿತ್ತು. ಆತ ಬೀದಿಯಲ್ಲಿ ನೆಲಗಡಲೆ ಮಾರುತ್ತಿರುವ ಬಡಪಾಯಿ ವ್ಯಾಪಾರಿ, ವ್ಯಾಪಾರ ಮಾಡಿ ಬರುವ ಬಿಡಿಗಾಸು ಲಾಭದಿಂದ ಅಂಥವರ ಜೀವನ ಸಾಗುತ್ತಿರುತ್ತದೆ. ಅಂಥ ವ್ಯಕ್ತಿಯ ಅನ್ನವನ್ನು ಕಸಿಯುವ ಪ್ರಯತ್ನ ಮಾಡುವುದೆಂದರೆ ಆ ದೇವರು ಮೆಚ್ಚುತ್ತಾನೆಯೇ?
ಹೌದು ಈ ವೀಡಿಯೋದಲ್ಲಿ ವ್ಯಾಪಾರಿ ಬಳಿ ಒಬ್ಬ ಬಂದು ಕಡಲೆಕೊಳ್ಳುತ್ತಾನೆ. ನೋಡಲು ಜೀನ್ಸ್, ಟೀ ಶರ್ಟ್ ಧರಿಸಿ ದುಡ್ಡು ಇರುವವನಂತೆ ಇರುತ್ತಾನೆ, ಆದರೆ ಅವನು ತುಂಬಾ ಹೇಯ ಕೃತ್ಯ ಮಾಡುತ್ತಾನೆ. ಆ ಬಡ ವ್ಯಾಪಾರಿ ಕಡ್ಲೆಕಾಯಿ ತೂಗುತ್ತಿರುವಾಗ ಒಂದಿಷ್ಟು ನೆಲಗಡಲೆ ತೆಗೆದು ತನ್ನ ಟೀ ಶರ್ಟ್ನ ಜೇಬಿನಲ್ಲಿ ತುಂಬಿಕೊಳ್ಳುತ್ತಾನೆ, ಇಲ್ಲಿ ಹೈಲೈಟ್ಸ್ ಆಗಿರುವುದು ಅವನ ಕೆಟ್ಟ ಬುದ್ಧಿಯಲ್ಲ, ಬದಲಿಗೆ ವ್ಯಾಪಾರಿ ಅವನಿಗೆ ಬುದ್ದ ಕಲಿಸಿದ ರೀತಿ, ಅಲ್ಲಿಯೇ ಇರುವುದು ಟ್ವಿಸ್ಟ್...
ಅವನು ವ್ಯಾಪಾರಕ್ಕೆ ಅಂತ ಬಂದು ಸ್ವಲ್ಪ-ಸ್ವಲ್ಪ ನೆಲಗಡಲೆ ತೆಗೆದು ಜೇಬಿನಲ್ಲಿ ತುಂಬಿಕೊಳ್ಳುತ್ತಿರುವುದನ್ನು ವ್ಯಾಪಾರಿಯೂ ಗಮನಿಸಿರುತ್ತಾನೆ, ಹಾಗಂತ ಅದರ ಬಗ್ಗೆ ಅವನ ಬಳಿ ಕೇಳಿದರೆ ಜಗಳಕ್ಕೆ ಬರಬಹುದು, ನಿನ್ನ ನೆಲಗಡಲೆ ನೀನೇ ಇಟ್ಕೋ ಅಂತ ಹೋಗಬಹುದು, ಹೀಗೆ ಮಾಡಿದರೆ ವ್ಯಾಪಾರ ನಷ್ಟ, ಸುಮ್ಮನೆ ಜಗಳದ ರಾದ್ದಾಂತ. ಹಾಗೇನೂ ಆಗಬಾರದು ಎಂದು ಭಾವಿಸಿದ ವ್ಯಾಪಾರಿ ಸೈಲೆಂಟ್ ಆಗಿ ಬುದ್ಧಿ ಕಲಿಸಿದ್ದಾನೆ, ಅವನು ನೆಲಗಡಲೆ ತೂಗಿ ಇನ್ನೇನು ಕವರ್ನಲ್ಲಿ ಹಾಕಬೇಕು ಆಗ ಅವನ ಬಳಿ ಆ ಕಡೆ ತೋರಿಸಿ ಏನೋ ಹೇಳುತ್ತಾನೆ, ಅವನು ಅತ್ತ ತಿರುಗಿದಾಗ ಸ್ವಲ್ಪ ನೆಲಗಡಲೆ ಗುಡ್ಡೆಗೆ ಸರಿದು ಉಳಿದಿದ್ದನ್ನು ಕವರ್ಗೆ ಹಾಕುತ್ತಾನೆ. ಅವನು ಕದ್ದ ನೆಲಗಡಲೆ ಖುಷಿಯಲ್ಲಿದ್ದರೆ ವ್ಯಾಪಾರಿಗೆ ನನಗೆ ನಷ್ಟವಾಗಲಿಲ್ಲ ಎಂಬ ಸಮದಾನ.
ತಾಳ್ಮೆಯಿಂದಲೂ ಪಾಠ ಕಲಿಸಬಹುದು ಎಂಬ ನೀತಿ ಪಾಠವನ್ನು ಈ ನಿಜ ಕತೆಯನ್ನು ಮಕ್ಕಳಿಗೆ ಹೇಳುತ್ತಾ ಹೇಳಬಹುದು ಅಲ್ವಾ?