Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ನೆಲಗಡಲೆ ಕದ್ದವನಿಗೆ ಬುದ್ಧಿವಂತಿಕೆಯಿಂದ ಪಾಠ ಕಲಿಸಿದ ಬಡ ವ್ಯಾಪಾರಿ: ವೈರಲ್ ವೀಡಿಯೋ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಲಗಡಲೆ ಮಾರುವ ವ್ಯಾಪಾರಿಯ ವೀಡಿಯೊಂದು ಸಕತ್ ವೈರಲ್ ಆಗಿತ್ತು. ಆತ ಬೀದಿಯಲ್ಲಿ ನೆಲಗಡಲೆ ಮಾರುತ್ತಿರುವ ಬಡಪಾಯಿ ವ್ಯಾಪಾರಿ, ವ್ಯಾಪಾರ ಮಾಡಿ ಬರುವ ಬಿಡಿಗಾಸು ಲಾಭದಿಂದ ಅಂಥವರ ಜೀವನ ಸಾಗುತ್ತಿರುತ್ತದೆ. ಅಂಥ ವ್ಯಕ್ತಿಯ ಅನ್ನವನ್ನು ಕಸಿಯುವ ಪ್ರಯತ್ನ ಮಾಡುವುದೆಂದರೆ ಆ ದೇವರು ಮೆಚ್ಚುತ್ತಾನೆಯೇ?

ಹೌದು ಈ ವೀಡಿಯೋದಲ್ಲಿ ವ್ಯಾಪಾರಿ ಬಳಿ ಒಬ್ಬ ಬಂದು ಕಡಲೆಕೊಳ್ಳುತ್ತಾನೆ. ನೋಡಲು ಜೀನ್ಸ್, ಟೀ ಶರ್ಟ್ ಧರಿಸಿ ದುಡ್ಡು ಇರುವವನಂತೆ ಇರುತ್ತಾನೆ, ಆದರೆ ಅವನು ತುಂಬಾ ಹೇಯ ಕೃತ್ಯ ಮಾಡುತ್ತಾನೆ. ಆ ಬಡ ವ್ಯಾಪಾರಿ ಕಡ್ಲೆಕಾಯಿ ತೂಗುತ್ತಿರುವಾಗ ಒಂದಿಷ್ಟು ನೆಲಗಡಲೆ ತೆಗೆದು ತನ್ನ ಟೀ ಶರ್ಟ್ನ ಜೇಬಿನಲ್ಲಿ ತುಂಬಿಕೊಳ್ಳುತ್ತಾನೆ, ಇಲ್ಲಿ ಹೈಲೈಟ್ಸ್ ಆಗಿರುವುದು ಅವನ ಕೆಟ್ಟ ಬುದ್ಧಿಯಲ್ಲ, ಬದಲಿಗೆ ವ್ಯಾಪಾರಿ ಅವನಿಗೆ ಬುದ್ದ ಕಲಿಸಿದ ರೀತಿ, ಅಲ್ಲಿಯೇ ಇರುವುದು ಟ್ವಿಸ್ಟ್...
ಅವನು ವ್ಯಾಪಾರಕ್ಕೆ ಅಂತ ಬಂದು ಸ್ವಲ್ಪ-ಸ್ವಲ್ಪ ನೆಲಗಡಲೆ ತೆಗೆದು ಜೇಬಿನಲ್ಲಿ ತುಂಬಿಕೊಳ್ಳುತ್ತಿರುವುದನ್ನು ವ್ಯಾಪಾರಿಯೂ ಗಮನಿಸಿರುತ್ತಾನೆ, ಹಾಗಂತ ಅದರ ಬಗ್ಗೆ ಅವನ ಬಳಿ ಕೇಳಿದರೆ ಜಗಳಕ್ಕೆ ಬರಬಹುದು, ನಿನ್ನ ನೆಲಗಡಲೆ ನೀನೇ ಇಟ್ಕೋ ಅಂತ ಹೋಗಬಹುದು, ಹೀಗೆ ಮಾಡಿದರೆ ವ್ಯಾಪಾರ ನಷ್ಟ, ಸುಮ್ಮನೆ ಜಗಳದ ರಾದ್ದಾಂತ. ಹಾಗೇನೂ ಆಗಬಾರದು ಎಂದು ಭಾವಿಸಿದ ವ್ಯಾಪಾರಿ ಸೈಲೆಂಟ್ ಆಗಿ ಬುದ್ಧಿ ಕಲಿಸಿದ್ದಾನೆ, ಅವನು ನೆಲಗಡಲೆ ತೂಗಿ ಇನ್ನೇನು ಕವರ್ನಲ್ಲಿ ಹಾಕಬೇಕು ಆಗ ಅವನ ಬಳಿ ಆ ಕಡೆ ತೋರಿಸಿ ಏನೋ ಹೇಳುತ್ತಾನೆ, ಅವನು ಅತ್ತ ತಿರುಗಿದಾಗ ಸ್ವಲ್ಪ ನೆಲಗಡಲೆ ಗುಡ್ಡೆಗೆ ಸರಿದು ಉಳಿದಿದ್ದನ್ನು ಕವರ್ಗೆ ಹಾಕುತ್ತಾನೆ. ಅವನು ಕದ್ದ ನೆಲಗಡಲೆ ಖುಷಿಯಲ್ಲಿದ್ದರೆ ವ್ಯಾಪಾರಿಗೆ ನನಗೆ ನಷ್ಟವಾಗಲಿಲ್ಲ ಎಂಬ ಸಮದಾನ.
ತಾಳ್ಮೆಯಿಂದಲೂ ಪಾಠ ಕಲಿಸಬಹುದು ಎಂಬ ನೀತಿ ಪಾಠವನ್ನು ಈ ನಿಜ ಕತೆಯನ್ನು ಮಕ್ಕಳಿಗೆ ಹೇಳುತ್ತಾ ಹೇಳಬಹುದು ಅಲ್ವಾ?



Click it and Unblock the Notifications