Latest Updates
-
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ನೆಲಗಡಲೆ ಕದ್ದವನಿಗೆ ಬುದ್ಧಿವಂತಿಕೆಯಿಂದ ಪಾಠ ಕಲಿಸಿದ ಬಡ ವ್ಯಾಪಾರಿ: ವೈರಲ್ ವೀಡಿಯೋ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಲಗಡಲೆ ಮಾರುವ ವ್ಯಾಪಾರಿಯ ವೀಡಿಯೊಂದು ಸಕತ್ ವೈರಲ್ ಆಗಿತ್ತು. ಆತ ಬೀದಿಯಲ್ಲಿ ನೆಲಗಡಲೆ ಮಾರುತ್ತಿರುವ ಬಡಪಾಯಿ ವ್ಯಾಪಾರಿ, ವ್ಯಾಪಾರ ಮಾಡಿ ಬರುವ ಬಿಡಿಗಾಸು ಲಾಭದಿಂದ ಅಂಥವರ ಜೀವನ ಸಾಗುತ್ತಿರುತ್ತದೆ. ಅಂಥ ವ್ಯಕ್ತಿಯ ಅನ್ನವನ್ನು ಕಸಿಯುವ ಪ್ರಯತ್ನ ಮಾಡುವುದೆಂದರೆ ಆ ದೇವರು ಮೆಚ್ಚುತ್ತಾನೆಯೇ?

ಹೌದು ಈ ವೀಡಿಯೋದಲ್ಲಿ ವ್ಯಾಪಾರಿ ಬಳಿ ಒಬ್ಬ ಬಂದು ಕಡಲೆಕೊಳ್ಳುತ್ತಾನೆ. ನೋಡಲು ಜೀನ್ಸ್, ಟೀ ಶರ್ಟ್ ಧರಿಸಿ ದುಡ್ಡು ಇರುವವನಂತೆ ಇರುತ್ತಾನೆ, ಆದರೆ ಅವನು ತುಂಬಾ ಹೇಯ ಕೃತ್ಯ ಮಾಡುತ್ತಾನೆ. ಆ ಬಡ ವ್ಯಾಪಾರಿ ಕಡ್ಲೆಕಾಯಿ ತೂಗುತ್ತಿರುವಾಗ ಒಂದಿಷ್ಟು ನೆಲಗಡಲೆ ತೆಗೆದು ತನ್ನ ಟೀ ಶರ್ಟ್ನ ಜೇಬಿನಲ್ಲಿ ತುಂಬಿಕೊಳ್ಳುತ್ತಾನೆ, ಇಲ್ಲಿ ಹೈಲೈಟ್ಸ್ ಆಗಿರುವುದು ಅವನ ಕೆಟ್ಟ ಬುದ್ಧಿಯಲ್ಲ, ಬದಲಿಗೆ ವ್ಯಾಪಾರಿ ಅವನಿಗೆ ಬುದ್ದ ಕಲಿಸಿದ ರೀತಿ, ಅಲ್ಲಿಯೇ ಇರುವುದು ಟ್ವಿಸ್ಟ್...
ಅವನು ವ್ಯಾಪಾರಕ್ಕೆ ಅಂತ ಬಂದು ಸ್ವಲ್ಪ-ಸ್ವಲ್ಪ ನೆಲಗಡಲೆ ತೆಗೆದು ಜೇಬಿನಲ್ಲಿ ತುಂಬಿಕೊಳ್ಳುತ್ತಿರುವುದನ್ನು ವ್ಯಾಪಾರಿಯೂ ಗಮನಿಸಿರುತ್ತಾನೆ, ಹಾಗಂತ ಅದರ ಬಗ್ಗೆ ಅವನ ಬಳಿ ಕೇಳಿದರೆ ಜಗಳಕ್ಕೆ ಬರಬಹುದು, ನಿನ್ನ ನೆಲಗಡಲೆ ನೀನೇ ಇಟ್ಕೋ ಅಂತ ಹೋಗಬಹುದು, ಹೀಗೆ ಮಾಡಿದರೆ ವ್ಯಾಪಾರ ನಷ್ಟ, ಸುಮ್ಮನೆ ಜಗಳದ ರಾದ್ದಾಂತ. ಹಾಗೇನೂ ಆಗಬಾರದು ಎಂದು ಭಾವಿಸಿದ ವ್ಯಾಪಾರಿ ಸೈಲೆಂಟ್ ಆಗಿ ಬುದ್ಧಿ ಕಲಿಸಿದ್ದಾನೆ, ಅವನು ನೆಲಗಡಲೆ ತೂಗಿ ಇನ್ನೇನು ಕವರ್ನಲ್ಲಿ ಹಾಕಬೇಕು ಆಗ ಅವನ ಬಳಿ ಆ ಕಡೆ ತೋರಿಸಿ ಏನೋ ಹೇಳುತ್ತಾನೆ, ಅವನು ಅತ್ತ ತಿರುಗಿದಾಗ ಸ್ವಲ್ಪ ನೆಲಗಡಲೆ ಗುಡ್ಡೆಗೆ ಸರಿದು ಉಳಿದಿದ್ದನ್ನು ಕವರ್ಗೆ ಹಾಕುತ್ತಾನೆ. ಅವನು ಕದ್ದ ನೆಲಗಡಲೆ ಖುಷಿಯಲ್ಲಿದ್ದರೆ ವ್ಯಾಪಾರಿಗೆ ನನಗೆ ನಷ್ಟವಾಗಲಿಲ್ಲ ಎಂಬ ಸಮದಾನ.
ತಾಳ್ಮೆಯಿಂದಲೂ ಪಾಠ ಕಲಿಸಬಹುದು ಎಂಬ ನೀತಿ ಪಾಠವನ್ನು ಈ ನಿಜ ಕತೆಯನ್ನು ಮಕ್ಕಳಿಗೆ ಹೇಳುತ್ತಾ ಹೇಳಬಹುದು ಅಲ್ವಾ?



Click it and Unblock the Notifications