Latest Updates
-
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ!
ಝೂನಲ್ಲಿ ವ್ಯಕ್ತಿಯ ಟೀ ಶರ್ಟ್ ಎಳೆದು, ಕಾಲು ಗಟ್ಟಿಯಾಗಿ ಹಿಡಿದ ಒರಾಂಗುಟನ್: ವೀಡಿಯೋ ವೈರಲ್
ಎರಡು ಮೂರು ದಿನಗಳಿಂದ ಒರಾಂಗುಟನ್ (ಗೊರಿಲ್ಲಾ ಜಾತಿಗೆ ಸೇರಿದ ಪ್ರಾಣಿ)ಯ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗ್ತಾ ಇದೆ. ಇದರ ಬಗ್ಗೆ ಅನೇಕ ಚರ್ಚೆಗಳು ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ. ಅದು ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿರುವ ಒರಾಂಗುಟನ್ ವೀಡಿಯೋ ಇದಾಗಿದೆ.

ಆ ವೀಡಿಯೋ ಒಬ್ಬ ವ್ಯಕ್ತಿ ಒರಾಂಗುಟನ್ ಬಳಿ ಹೋಗುವುದನ್ನು ಕಾಣಬಹುದು, ಆದರೆ ಆ ಪ್ರಾಣಿಗದು ಇಷ್ಟವಾಗಲ್ಲ, ಅವನ ಟೀ ಶರ್ಟ್ ಹಿಡಿದು ಎಳೆಯುತ್ತೆ, ಅವನು ಬಿಡಿಸಿಕೊಳ್ಳಲು ನೋಡುವಾಗ ಬಿಡುವುದೇ ಇಲ್ಲ, ಮತ್ತೊಬ್ಬ ವ್ಯಕ್ತಿ ಅವನ ರಕ್ಷಣೆಗೆ ಬರುತ್ತಾರೆ, ಆದರೆ ಒರಾಂಗುಟನ್ ಬಿಡಲು ಸಿದ್ಧವಿರುವುದಿಲ್ಲ, ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೆ. ಈ ವೀಡಿಯೋ ಇದೀಗ ಸಕತ್ ವೈರಲ್ ಆಗಿದ್ದು ಇದರ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಈ ಮೃಗಾಲಯ ವೀಕ್ಷಕರಿಗೆ ಎಷ್ಟು ಸುರಕ್ಷಿತ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇವನು ಅಧಿಪ್ರಸಂಗ ಮಾಡಿರಬಹುದು ಅದಕ್ಕೆ ಹೀಗಾಗಿದ್ದು ಅಂತಿದ್ದಾರೆ.
ಇದೀಗ ಮೃಗಾಲಯದ ಅಧಿಕಾರಿಗಳು ಊ ಕುರಿತು ಪ್ರತಿಕ್ರಿಯೆ ನೀಡಿದ್ದು ' ನಡೆದಿರುವ ಪ್ರಕರಣಕ್ಕೆ ವಿಷಾದ ವ್ಯಕ್ತಿಪಡಿಸುತ್ತೇವೆ, ಆ ವ್ಯಕ್ತಿ ಒರಾಂಗುಟನ್ ಜೊತೆ ಕ್ಲೋಸ್ಅಪ್ ಫೋಟೋ ತೆಗೆಯಲು ನಿರ್ಬಂಧದ ಗೆರೆಯನ್ನು ದಾಟಿ ಒಳ ಹೋಗಿರುವುದರಿಂದ ಈ ರೀತಿಯ ಘಟನೆ ಸಂಭವಿಸಿದೆ ಎಂದು ಹೇಳಿದೆ'.
ಮೈಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗಬಾರದು, ಜಮೈಕಾದ ಮೃಗಾಲಯದಲ್ಲಿ ಇತ್ತೀಚೆಗೆ ಅಲ್ಲಿಯ ಕೆಲಸಗಾರರ ಕೈ ಬೆರಳನ್ನು ಸಿಂಹ ಕಚ್ಚಿ ತುಂಡರಿಸಿದ್ದು ಸುದ್ದಿಯಾಗಿತ್ತು.
ಮೃಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗುವುದು, ಕುಚೇಷ್ಠೆ ಮಾಡುವುದು ಮಾಡಿದರೆ ಈ ರೀತಿಯ ಅಪಾಯಗಳಾಗಬಹುದು ಹುಷಾರ್!



Click it and Unblock the Notifications
