Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
ಮನೆ ಕಳ್ಳತನಕ್ಕೆಂದು ಬಂದು ಎಸಿ ಆನ್ ಮಾಡಿ ಮಲಗಿದ ಕಳ್ಳ..! ಎಬ್ಬಿಸಿದ್ದು ಪೊಲೀಸರು..!
ಬಿಸಿಗಾಳಿ ಜನರನ್ನು ಯಾವ ರೀತಿ ಸಂಕಷ್ಟಕ್ಕೆ ತಳ್ಳಿದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಉತ್ತರ ಭಾರತದಲ್ಲಂತೂ ಬಿಸಿ ಗಾಳಿ ಆರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಜನರ ಕಷ್ಟ ಒಂದು ಕಡೆಯಾದರೆ ಪ್ರಾಣಿಗಳ ಪಾಡು ಹೇಳತೀರದ್ದಾಗಿದೆ. ವಿಪರೀತ ಬಿಸಿಗಾಳಿಗೆ ಜನರ ಜೀವನ ತತ್ತರಿಸಿದೆ.
ಈ ಬಿಸಿಗಾಳಿಗೆ ಹೊರಬಂದ ಜನರು ತಲೆ ತಿರುಗಿ ಬೀಳುವುದು ಅಸ್ವಸ್ಥರಾಗವುವ ಘಟನೆ ನಡೆದಿದೆ. ಅಲ್ಲದೆ ಹಲವು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಅದರಲ್ಲೂ ಪ್ರಾಣಿಗಳು ನೀರಿಲ್ಲದೆ, ಶಾಖ ತಾಳಲಾಗದೆ ಜೀವ ಬಿಟ್ಟಿವೆ. ಕಾಗೆಗಳು, ಬಾವಲಿಗಳು, ಕೋತಿಗಳು ನೆಲದ ಮೇಲೆ ಬೀಳುತ್ತಿರುವ ಘಟನೆಗಳು ವರದಿಯಾಗಿವೆ.

ಆದರೆ ಇಂತಹ ಘಟನೆಗಳ ನಡುವೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮನೆ ಕಳ್ಳತನಕ್ಕೆ ಎಂದು ಗೋಡೆ ಹಾರಿ ಬಂದಿದ್ದ ಕಳ್ಳನೊಬ್ಬ ಎಸಿಯ ತಂಪಾದ ಗಾಳಿಗೆ ಮೈಮರೆತು ಅದೇ ಮನೆಯಲ್ಲಿ ನಿದ್ರೆಗೆ ಜಾರಿದ ವಿಚಿತ್ರ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಕಳ್ಳನೊಬ್ಬ ಲಕ್ನೋದ ಮನೆಗೆ ನುಗ್ಗಿದ ಕಳ್ಳ ತಾನು ಬಂದ ಕೆಲಸ ಮಾಡದೆ ನಿದ್ದೆಗೆ ಜಾರಿದ್ದ.
ವಿಪರೀತವಾಗಿ ಮದ್ಯಪಾನ ಮಾಡಿದ್ದ ವ್ಯಕ್ತಿ ಮನೆಯಲ್ಲಿ ಎಸಿಯನ್ನು ಕಂಡು ಅದನ್ನು ಆನ್ ಮಾಡಲು ನಿರ್ಧರಿಸಿದ್ದಾನೆ. ಬಳಿಕ ಅಲ್ಲಿಯೇ ಕೆಳಗೆ ಶರ್ಟ್ ತೆಗೆದು ಮಲಗಿದ್ದಾನೆ. ಲಕ್ನೋದ ಇಂದಿರಾನಗರ ಪ್ರದೇಶದ ಸೆಕ್ಟರ್ 20 ರಲ್ಲಿ ಈ ಘಟನೆ ನಡೆದಿದೆ.
ವೈದ್ಯ ಸುನೀಲ್ ಪಾಂಡೆ ಎಂಬವರ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದ ಕಳ್ಳ ಐಡಿಯಾ ಮಾಡಿ ಮನೆಯೊಳಗೆ ನುಗ್ಗಿದ್ದ. ಆದರೆ ಮನೆಯೊಳಗೆ ಬಂದಿದ್ದ ಕಳ್ಳನಿಗೆ ಎಸಿ ಕಣ್ಣಿಗೆ ಬಿದ್ದಿದೆ. ತಕ್ಷಣ ಆತ ರಿಮೋಟ್ ತೆಗೆದು ಎಸಿ ಆನ್ ಮಾಡಿ ವಿಶ್ರಾಂತಿ ಪಡೆಯಲು ಮುಂದಾಗಿದ್ದಾನೆ.
ಆತ ಮದ್ಯಪಾನ ಮಾಡಿದ್ದರಿಂದ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಮುಂದಾಗಿದ್ದ. ಜೊತೆಗೆ ಮನೆಯಲ್ಲೂ ಯಾರು ಇರಲಿಲ್ಲ. ಇದನ್ನೇ ಬಳಸಿಕೊಂಡ ಆತ, ಶರ್ಟ್ ತೆಗೆದು ಅಲ್ಲಿಯೇ ಮಲಗಿದ್ದಾನೆ. ಎಸಿ ಆನ್ ಆಗಿದ್ದರಿಂದ ತಂಪಾದ ಗಾಳಿ ಆತನಿಗೆ ಸ್ವರ್ಗದ ಅನುಭವ ನೀಡಿದೆ.
ಆದರೆ ವೈದ್ಯರ ಮನೆ ಬಾಗಿಲು ತೆರೆದಿರುವುದನ್ನು ಕಂಡ ನೆರೆ ಹೊರೆಯವರು ವೈದ್ಯರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಪಾಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ವೈದ್ಯರ ಮನೆಗೆ ಧಾವಿಸಿದ್ದಾರೆ. ಮನೆ ಬಾಗಿಲು ತೆರೆದು ಅಲ್ಲಿಯೇ ಮಲಗಿದ್ದ ಕಳ್ಳನ ಕಂಡು ಪೊಲೀಸರು ಶಾಕ್ ಆಗಿದ್ದಾರೆ. ಜೊತೆಗೆ ಆತನ ಎಬ್ಬಿಸಿ ವಿಚಾರಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, 'ಅವನು ಬಹಳ ಕುಡಿದಿದ್ದನು, ಇದರಿಂದಾಗಿ ನಿದ್ರೆಗೆ ಜಾರಿದ್ದಾನೆ ಮತ್ತು ಎಚ್ಚರವಾಗಲಿಲ್ಲ. ಇದನ್ನು ನೆರೆಹೊರೆಯವರು ಕಂಡು ಕರೆ ಮಾಡಿದ್ದಾರೆ. ನಾವು ಆತನನ್ನು ಬಂಧಿಸಿದ್ದೇವೆ' ಎಂದು ಉತ್ತರ ವಲಯ ಡಿಸಿಪಿ ಆರ್ ವಿಜಯ್ ಶಂಕರ್ ತಿಳಿಸಿದ್ದಾರೆ.
ಈ ಮನೆಗೆ ನುಗ್ಗಿದ ವ್ಯಕ್ತಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ ಮತ್ತು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳ್ಳನೋರ್ವನ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತ ಬಿಸಿಗಾಳಿಯ ಪರಿಣಾಮ ಕಳ್ಳತನ ಬಿಟ್ಟು ಎಸಿ ಆನ್ ಮಾಡಿ ಮಲಗಿದ್ದ, ಒಂದು ವೇಳೆ ಬಿಸಿಗಾಳಿಯ ತಾಪಮಾನ ಇಲ್ಲದಿದ್ದರೆ ವೈದ್ಯರ ಮನೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುತ್ತಿದ್ದ. ಸದ್ಯ ಬಿಸಿ ಗಾಳಿಯ ಪರಿಣಾಮ ಒಂದು ಮನೆ ಕಳ್ಳತನ ತಪ್ಪಿದಂತಾಗಿದೆ.



Click it and Unblock the Notifications