Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮನೆ ಕಳ್ಳತನಕ್ಕೆಂದು ಬಂದು ಎಸಿ ಆನ್ ಮಾಡಿ ಮಲಗಿದ ಕಳ್ಳ..! ಎಬ್ಬಿಸಿದ್ದು ಪೊಲೀಸರು..!
ಬಿಸಿಗಾಳಿ ಜನರನ್ನು ಯಾವ ರೀತಿ ಸಂಕಷ್ಟಕ್ಕೆ ತಳ್ಳಿದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಉತ್ತರ ಭಾರತದಲ್ಲಂತೂ ಬಿಸಿ ಗಾಳಿ ಆರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಜನರ ಕಷ್ಟ ಒಂದು ಕಡೆಯಾದರೆ ಪ್ರಾಣಿಗಳ ಪಾಡು ಹೇಳತೀರದ್ದಾಗಿದೆ. ವಿಪರೀತ ಬಿಸಿಗಾಳಿಗೆ ಜನರ ಜೀವನ ತತ್ತರಿಸಿದೆ.
ಈ ಬಿಸಿಗಾಳಿಗೆ ಹೊರಬಂದ ಜನರು ತಲೆ ತಿರುಗಿ ಬೀಳುವುದು ಅಸ್ವಸ್ಥರಾಗವುವ ಘಟನೆ ನಡೆದಿದೆ. ಅಲ್ಲದೆ ಹಲವು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಅದರಲ್ಲೂ ಪ್ರಾಣಿಗಳು ನೀರಿಲ್ಲದೆ, ಶಾಖ ತಾಳಲಾಗದೆ ಜೀವ ಬಿಟ್ಟಿವೆ. ಕಾಗೆಗಳು, ಬಾವಲಿಗಳು, ಕೋತಿಗಳು ನೆಲದ ಮೇಲೆ ಬೀಳುತ್ತಿರುವ ಘಟನೆಗಳು ವರದಿಯಾಗಿವೆ.

ಆದರೆ ಇಂತಹ ಘಟನೆಗಳ ನಡುವೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮನೆ ಕಳ್ಳತನಕ್ಕೆ ಎಂದು ಗೋಡೆ ಹಾರಿ ಬಂದಿದ್ದ ಕಳ್ಳನೊಬ್ಬ ಎಸಿಯ ತಂಪಾದ ಗಾಳಿಗೆ ಮೈಮರೆತು ಅದೇ ಮನೆಯಲ್ಲಿ ನಿದ್ರೆಗೆ ಜಾರಿದ ವಿಚಿತ್ರ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಕಳ್ಳನೊಬ್ಬ ಲಕ್ನೋದ ಮನೆಗೆ ನುಗ್ಗಿದ ಕಳ್ಳ ತಾನು ಬಂದ ಕೆಲಸ ಮಾಡದೆ ನಿದ್ದೆಗೆ ಜಾರಿದ್ದ.
ವಿಪರೀತವಾಗಿ ಮದ್ಯಪಾನ ಮಾಡಿದ್ದ ವ್ಯಕ್ತಿ ಮನೆಯಲ್ಲಿ ಎಸಿಯನ್ನು ಕಂಡು ಅದನ್ನು ಆನ್ ಮಾಡಲು ನಿರ್ಧರಿಸಿದ್ದಾನೆ. ಬಳಿಕ ಅಲ್ಲಿಯೇ ಕೆಳಗೆ ಶರ್ಟ್ ತೆಗೆದು ಮಲಗಿದ್ದಾನೆ. ಲಕ್ನೋದ ಇಂದಿರಾನಗರ ಪ್ರದೇಶದ ಸೆಕ್ಟರ್ 20 ರಲ್ಲಿ ಈ ಘಟನೆ ನಡೆದಿದೆ.
ವೈದ್ಯ ಸುನೀಲ್ ಪಾಂಡೆ ಎಂಬವರ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದ ಕಳ್ಳ ಐಡಿಯಾ ಮಾಡಿ ಮನೆಯೊಳಗೆ ನುಗ್ಗಿದ್ದ. ಆದರೆ ಮನೆಯೊಳಗೆ ಬಂದಿದ್ದ ಕಳ್ಳನಿಗೆ ಎಸಿ ಕಣ್ಣಿಗೆ ಬಿದ್ದಿದೆ. ತಕ್ಷಣ ಆತ ರಿಮೋಟ್ ತೆಗೆದು ಎಸಿ ಆನ್ ಮಾಡಿ ವಿಶ್ರಾಂತಿ ಪಡೆಯಲು ಮುಂದಾಗಿದ್ದಾನೆ.
ಆತ ಮದ್ಯಪಾನ ಮಾಡಿದ್ದರಿಂದ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಮುಂದಾಗಿದ್ದ. ಜೊತೆಗೆ ಮನೆಯಲ್ಲೂ ಯಾರು ಇರಲಿಲ್ಲ. ಇದನ್ನೇ ಬಳಸಿಕೊಂಡ ಆತ, ಶರ್ಟ್ ತೆಗೆದು ಅಲ್ಲಿಯೇ ಮಲಗಿದ್ದಾನೆ. ಎಸಿ ಆನ್ ಆಗಿದ್ದರಿಂದ ತಂಪಾದ ಗಾಳಿ ಆತನಿಗೆ ಸ್ವರ್ಗದ ಅನುಭವ ನೀಡಿದೆ.
ಆದರೆ ವೈದ್ಯರ ಮನೆ ಬಾಗಿಲು ತೆರೆದಿರುವುದನ್ನು ಕಂಡ ನೆರೆ ಹೊರೆಯವರು ವೈದ್ಯರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಪಾಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ವೈದ್ಯರ ಮನೆಗೆ ಧಾವಿಸಿದ್ದಾರೆ. ಮನೆ ಬಾಗಿಲು ತೆರೆದು ಅಲ್ಲಿಯೇ ಮಲಗಿದ್ದ ಕಳ್ಳನ ಕಂಡು ಪೊಲೀಸರು ಶಾಕ್ ಆಗಿದ್ದಾರೆ. ಜೊತೆಗೆ ಆತನ ಎಬ್ಬಿಸಿ ವಿಚಾರಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, 'ಅವನು ಬಹಳ ಕುಡಿದಿದ್ದನು, ಇದರಿಂದಾಗಿ ನಿದ್ರೆಗೆ ಜಾರಿದ್ದಾನೆ ಮತ್ತು ಎಚ್ಚರವಾಗಲಿಲ್ಲ. ಇದನ್ನು ನೆರೆಹೊರೆಯವರು ಕಂಡು ಕರೆ ಮಾಡಿದ್ದಾರೆ. ನಾವು ಆತನನ್ನು ಬಂಧಿಸಿದ್ದೇವೆ' ಎಂದು ಉತ್ತರ ವಲಯ ಡಿಸಿಪಿ ಆರ್ ವಿಜಯ್ ಶಂಕರ್ ತಿಳಿಸಿದ್ದಾರೆ.
ಈ ಮನೆಗೆ ನುಗ್ಗಿದ ವ್ಯಕ್ತಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ ಮತ್ತು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳ್ಳನೋರ್ವನ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತ ಬಿಸಿಗಾಳಿಯ ಪರಿಣಾಮ ಕಳ್ಳತನ ಬಿಟ್ಟು ಎಸಿ ಆನ್ ಮಾಡಿ ಮಲಗಿದ್ದ, ಒಂದು ವೇಳೆ ಬಿಸಿಗಾಳಿಯ ತಾಪಮಾನ ಇಲ್ಲದಿದ್ದರೆ ವೈದ್ಯರ ಮನೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುತ್ತಿದ್ದ. ಸದ್ಯ ಬಿಸಿ ಗಾಳಿಯ ಪರಿಣಾಮ ಒಂದು ಮನೆ ಕಳ್ಳತನ ತಪ್ಪಿದಂತಾಗಿದೆ.



Click it and Unblock the Notifications