Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಶ್ರಾವಣ ಮಾಸ 2023 : ಶ್ರಾವಣ ಮಾಸದಲ್ಲಿ ಈ 5 ಸಸ್ಯಗಳನ್ನು ಮನೆಗೆ ತಂದರೆ ಶುಭಫಲ!
ಶ್ರಾವಣ ಮಾಸವು ಹಿಂದೂಗಳಿಗೆ ಪವಿತ್ರವಾದ ಮಾಸವಾಗಿದೆ. ಈ ತಿಂಗಳಿನಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಶಿವನನ್ನು ಭಕ್ತಿಯಿಂದ ಪೂಜಿಸಿದ್ರೆ ಈ ತಿಂಗಳಿನಲ್ಲಿ ನಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ.
ಈ ತಿಂಗಳಿನಲ್ಲಿ ಶಿವನನ್ನು ಕುರಿತು ವಿಶೇಷ ಪೂಜೆಯನ್ನು ಮಾಡುವ ಜೊತೆಗೆ ಕೆಲವೊಂದು ಸಸ್ಯಗಳನ್ನು ಮನೆಗೆ ತಂದರೆ ಶುಭವಾಗುತ್ತಂತೆ. ಅಷ್ಟಕ್ಕು ಆ ಗಿಡಗಳನ್ನು ಯಾವುದು ಅನ್ನೋದನ್ನು ತಿಳಿಯೋಣ.

1. ತುಳಸಿ ಗಿಡ
ಸಾಮಾನ್ಯವಾಗಿ ಹಿಂದೂ ಧರ್ಮಕ್ಕೆ ಸೇರಿದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡವನ್ನು ನೆಡುವ ಸಂಪ್ರದಾಯವಿದೆ. ಹಾಗೂ ಅದಕ್ಕೆ ಪ್ರತಿನಿತ್ಯ ಪೂಜೆಯನ್ನು ಸಲ್ಲಿಕೆ ಮಾಡಲಾಗುತ್ತದೆ. ಅದ್ರಲ್ಲೂ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಟ್ಟ ತುಂಬಾನೇ ಒಳ್ಳೆಯದು. ತುಳಸಿ ಗಿಡ ಮನೆಯಲ್ಲಿದ್ದರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತಂತೆ.
ಅದ್ರಲ್ಲೂ ಶ್ರಾವಣ ತಿಂಗಳಿನಲ್ಲಿ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಗೆ ಶುಭ ಶಕುನವಂತೆ. ನಿಮಗೆ ಆರ್ಥಿಕ ಸಂಕಷ್ಟ ಸೇರಿದಂತೆ ಯಾವುದೇ ರೀತಿ ಸಮಸ್ಯೆ ಕೂಡ ಇರೋದಿಲ್ಲ. ಇಷ್ಟು ದಿನ ಅಡ್ಡಿಯಾಗಿದ್ದ ಎಲ್ಲಾ ಕಾರ್ಯಗಳು ಸರಾಗವಾಗಿ ನೆರವೇರುತ್ತದೆ.
2. ಬಾಳೆ ಗಿಡ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಹೊರಗಡೆ ಅಂದರೆ ತೋಟದಲ್ಲಿ ಬಾಳೆಗಿಡವನ್ನು ಬೆಳೆಯಲಾಗುತ್ತದೆ. ಅದ್ರಲ್ಲೂ ವ್ಯಾಪಾರದ ಉದ್ದೇಶದಿಂದ ನಾವು ಬಾಳೆ ಕೃಷಿಯನ್ನು ಮಾಡುತ್ತೇವೆ. ಆದರೆ ಮನೆಯಲ್ಲಿ ಬಾಳೆ ಗಿಡವನ್ನು ನೆಡುವುದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಮನೆಯ ಕೆಟ್ಟ ಶಕ್ತಿಯನ್ನು ಶುದ್ಧೀಕರಿಸುತ್ತದೆ. ನಂಬಿಕೆಗಳ ಪ್ರಕಾರ ತುಳಸಿ ಮತ್ತು ಬಾಳೆ ಗಿಡಗಳನ್ನು ಒಟ್ಟಿಗೆ ನೆಡಬಾರದಂತೆ. ಹೀಗಾಗಿ ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಮತ್ತು ಬಾಳೆ ಗಿಡಗಳನ್ನು ಕ್ರಮವಾಗಿ ಎಡ ಮತ್ತು ಬಲಭಾಗದಲ್ಲಿ ನೆಟ್ಟರೆ ಒಳ್ಳೆಯದು.
3. ಗೊರಟಿ ಸಸ್ಯ
ಗೊರಟಿ ಹೂವನ್ನು ಪುರಾಣಗಳಲ್ಲಿ ಶಿವನ ದಾನ ಎಂದು ಉಲ್ಲೇಖಿಸಲಾಗಿದೆ. ನಂಬಿಕೆಗಳ ಪ್ರಕಾರ ಶಿವನು ಅದರೊಳಗೆ ವಾಸಿಸುತ್ತಾನಂತೆ. ಹೀಗಾಗಿ ಶಿವನ ಪೂಜೆಯ ಸಂದರ್ಭದಲ್ಲಿ ಗೊರಟಿ ಹೂವನ್ನು ಬಳಸೋದ್ರಿಂದ ಒಳ್ಳೆಯದಾಗುತ್ತದೆ. ಇನ್ನೂ ಶ್ರಾವಣ ತಿಂಗಳಿನಲ್ಲಿ ಗೊರಟಿ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಒಳ್ಳೆಯದು ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿಯ ಜೊತೆಗೆ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗುತ್ತಂತೆ.
4. ಕಾಡು ಸಂಪಿಗೆ
ಕಾಡು ಸಂಪಿಗೆ ಹೂವಿನ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಹಳ್ಳಿಗಳಲ್ಲಿ ಹೆಚ್ಚಾಗಿ ಇವುಗಳು ಕಂಡು ಬರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಕಾಡು ಸಂಪಿಗೆ ಸಸ್ಯ ಮನೆಯಲ್ಲಿದ್ದರೆ ಒಳ್ಳೆಯದಾಗುತ್ತಂತೆ. ಯಾಕಂದ್ರೆ ಇದನ್ನು ಅದೃಷ್ಟದ ಸಂಕೇತ ಅಂತ ಹೇಳಲಾಗುತ್ತದೆ. ಇನ್ನೂ ಮನೆಯಲ್ಲಿ ಇದನ್ನು ವಾಯುವ್ಯ ದಿಕ್ಕಿಗೆ ನೆಟ್ಟರೆ ಒಳ್ಳೆಯದು.
5. ಶಮಿ ಗಿಡ
ವಾಸ್ತು ಶಾಸ್ತ್ರದ ಪ್ರಕಾರ ಶಮಿ ಸಸ್ಯ ಮನೆಯಲ್ಲಿ ಇದ್ದರೆ ತುಂಬಾನೇ ಒಳ್ಳೆಯದು. ಇದರಿಂದ ಮನೆ ಮಂದಿಗೆಲ್ಲಾ ಒಳ್ಳೆಯದಾಗುತ್ತಂತೆ. ಶಮಿ ಸಸ್ಯವನ್ನು ಪೂಜೆ ಮಾಡೋದ್ರಿಂದ ಶನಿ ದೇವನ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತದೆ. ಇದ್ರ ಜೊತೆಗೆ ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತಂತೆ.
ಶ್ರಾವಣ ಮಾಸದಲ್ಲಿ ಈ ಐದು ಸಸ್ಯಗಳನ್ನು ಮನೆಗೆ ತಂದರೆ ತುಂಬಾನೇ ಒಳ್ಳೆಯದಾಗುತ್ತದೆ. ಇನ್ನೂ ಈ ಸಸ್ಯಗಳನ್ನು ನೆಡುವಾಗ ಜಾಗರೂಕತೆ ವಹಿಸಬೇಕು. ಯಾವ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದಾಗುತ್ತೆ ಎಂದು ವಾಸ್ತು ತಜ್ಞರ ಹತ್ತಿರ ಕೇಳಿ ಮಾಹಿತಿಯನ್ನು ಪಡೆದುಕೊಳ್ಳಿ.



Click it and Unblock the Notifications

