Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ
12 ತಿಂಗಳಿನಲ್ಲಿ 9ನೆ ತಿಂಗಳು ಸೆಪ್ಟೆಂಬರ್ ಮಾಸ, ಈ ತಿಂಗಳಿನಲ್ಲಿ ಗೌರಿ ಗಣೇಶ ಹಬ್ಬ ಸೇರಿ ಹಲವು ವಿಶೇಷ ದಿನಗಳಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಸೆಪ್ಟೆಂಬರ್ 1 ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 2 ಸೋಮಾವತಿ ಅಮವಾಸ್ಯೆ
ಸೆಪ್ಟೆಂಬರ್ 5 ವರಹಾ ಜಯಂತಿ, ಶಿಕ್ಷಕರ ದಿನ
ಸೆಪ್ಟೆಂಬರ್ 7 ಗಣೇಶ ಚತುರ್ಥಿ
ಸೆಪ್ಟೆಂಬರ್ 8 ರಿಷಿ ಪಂಚಮಿ
ಸೆಪ್ಟೆಂಬರ್ 9 ರಾಧಾಷ್ಟಮಿ
ಸೆಪ್ಟೆಂಬರ್ 15 ಪ್ರದೋಷ ವ್ರತ, ಓಣಂ
ಸೆಪ್ಟೆಂಬರ್ 16 ವಿಶ್ವಕರ್ಮ ಜಯಂತಿ
ಸೆಪ್ಟೆಂಬರ್ 18 ಪಿತೃಪಕ್ಷ ಶ್ರಾದ್ಧ , ಹುಣ್ಣಿಮೆ
ಸೆಪ್ಟೆಂಬರ್ 20 ಸಂಕಷ್ಠಿ ಚತುರ್ಥಿ
ಸೆಪ್ಟೆಂಬರ್ 23 ರೋಹಿಣಿ ವ್ರತ
ಸೆಪ್ಟೆಂಬರ್ 27 ವಿಶ್ವ ಟೂರಿಸಂ ದಿನ
ಸೆಪ್ಟೆಂಬರ್ 29 ಪ್ರದೋಷ ವ್ರತ
ಸೆಪ್ಟೆಂಬರ್ 30 ಮಾಸಿಕ ಶಿವರಾತ್ರಿ
ಮಾಸಿಕ ಶಿವರಾತ್ರಿ
ಶಿವನ ಆರಾಧನೆಗೆ ವಿಶೇಷವಾದ ದಿನ , ಮಾಸಿಕ ಶಿವರಾತ್ರಿಯ ಮಾರನೇಯ ದಿನ ಪ್ರದೋಷ ವ್ರತ ಆಚರಿಸಲಾಗುವುದು.
ಶ್ರಾವಣ ಅಮವಾಸ್ಯೆ, ಸೋಮಾವತಿ ಅಮವಾಸ್ಯೆ
ಶ್ರಾವಣ ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಈ ದಿನ ಪಿತೃತರ್ಪಣ ನೀಡುತ್ತಾರೆ
ಈ ದಿನ ದಾನ ಮಾಡಿದರೆ ತುಂಬಾ ಒಳ್ಳೆಯದೆಂದು ಹೇಳಲಾಗುವುದು
ಚಂದ್ರದೋಷವಿರುವವರು ಈ ದಿನ ಹಸುವಿಗೆ ಹಿಟ್ಟು ತಿನಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ದಿನ ತುಳಸಿ ಪೂಜೆ ಮಾಡಿದರೆ ಒಳ್ಳೆಯದು
ಅರಳಿ ಕಟ್ಟೆಗೆ ಪೂಜೆ ಸಲ್ಲಿಸಿದರೆ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಶಿಕ್ಷಕರ ದಿನಾಚರಣೆ
ನಮ್ಮೆಲ್ಲರ ಬದುಕಿನಲ್ಲಿ ಗುರು ಇದ್ದೇ ಇರುತ್ತಾರೆ, ಬದುಕಿಗೆ ದಾರಿ ದೀಪವಾಗಿರುತ್ತಾರೆ ಅಂಥ ಗುರುವನ್ನು ಸ್ಮರಿಸುವ ದಿನ, ನಮ್ಮ ದೇಶದ ಮೊದಲ ಉಪ ರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಅಚರಿಸಲಾಗುವುದು.
ಗಣೇಶ ಚತುರ್ಥಿ
ಸಡಗರ-ಸಂಭ್ರಮದ ಹಬ್ಬವನ್ನು ಸೆಪ್ಟೆಂಬರ್ 7ರಂದು ಆಚರಿಸಲಾಗುವುದು. ದೇಶದೆಲ್ಲಡೆ ಸಂಭ್ರಮ-ಸಡಗರದಿಂದ ಆಚರಿಸಲಾಗುವುದು.
ಪಿತೃಪಕ್ಷ:ಸೆಪ್ಟೆಂಬರ್ 18ರಿಂದ ಅಕ್ಟೋಬರ್ 2ರವರೆಗೆ ಪಿತೃಪಕ್ಷವಿದೆ, ಈ ಅವಧಿಯಲ್ಲಿ ಪಿತೃ ತರ್ಪಣ ನೀಡಲಾಗುವುದು. ಪಿತೃದೋಷದಿಂದ ಮುಕ್ತರಾಗಲು ಈ ಅವಧಿ ತುಂಬಾ ಶ್ರೇಷ್ಠಕರ ಎಂದು ಹೇಳಲಾಗುವುದು.



Click it and Unblock the Notifications