Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ
12 ತಿಂಗಳಿನಲ್ಲಿ 9ನೆ ತಿಂಗಳು ಸೆಪ್ಟೆಂಬರ್ ಮಾಸ, ಈ ತಿಂಗಳಿನಲ್ಲಿ ಗೌರಿ ಗಣೇಶ ಹಬ್ಬ ಸೇರಿ ಹಲವು ವಿಶೇಷ ದಿನಗಳಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಸೆಪ್ಟೆಂಬರ್ 1 ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 2 ಸೋಮಾವತಿ ಅಮವಾಸ್ಯೆ
ಸೆಪ್ಟೆಂಬರ್ 5 ವರಹಾ ಜಯಂತಿ, ಶಿಕ್ಷಕರ ದಿನ
ಸೆಪ್ಟೆಂಬರ್ 7 ಗಣೇಶ ಚತುರ್ಥಿ
ಸೆಪ್ಟೆಂಬರ್ 8 ರಿಷಿ ಪಂಚಮಿ
ಸೆಪ್ಟೆಂಬರ್ 9 ರಾಧಾಷ್ಟಮಿ
ಸೆಪ್ಟೆಂಬರ್ 15 ಪ್ರದೋಷ ವ್ರತ, ಓಣಂ
ಸೆಪ್ಟೆಂಬರ್ 16 ವಿಶ್ವಕರ್ಮ ಜಯಂತಿ
ಸೆಪ್ಟೆಂಬರ್ 18 ಪಿತೃಪಕ್ಷ ಶ್ರಾದ್ಧ , ಹುಣ್ಣಿಮೆ
ಸೆಪ್ಟೆಂಬರ್ 20 ಸಂಕಷ್ಠಿ ಚತುರ್ಥಿ
ಸೆಪ್ಟೆಂಬರ್ 23 ರೋಹಿಣಿ ವ್ರತ
ಸೆಪ್ಟೆಂಬರ್ 27 ವಿಶ್ವ ಟೂರಿಸಂ ದಿನ
ಸೆಪ್ಟೆಂಬರ್ 29 ಪ್ರದೋಷ ವ್ರತ
ಸೆಪ್ಟೆಂಬರ್ 30 ಮಾಸಿಕ ಶಿವರಾತ್ರಿ
ಮಾಸಿಕ ಶಿವರಾತ್ರಿ
ಶಿವನ ಆರಾಧನೆಗೆ ವಿಶೇಷವಾದ ದಿನ , ಮಾಸಿಕ ಶಿವರಾತ್ರಿಯ ಮಾರನೇಯ ದಿನ ಪ್ರದೋಷ ವ್ರತ ಆಚರಿಸಲಾಗುವುದು.
ಶ್ರಾವಣ ಅಮವಾಸ್ಯೆ, ಸೋಮಾವತಿ ಅಮವಾಸ್ಯೆ
ಶ್ರಾವಣ ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಈ ದಿನ ಪಿತೃತರ್ಪಣ ನೀಡುತ್ತಾರೆ
ಈ ದಿನ ದಾನ ಮಾಡಿದರೆ ತುಂಬಾ ಒಳ್ಳೆಯದೆಂದು ಹೇಳಲಾಗುವುದು
ಚಂದ್ರದೋಷವಿರುವವರು ಈ ದಿನ ಹಸುವಿಗೆ ಹಿಟ್ಟು ತಿನಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ದಿನ ತುಳಸಿ ಪೂಜೆ ಮಾಡಿದರೆ ಒಳ್ಳೆಯದು
ಅರಳಿ ಕಟ್ಟೆಗೆ ಪೂಜೆ ಸಲ್ಲಿಸಿದರೆ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಶಿಕ್ಷಕರ ದಿನಾಚರಣೆ
ನಮ್ಮೆಲ್ಲರ ಬದುಕಿನಲ್ಲಿ ಗುರು ಇದ್ದೇ ಇರುತ್ತಾರೆ, ಬದುಕಿಗೆ ದಾರಿ ದೀಪವಾಗಿರುತ್ತಾರೆ ಅಂಥ ಗುರುವನ್ನು ಸ್ಮರಿಸುವ ದಿನ, ನಮ್ಮ ದೇಶದ ಮೊದಲ ಉಪ ರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಅಚರಿಸಲಾಗುವುದು.
ಗಣೇಶ ಚತುರ್ಥಿ
ಸಡಗರ-ಸಂಭ್ರಮದ ಹಬ್ಬವನ್ನು ಸೆಪ್ಟೆಂಬರ್ 7ರಂದು ಆಚರಿಸಲಾಗುವುದು. ದೇಶದೆಲ್ಲಡೆ ಸಂಭ್ರಮ-ಸಡಗರದಿಂದ ಆಚರಿಸಲಾಗುವುದು.
ಪಿತೃಪಕ್ಷ:ಸೆಪ್ಟೆಂಬರ್ 18ರಿಂದ ಅಕ್ಟೋಬರ್ 2ರವರೆಗೆ ಪಿತೃಪಕ್ಷವಿದೆ, ಈ ಅವಧಿಯಲ್ಲಿ ಪಿತೃ ತರ್ಪಣ ನೀಡಲಾಗುವುದು. ಪಿತೃದೋಷದಿಂದ ಮುಕ್ತರಾಗಲು ಈ ಅವಧಿ ತುಂಬಾ ಶ್ರೇಷ್ಠಕರ ಎಂದು ಹೇಳಲಾಗುವುದು.



Click it and Unblock the Notifications
