Latest Updates
-
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ! -
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು
ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ
12 ತಿಂಗಳಿನಲ್ಲಿ 9ನೆ ತಿಂಗಳು ಸೆಪ್ಟೆಂಬರ್ ಮಾಸ, ಈ ತಿಂಗಳಿನಲ್ಲಿ ಗೌರಿ ಗಣೇಶ ಹಬ್ಬ ಸೇರಿ ಹಲವು ವಿಶೇಷ ದಿನಗಳಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಸೆಪ್ಟೆಂಬರ್ 1 ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 2 ಸೋಮಾವತಿ ಅಮವಾಸ್ಯೆ
ಸೆಪ್ಟೆಂಬರ್ 5 ವರಹಾ ಜಯಂತಿ, ಶಿಕ್ಷಕರ ದಿನ
ಸೆಪ್ಟೆಂಬರ್ 7 ಗಣೇಶ ಚತುರ್ಥಿ
ಸೆಪ್ಟೆಂಬರ್ 8 ರಿಷಿ ಪಂಚಮಿ
ಸೆಪ್ಟೆಂಬರ್ 9 ರಾಧಾಷ್ಟಮಿ
ಸೆಪ್ಟೆಂಬರ್ 15 ಪ್ರದೋಷ ವ್ರತ, ಓಣಂ
ಸೆಪ್ಟೆಂಬರ್ 16 ವಿಶ್ವಕರ್ಮ ಜಯಂತಿ
ಸೆಪ್ಟೆಂಬರ್ 18 ಪಿತೃಪಕ್ಷ ಶ್ರಾದ್ಧ , ಹುಣ್ಣಿಮೆ
ಸೆಪ್ಟೆಂಬರ್ 20 ಸಂಕಷ್ಠಿ ಚತುರ್ಥಿ
ಸೆಪ್ಟೆಂಬರ್ 23 ರೋಹಿಣಿ ವ್ರತ
ಸೆಪ್ಟೆಂಬರ್ 27 ವಿಶ್ವ ಟೂರಿಸಂ ದಿನ
ಸೆಪ್ಟೆಂಬರ್ 29 ಪ್ರದೋಷ ವ್ರತ
ಸೆಪ್ಟೆಂಬರ್ 30 ಮಾಸಿಕ ಶಿವರಾತ್ರಿ
ಮಾಸಿಕ ಶಿವರಾತ್ರಿ
ಶಿವನ ಆರಾಧನೆಗೆ ವಿಶೇಷವಾದ ದಿನ , ಮಾಸಿಕ ಶಿವರಾತ್ರಿಯ ಮಾರನೇಯ ದಿನ ಪ್ರದೋಷ ವ್ರತ ಆಚರಿಸಲಾಗುವುದು.
ಶ್ರಾವಣ ಅಮವಾಸ್ಯೆ, ಸೋಮಾವತಿ ಅಮವಾಸ್ಯೆ
ಶ್ರಾವಣ ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಈ ದಿನ ಪಿತೃತರ್ಪಣ ನೀಡುತ್ತಾರೆ
ಈ ದಿನ ದಾನ ಮಾಡಿದರೆ ತುಂಬಾ ಒಳ್ಳೆಯದೆಂದು ಹೇಳಲಾಗುವುದು
ಚಂದ್ರದೋಷವಿರುವವರು ಈ ದಿನ ಹಸುವಿಗೆ ಹಿಟ್ಟು ತಿನಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ದಿನ ತುಳಸಿ ಪೂಜೆ ಮಾಡಿದರೆ ಒಳ್ಳೆಯದು
ಅರಳಿ ಕಟ್ಟೆಗೆ ಪೂಜೆ ಸಲ್ಲಿಸಿದರೆ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಶಿಕ್ಷಕರ ದಿನಾಚರಣೆ
ನಮ್ಮೆಲ್ಲರ ಬದುಕಿನಲ್ಲಿ ಗುರು ಇದ್ದೇ ಇರುತ್ತಾರೆ, ಬದುಕಿಗೆ ದಾರಿ ದೀಪವಾಗಿರುತ್ತಾರೆ ಅಂಥ ಗುರುವನ್ನು ಸ್ಮರಿಸುವ ದಿನ, ನಮ್ಮ ದೇಶದ ಮೊದಲ ಉಪ ರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಅಚರಿಸಲಾಗುವುದು.
ಗಣೇಶ ಚತುರ್ಥಿ
ಸಡಗರ-ಸಂಭ್ರಮದ ಹಬ್ಬವನ್ನು ಸೆಪ್ಟೆಂಬರ್ 7ರಂದು ಆಚರಿಸಲಾಗುವುದು. ದೇಶದೆಲ್ಲಡೆ ಸಂಭ್ರಮ-ಸಡಗರದಿಂದ ಆಚರಿಸಲಾಗುವುದು.
ಪಿತೃಪಕ್ಷ:ಸೆಪ್ಟೆಂಬರ್ 18ರಿಂದ ಅಕ್ಟೋಬರ್ 2ರವರೆಗೆ ಪಿತೃಪಕ್ಷವಿದೆ, ಈ ಅವಧಿಯಲ್ಲಿ ಪಿತೃ ತರ್ಪಣ ನೀಡಲಾಗುವುದು. ಪಿತೃದೋಷದಿಂದ ಮುಕ್ತರಾಗಲು ಈ ಅವಧಿ ತುಂಬಾ ಶ್ರೇಷ್ಠಕರ ಎಂದು ಹೇಳಲಾಗುವುದು.



Click it and Unblock the Notifications