Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಗಣರಾಜ್ಯೋತ್ಸವ ದಿನ: ಮನೆ, ಆಫೀಸ್ಗಳಲ್ಲಿ ಹಾಕಲು ತ್ರಿವರ್ಣ ಬಣ್ಣದ AI ವಿನ್ಯಾಸದ ಆಕರ್ಷಕ ರಂಗೋಲಿಗಳು
ಜನವರಿ 26ರಂದು ಪ್ರಜಾಪ್ರಭುತ್ವ ರಾಷ್ಟ್ರ ಭಾರತ 75ನೇ ಗಣ ರಾಜ್ಯೋತ್ಸವ ದಿನವನ್ನು ಆಚರಿಸಲಾಗುವುದು. ಭಾರತೀಯರು ಜಾತಿ-ಧರ್ಮ ಬೇಧವಿಲ್ಲದೆ ಆಚರಿಸುವ ದೇಶದ ಹಬ್ಬವಿದು. ಈ ದಿನವನ್ನು ನಾವೆಲ್ಲಾ ಹೆಮ್ಮೆಯಿಂದ ಆಚರಿಸುತ್ತೇವೆ. ಈ ದಿನ ಆಫೀಸ್ನಲ್ಲಿ, ಶಾಲೆಗಳಲ್ಲಿ, ಮನೆಗಳಲ್ಲಿ ತ್ರಿವರ್ಣ ಬಣ್ಣದ ರಂಗೋಲಿ ಹಾಕಿ ಈ ದಿನ ಸಂಭ್ರಮಿಸುತ್ತೇವೆ.
ನಾವಿಲ್ಲಿ AI ವಿನ್ಯಾಸಗೊಳಿಸಿದ ರಂಗೋಲಿ ಡಿಸೈನ್ ನೀಡಿದ್ದೇವೆ. ಇದು ತುಂಬಾ ಸುಂದರವಾಗಿದೆ ಹಾಗೂ ಸರಳವಾಗಿದೆ, ಬನ್ನಿ ಈ ಡಿಸೈನ್ಗಳ ಬಗ್ಗೆ ನೋಡೋಣ:
ತ್ರಿವಣ ಬಣ್ಣದ ಅಲಂಕಾರ
ಈ ವಿನ್ಯಾಸ ನೋಡಿ ತುಂಬಾನೇ ಸರಳವಾಗಿದೆ ಅಲ್ವಾ? ಇದರ ಎರಡೂ ಬದಿಯಲ್ಲಿರುವ ಹೂವಿನ ಡಿಸೈನ್ ಕೂಡ ಆಕರ್ಷಕವಾಗಿದೆ ನೋಡಿ. ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ಅಶೋಕ ಚಕ್ರದ ಈ ವಿನ್ಯಾಸ ತುಂಬಾ ಚೆನ್ನಾಗಿದೆ ನೋಡಿ.

ತ್ರಿವಣ ಬಣ್ಣದ ಈ ವಿನ್ಯಾಸ ನೋಡಿ
ಇದು ನೋಡಿ ಅರ್ಧ ಎಲೆಯಾಕಾರದ ಈ ವಿನ್ಯಾಸ ಅದರೊಳಗೆ ಚಕ್ರ ಎಷ್ಟು ಆಕರ್ಷಕವಾಗಿದೆ ಅಲ್ವಾ? ಅಲ್ಲದೆ ತುಂಬಾನೇ ಸರಳವಾಗಿದೆ. ಇದನ್ನು ನೀವು ಸುಲಭವಾಗಿ ಮಾಡಬಹುದು. ಡಿಸೈನ್ ಬರಲ್ಲ ಎನ್ನುವವರು ಕೂಡ ಈ ವಿನ್ಯಾಸ ಬಳಸಬಹುದು.
ಅಶೋಕ ಚಕ್ರ
ಅಶೋಕ ಚಕ್ರ ವಿನ್ಯಾಸದ ಈ ರಂಗೋಲಿ ನೋಡಿ ಸೂಪರ್ ಆಗಿದೆ ಅಲ್ವಾ. ದೇಶಭಕ್ತಿಯ ಥೀಮ್ಗೆ ಪರ್ಫೆಕ್ಟ್ ರಂಗೋಲಿ.
ಈ ವಿನ್ಯಾಸ ನೋಡಿ
ಈ ವಿನ್ಯಾಸ ನೋಡಿ ಇದು ಕೂಡ ಸರಳವಾಗಿ ಸೂಪರ್ ಆಗಿದೆ ಅಲ್ವಾ? ಈ ವಿನ್ಯಾಸ ಸರಳವಾಗಿದ್ದು ಆಕರ್ಷವಾಗಿದ್ದು ತುಂಬಾ ಚೆನ್ನಾಗಿದೆ ನೋಡಿ.
ವಿವಿಧತೆಯಲ್ಲಿ ಏಕತೆ
ಈ ವಿನ್ಯಾಸ ನೋಡಿ ವಿವಿಧತೆಯಲ್ಲಿ ಏಕತೆ ಸಾರುವ ಸಂದೇಶ. ನಮ್ಮ ಭಾರತದ ತ್ರಿವರ್ಣ ಧ್ವಜದ ಬಣ್ಣದ ಈ ರಂಗೋಲಿಯಲ್ಲಿ ವೈವಿಧ್ಯತೆಯಲ್ಲಿ ಕಾಣಬಹುದು.
ಸಂವಿಧಾನ ಸಭೆಯ ಮೊದಲ ಅಧಿವೇಶನವನ್ನು ಡಿಸೆಂಬರ್ 09, 1946ರಂದು ನಡೆಸಲಾಯಿತು. ಕೊನೆಯ ಅಧಿವೇಶನವನ್ನು ನವೆಂಬರ್ 26, 1949ರಿಗೆ ನಡೆಸಿತು. ಅದಾಗಿ ವರ್ಷದ ಬಳಿಕ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು.
ದೇಶದ ಹಬ್ಬದ ಆಚರಣೆ
ಈ ದಿನ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಈ ದಿನ ಸಾಧನೆ ಮಾಡಿದವರಿಗೆ ಪದ್ಮ ಪ್ರಶಸ್ತಿ ನೀಡಲಾಗುವುದು. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರ ನೀಡಿ ಗೌರವಿಸಲಾಗುವುದು.



Click it and Unblock the Notifications














