Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
Rama Ekadashi: ರಮಾ ಏಕಾದಶಿ ಯಾವಾಗ? ವಿಷ್ಣುವನ್ನು ಪೂಜಿಸುವುದು ಏಕೆ?
ಹಿಂದೂಗಳ ಪಾಲಿಗೆ ಏಕಾದಶಿ ಬಹಳ ಪ್ರಮುಖ ಹಬ್ಬ. ಪ್ರತಿ ತಿಂಗಳು ಆಗಮಿಸುವ ಏಕಾದಶಿಯಲ್ಲಿ ಹಲವರು ಉಪವಾಸವಿದ್ದ ವಿವಿಧ ದೇವರುಗಳ ಹೆಸರಿನಲ್ಲಿ ಪೂಜೆ ಮಾಡುವುದು ನೋಡಬಹುದು. ದೀಪಾವಳಿಗೂ ಮುನ್ನ ನಾವು ರಮಾ ಏಕಾದಶಿ, ಅಥವಾ ರಾಮ ಏಕಾದಶಿಯನ್ನು ಆಚರಿಸುವುದು ನೋಡಬಹುದು. ಹಾಗೆ ಏಕಾದಶಿಯ ಸಮಯದಲ್ಲಿ ವಿಶೇಷ ಆಶೀರ್ವಾದ ಪಡೆಯುವುದು ನೋಡಬಹುದು.
ಅದ್ರಲ್ಲೂ ಈ ರಮಾ ಏಕಾದಶಿ ವ್ರತವನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಆದ್ರೆ ಹಲವು ಕಡೆ ಇದನ್ನು ರಾಮ ಏಕಾದಶಿ ಅಂತಲೂ ಕರೆಯಲಾಗುತ್ತದೆ. ಆದ್ರೆ ಈ ಏಕಾದಶಿಯು ವಿಷ್ಣು ದೇವರ ನೆನೆಯುವ ಜಾಗೆ ವಿಷ್ಣುವನ್ನು ನೆನೆಯುವ ಹಬ್ಬವಾಗಿದೆ. ಈ ವರ್ಷ ಈ ಹಬ್ಬವನ್ನು ಅಕ್ಟೋವರ್ 17ರಂದು ಆಚರಿಸಲಾಗುತ್ತಿದೆ.

ಈ ಏಕಾದಶಿಯನ್ನು ರಂಭಾ ಏಕಾದಶಿ ಎಂದೂ ಕೂಡ ಕರೆಯುತ್ತಾರೆ. ಈ ಏಕಾದಶಿಯು ದೀಪಾವಳಿಯ ನಾಲ್ಕು ದಿನಗಳ ಮೊದಲು ಆಚರಿಸಲಾಗುತ್ತದೆ. ರಮಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಬ್ರಹ್ಮಹತ್ಯೆ ದೋಷ ನಿವಾರಣೆಯಾಗಲಿದೆ ಎಂದು ಹೇಳಲಾಗುತ್ತದೆ. ರಮಾ ಏಕಾದಶಿ ದೀಪಾವಳಿ ಸಮಯದಲ್ಲಿ ಬರುವುದಿರಿಂದ ಇಲ್ಲಿಂದಲೇ ದೀಪಾವಳಿ ಆರಂಭವಾಗಲಿದೆ.
ಈ ಏಕಾದಶಿಯಲ್ಲಿ ಲಕ್ಷ್ಮಿ ದೇವಿ ಹಾಗೆ ವಿಷ್ಣುವನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಸಂತೋಷ ತು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ಉಪವಾಸದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಪೂಜಾ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಮಾ ಏಕಾದಶಿಯ ಮುಹೂರ್ತಗಳು
ದಿನ ಅಕ್ಟೋಬರ್ 17
ಪರಣ ಸಮಯ ಅಕ್ಟೋಬರ್ 18-ಬೆಳಗ್ಗ 6:24ರಿಂದ ರಾತ್ರಿ 08:41
ಏಕಾದಶಿ ತಿಥಿ ಪ್ರಾರಂಭವಾಗುತ್ತದೆ - ಅಕ್ಟೋಬರ್ 16, 2025 ರಂದು ಬೆಳಗ್ಗೆ 10:35
ಏಕಾದಶಿ ತಿಥಿ ಕೊನೆಗೊಳ್ಳುವುದು ಅ. 17, 2025ರ ಬೆಳಗ್ಗೆ 11:12
ಉಪವಾಸದ ನಿಯಮಗಳೇನು?
ಈ ದಿನ ಉಪವಾಸ ಮಾಡಲು ನೀವು ಹಣ್ಣುಗಳು, ಜ್ಯೂಸ್ ಸೇವಿಸಬಹುದು. ಹಾಗೆ ಆಲೂಗಡ್ಡೆ, ಸಿಹಿ ಗೆಣಸು, ಕಚ್ಚಾ ಆಹಾರ ಸೇವಿಸಬಹುದು. ನೀರು, ಮಜ್ಜಿಗೆ, ಹಾಲು ಸೇರಿ ಕರಿದ ತಿಂಡಿಗಳ ಸೇವಿಸಬಹುದು.
ಏನು ಸೇವಿಸಬಾರದು?
ರಮಾ ಏಕಾದಶಿ ಉಪವಾಸದ ಸಮಯದಲ್ಲಿ ಧಾನ್ಯಗಳು, ಅಕ್ಕಿ, ಗೋಧಿ, ಬಾರ್ಲಿ, ರಾಗಿ, ಜೋಳ ಮತ್ತು ಎಲ್ಲಾ ರೀತಿಯ ದ್ವಿದಳ ಧಾನ್ಯಗಳಿಂದ ಮಾಡಿದ ಆಹಾರ ಸೇವಿಸಬಾರದು. ಉಪ್ಪು ಬಳಸದೆ ಸಾತ್ವಿಕ ಆಹಾರವಾದ ಅವಲಕ್ಕಿ ಸೇವಿಸಬಹುದು. ಉಪವಾಸದ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳಿಂದ ದೂರ ಇರಬೇಕು. ಹಾಗೆ ಈ ದಿನ ತುಳಸಿ ಎಲೆಗಳನ್ನು ಕೀಳಬಾರದು. ಏಕೆಂದರೆ ಈ ಸಮಯದಲ್ಲಿ ತುಳಸಿ ಕೂಡ ಉಪವಾಸದಲ್ಲಿರುತ್ತಾಳೆ ಇದರಿಂದ ತುಳಸಿ ಎಲೆಯನ್ನು ಕೀಳಬಾರದು, ತುಳಸಿಗೆ ಪೂಜೆ ಮಾಡಬೇಕು.
ಉಪವಾಸ ಮಾಡುವವರು ಜಾಗರಣೆ ಮಾಡುತ್ತಾರೆ. ರಾತ್ರಿ ವಿಷ್ಣು ಸಹಸ್ರನಾಮ ಓದುವುದು ಮಾಡುತ್ತಾರೆ. ಹಾಗೆ ವಿಷ್ಣುವಿಗೆ ಪ್ರಿಯವಾದ ನೈವೇದ್ಯ ಅರ್ಪಿಸುವುದು ಹಾಗೆ ಲಕ್ಷ್ಮಿ ದೇವಿಗೆ ಹಸಿರು ಬಳೆ, ಸೀರೆ ನೀಡಿ ಪೂಜಿಸುವುದು ಸಾಮಾನ್ಯ ಆಚರಣೆಯಲ್ಲಿ ಒಂದಾಗಿದೆ.
(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











