Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಶ್ರಾವಣ ಸೋಮವಾರ: ಏನು ಮಾಡಿದರೆ ಒಳಿತಾಗುತ್ತದೆ?
ಈ ವರ್ಷ ಆಗಸ್ಟ್ 9ಕ್ಕೆ ಶ್ರಾವಣ ಮಾಸ ಪ್ರಾರಂಭವಾಗಿ ಸೆಪ್ಟೆಂಬರ್ 7ರವರೆಗೆ ಇರುತ್ತದೆ. ಶ್ರಾವಣ ಮಾಸವೆಂದರೆ ಏನೋ ಹೊಸತನ, ವಿವರಿಸಲಾಗದ ನಾವೀನ್ಯ. ಶ್ರಾವಣ ಮಾಸವೆಂದರೆ ಒಂದು ದೈವಿಕ ಮಾಸವೆಂದೇ ಹೇಳಬಹುದು. ಇಡೀ ತಿಂಗಳು ವ್ರತ, ಹಬ್ಬಗಳ ಸಂಭ್ರಮ.

ಪುರಾಣಗಳಲ್ಲಿ ಈ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಹೇಳುತ್ತಾರೆ. ಶಿವನ ಭಕ್ತರು ಈ ತಿಂಗಳು ವ್ರತ ಮಾಡುತ್ತಾ ಶಿವನಿಗೆ ಪೂಜೆ ಸಲ್ಲಿಸಿದರೆ ಮನಸ್ಸಿನಲ್ಲಿ ಬಯಸಿದ್ದು ನೆರವೇರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಶ್ರಾವಣ ಸೋಮವಾರಂತೂ ತುಂಬಾ ವಿಶೇಷವಾದ ದಿನವಾಗಿರುತ್ತದೆ. ಈ ದಿನ ವ್ರತ ಪಾಲಿಸಲಾಗುವುದು. ಶಿವ ನಾಮ ಹೇಳುತ್ತಾ ಶಿವ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಲಾಗುವುದು.
ಮದುವೆಯಾಗದ ಹೆಣ್ಣು ಮಕ್ಕಳು ಶಿವನಂಥ ಗಂಡ ನಮಗೆ ಸಿಗಲಿ ಶ್ರಾವಣ ಸೋಮವಾರ ವ್ರತ ಪಾಲಿಸುತ್ತಾರೆ. ತಮ್ಮ ಇಷ್ಟಾರ್ಥಗಳು ನೆರವೇರಲು ಶಿವನಿಗೆ ಪ್ರಿಯವಾಗುವಂತೆ ಪೂಜೆ ಸಲ್ಲಿಸಬೇಕು ಎನ್ನತ್ತಾರೆ. ಶಿವನ ಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದಲ್ಲಿ ಮಾಡುವ ಪೂಜೆ ಹಾಗೂ ವ್ರತ ಹೇಗಿರಬೇಕೆಂದು ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:

ಶ್ರಾವಣ ಮಾಸದ ಸೋಮವಾರದ ದಿನಾಂಕ
2021ರಲ್ಲಿ ಶ್ರಾವಣ ಸೋಮವಾರದ ದಿನಾಂಕಗಳು
ಆಗಸ್ಟ್ 9 , 2021
ಆಗಸ್ಟ್ 16, 2021
ಆಗಸ್ಟ್ 23, 2021
ಆಗಸ್ಟ್ 30, 2021
ಸೆಪ್ಟೆಂಬರ್ 6, 2021
ಸೆಪ್ಟೆಂಬರ್ 7ಕ್ಕೆ ಶ್ರಾವಣ ತಿಂಗಳು ಮುಕ್ತಾಯವಾಗುವುದು.

ಸೋಮವಾರ ಉಪವಾಸ
ಶಿವನ ಕೃಪೆಗೆ ಪಾತ್ರರಾಗಲು ಸೋಮವಾರ ಉಪವಾಸ ಮಾಡಬೇಕು. ಶಿವನಿಗೆ ಪೂಜೆ ಸಲ್ಲಿಸುವಾಗ ಶಿವಲಿಂಗಕ್ಕೆ ಹಾಲು, ಸಕ್ಕರೆ, ಅನ್ನದ ನೈವೇದ್ಯ ಅರ್ಪಿಸಬೇಕು. ಶಿವನಿಗೆ ಇಷ್ಟವಾದ ಹೂಗಳನ್ನು ಅರ್ಪಿಸಿದರೆ ಇನ್ನೂ ಒಳ್ಳೆಯದು, ಜೊತೆಗೆ ಶಿವನಾಮ ಜಪಿಸಬೇಕು.

ಶ್ರಾವಣ ಮಾಸದಲ್ಲಿ ಏನು ಮಾಡಬೇಕು?
ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಶಿವ ಚಾಲೀಸ ಹೇಳುವುದರಿಂದ ಅದೃಷ್ಟ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಶಿವ ಪೂಜೆಗೆ ಹಾಲು, ಜೇನು, ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಬೇಕು.

ರುದ್ರಾಕ್ಷಿ ಮಾಲೆ ಧರಿಸಲು ಸೂಕ್ತವಾದ ತಿಂಗಳು
ನೀವು ರುದ್ರಾಕ್ಷಿ ಮಾಲೆ ಧರಿಸಲು ಬಯಸುವುದಾದರೆ ಆ ಮಾಲೆ ಧರಿಸಲು ಇದು ಸೂಕ್ತವಾದ ತಿಂಗಳಾಗಿದೆ. ರುದ್ರಾಕ್ಷಿ ಮಾಲೆಯನ್ನು ಜಪ ಮಾಡುವಾಗಲೂ ಬಳಸುವುದು ಒಳ್ಳೆಯದು.

ಏನು ಮಾಡಬಾರದು?
ಶಿವನಿಗೆ ಬಿಲ್ವೆ ಪತ್ರೆ ಎಲೆಗಳೆಂದರೆ ತುಂಬಾ ಪ್ರಿಯ. ಶಿವ ಪೂಜೆಗೆ ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಿದರೆ ಶಿವನ ಕೃಪೆಗೆ ಪಾತ್ರರಾಗುವಿರಿ. ಆದರೆ ಅಷ್ಟಮಿ, ಚತುರ್ಥಿ, ನವಮಿ,ಅಮವಾಸ್ಯೆ, ಸಂಕ್ರಾಂತಿ ಹಾಗೂ ಸೋಮವಾರ ಬಿಲ್ವೆ ಪತ್ರೆ ಎಲೆಗಳನ್ನು ಕೀಳುವುದರಿಂದ ಅಪಶಕುನ ಉಂಟಾಗುವುದು.

ಸ್ಪಟಿಕ ಶಿವಲಿಂಗ
ಶ್ರಾವಣ ಮಾಸದಲ್ಲಿ ಮನೆಯಲ್ಲಿ ಸ್ಪಟಿಕ ಶಿವಲಿಂಗ ಇಟ್ಟು ಪೂಜಿಸುವುದರಿಂದ ಮನೆಯಲ್ಲಿರುವ ಎಲ್ಲಾ ನಕರಾತ್ಮಕ ಶಕ್ತಿ ಹೊರದೂಡಬಹುದು. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು, ಅದೃಷ್ಟ ಒಲಿಯುವುದು.

ಶಿವ-ಪಾರ್ವತಿಗೆ ಆರತಿ
ಮದುವೆ ವಯಸ್ಸಿನ ಹುಡುಗ-ಹುಡುಗಿ ಸಂಜೆ ಹೊತ್ತಿನಲ್ಲಿ ಶಿವ-ಪಾರ್ವತಿಗೆ ಆರತಿ ಮಾಡುವುದರಿಂದ ಉತ್ತಮ ಸಂಗಾತಿ ದೊರೆಯುವಂತೆ ಶಿವ ಹರಿಸುತ್ತಾನೆ.

ಮಂಗಳ ಗೌರಿ ವ್ರತ
ಇನ್ನು ಶ್ರಾವಣ ಮಾಸದಲ್ಲಿ ಮಂಗಳಗೌರಿ ವ್ರತ ಬರುತ್ತದೆ. ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ, ವೈವಾಹಿಕ ಜೀವನ ಆನಂದದಿಂದ ಇರುವಂತೆ ಆಶೀರ್ವದಿಸುತ್ತಾಳೆ. ಈ ವ್ರತವನ್ನು ಮುತ್ತೈದೆ ಮಹಿಳೆಯರು ಸಂತಾಭಾಗ್ಯ, ಸಂತೋಷದ ದಾಂಪತ್ಯಕ್ಕಾಗಿ ಮಾಡಿದರೆ, ಹೆಣ್ಣು ಮಕ್ಕಳು ಉತ್ತಮ ಬಾಳ ಸಂಗಾತಿ ನೀಡುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯದನ್ನೇ ಕೇಳಿ
ಶ್ರವಣ ಎಂದರೆ ಕೇಳು ಎಂದು ಅರ್ಥ. ಶ್ರಾವಣ ಮಾಸದಲ್ಲಿ ಒಳ್ಳೆಯದನ್ನೇ ಕೇಳಬೇಕು, ಒಳ್ಳೆಯದನ್ನೇ ಮಾತನಾಡಬೇಕು. ಧರ್ಮಗ್ರಂಥಗಳನ್ನು ಓದುವುದು, ಮೃತ್ಯುಂಜಯ ಮಂತ್ರ ಹೇಳುವುದು ಇವೆಲ್ಲಾ ಮಾಡುವುದರಿಂದ ಒಳಿತು ಉಂಟಾಗುತ್ತದೆ.



Click it and Unblock the Notifications











