Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಮಂಗಳವಾರ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ
ಹನುಮಂತನ ಆಶೀರ್ವಾದ ಪಡೆಯಲು ಮಂಗಳವಾರದ ದಿವಸ ಬಹಳ ಶ್ರೇಷ್ಠವಾದದ್ದು. ಮಂಗಳವಾರದ ದಿನವನ್ನು ಭಜರಂಗಬಲಿ ಆಂಜನೇಯನಿಗೆ ಅರ್ಪಣೆ ಎಂದು ನಂಬಲಾಗಿದೆ. ಈ ದಿನದಲ್ಲಿ ಆತನನ್ನು ಪೂಜಿಸುವುದರಿಂದಾಗಿ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿ ಪಡೆಯಬಹುದು. ಕಲಿಯುಗದಲ್ಲಿ ಮನುಷ್ಯರ ಕಷ್ಟಗಳನ್ನು ನಿವಾರಿಸುವುದಕ್ಕೆ ಹನುಮಂತ ಬದುಕಿದ್ದಾನೆ ಎಂದು ನಂಬಲಾಗಿದೆ.

ಮಂಗಳವಾರದಂದು ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಕೆಲಸಗಳನ್ನು ಮಂಗಳವಾರದಂದು ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಅದ್ಯಾವ ಕೆಲಸಗಳನ್ನು ಮಂಗಳವಾರ ಮಾಡುವುದರಿಂದಾಗಿ ಅಶುಭವಾಗುತ್ತದೆ ತಿಳಿಯೋಣ ಬನ್ನಿ.

ಸೌಂದರ್ಯ ವರ್ಧಕಗಳನ್ನು ಮಂಗಳವಾರ ಖರೀದಿಸಬಾರದು
ಸೌಂದರ್ಯ ಮತ್ತು ಮೇಕ್ಅಪ್ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಂಗಳವಾರ ಖರೀದಿಸಬಾರದು. ಇದು ವೈವಾಹಿಕ ಜೀವನದಲ್ಲಿ ಕಹಿ ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನೀವು ಸೌಂದರ್ಯ ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ, ಸೋಮವಾರ ಮತ್ತು ಶುಕ್ರವಾರ ಇದಕ್ಕೆ ಉತ್ತಮ ದಿನಗಳು.

ಮನೆಗೆ ಲೋಹದ ಸಾಮಾನುಗಳನ್ನು ತರಬೇಡಿ
ಮಂಗಳವಾರದ ದಿನ ಲೋಹದ ವಸ್ತುಗಳ ಖರೀದಿಸುವಿಕೆಯನ್ನು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಸ್ಟೀಲಿನ ಪಾತ್ರೆಗಳು, ಚಾಕೂ, ನೈಲ್ ಕಟ್ಟರ್, ಇತ್ಯಾದಿ ಮನೆಬಳಕೆ ಲೋಹದ ವಸ್ತುಗಳನ್ನು ಈ ದಿನ ಖರೀದಿಸಬೇಡಿ. ಈ ದಿನ ಹೊಸ ವಾಹನ ಖರೀದಿಯೂ ಕೂಡ ಶುಭದಾಯಕವಲ್ಲ.

ಕಪ್ಪು ಬಣ್ಣದ ವಸ್ತ್ರಗಳು
ಮಂಗಳವಾರದ ದಿನ ಕೆಂಪು ವರ್ಣದ ವಸ್ತ್ರವನ್ನು ಧರಿಸುವುದರಿಂದಾಗಿ ಮಂಗಳ ದೋಷ ನಿವಾರಣೆಯಾಗುತ್ತದೆ. ಅದೇ ಈ ದಿನ ಕಪ್ಪು ಬಣ್ಣದ ವಸ್ತ್ರ ವನ್ನು ಈ ದಿನ ಖರೀದಿಸಲೂ ಬೇಡಿ ಮತ್ತು ಧರಿಸುವುದು ಕೂಡ ಒಳ್ಳೆಯದಲ್ಲ.

ಉಗುರು ಮತ್ತು ಕೂದಲು ಕತ್ತರಿಸುವುದು
ಉಗುರು, ಕೂದಲು, ಗಡ್ಡ, ಇತ್ಯಾದಿಗಳನ್ನು ಸುಂದರಗೊಳಿಸಲು ಈ ದಿನ ಹೊರಡಬೇಡಿ.

ಹಣದ ಕೆಲಸ
ಮಂಗಳವಾರ ಹಣದ ಲೋನ್ ಪಡೆಯುವುದಕ್ಕೆ ತೆರಳಬೇಡಿ. ಇದರಿಂದ ಧನಹಾನಿಯಾಗುವ ಸಾಧ್ಯತೆ ಇದೆ. ಈ ದಿನ ಪಡೆಯುವ ಹಣವನ್ನು ಮರುಪಾವತಿ ಮಾಡುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.

ಮಾಂಸಾಹಾರ ಮತ್ತು ಮದ್ಯದಿಂದ ದೂರವಿರಿ
ಮಂಗಳವಾರದ ದಿನ ಮರೆತೂ ಕೂಡ ಮಾಂಸಾಹಾರದ ಸೇವನೆ ಮಾಡಬೇಡಿ. ಅಷ್ಟೇ ಅಲ್ಲ ಮಧ್ಯ ಸೇವನೆ ಕೂಡಈ ದಿನ ನಿಷಿದ್ಧ. ಯಾವ ವ್ಯಕ್ತಿ ಈ ದಿನ ಇಂತಹ ಕೆಲಸ ಮಾಡುವನೋ ಅಂತಹ ವ್ಯಕ್ತಿಯ ಸಂಸಾರದಲ್ಲಿ ಸಮಸ್ಯೆಗಳೆ ತುಂಬಿಕೊಳ್ಳುತ್ತದೆ.

ಮಂಗಳವಾರ ಮೀನು ತಿನ್ನಬೇಡಿ
ಮಂಗಳವಾರದ ದಿನ ನಾನ್ ವೆಜ್ ಸೇವನೆಯಿಂದ ದೂರವಿರಿ ಮತ್ತು ಮೀನಿನ ಖರೀದಿ ಮಾಡಬೇಡಿ ಮತ್ತು ಅದನ್ನು ತಿನ್ನಬೇಡಿ. ಯಾವ ವ್ಯಕ್ತಿ ಇದನ್ನು ಪಾಲಿಸುವುದಿಲ್ಲವೋ ಅಂತಹವರಿಗೆ ಆರ್ಥಿಕ ಏಳಿಗೆ ಇರುವುದಿಲ್ಲ.

ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಡಿ
ಮಂಗಳವಾರದ ದಿನ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಖರೀದಿಸಬಾರದು. ಹಾಲನ್ನು ಚಂದ್ರನ ಕಾರಕ ಎಂದು ನಂಬಲಾಗುತ್ತದೆ ಮತ್ತು ಚಂದ್ರ ಮತ್ತು ಮಂಗಳ ಒಬ್ಬರಿಗೊಬ್ಬರ ವಿರೋಧಿಗಳಾಗಿರುತ್ತಾರೆ. ಹಾಗಾಗಿ ನೀವು ಮಂಗಳವಾರದ ದಿನ ಬೇಸನ್ ಲಾಡು ತಯಾರಿಸಿ ಅಥವಾ ಖರೀದಿಸಿ ಹನುಮಂತನಿಗೆ ನೇವೇಧ್ಯ ಅರ್ಪಿಸಬಹುದು.

ದೈಹಿಕ ಸಂಬಂಧ
ಮಂಗಳವಾರದ ದಿನ ದೈಹಿಕ ಸಂಬಂಧ ಹೊಂದುವುದರಿಂದಾಗಿ ಬಹಳ ಕೆಟ್ಟದಾಗುತ್ತದೆ. ಹಾಗಾಗಿ ಆದಷ್ಟು ಸಂಬಂಧ ಬೆಳೆಸುವುದನ್ನು ಈ ದಿನ ತಪ್ಪಿಸಿ.



Click it and Unblock the Notifications











