Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಆನೆಯ ಮೇಲೇರಿ ಬರುತ್ತಿದ್ದಾಳೆ ದುರ್ಗೆ.. ಈ ವರ್ಷ ಸಂತೋಷ, ಸಮೃದ್ಧಿ ಹೆಚ್ಚಲಿದೆ
ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿಯ ಸಂಭ್ರಮ. ನವರಾತ್ರಿಯಲ್ಲಿ ದುರ್ಗಯ 9 ಅವತಾರಗಳನ್ನು ಪೂಜಿಸಿಲಾಗುವುದು. ನವರಾತ್ರಿಗೆ ದುರ್ಗೆ ದೇವಿ ಭೂಮಿಗೆ ಬಂದು ಭಕ್ತರನ್ನು ಹರಿಸುತ್ತಾಳೆ ಎಂಬ ನಂಬಿಕೆ ಇದೆ. ಅದೇ ರೀತಿ ಪ್ರತೀವರ್ಷ ಅವಳು ಬರುವಾಗ ಒಂದೊಂದು ವಾಹನದಲ್ಲಿ ಬರುತ್ತಾಳೆ. ಅವಳು ವಾಹನದಲ್ಲಿ ಬರುತ್ತಾಳೆ ಅದರ ಆಧಾರದ ಮೇಲೆ ಆ ವರ್ಷದ ಭವಿಷ್ಯ ಶುಭಕರವಾಗಿದೆಯೇ, ಇಲ್ಲವೇ ಎಂದು ಹೇಳಲಾಗುವುದು.
ಈ ವರ್ಷ ದುರ್ಗಾ ಮಾತೆ ಆನೆಯ ಬೆನ್ನೇರಿ ಬರುತ್ತಾಳೆ ಹಾಗೂ ಹೋಗುತ್ತಾಳೆ, ಇದನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ದುರ್ಗಾ ದೇವಿ ಯಾವುದರ ಮೇಲೆ ಬರುತ್ತಾಳೆ ಎಂಬುವುದನ್ನು ಹೇಗೆ ಹೇಳಲಾಗುವುದು, ಯಾವ ವಾಹನ ಏನನ್ನು ಸೂಚಿಸುತ್ತೆ ಎಂಬೆಲ್ಲಾ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ನವರಾತ್ರಿ ಯಾವ ದಿನ ಬಂದ್ರೆ ಏನರ್ಥ?
ದೇವಿ ಭಾಗವತ ಪುರಾಣದ ಪ್ರಕಾರ ನವರಾತ್ರಿ ಭಾನುವಾರ ಅಥವಾ ಸೋಮವಾರ ಪ್ರಾರಂಭವಾದರೆ ದುರ್ಗೆ ಆನೆಯ ಮೇಲೇರಿ ಬರುತ್ತಾಳೆ
ಅದೇ ಶನಿವಾರ ಅಥವಾ ಮಂಗಳವಾರ ನವರಾತ್ರಿ ಬಂದ್ರೆ ಕುದುರೆಯ ಮೇಲೇರಿ ಬರುತ್ತಾಳೆ.
ನವರಾತ್ರಿ ಗುರುವಾರ ಅಥವಾ ಶುಕ್ರವಾರ ಬಂದರೆ ಪಲಕ್ಕಿಯೇರಿ ಬರುತ್ತಾಳೆ.
ನವರಾತ್ರಿ ಬುಧವಾರ ಬಂದರೆ ದೋಣಿಯಲ್ಲಿ ಬರುತ್ತಾಳೆ.

2022ರಲ್ಲಿ ಸೋಮವಾರ ನವರಾತ್ರಿ ಪ್ರಾರಂಭ
2022ರಲ್ಲಿ ಸೆಪ್ಟೆಂಬರ್ 26ಕ್ಕೆ ಅಂದರೆ ಸೋಮವಾರ ನವರಾತ್ರಿ ಪ್ರಾರಂಭವಾಗುವುದು. ಆದ್ದರಿಂದ ದುರ್ಗೆ ಆನೇಯ ಮೇಲೇರಿ ಬರುತ್ತಿದ್ದಾಳೆ. ದುರ್ಗೆ ಆನೆಯ ಮೇಲೇರಿ ಬರುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.

ಮಳೆ-ಬೆಳೆ ಚೆನ್ನಾಗಿ ಬಂದು ಸಮೃದ್ಧಿ ಹೆಚ್ಚಲಿದೆ
ದುರ್ಗೆ ಆನೆ ಮೇಲೆ ಬರುವುದರಿಂದ ಮಳೆ-ಬೆಳೆ ಚೆನ್ನಾಗಿ ಬರಲಿದೆ, ಇದರಿಂದಾಗಿ ದೇಶದಲ್ಲಿ ಸಮೃದ್ಧಿ ಹೆಚ್ಚಲಿದೆ . ಜನರಲ್ಲಿ ಸಂತೋಷ ಹೆಚ್ಚಲಿದೆ.

ಆನೆ ಬೆನ್ನೇರಿ ನಿರ್ಗಮಿಸಲಿರುವ ದುರ್ಗಾ ಮಾತೆ
ಈ ವರ್ಷದಲ್ಲಿ ದುರ್ಗೆ ಆನೆ ಬೆನ್ನೇರಿ ಬಂದು, ಆನೆಯ ಮೇಲೆ ಕುಳಿತು ಮರಳುತ್ತಿದ್ದಾಳೆ. ದುರ್ಗೆ ಬುಧವಾರ ಅಥವಾ ಶುಕ್ರವಾರ ಹೋಗುವುದಾದರೆ ಆನೆಯ ಮೇಲೆ ಹೋಗುತ್ತಾಳೆ. ಈ ವರ್ಷ ಅಕ್ಟೋಬರ್ಕ್ಕೆ ನವರಾತ್ರಿ ಮುಕ್ತಾಯ, ಬುಧವಾರ ಬಂದಿದೆ, ಆದ್ದರಿಂದ ಆನೆಯ ಬೆನ್ನೇರಿ ಮರಳುತ್ತಿದ್ದಾಳೆ. ಇದನ್ನು ಕೂಡ ಶುಭ ಎಂದು ಪರಿಗಣಿಸಲಾಗಿದೆ.

ದುರ್ಗೆ ಯಾವ ವಾಹನದಲ್ಲಿ ಬಂದರೆ ಶುಭವಲ್ಲ
ಕುದುರೆ, ಪಲ್ಲಕ್ಕಿಯಲ್ಲಿ ದುರ್ಗೆ ಬಂದರೆ ಅದನ್ನು ಶುಭ ಎಂದು ಪರಿಗಣಿಸುವುದಿಲ್ಲ. ಕುದುರೆಯೇರಿ ಬಂದರೆ ವಿನಾಶದ ಸೂಚನೆ ನೀಡುತ್ತೆ, ಪಲ್ಲಕ್ಕಿಯಲ್ಲಿ ಬಂದರೆ ಸಾಂಕ್ರಮಿಕ ರೋಗದ ಸೂಚನೆ ನೀಡುತ್ತೆ.
ಆನೆ ಹಾಗೂ ದೋಣಿಯಲ್ಲಿ ಬರುವುದನ್ನು ಶುಭವೆಂದು ಪರಿಗಣಿಸಲಾಗಿದೆ.



Click it and Unblock the Notifications