Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ರಾಶಿ ಪ್ರಕಾರ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು, ಯಾವ ರಾಶಿಯವರು ಹೇಗೆ ಪೂಜಿಸಬೇಕು ನೋಡಿ
ಶ್ರೀ ಆಂಜನೇಯ ಶ್ರೀ ರಾಮನ ಭಕ್ತ. ಭಕ್ತಿ ಎಂದರೆ ಏನು, ಹೇಗಿರುತ್ತದೆ ಎಂಬುವುದಕ್ಕೆ ನಿದರ್ಶನ ಹನುಮಂತ. ಹನುಮಂತನನ್ನು ಪೂಜಿಸಿದರೆ ಐಶ್ವರ್ಯ, ಧೈರ್ಯ, ಆತ್ಮಸ್ಥೈರ್ಯ, ಆರೋಗ್ಯ ಎಲ್ಲವೂ ಲಭಿಸುವುದು. ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಬಹುದು, ರೋಗಗಳು ದೂರಾಗುವುದು.

ಜ್ಯೋತಿಷ್ಯದಲ್ಲಿ ನಿಮ್ಮ ರಾಶಿಯ ಪ್ರಕಾರ ಹನುಮಂತನ ಪೂಜಿಸಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜಿಸಿದರೆ ಹೆಚ್ಚಿನ ಫಲ ಸಿಗುವುದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರು ಅಧಿಪತಿ ಮಂಗಳ. ಮಂಗಳವಾರ ಹಾಗೂ ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ ಪೂಜೆ ಸಲ್ಲಿಸಿ.

ವೃಷಭ ರಾಶಿಯವರು
ವೃಷಭ ರಾಶಿಯವರು ಪ್ರತಿದಿನ ಒಂದು ಬಾರಿಯಾದರೂ ಹನುಮಾನ್ ಚಾಲೀಸ ಹೇಳಿದರೆ ಕಷ್ಟಗಳು, ರೋಗಗಳು ದೂರಾಗುವುದು.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ, ಹನುಮಂತನಿಗೆ ಬುಧನ ರಕ್ಷಣೆ ಇದೆ. ನೀವು ಶನಿವಾರ ಹನುಮಂತನಿಗೆ ಬೂಂದಿ ಪ್ರಸಾದ ಅರ್ಪಿಸಿ.

ಕರ್ಕ ರಾಶಿ
ಕರ್ಕ ರಾಶಿಯವರ ಅಧಿಪತಿ ಚಂದ್ರ. ನೀವು ಕೆಂಪು ವಸ್ತ್ರ ಅರ್ಪಿಸಿ.

ಸಿಂಹ ರಾಶಿ
ಸಿಂಹ ರಾಶಿಯವರ ಅಧಿಪತಿ ಸೂರ್ಯ. ನೀವು ಶ್ರೀ ಆದಿತ್ಯ ಹೃದಯ ಸ್ತೋತ್ರ ಪಠಿಸಿ, ಬಡವರಿಗೆ ಆಹಾರವನ್ನು ನೀಡಿದರೆ ಹನುಮಂತನಿಗೆ ತೃಪ್ತಿಯಾಗುವುದು.

ಕನ್ಯಾ ರಾಶಿ
ಕನ್ಯಾ ರಾಶಿಯವರ ಅಧಿಪತಿ ಬುಧ ನೀವು ಹನುಮಂತನ ಆಶೀರ್ವಾದ ಪಡೆಯಲು ಹನುಮಾನ್ ಚಾಲೀಸವನ್ನು 108 ಬಾರಿ ಪಠಿಸಿ.

ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ. ರಾಮಚರಿತ ಮಾನಸ ಬಾಲಕಾಂಡ ಓದಿದರೆ ಕಷ್ಟಗಳು, ರೋಗಗಳು ದೂರಾಗುವುದು, ಐಶ್ವರ್ಯ ಹೆಚ್ಚುವುದು, ಜೀವನದಲ್ಲಿ ಯಶಸ್ಸು ಪಡೆಯುವಿರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ನೀವು ಪ್ರತೀದಿನ ಓಂ ಶ್ರೀ ಹನುಮಂತೇ ನಮಃ ಪಠಿಸಿದರೆ ಎಲ್ಲಾ ಸಮಸ್ಯೆಗಳು ದೂರಾಗುವುದು, ನಿಮ್ಮ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಯಾವುದೇ ದೇವಾಲಯಕ್ಕೆ ಹೋಗಿ ಶ್ರೀ ಸೀತಾ ಮಂತ್ರ ಪಠಿಸಿ ರಾಮ ಚರಿತೆ ಮಾನಸ ಪುಸ್ತಕವನ್ನು ಹಂಚಿದರೆ ಶ್ರೀ ಹನುಮಂತನ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ. ಶನಿ ದೇವನ ಗುರು ಹನುಮಂತ. ನೀವು ಶನಿ ದೇವರನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಮಂಗಳವಾರ, ಶನಿವಾರ ಹನಮಾನ್ ಚಾಲೀಸ ಪಠಿಸಿ, ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರಾಗಿ ಬದುಕಿನಲ್ಲಿ ಸಂತೋಷ ನೆಲೆಸುವುದು.

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ. ನೀವು ಶ್ರೀ ರಾಮ ಮಂತ್ರ ಪಠಿಸಿ ಹಾಗೂ ಹನುಮಾನ್ ಚಾಲೀಸ ಹೇಳಿ. ಇದರಿಂದ ನಿಮ್ಮ ಬದುಕಿನಲ್ಲಿ ನೆಮ್ಮದಿ, ಪ್ರೀತಿ, ಶಾಂತಿ, ಸಂತೋಷ ಇರುತ್ತದೆ.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ನೀವು ಪ್ರತಿ ದಿನ ಶ್ರೀ ಹನುಮಂತೇ ನಮಃ ಪಠಿಸಿದರೆ ಆರೋಗ್ಯ, ಐಶ್ವರ್ಯ, ಯಶಸ್ಸಯ ಲಭಿಸುವುದು.



Click it and Unblock the Notifications











