Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ರಾಶಿ ಪ್ರಕಾರ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು, ಯಾವ ರಾಶಿಯವರು ಹೇಗೆ ಪೂಜಿಸಬೇಕು ನೋಡಿ
ಶ್ರೀ ಆಂಜನೇಯ ಶ್ರೀ ರಾಮನ ಭಕ್ತ. ಭಕ್ತಿ ಎಂದರೆ ಏನು, ಹೇಗಿರುತ್ತದೆ ಎಂಬುವುದಕ್ಕೆ ನಿದರ್ಶನ ಹನುಮಂತ. ಹನುಮಂತನನ್ನು ಪೂಜಿಸಿದರೆ ಐಶ್ವರ್ಯ, ಧೈರ್ಯ, ಆತ್ಮಸ್ಥೈರ್ಯ, ಆರೋಗ್ಯ ಎಲ್ಲವೂ ಲಭಿಸುವುದು. ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಬಹುದು, ರೋಗಗಳು ದೂರಾಗುವುದು.

ಜ್ಯೋತಿಷ್ಯದಲ್ಲಿ ನಿಮ್ಮ ರಾಶಿಯ ಪ್ರಕಾರ ಹನುಮಂತನ ಪೂಜಿಸಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜಿಸಿದರೆ ಹೆಚ್ಚಿನ ಫಲ ಸಿಗುವುದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರು ಅಧಿಪತಿ ಮಂಗಳ. ಮಂಗಳವಾರ ಹಾಗೂ ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ ಪೂಜೆ ಸಲ್ಲಿಸಿ.

ವೃಷಭ ರಾಶಿಯವರು
ವೃಷಭ ರಾಶಿಯವರು ಪ್ರತಿದಿನ ಒಂದು ಬಾರಿಯಾದರೂ ಹನುಮಾನ್ ಚಾಲೀಸ ಹೇಳಿದರೆ ಕಷ್ಟಗಳು, ರೋಗಗಳು ದೂರಾಗುವುದು.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ, ಹನುಮಂತನಿಗೆ ಬುಧನ ರಕ್ಷಣೆ ಇದೆ. ನೀವು ಶನಿವಾರ ಹನುಮಂತನಿಗೆ ಬೂಂದಿ ಪ್ರಸಾದ ಅರ್ಪಿಸಿ.

ಕರ್ಕ ರಾಶಿ
ಕರ್ಕ ರಾಶಿಯವರ ಅಧಿಪತಿ ಚಂದ್ರ. ನೀವು ಕೆಂಪು ವಸ್ತ್ರ ಅರ್ಪಿಸಿ.

ಸಿಂಹ ರಾಶಿ
ಸಿಂಹ ರಾಶಿಯವರ ಅಧಿಪತಿ ಸೂರ್ಯ. ನೀವು ಶ್ರೀ ಆದಿತ್ಯ ಹೃದಯ ಸ್ತೋತ್ರ ಪಠಿಸಿ, ಬಡವರಿಗೆ ಆಹಾರವನ್ನು ನೀಡಿದರೆ ಹನುಮಂತನಿಗೆ ತೃಪ್ತಿಯಾಗುವುದು.

ಕನ್ಯಾ ರಾಶಿ
ಕನ್ಯಾ ರಾಶಿಯವರ ಅಧಿಪತಿ ಬುಧ ನೀವು ಹನುಮಂತನ ಆಶೀರ್ವಾದ ಪಡೆಯಲು ಹನುಮಾನ್ ಚಾಲೀಸವನ್ನು 108 ಬಾರಿ ಪಠಿಸಿ.

ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ. ರಾಮಚರಿತ ಮಾನಸ ಬಾಲಕಾಂಡ ಓದಿದರೆ ಕಷ್ಟಗಳು, ರೋಗಗಳು ದೂರಾಗುವುದು, ಐಶ್ವರ್ಯ ಹೆಚ್ಚುವುದು, ಜೀವನದಲ್ಲಿ ಯಶಸ್ಸು ಪಡೆಯುವಿರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ನೀವು ಪ್ರತೀದಿನ ಓಂ ಶ್ರೀ ಹನುಮಂತೇ ನಮಃ ಪಠಿಸಿದರೆ ಎಲ್ಲಾ ಸಮಸ್ಯೆಗಳು ದೂರಾಗುವುದು, ನಿಮ್ಮ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಯಾವುದೇ ದೇವಾಲಯಕ್ಕೆ ಹೋಗಿ ಶ್ರೀ ಸೀತಾ ಮಂತ್ರ ಪಠಿಸಿ ರಾಮ ಚರಿತೆ ಮಾನಸ ಪುಸ್ತಕವನ್ನು ಹಂಚಿದರೆ ಶ್ರೀ ಹನುಮಂತನ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ. ಶನಿ ದೇವನ ಗುರು ಹನುಮಂತ. ನೀವು ಶನಿ ದೇವರನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಮಂಗಳವಾರ, ಶನಿವಾರ ಹನಮಾನ್ ಚಾಲೀಸ ಪಠಿಸಿ, ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರಾಗಿ ಬದುಕಿನಲ್ಲಿ ಸಂತೋಷ ನೆಲೆಸುವುದು.

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ. ನೀವು ಶ್ರೀ ರಾಮ ಮಂತ್ರ ಪಠಿಸಿ ಹಾಗೂ ಹನುಮಾನ್ ಚಾಲೀಸ ಹೇಳಿ. ಇದರಿಂದ ನಿಮ್ಮ ಬದುಕಿನಲ್ಲಿ ನೆಮ್ಮದಿ, ಪ್ರೀತಿ, ಶಾಂತಿ, ಸಂತೋಷ ಇರುತ್ತದೆ.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ನೀವು ಪ್ರತಿ ದಿನ ಶ್ರೀ ಹನುಮಂತೇ ನಮಃ ಪಠಿಸಿದರೆ ಆರೋಗ್ಯ, ಐಶ್ವರ್ಯ, ಯಶಸ್ಸಯ ಲಭಿಸುವುದು.



Click it and Unblock the Notifications