Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
Durga Ashtami 2022: ಈ ದಿನ ಮಾಡುವ ಹೋಮ-ಹವನ ಮಾಡಿದರೆ ಸಿಗುವುದು ಈ ವಿಶೇಷ ಫಲ
ನವರಾತ್ರಿಯ ಪ್ರತಿಯೊಂದು ದಿನವೂ ವಿಶೇಷವೇ, ಅದರಲ್ಲೂ ನವರಾತ್ರಿಯ ಎಂಟನೇ ದಿನ ತುಂಬಾನೇ ವಿಶೇಷವಾಗಿದೆ ಈ ದಿನ ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ದುರ್ಗಾಷ್ಟಮಿಯನ್ನು ದೇಶದ ವಿವಿಧ ಕಡೆ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ದೇವಿಯನ್ನು ಪೂಜಿಸುವುದರಿಂದ ದೇವಿಯ ಕೃಪಗೆ ಪಾತ್ರರಾಗುತ್ತೀರಿ.

ಈ ಸಾಲಿನಲ್ಲಿ ದುರ್ಗಾಷ್ಟಮಿ ಯಾವಾಗ? ಈ ದಿನ ಮಾಡುವ ಉಪವಾಸದ ಮಹತ್ವವೇನು, ಹೋಮ ಮಾಡಲು ತುಂಬಾನೇ ಸೂಕ್ತವಾದ ದಿನ, ಏಕೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

ದುರ್ಗಾಷ್ಟಮಿ ಪೂಜೆಯ ಮುಹೂರ್ತ
ದಿನಾಂಕ: ಅಕ್ಟೋಬರ್ 3, ಸೋಮವಾರ
ತಿಥಿ ಸಮಯ: ಅಕ್ಟೋಬರ್ 2 ಸಂಜೆ 6:47ರಿಂದ ಅಕ್ಟೋಬರ್ 3, ಸಂಜೆ 4:38ರವರೆಗೆ

ರವಿ ಮತ್ತು ಶೋಭನ ಯೋಗದಲ್ಲಿ ದುರ್ಗಾ ಅಷ್ಟಮಿ
ದುರ್ಗಾ ಅಷ್ಟಮಿಯ ದಿನದಂದು ರವಿಯೋಗ ಮತ್ತು ಶೋಭನ ಯೋಗ ಉಂಟಾಗಿದೆ. ಈ ಎರಡೂ ಯೋಗಗಳು ಶುಭ ಕಾರ್ಯಗಳಿಗೆ ಮಂಗಳಕರ. ಬೆಳಗ್ಗಿನಿಂದ ಮಧ್ಯಾಹ್ನ 02.22ರವರೆಗೆ ಶೋಭನ ಯೋಗ. ರವಿಯೋಗವು ತಡರಾತ್ರಿ 12.25 ರಿಂದ ಮರುದಿನ ಬೆಳಿಗ್ಗೆ 06.15 ರವರೆಗೆ ಇರುತ್ತದೆ.

ದುರ್ಗಾಷ್ಟಮಿ ವ್ರತದ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವಿಯನ್ನು ಹೂಗಳಿಂದ ಅಲಂಕರಿಸಬೇಕು.
* ದೇವಿಗೆ ದೀಪವನ್ನು ಬೆಳಗಿ, ಧೂಪ ಹಚ್ಚಿ, ಅಗರಬತ್ತಿ ಹಚ್ಚಿ ಪೂಜಿಸಿ
* ನಂತರ ದೇವಿಗೆ ನೈವೇದ್ಯವನ್ನು ಅರ್ಪಿಸಿ.
* ಈ ದಿನ ವ್ರತ ಮಾಡುವವರು ನೆಲದ ಮೇಲೆ ಮಲಗುತ್ತಾರೆ.
* ಕೆಲವರು ನೀರು ಸಹ ಸೇವಿಸಿದೆ ಕಟ್ಟುನಿಟ್ಟಿನ ವ್ರತ ಪಾಲಿಸಿದರೆ ಅಷ್ಟೊಂದು ಕಠಿಣ ವ್ರತ ಪಾಲಿಸಲು ಸಾಧ್ಯವಾಗದವರು ಹಣ್ಣು ಹಾಗೂ ಹಾಲು ಸೇವಿಸಬಹುದು.
* ಈ ದಿನ ಪೂಜೆ ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು
* ನಂತರ ಸಮೀಪದ ದೇವಿಯ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಬರುವುದು ಒಳ್ಳೆಯದು.

ದುರ್ಗಾಷ್ಟಮಿ ಮಹತ್ವ
* ದೇವಿಯ ಆಶೀರ್ವಾದ ಪಡೆಯಲು ಉಪವಾಸವಿದ್ದು ದುರ್ಗಾಷ್ಟಮಿ ಆಚರಿಸಲಾಗುವುದು.
* ಯಾರು ದುರ್ಗಾಷ್ಟಮಿ ವ್ರತವನ್ನು ಆಚರಿಸುತ್ತಾರೋ ಅವರಿಗೆ ದೇವಿ ಸಂತೋಷ, ಸಮೃದ್ಧಿಯನ್ನು ನೀಡಿ ಆಶೀರ್ವದಿಸುತ್ತಾಳೆ.
* ಇನ್ನು ನವರಾತ್ರಿಯಲ್ಲಿ ಒಂಭತ್ತು ದಿನ ಉಪವಾಸವಿರಲು ಸಾಧ್ಯವಾಗದವರು ನವರಾತ್ರಿಯ ಮೊದಲ ಹಾಗೂ ದುರ್ಗಾಷ್ಟಮಿಯಂದು ಉಪವಾಸ ಮಾಡುತ್ತಾರೆ.
* ದುರ್ಗಾಷ್ಟಮಿಯ ದಿನ ಕನ್ಯಾಪೂಜೆ ಮಾಡಲಾಗುವುದು. ಈ ದಿನ ಇನ್ನು ಮುಟ್ಟಿನ ಚಕ್ರ ಪ್ರಾರಂಭವಾಗ 9 ಹುಡುಗಿಯರನ್ನು ಮನೆಗೆ ಕರೆದು ಅವರನ್ನು ಪೂಜಿಸಿ ಅವರಿಗೆ ಸಿಹಿತಿಂಡಿ, ಉಡುಗೊರೆಗಳನ್ನು ನೀಡಲಾಗುವುದು.
* ನವರಾತ್ರಿಯಲ್ಲಿ ಮಾಡುವ ಪೂಜೆ-ಹವನಗಳಿಗೆ ತುಂಬಾನೇ ಮಹತ್ವ ಹೊಂದಿದೆ. ಈ ದಿನ ಹೋಮ ಮಾಡಿದರೆ ಎಲ್ಲಾ ದೇವತೆಗಳು ಸಂತುಷ್ಟರಾಗುತ್ತಾರೆ, ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.



Click it and Unblock the Notifications