Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
Durga Ashtami 2022: ಈ ದಿನ ಮಾಡುವ ಹೋಮ-ಹವನ ಮಾಡಿದರೆ ಸಿಗುವುದು ಈ ವಿಶೇಷ ಫಲ
ನವರಾತ್ರಿಯ ಪ್ರತಿಯೊಂದು ದಿನವೂ ವಿಶೇಷವೇ, ಅದರಲ್ಲೂ ನವರಾತ್ರಿಯ ಎಂಟನೇ ದಿನ ತುಂಬಾನೇ ವಿಶೇಷವಾಗಿದೆ ಈ ದಿನ ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ದುರ್ಗಾಷ್ಟಮಿಯನ್ನು ದೇಶದ ವಿವಿಧ ಕಡೆ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ದೇವಿಯನ್ನು ಪೂಜಿಸುವುದರಿಂದ ದೇವಿಯ ಕೃಪಗೆ ಪಾತ್ರರಾಗುತ್ತೀರಿ.

ಈ ಸಾಲಿನಲ್ಲಿ ದುರ್ಗಾಷ್ಟಮಿ ಯಾವಾಗ? ಈ ದಿನ ಮಾಡುವ ಉಪವಾಸದ ಮಹತ್ವವೇನು, ಹೋಮ ಮಾಡಲು ತುಂಬಾನೇ ಸೂಕ್ತವಾದ ದಿನ, ಏಕೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

ದುರ್ಗಾಷ್ಟಮಿ ಪೂಜೆಯ ಮುಹೂರ್ತ
ದಿನಾಂಕ: ಅಕ್ಟೋಬರ್ 3, ಸೋಮವಾರ
ತಿಥಿ ಸಮಯ: ಅಕ್ಟೋಬರ್ 2 ಸಂಜೆ 6:47ರಿಂದ ಅಕ್ಟೋಬರ್ 3, ಸಂಜೆ 4:38ರವರೆಗೆ

ರವಿ ಮತ್ತು ಶೋಭನ ಯೋಗದಲ್ಲಿ ದುರ್ಗಾ ಅಷ್ಟಮಿ
ದುರ್ಗಾ ಅಷ್ಟಮಿಯ ದಿನದಂದು ರವಿಯೋಗ ಮತ್ತು ಶೋಭನ ಯೋಗ ಉಂಟಾಗಿದೆ. ಈ ಎರಡೂ ಯೋಗಗಳು ಶುಭ ಕಾರ್ಯಗಳಿಗೆ ಮಂಗಳಕರ. ಬೆಳಗ್ಗಿನಿಂದ ಮಧ್ಯಾಹ್ನ 02.22ರವರೆಗೆ ಶೋಭನ ಯೋಗ. ರವಿಯೋಗವು ತಡರಾತ್ರಿ 12.25 ರಿಂದ ಮರುದಿನ ಬೆಳಿಗ್ಗೆ 06.15 ರವರೆಗೆ ಇರುತ್ತದೆ.

ದುರ್ಗಾಷ್ಟಮಿ ವ್ರತದ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವಿಯನ್ನು ಹೂಗಳಿಂದ ಅಲಂಕರಿಸಬೇಕು.
* ದೇವಿಗೆ ದೀಪವನ್ನು ಬೆಳಗಿ, ಧೂಪ ಹಚ್ಚಿ, ಅಗರಬತ್ತಿ ಹಚ್ಚಿ ಪೂಜಿಸಿ
* ನಂತರ ದೇವಿಗೆ ನೈವೇದ್ಯವನ್ನು ಅರ್ಪಿಸಿ.
* ಈ ದಿನ ವ್ರತ ಮಾಡುವವರು ನೆಲದ ಮೇಲೆ ಮಲಗುತ್ತಾರೆ.
* ಕೆಲವರು ನೀರು ಸಹ ಸೇವಿಸಿದೆ ಕಟ್ಟುನಿಟ್ಟಿನ ವ್ರತ ಪಾಲಿಸಿದರೆ ಅಷ್ಟೊಂದು ಕಠಿಣ ವ್ರತ ಪಾಲಿಸಲು ಸಾಧ್ಯವಾಗದವರು ಹಣ್ಣು ಹಾಗೂ ಹಾಲು ಸೇವಿಸಬಹುದು.
* ಈ ದಿನ ಪೂಜೆ ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು
* ನಂತರ ಸಮೀಪದ ದೇವಿಯ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಬರುವುದು ಒಳ್ಳೆಯದು.

ದುರ್ಗಾಷ್ಟಮಿ ಮಹತ್ವ
* ದೇವಿಯ ಆಶೀರ್ವಾದ ಪಡೆಯಲು ಉಪವಾಸವಿದ್ದು ದುರ್ಗಾಷ್ಟಮಿ ಆಚರಿಸಲಾಗುವುದು.
* ಯಾರು ದುರ್ಗಾಷ್ಟಮಿ ವ್ರತವನ್ನು ಆಚರಿಸುತ್ತಾರೋ ಅವರಿಗೆ ದೇವಿ ಸಂತೋಷ, ಸಮೃದ್ಧಿಯನ್ನು ನೀಡಿ ಆಶೀರ್ವದಿಸುತ್ತಾಳೆ.
* ಇನ್ನು ನವರಾತ್ರಿಯಲ್ಲಿ ಒಂಭತ್ತು ದಿನ ಉಪವಾಸವಿರಲು ಸಾಧ್ಯವಾಗದವರು ನವರಾತ್ರಿಯ ಮೊದಲ ಹಾಗೂ ದುರ್ಗಾಷ್ಟಮಿಯಂದು ಉಪವಾಸ ಮಾಡುತ್ತಾರೆ.
* ದುರ್ಗಾಷ್ಟಮಿಯ ದಿನ ಕನ್ಯಾಪೂಜೆ ಮಾಡಲಾಗುವುದು. ಈ ದಿನ ಇನ್ನು ಮುಟ್ಟಿನ ಚಕ್ರ ಪ್ರಾರಂಭವಾಗ 9 ಹುಡುಗಿಯರನ್ನು ಮನೆಗೆ ಕರೆದು ಅವರನ್ನು ಪೂಜಿಸಿ ಅವರಿಗೆ ಸಿಹಿತಿಂಡಿ, ಉಡುಗೊರೆಗಳನ್ನು ನೀಡಲಾಗುವುದು.
* ನವರಾತ್ರಿಯಲ್ಲಿ ಮಾಡುವ ಪೂಜೆ-ಹವನಗಳಿಗೆ ತುಂಬಾನೇ ಮಹತ್ವ ಹೊಂದಿದೆ. ಈ ದಿನ ಹೋಮ ಮಾಡಿದರೆ ಎಲ್ಲಾ ದೇವತೆಗಳು ಸಂತುಷ್ಟರಾಗುತ್ತಾರೆ, ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.



Click it and Unblock the Notifications