Latest Updates
-
ಬೆಂಗಳೂರಿನ ನೀರಿನ ಅಭಾವ: ರೂಮ್ಮೇಟ್ಗಳ ಜಗಳ ತಪ್ಪಿಸಲು ಈ 'ಮೈಕ್ರೋ-ಸ್ಕ್ರಿಪ್ಟ್' ಟ್ರಿಕ್ ಬಳಸಿ! -
ಚೆನ್ನೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಕೇವಲ 15 ನಿಮಿಷದ ಈ ಟಿಪ್ಸ್ ಸಾಕು! -
ಅಮರನಾಥ ಯಾತ್ರೆ 2026: ಹಿಮಾಲಯದ ಕಡಿದಾದ ಹಾದಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಕ್ರಮಗಳನ್ನು ಮರೆಯದಿರಿ! -
ಮೊಹರಂ ಮೆರವಣಿಗೆ: ಇಂದು ನಿಮ್ಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ? ಹೊರಡುವ ಮುನ್ನ ಈ ಅಪ್ಡೇಟ್ ನೋಡಿ -
ಮುಂಬೈ ನೀರಿನ ಕಡಿತ: ನೀರು ಉಳಿಸಿ ಫಿಟ್ ಆಗಿರಲು 12 ನಿಮಿಷದ ವ್ಯಾಯಾಮ ಮತ್ತು ಸ್ನಾನದ ಟಿಪ್ಸ್! -
ಬೆಂಗಳೂರು ಮೆಟ್ರೋ ವ್ಯತ್ಯಯ: ಆಫೀಸ್ ತಲುಪಲು ತಡವಾಗುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದ ತೇವಾಂಶದಿಂದ ನಿಮ್ಮ ಮನೆ ಮತ್ತು ವಸ್ತುಗಳನ್ನು ರಕ್ಷಿಸಲು ಇಲ್ಲಿವೆ ಸರಳ ಟಿಪ್ಸ್! -
ಮುಂಬೈ ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ರಸ್ತೆ ಬದಿಯ ತಿಂಡಿ ತಿನ್ನುವ ಮುನ್ನ ಈ ಎಚ್ಚರಿಕೆ ವಹಿಸಿ! -
ಭಾರತ-ಐರ್ಲೆಂಡ್ ಮೊದಲ ಟಿ20: ಬೆಲ್ಫಾಸ್ಟ್ನಲ್ಲಿ ಮಳೆ ಕಾಟ, ಪಂದ್ಯ ನಡೆಯುತ್ತಾ? ಇಲ್ಲಿದೆ ಪಿಚ್ ಮತ್ತು ಹವಾಮಾನ ವರದಿ -
ವಿಶ್ವ ವಿಟಲಿಗೋ ದಿನ 2026: ಚರ್ಮದ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ 'ಯುವಿ-ಸೇಫ್' ದಿನಚರಿ ಇಲ್ಲಿದೆ!
Durga Ashtami 2022: ಈ ದಿನ ಮಾಡುವ ಹೋಮ-ಹವನ ಮಾಡಿದರೆ ಸಿಗುವುದು ಈ ವಿಶೇಷ ಫಲ
ನವರಾತ್ರಿಯ ಪ್ರತಿಯೊಂದು ದಿನವೂ ವಿಶೇಷವೇ, ಅದರಲ್ಲೂ ನವರಾತ್ರಿಯ ಎಂಟನೇ ದಿನ ತುಂಬಾನೇ ವಿಶೇಷವಾಗಿದೆ ಈ ದಿನ ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ದುರ್ಗಾಷ್ಟಮಿಯನ್ನು ದೇಶದ ವಿವಿಧ ಕಡೆ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ದೇವಿಯನ್ನು ಪೂಜಿಸುವುದರಿಂದ ದೇವಿಯ ಕೃಪಗೆ ಪಾತ್ರರಾಗುತ್ತೀರಿ.

ಈ ಸಾಲಿನಲ್ಲಿ ದುರ್ಗಾಷ್ಟಮಿ ಯಾವಾಗ? ಈ ದಿನ ಮಾಡುವ ಉಪವಾಸದ ಮಹತ್ವವೇನು, ಹೋಮ ಮಾಡಲು ತುಂಬಾನೇ ಸೂಕ್ತವಾದ ದಿನ, ಏಕೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

ದುರ್ಗಾಷ್ಟಮಿ ಪೂಜೆಯ ಮುಹೂರ್ತ
ದಿನಾಂಕ: ಅಕ್ಟೋಬರ್ 3, ಸೋಮವಾರ
ತಿಥಿ ಸಮಯ: ಅಕ್ಟೋಬರ್ 2 ಸಂಜೆ 6:47ರಿಂದ ಅಕ್ಟೋಬರ್ 3, ಸಂಜೆ 4:38ರವರೆಗೆ

ರವಿ ಮತ್ತು ಶೋಭನ ಯೋಗದಲ್ಲಿ ದುರ್ಗಾ ಅಷ್ಟಮಿ
ದುರ್ಗಾ ಅಷ್ಟಮಿಯ ದಿನದಂದು ರವಿಯೋಗ ಮತ್ತು ಶೋಭನ ಯೋಗ ಉಂಟಾಗಿದೆ. ಈ ಎರಡೂ ಯೋಗಗಳು ಶುಭ ಕಾರ್ಯಗಳಿಗೆ ಮಂಗಳಕರ. ಬೆಳಗ್ಗಿನಿಂದ ಮಧ್ಯಾಹ್ನ 02.22ರವರೆಗೆ ಶೋಭನ ಯೋಗ. ರವಿಯೋಗವು ತಡರಾತ್ರಿ 12.25 ರಿಂದ ಮರುದಿನ ಬೆಳಿಗ್ಗೆ 06.15 ರವರೆಗೆ ಇರುತ್ತದೆ.

ದುರ್ಗಾಷ್ಟಮಿ ವ್ರತದ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವಿಯನ್ನು ಹೂಗಳಿಂದ ಅಲಂಕರಿಸಬೇಕು.
* ದೇವಿಗೆ ದೀಪವನ್ನು ಬೆಳಗಿ, ಧೂಪ ಹಚ್ಚಿ, ಅಗರಬತ್ತಿ ಹಚ್ಚಿ ಪೂಜಿಸಿ
* ನಂತರ ದೇವಿಗೆ ನೈವೇದ್ಯವನ್ನು ಅರ್ಪಿಸಿ.
* ಈ ದಿನ ವ್ರತ ಮಾಡುವವರು ನೆಲದ ಮೇಲೆ ಮಲಗುತ್ತಾರೆ.
* ಕೆಲವರು ನೀರು ಸಹ ಸೇವಿಸಿದೆ ಕಟ್ಟುನಿಟ್ಟಿನ ವ್ರತ ಪಾಲಿಸಿದರೆ ಅಷ್ಟೊಂದು ಕಠಿಣ ವ್ರತ ಪಾಲಿಸಲು ಸಾಧ್ಯವಾಗದವರು ಹಣ್ಣು ಹಾಗೂ ಹಾಲು ಸೇವಿಸಬಹುದು.
* ಈ ದಿನ ಪೂಜೆ ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು
* ನಂತರ ಸಮೀಪದ ದೇವಿಯ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಬರುವುದು ಒಳ್ಳೆಯದು.

ದುರ್ಗಾಷ್ಟಮಿ ಮಹತ್ವ
* ದೇವಿಯ ಆಶೀರ್ವಾದ ಪಡೆಯಲು ಉಪವಾಸವಿದ್ದು ದುರ್ಗಾಷ್ಟಮಿ ಆಚರಿಸಲಾಗುವುದು.
* ಯಾರು ದುರ್ಗಾಷ್ಟಮಿ ವ್ರತವನ್ನು ಆಚರಿಸುತ್ತಾರೋ ಅವರಿಗೆ ದೇವಿ ಸಂತೋಷ, ಸಮೃದ್ಧಿಯನ್ನು ನೀಡಿ ಆಶೀರ್ವದಿಸುತ್ತಾಳೆ.
* ಇನ್ನು ನವರಾತ್ರಿಯಲ್ಲಿ ಒಂಭತ್ತು ದಿನ ಉಪವಾಸವಿರಲು ಸಾಧ್ಯವಾಗದವರು ನವರಾತ್ರಿಯ ಮೊದಲ ಹಾಗೂ ದುರ್ಗಾಷ್ಟಮಿಯಂದು ಉಪವಾಸ ಮಾಡುತ್ತಾರೆ.
* ದುರ್ಗಾಷ್ಟಮಿಯ ದಿನ ಕನ್ಯಾಪೂಜೆ ಮಾಡಲಾಗುವುದು. ಈ ದಿನ ಇನ್ನು ಮುಟ್ಟಿನ ಚಕ್ರ ಪ್ರಾರಂಭವಾಗ 9 ಹುಡುಗಿಯರನ್ನು ಮನೆಗೆ ಕರೆದು ಅವರನ್ನು ಪೂಜಿಸಿ ಅವರಿಗೆ ಸಿಹಿತಿಂಡಿ, ಉಡುಗೊರೆಗಳನ್ನು ನೀಡಲಾಗುವುದು.
* ನವರಾತ್ರಿಯಲ್ಲಿ ಮಾಡುವ ಪೂಜೆ-ಹವನಗಳಿಗೆ ತುಂಬಾನೇ ಮಹತ್ವ ಹೊಂದಿದೆ. ಈ ದಿನ ಹೋಮ ಮಾಡಿದರೆ ಎಲ್ಲಾ ದೇವತೆಗಳು ಸಂತುಷ್ಟರಾಗುತ್ತಾರೆ, ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.



Click it and Unblock the Notifications