Just In
- 23 min ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 1 hr ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 4 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 4 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
Don't Miss
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುವಾರದ ದಿನ ಭವಿಷ್ಯ: ಕನ್ಯಾ ರಾಶಿಯವರೇ ಹಣದ ವಿಷಯದಲ್ಲಿ ಎಚ್ಚರ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ದಕ್ಷಿಣ
ಕನ್ನಡದ
ಪ್ರಸಿದ್ಧ
ಜ್ಯೋತಿಷ್ಯರು,
ಆಚಾರ್ಯ
ಶ್ರೀ
ರಾಘವೇಂದ್ರ
ಭಟ್
ಕುಡ್ಲ.
ಕಟೀಲು
ಶ್ರೀದುರ್ಗಾಪರಮೇಶ್ವರಿ
ಅಮ್ಮನವರ
ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.
ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.
ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005 .
https://sridurga-astrologer.com
ಸಂವತ್ಸರ:
ಶಾರ್ವರಿ
ಆಯನ:
ದಕ್ಷಿಣಾಯನ
ಋತು:
ಶರದ್
ಮಾಸ:
ಆಶ್ವಿಜ
ನಕ್ಷತ್ರ:
ಅಕ್ಟೋಬರ್
23,
ಮಧ್ಯಾಹ್ನ
12:59
ರವರೆಗೆ
ಪೂರ್ವಾಷಾಢ,
ನಂತರ
ಉತ್ತರಾಷಾಢ
ತಿಥಿ:
ಶುಕ್ಲ
ಪಕ್ಷ
ರಾಹುಕಾಲ:
ಮಧ್ಯಾಹ್ನ
01:30ರಿಂದ
02:55ರವರೆಗೆ
ಗುಳಿಕಕಾಲ:
ಬೆಳಗ್ಗೆ
09:16ರಿಂದ
10:41ರವರೆಗೆ
ಯಮಗಂಡಕಾಲ:
ಬೆಳಗ್ಗೆ
06:26ರಿಂದ
07:51ರವರೆಗೆ
ದುರ್ಮುಹೂರ್ತ:
ಬೆಳಗ್ಗೆ
10:12ರಿಂದ
10:57ರವರೆಗೆ
ಮಧ್ಯಾಹ್ನ
02:43ರಿಂದ
03:29ರವರೆಗೆ
ಸೂರ್ಯೋದಯ:
ಬೆಳಗ್ಗೆ
06:26ಕ್ಕೆ
ಸೂರ್ಯಾಸ್ತ:
ಸಂಜೆ
05:44ಕ್ಕೆ
ಮೇಷ ರಾಶಿ:
ಕೆಲಸದ ವಿಷಯದಲ್ಲಿ ಜಾಗರೂಕರಾಗಿರಿ. ನೀವು ಯಶಸ್ಸನ್ನು ಗಳಿಸಲು ಬಯಸಿದರೆ, ನಿಮ್ಮ ತಪ್ಪುಗಳಿಂದ ನೀವೇ ಕಲಿಯಬೇಕು. ಉದ್ಯೋಗಸ್ಥರು ತಮ್ಮ ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ಮಾಡಬೇಕಾಗುತ್ತದೆ. ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ತಂದೆಯ ಜೊತೆ ವ್ಯವಹಾರ ಮಾಡುತ್ತಿದ್ದರೆ, ಇಂದು ಉತ್ತಮ ಲಾಭವನ್ನು ಪಡೆಯಬಹುದು. ಹಣದ ಬಗ್ಗೆ ಇಂದು ಮನೆಯಲ್ಲಿ ವಿವಾದ ಉಂಟಾಗಬಹುದು. ನಿಮ್ಮ ಕೆಲವು ನಿರ್ಧಾರಗಳನ್ನು ಮನೆಯ ಕೆಲವು ಸದಸ್ಯರು ಒಪ್ಪದಿರುವ ಸಾಧ್ಯತೆಯಿದೆ. ನಿಮ್ಮ ನಡವಳಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ತಾಳ್ಮೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ದಾಂಪತ್ಯ ಜೀವನದಲ್ಲಿ ಆರಾಮದಾಯಕ ವಾತಾವರಣ. ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ. ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಪ್ಪಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 28
ಶುಭ ಸಮಯ: ಬೆಳಗ್ಗೆ 9 ರಿಂದ 11 ರವರೆಗೆ
ವೃಷಭ ರಾಶಿ:
ವಿವಾಹದಲ್ಲಿ ಇಂದು ಕಲಹ ಉಂಟಾಗುವ ಸಾಧ್ಯತೆ. ಸಂಗಾತಿಯೊಂದಿಗೆ ಮನಸ್ತಾಪ. ವಾದಿಸುವ ಮೊದಲು, ನಿಮ್ಮ ಸಂಗಾತಿ ಕಡೆಯವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಬುದ್ಧಿವಂತಿಕೆಯಿಂದ ವರ್ತಿಸಿದರೆ, ಅದು ನಿಮ್ಮ ಸಂಬಂಧಕ್ಕೆ ಒಳ್ಳೆಯದು. ಮನೆಯ ಹಿರಿಯರು ನಿಮ್ಮ ಮೇಲೆ ಕೋಪಗೊಳ್ಳಬಹುದು ಹಾಗಾಗಿ ಅವರೊಂದಿಗೆ ಮುಕ್ತವಾಗಿ ಮಾತನಾಡುವುದು ಉತ್ತಮ. ಹಣದ ಹರಿವು ಚೆನ್ನಾಗಿರುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದಲ್ಲಿ, ನಿಮ್ಮ ಸೃಜನಶೀಲತೆ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ನಿಮ್ಮ ಪ್ರತಿಭೆಯನ್ನು ಉನ್ನತ ಅಧಿಕಾರಿಗಳ ಮುಂದೆ ತೋರಿಸಲು ಇದು ಸರಿಯಾದ ಸಮಯ. ನೀವು ಕಷ್ಟಪಟ್ಟು ಕೆಲಸ ಮಾಡಿ. ಮತ್ತೊಂದೆಡೆ, ನೀವು ನಿಮ್ಮ ಸ್ವಂತ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಬಯಸಿ, ಹಣಕಾಸಿನ ಸಮಸ್ಯೆಗಳಿಂದಾಗಿ, ನಿಮ್ಮ ಯೋಜನೆ ಅರ್ಧದಲ್ಲೇ ನಿಂತಿದ್ದರೆ, ಇತರರ ಸಹಾಯ ಪಡೆಯಬಹುದು. ಇನ್ನು ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 3
ಶುಭ ಸಮಯ: ಮಧ್ಯಾಹ್ನ 3:30 ರಿಂದ 7:55 ರವರೆಗೆ
ಮಿಥುನ ರಾಶಿ:
ಇಂದು ನಿಮಗೆ ಮಿಶ್ರಫಲ. ಕಚೇರಿಯಲ್ಲಿ ತುಸು ಅಡಚಣೆಗಳಿಂದಾಗಿ ಕಾರ್ಯವು ಅರ್ಧಂಬರ್ಧ ಆಗಬಹುದು. ಆದರೂ ಕೆಲವು ಪ್ರಮುಖ ಬದಲಾವಣೆಗಳು ಸಾಧ್ಯ. ನಿಮ್ಮ ವರ್ಗಾವಣೆಯ ಬಗ್ಗೆ ನಿಮಗೆ ಇಂದು ಮಾಹಿತಿ ಸಿಗಬಹುದು. ಹಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ತೊಂದರೆಗಳನ್ನು ನೀವು ತೊಡೆದುಹಾಕುತ್ತೀರಿ ಮತ್ತು ಹಠಾತ್ ಆರ್ಥಿಕ ಲಾಭದಿಂದ ಸಾಲವನ್ನೂ ತೀರಿಸುತ್ತೀರಿ. ಮನೆಯ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ, ನಿಮ್ಮ ವರ್ತನೆಯಿಂದ ನಿಮ್ಮ ಕುಟುಂಬ ಸದಸ್ಯರು ನೋವು ಅನುಭವಿಸಬಹುದು. ನೀವು ಇಂದು ನಿಮ್ಮ ತಂದೆಯೊಂದಿಗೆ ಸಂಘರ್ಷವನ್ನು ಹೊಂದುವ ಸಾದ್ಯತೆ. ಅವರ ಮಾತುಗಳನ್ನು ನೀವು ನಿರ್ಲಕ್ಷಿಸಬಾರದು. ಸಂಗಾತಿಯೊಂದಿಗೆ ಸಣ್ಣ ಬಿರುಕು ಮೂಡಬಹುದು. ಆದರೆ ಶೀಘ್ರದಲ್ಲೇ ಎಲ್ಲವೂ ಶಾಂತವಾಗುತ್ತದೆ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಪ್ಪಿಸಿ, ಇಲ್ಲದಿದ್ದರೆ ಕಷ್ಟವಾಗುತ್ತದೆ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 9
ಶುಭ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ
ಕರ್ಕಾಟಕ ರಾಶಿ:
ಇಂದು ಆರೋಗ್ಯದಲ್ಲಿ ಅಸ್ವಸ್ಥತೆ ಉಂಟಾಗುವ ಸಾಧ್ಯತೆ. ವಿಶೇಷವಾಗಿ ಈ ರಾಶಿಯ ಗರ್ಭಿಣಿಯರು ಇಂದು ಹೆಚ್ಚು ಜಾಗರೂಕರಾಗಿರಬೇಕು. ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ನಿಮ್ಮ ಸಂಗಾತಿಯು ತುಂಬಾ ಖಿನ್ನತೆಗೆ ಒಳಗಾಗುತ್ತಾರೆ. ನೀವು ಅವರಿಗೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗದಿರಬಹುದು. ನಿಮ್ಮ ವೈವಾಹಿಕ ಜೀವನದ ಸಂತೋಷವನ್ನು ಕಾಪಾಡಿಕೊಳ್ಳಲು, ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ಆರ್ಥಿಕ ರಂಗದಲ್ಲಿ, ದಿನ ಉತ್ತಮ. ಇಂದು ಅಧಿಕ ಖರ್ಚು ಮಾಡುವುದು ಬೇಡ. ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಬಗೆಗಿನ ನಿಮ್ಮ ಅಸಡ್ಡೆ ನಿಮ್ಮ ಬಾಸ್ನ ಮನಸ್ಥಿತಿಯನ್ನು ಹಾಳುಮಾಡುತ್ತದೆ. ನೀವು ಯಾವುದೇ ರೀತಿಯ ಗಾಸಿಪ್ಗಳಿಗೂ ಒಳಗಾಗದಂತೆ ನಿಮ್ಮ ಕೆಲಸದ ಕಡೆಗೆ ಗಮನ ಹರಿಸಿ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 20
ಶುಭ ಸಮಯ: ಸಂಜೆ 4 ರಿಂದ 10 ರವರೆಗೆ
ಸಿಂಹ ರಾಶಿ:
ಕುಟುಂಬ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಕುಟುಂಬಗಳ ನಡುವೆ ಪ್ರೀತಿ, ಅನುಬಂಧ ಇರುತ್ತದೆ. ಕೆಲಸದ ಆರಂಭವು ಅನುಕೂಲಕರವಾಗಿದೆ. ನಿಮ್ಮ ಕಾರ್ಯದ ಮೂಲಕ ನಿಮ್ಮ ಸ್ಪರ್ಧಿಗಳಿಗೆ ನೀವು ಉತ್ತರಿಸುವಿರಿ. ಜೊತೆಗೆ ನಿಮ್ಮ ಕಠಿಣ ಪರಿಶ್ರಮಕ್ಕೆ ಹಿರಿಯರಿಂದ ಪ್ರಶಂಸೆ ಸಿಗುತ್ತದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ನಿರೀಕ್ಷೆಯಂತೆ ಹಣವು ನಿಮ್ಮ ಕೈಸೇರಲಿದೆ. ಆದರೆ ಇಂದು ನೀವು ಸಾಲ ನೀಡುವುದು ಬೇಡ. ತಪ್ಪು ಸಂಗತಿ ಹಾನಿಕಾರಕವೆಂದು ನೀವು ನೆನಪಿನಲ್ಲಿಟ್ಟುಕೊಳ್ಳಿ. ಇಂದು, ಸಣ್ಣ ವಾದಗಳಾಗುವುದನ್ನೂ ತಪ್ಪಿಸಿ, ಇಲ್ಲದಿದ್ದರೆ ಕಡ್ಡಿಹೋಗಿ ಗುಡ್ಡವಾಗಬಹುದು ಜೋಪಾನ. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಲ್ಕೋಹಾಲ್ ಸೇವಿಸಬೇಡಿ, ವಿಶೇಷವಾಗಿ ವಾಹನವನ್ನು ಬಳಸುವಾಗ ಅದನ್ನು ತಪ್ಪಿಸಿ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ.
ಉತ್ತಮ ಬಣ್ಣ: ಪೀಚ್
ಶುಭ ಸಂಖ್ಯೆ: 21
ಶುಭ ಸಮಯ: ಮಧ್ಯಾಹ್ನ 1:30 ರಿಂದ 7 ರವರೆಗೆ
ಕನ್ಯಾರಾಶಿ:
ಹಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸಿ. ಇಂದು ತಂದೆಯಿಂದ ಆರ್ಥಿಕ ಸಹಾಯ ಸಿಗಲಿದೆ. ನೀವು ಶೀರ್ಘವಾಗಿ ಹಣ ಸಂಪಾದಿಸುವ ಬಲವಾದ ಬಯಕೆ ಈಡೇರಬಹುದು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ನಿಮ್ಮ ಸಂಗಾತಿಯ ಅಸ್ಥಿರ ವರ್ತನೆಯು ನಿಮ್ಮ ದಿನವನ್ನು ಹಾಳುಮಾಡುತ್ತದೆ. ನಿಮ್ಮ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಇಂದು ಅನೇಕ ವಿಷಯಗಳು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು. ನೀವು ನೌಕರಿ ಮಾಡುವವರಾಗಿದ್ದರೆ, ಉನ್ನತ ಅಧಿಕಾರಿಗಳ ಬೆಂಬಲದೊಂದಿಗೆ ನಿಮ್ಮ ಕೆಲಸವೂ ವೇಗವಾಗಿ ಸಾಗುತ್ತದೆ. ಬಹುಶಃ ಇಂದು ಕೆಲಸದ ಹೊರೆ ಹೆಚ್ಚು. ಇದರಿಂದಾಗಿ ನೀವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಸಂಜೆ ಸಹೋದ್ಯೋಗಿಗಳೊಂದಿಗೆ ಸ್ವಲ್ಪ ಸಮಯ ಕಳೆದ ನಂತರ ನಿಮಗೆ ಸಂತೋಷ ಸಿಗುತ್ತದೆ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 19
ಶುಭ ಸಮಯ: ಸಂಜೆ 4 ರಿಂದ 8:30 ರವರೆಗೆ
ತುಲಾ ರಾಶಿ:
ಇಂದಿನ ದಿನ ನಿಮಗೆ ಶುಭ ನೀಡಲಿದೆ. ಮಾನಸಿಕವಾಗಿ ಇಂದು ನೀವು ಸಾಕಷ್ಟು ಉತ್ತಮವಾದದ್ದನ್ನು ಅನುಭವಿಸುವಿರಿ. ಹಾಗಾಗಿ ನಿಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ಉದ್ಯೋಗಿಗಳ ದಿನಗಳು ಸಾಮಾನ್ಯವಾಗುತ್ತವೆ. ಇಂದು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಮತ್ತೊಂದೆಡೆ, ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು, ವಿಶೇಷವಾಗಿ ಸಹೋದ್ಯೋಗಿಗಳನ್ನು ಟೀಕಿಸುವುದು ಇಂಥ ತಪ್ಪುಗಳನ್ನು ಮಾಡಬೇಡಿ. ನೀವು ವ್ಯಾಪಾರ ಮಾಡುವವರಾಗಿದ್ದರೆ, ದೊಡ್ಡ ಸಂಪರ್ಕಗಳಿಂದ ಉತ್ತಮ ಲಾಭ ಪಡೆಯಬಹುದು. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಇಂದು ಯಾವುದೇ ದೊಡ್ಡ ಖರ್ಚು ಇರುವುದಿಲ್ಲ. ಕುಟುಂಬದೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತದೆ. ವಿಶೇಷವಾಗಿ ನೀವು ಪೋಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿರುತ್ತದೆ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 3
ಶುಭ ಸಮಯ: ಮಧ್ಯಾಹ್ನ 3:30 ರಿಂದ 7:55 ರವರೆಗೆ
ವೃಶ್ಚಿಕ ರಾಶಿ:
ಇಂದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ನಿಮ್ಮ ಆದಾಯ ಹೆಚ್ಚಾಗಬಹುದು. ಆದರೆ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ. ಇಂದು ನೀವು ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತೀರಿ. ನಿಮ್ಮ ಸಕಾರಾತ್ಮಕತೆ ನಿಮ್ಮ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸಲು ನಿಮಗೆ ಅವಕಾಶ ಸಿಗುತ್ತದೆ. ಉದ್ಯೋಗಿಗಳು ತಮ್ಮ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಕೆಲಸಕ್ಕೂ ಮೆಚ್ಚುಗೆ ಸಿಗಲಿದೆ. ಮಾತನಾಡುವಾಗ ನಿಮ್ಮ ಮಾತುಗಳ ಬಗ್ಗೆ ವಿಶೇಷ ಕಾಳಜಿ ಇರಲಿ. ನಿಮ್ಮ ನಾಲಿಗೆಯನ್ನು ನೀವು ನಿಯಂತ್ರಿಸದಿದ್ದರೆ, ನಿಮ್ಮ ವ್ಯಕ್ತಿತ್ವಕ್ಕೇ ಕಳಂಕಉಂಟಾಗಬಹುದು. ಸಂಜೆ ಯಾವುದೇ ಒಳ್ಳೆಯ ಸುದ್ದಿ ಸಿಕ್ಕು, ನಿಮಗೆ ತುಂಬಾ ಸಂತೋಷವಾಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಇಂದು, ಸ್ನೇಹಿತರ ಸಹಾಯದಿಂದ, ನಿಮ್ಮ ಸಮಸ್ಯೆಗಳೂ ಕೊನೆಗೊಳ್ಳುತ್ತವೆ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 32
ಶುಭ ಸಮಯ: ಬೆಳಗ್ಗೆ 9:45 ರಿಂದ ಮಧ್ಯಾಹ್ನ 3 ರವರೆಗೆ
ಧನು ರಾಶಿ:
ದ್ವಂದ್ವಗಳ ನಡುವಿನ ದಿನ ಇಂದು. ಅನೇಕ ರೀತಿಯ ಆಲೋಚನೆಗಳು ಮನಸ್ಸಿಗೆ ಬರಬಹುದು. ಇದರಿಂದ ನಿಮ್ಮ ಮಾನಸಿಕ ಗೊಂದಲವೂ ಹೆಚ್ಚಾಗಬಹುದು. ನೀವು ತಾಳ್ಮೆಯಿಂದ ಕೆಲಸ ಮಾಡಿ ಜೊತೆಗೆ ಸಮಸ್ಯೆಗಳನ್ನು ಪರಿಹರಿಸಲು ಕುಟುಂಬ ಅಥವಾ ಸ್ನೇಹಿತರ ಸಹಾಯ ಪಡೆಯುವುದು ಉತ್ತಮ. ಕೆಲಸದ ಬಗ್ಗೆ ಮಾತನಾಡುವುದಾದಲ್ಲಿ, ಕಚೇರಿಯ ವಾತಾವರಣ ಇಂದು ಸರಿಯಾಗಿರುವುದಿಲ್ಲ. ನಿಮ್ಮ ಬಾಸ್ ತುಂಬಾ ಸಿಟ್ಟಿನಲ್ಲಿರಬಹುದು. ನಿಮ್ಮ ಕೆಲಸದ ಬಗ್ಗೆ ನೀವು ನಿರ್ಲಕ್ಷ್ಯ ವಹಿಸದಿರುವುದು ಉತ್ತಮ. ನಿಮ್ಮ ಕೆಲಸಗಳನ್ನು ಇಂದೇ ಪೂರ್ಣಗೊಳಿಸಲು ಪ್ರಯತ್ನಿಸಿ. ಯಾವುದೇ ಪ್ರಮುಖ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳದೇ ಇರುವುದು ಉತ್ತಮ. ಒಟ್ಟಾರೆಯಾಗಿ, ಇಂದಿನ ದಿನ ನಿಮಗೆ ಅಷ್ಟು ಅನುಕೂಲಕರವಾಗಿಲ್ಲ. ಇನ್ನು ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಈ ದಿನ ಒಂದು ಸಣ್ಣ ಸಮಸ್ಯೆಯನ್ನು ಸಹ ನಿರ್ಲಕ್ಷಿಸಬೇಡಿ.
ಉತ್ತಮ ಬಣ್ಣ: ಮರೂನ್
ಶುಭ ಸಂಖ್ಯೆ: 5
ಶುಭ ಸಮಯ: ಮಧ್ಯಾಹ್ನ 3 ರಿಂದ 8:20 ರವರೆಗೆ
ಮಕರ ರಾಶಿ:
ಕೊಂಚ ಸಮಾಧಾನಕರ ದಿನ ಇಂದು. ಕುಟುಂಬ ಜೀವನದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು, ನೀವು ಮನೆಯ ಸದಸ್ಯರೊಂದಿಗೆ ಸಮನ್ವಯವನ್ನು ಇಟ್ಟುಕೊಳ್ಳಿ. ನಿಮ್ಮ ಹಿರಿಯರೊಂದಿಗೆ ನೀವು ಸಭ್ಯವಾಗಿ ವರ್ತಿಸಬೇಕು ಮತ್ತು ಪುಟ್ಟ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಕೆಲಸದ ಬಗ್ಗೆ ಮಾತನಾಡುವುದಾದರೆ, ಉದ್ಯೋಗದಲ್ಲಿರುವ ಜನರು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಠಿಣ ಪರಿಶ್ರಮ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ. ನೀವು ವ್ಯಾಪಾರ ಮಾಡುವುದಾದರೆ, ಇಂದು ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ನೀವು ದೊಡ್ಡ ಹೂಡಿಕೆ ಮಾಡಲು ಹೊರಟಿದ್ದರೆ, ಎಲ್ಲಾ ಕಡೆ ಮೊದಲು ತನಿಖೆ ಮಾಡಿದ ನಂತರವೇ ನಿಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಉತ್ತಮ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನಿರ್ಲಕ್ಷ್ಯದಿಂದಾಗಿ ದೀರ್ಘಕಾಲದ ಕಾಯಿಲೆ ಉಂಟಾಗಬಹುದು. ಜಾಗರೂಕರಾಗಿರಿ.
ಉತ್ತಮ ಬಣ್ಣ: ತಿಳಿ ಹಳದಿ
ಶುಭ ಸಂಖ್ಯೆ: 16
ಶುಭ ಸಮಯ: ಸಂಜೆ 6 ರಿಂದ 10:45 ರವರೆಗೆ
ಕುಂಭ ರಾಶಿ:
ವೈವಾಹಿಕ ಜೀವನ ಅಷ್ಟು ಉತ್ತಮವಾಗಿಲ್ಲ. ಕುಟುಂಬದಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿರುತ್ತದೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಸರಿಯಾದ ಮಾತನಾಡುವ ಮೂಲಕ ನಿಮ್ಮ ಸಂಬಂಧದಲ್ಲಿನ ಕಹಿ ತೆಗೆದುಹಾಕಲು ಪ್ರಯತ್ನಿಸಿ. ಇಲ್ಲದಿದ್ದರೆ ಸಮಸ್ಯೆಯಾಗಬಹುದು. ನೀವು ಮನೆಯಿಂದ ದೂರವಿದ್ದರೆ, ಇಂದು ನಿಮಗೆ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಬಹಳ ಸಮಯದ ನಂತರ, ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರಿಂದ ನೀವು ಸಂತೋಷಗೊಳ್ಳುತ್ತೀರಿ. ಕೆಲಸದ ಬಗ್ಗೆ ಮಾತನಾಡುವುದಾದರೆ, ನೌಕರಸ್ಥರಿಗೆ, ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಕೆಲವು ಪ್ರಮುಖ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಇಂದು ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ. ನಿಂತುಹೋದ ವ್ಯಾಪಾರ ಯೋಜನೆ ಪುನರಾರಂಭಗೊಳ್ಳಬಹುದು. ಹಣದ ವಿಷಯದಲ್ಲಿ ದಿನ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಿ. ಆಹಾರ ಮತ್ತು ಪಾನೀಯಗಳ ಬಗ್ಗೆ ನಿಮ್ಮ ನಿರ್ಲಕ್ಷ್ಯವು ನಿಮ್ಮ ಆರೋಗ್ಯದಲ್ಲಿ ಕ್ಷೀಣಿಸಲು ಕಾರಣವಾಗಬಹುದು.
ಉತ್ತಮ ಬಣ್ಣ: ಆಕಾಶ
ಶುಭ ಸಂಖ್ಯೆ: 9
ಶುಭ ಸಮಯ: ಬೆಳಗ್ಗೆ 8:45 ರಿಂದ ಮಧ್ಯಾಹ್ನ 2:20
ಮೀನ ರಾಶಿ:
ಇಂದು ದಿನವು ನಿಮಗೆ ಮಿಶ್ರ ಫಲವನ್ನು ಕೊಡುತ್ತದೆ. ಮೊದಲನೆಯದಾಗಿ, ನಿಮ್ಮ ಕೆಲಸದ ಬಗ್ಗೆ ಮಾತನಾಡಿದರೆ, ದುಡಿಯುವ ಜನರಿಗೆ ಇಂದು ಉತ್ತಮ ಪರಿಹಾರ ಸಿಗಲಿದೆ. ನಿಮ್ಮ ಕೆಲಸ ತಾತ್ಕಾಲಿಕವಾಗಿದ್ದರೆ ಅದು ಶಾಶ್ವತವಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ತೃಪ್ತರಾಗುತ್ತಾರೆ. ನೀವು ವ್ಯಾಪಾರ ಮಾಡಿದರೆ, ಇಂದು ಆರ್ಥಿಕ ಲಾಭ ಸಾಧ್ಯ. ಇದಲ್ಲದೆ, ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ. ದೊಡ್ಡ ಕೆಲಸವೊಂದನ್ನೂ ನೀವು ಪಡೆಯಬಹುದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಕುಟುಂಬದಲ್ಲಿ ಮನೆಯಲ್ಲಿ ಪ್ರೀತಿ ಮತ್ತು ಐಕ್ಯತೆ ಇರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸುಂದರವಾದ ಉಡುಗೊರೆಯನ್ನು ಪಡೆಯಬಹುದು. ಇನ್ನು ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ದಿನವು ಇಂದು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 20
ಒಳ್ಳೆಯ ಸಮಯ: ಸಂಜೆ 4:45 ರಿಂದ 8 ರವರೆಗೆ
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.
ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.
ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9845000635 .