Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
2022ರ ದೀಪಾವಳಿಯು ಈ 3 ರಾಶಿಯವರಿಗೆ ತುಂಬಾನೇ ಅದೃಷ್ಟದ ಯೋಗ ತಂದಿದೆ
ದೀಪಾವಳಿ ಎಂದರೆ ಬೆಳಕಿನ ಹಬ್ಬ 5 ದಿನಗಳ ಕಾಲ ನಡೆಯುವ ಹಬ್ಬವಾದ ದೀಪಾವಳಿಯನ್ನು ದೇಶಾದ್ಯಂತ ತುಂಬಾನೇ ಸಡಗರ -ಸಂಭ್ರಮದಿಂದ ಆಚರಿಸಲಾಗುವುದು. ದೀಪಾವಳಿ ಆಚರಣೆ ಧನತ್ರಯೋಧಶಿ ಅಂದರೆ ಧಂತೇರಸ್ನಿಂದ ಪ್ರಾರಂಭವಾಗುವುದು. ದೀಪಾವಳಿಯನ್ನು ಕಾರ್ತಿಕ ಮಾಸದ ಅಮಾವಾಸ್ಯೆ ತಿಥಿಯಂದು ಆಚರಿಸಲಾಗುವುದು.
ಈ ವರ್ಷ ದೀಪಾವಳಿ ಹಬ್ಬವನ್ನು . ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಈ ದೀಪಾವಳಿ ಎಲ್ಲರ ಬಾಳಲ್ಲಿ ಸಂಪತ್ತು, ಸಮೃದ್ಧಿ ತುಂಬಲಿ.

ಈ ದೀಪಾವಳಿಯ ದಿನದಂದು ಅಭಿಜಿತ್ ಮುಹೂರ್ತ ಮತ್ತು ವೈಧೃತಿ ಯೋಗದ ಮಂಗಳಕರ ಸಂಯೋಜನೆಯಾಗಿದೆ. ಈ ಕಾಕತಾಳೀಯಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. ಎಲ್ಲಾ 12 ರಾಶಿಗಳಲ್ಲಿ, 3 ರಾಶಿಗಳ ಮೇಲೆ ಇದರ ಪರಿಣಾಮ ಹೆಚ್ಚು ಕಾಣಿಸುತ್ತದೆ. ಈ 3 ರಾಶಿಯವರ ಮೇಲೆ ಮಾತೆ ಲಕ್ಷ್ಮಿ ವಿಶೇಷ ಕೃಪೆ ಇರುತ್ತದೆ. ಈ ವರ್ಷ ನಿಮ್ಮ ಸಂಪತ್ತು ಹೆಚ್ಚಲಿದೆ, ನೀವು ಕೈ ಹಾಕಿರುವ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.

ಸಿಂಹ ರಾಶಿ
ದೀಪಾವಳಿಯಂದು ಉಂಟಾಗುವ ಅಭಿಜಿತ್ ಮುಹೂರ್ತ ಮತ್ತು ವೈಧೃತಿ ಯೋಗದ ಸಂಯೋಜನೆ ಸಿಂಹ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಯ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿಯನ್ನು ವಹಿಸಿಕೊಡಬಹುದು, ಅದನ್ನು ನೀವು ಉತ್ತಮವಾಗಿ ಪೂರೈಸುವಿರಿ. ಶುಕ್ರ ಮತ್ತು ಶನಿಯ ವಿಶೇಷ ಅನುಗ್ರಹ ನಿಮ್ಮ ಮೇಲಿರುತ್ತದೆ. ಹೂಡಿಕೆ ಮಾಡುವ ಮೂಲಕ, ನೀವು ಭವಿಷ್ಯದಲ್ಲಿ ಉತ್ತಮ ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅದೃಷ್ಟದ ಬೆಂಬಲ ನಿಮ್ಮೊಂದಿಗೆ ಇರುವುದರಿಂದ ಈ ವರ್ಷ ಸಂಪತ್ತು ಹೆಚ್ಚಲಿದೆ.

ತುಲಾ ರಾಶಿ
ಈ ದೀಪಾವಳಿಯು ತುಲಾ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿರುತ್ತದೆ. ಈ ರಾಶಿಯವರಿಗೆ ಅಭಿಜಿತ್ ಮುಹೂರ್ತ ಮತ್ತು ವೈಧೃತಿಯ ಸಂಯೋಜನೆಯು ತುಂಬಾ ಶುಭಕರವಾಗಿರುತ್ತದೆ. ಈ ವರ್ಷ ನೀವು ಮಾಡುವ ಪ್ರತಿ ಕೆಲಸದಲ್ಲಿ ಉತ್ತಮ ಯಶಸ್ಸು ಕಾಣುವಿರಿ, ಹಣ ಗಳಿಸುವಿರಿ. ನೀವು ಕಳೆದ ಹಲವು ತಿಂಗಳುಗಳಿಂದ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ದೀಪಾವಳಿಯ ನಂತರ ಖರೀದಿಸಲು ಸಾಧ್ಯವಾಗುವುದು. ಉದ್ಯೋಗಿಗಳು ಪ್ರಗತಿಯನ್ನು ಕಾಣುವಿರಿ, ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ವ್ಯಾಪಾರಸ್ಥರು ವ್ಯಾಪಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಹಾಗೂ ಒಳ್ಳೆಯ ಲಾಭ ಗಳಿಸುವಿರಿ.

ಮಕರ ರಾಶಿ
ಈ ರಾಶಿಯವರಿಗೆ ದೀಪಾವಳಿಯಂದು ಮೂಡಿದ ಅಭಿಜೀತ್ ಮುಹೂರ್ತ ಮತ್ತು ವೈಧೃತಿ ಯೋಗವು ತುಂಬಾನೇ ಮಂಗಳಕರವಾಗಿದೆ. ನೌಕರಿಯಲ್ಲಿ ಬಡ್ತಿ ಮತ್ತು ಆದಾಯ ಹೆಚ್ಚಳದ ಉತ್ತಮ ಲಕ್ಷಣಗಳಿವೆ. ವ್ಯಾಪಾರಸ್ಥರು ವರ್ಷವಿಡೀ ಉತ್ತಮ ಲಾಭವನ್ನು ಹೊಂದಿರುತ್ತಾರೆ. ಕೆಲವರಿಗೆ ಕೆಲವು ತಿಂಗಳಿಂದ ಆರ್ಥಿಕ ಸ್ಥಿತಿ ಸರಿಯಿಲ್ಲದ್ದರೆ ಈ ದೀಪಾವಳಿಯ ಬಳಿಕ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ನಿಮಗೆ ಬರಬೇಕಾಗಿದ್ದ ಹಣ ಕೈ ಸೇರುತ್ತದೆ.ಹೊಸ ಲಾಭದ ಮಾರ್ಗಗಳು ದೊರೆಯಲಿವೆ. ಪಾಲುದಾರಿಕೆಗೆ ಸಮಯ ಉತ್ತಮವಾಗಿರುತ್ತದೆ.



Click it and Unblock the Notifications