Just In
- 1 hr ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 10 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 11 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುವಾರದ ದಿನ ಭವಿಷ್ಯ (26-09-2019)
ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು.
ಶ್ರೀ
ಗುರು
ರಾಘವೇಂದ್ರ
ಸ್ವಾಮಿಗಳನ್ನು
ಭಕ್ತರು
ರಾಯರು,
ಗುರುರಾಯರು,
ಗುರುರಾಜರು
ಎಂದು
ಭಕ್ತಿಯಿಂದ
ಕರೆಯುತ್ತಾರೆ.
ಇವರ
ಮೂಲ
ಬೃಂದಾವನವು
(ಸಶರೀರ)
ತುಂಗಭದ್ರಾ
ನದಿ
ತಟದಲ್ಲಿರುವ
ಮಂತ್ರಾಲಯದಲ್ಲಿದೆ.
ಇಲ್ಲಿಗೆ
ನಿತ್ಯವು
ಸಾವಿರಾರು
ಭಕ್ತರು
ಭೇಟಿ
ಕೊಡುತ್ತಾರೆ.
ಪ್ರತಿ
ವರ್ಷ
ಶ್ರಾವಣ
ಕೃಷ್ಣ
ಪಕ್ಷ
ಪಾಡ್ಯದಿಂದ
ಶ್ರಾವಣ
ಕೃಷ್ಣ
ಪಕ್ಷ
ತದಗಿವರೆಗೂ
ಭವ್ಯ
ಆರಾಧನೆ
ನಡೆಯುತ್ತದೆ.
ಗುರು
ರಾಘವೇಂದ್ರನನ್ನು
ನೆನೆಯುತ್ತಾ
ಈ
ದಿನದ
ರಾಶಿ
ಭವಿಷ್ಯವನ್ನು
ತಿಳಿಯೋಣ.
26
ಸೆಪ್ಟೆಂಬರ್
2019ರ
ದಿನ
ಭವಿಷ್ಯ.
ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ನೀವು ಹಾಸಿಗೆಯಿಂದ ಎದ್ದೇಳುವಾಗಲೇ ಕೊಂಚ ತೊಂದರೆಯಿಂದ ಎದ್ದೇಳುವಿರಿ. ನಿಮ್ಮ ಸಹಾಯವಿಲ್ಲದೆ ಕೆಲವು ಸಂಗತಿಗಳು ನೆರವೇರದು ಎನ್ನುವ ಭಾವನೆಯಲ್ಲಿ ಇರುತ್ತೀರಿ. ಇಂದು ಸಾಕಷ್ಟು ಸೋಮಾರಿತನವು ನಿಮ್ಮನ್ನು ಕಾಡುವುದು. ನೀವು ನಿಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ. ವಿಶ್ರಾಂತಿಯನ್ನು ಪಡೆದುಕೊಳ್ಳುವಿರಿ. ನೀವು ನಿಮ್ಮ ಆಸೆಯನ್ನು ಪೂರೈಸಿಕೊಳ್ಳುವುದರ ಜೊತೆಗೆ ಒಂದಿಷ್ಟು ಲಾಭವನ್ನು ಸಹ ಪಡೆದುಕೊಲ್ಳುವಿರಿ.
ವೃಷಭ ರಾಶಿ: 20 ಏಪ್ರಿಲ್ -20 ಮೇ
ಇಂದಿನ ದಿನ ನೀವು ಸಾಕಷ್ಟು ಅತ್ಯುತ್ತಮ ಸಮಯವನ್ನು ಕಳೆಯುವಿರಿ. ನಿಮಗೆ ಶುಭವಾಗುವುದು. ಇತರ ಚಿಹ್ನೆಗಳಿಗೆ ಸಾಟಿಯಿಲ್ಲದ ಶಕ್ತಿಯೊಂದಿಗೆ ಕೆಲಸ ಮಾಡಲು ಒಲವು ತೋರುತ್ತೀರಿ. ನಿಮ್ಮ ಶ್ರದ್ಧೆ ಹಾಗೂ ಕೆಲಸಕ್ಕೆ ಸೂಕ್ತ ಪ್ರತಿಫಲವನ್ನು ಪಡೆದುಕೊಳ್ಳುವಿರಿ. ನಿವು ಎಲ್ಲಾ ಬಗೆಯ ಮಾನ್ಯತೆಗೂ ಯೋಗ್ಯ ವ್ಯಕ್ತಿ ಎನ್ನುವುದು ಸಾಕ್ಷಿಯಾಗುವುದು. ನೀವು ಸಾಧಿಸಲು ಇನ್ನೂ ಅನೇಕ ಸಂಗತಿಗಳಿವೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಮಿಥುನ ರಾಶಿ: 21 ಮೇ -20 ಜೂನ್
ಎರಡು ತಿಂಗಳಿಂದ ಈಚೆಗೆ ನೀವು ಅತ್ಯಂತ ಅದೃಷ್ಟವನ್ನು ಅನುಭವಿಸುತ್ತಾ ಬಂದಿದ್ದೀರಿ. ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಬಹುದಿನಗಳ ನಂತರ ಇದೀಗ ನಿಮ್ಮ ಅದೃಷ್ಟ ಬದಲಾಗಿದೆ. ನಿಮ್ಮ ಜೀವನದಲ್ಲಿ ಕೆಲವು ಸಂಗತಿಗಳನ್ನು ಗುರುತಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಗ್ರಹಗತಿಗಳ ಪ್ರಭಾವದಿಂದ ಕೆಲವು ಕಠಿಣ ಪಾಠಗಳನ್ನು ಕಲಿಯುವಿರಿ. ಕಷ್ಟದಿಂದ ತಿಳಿದ ಜ್ಞಾನವು ನಿಮ್ಮ ಭವಿಷ್ಯದಲ್ಲಿ ಅನುಕೂಲವನ್ನು ತಂದುಕೊಡುವುದು.
ಕರ್ಕ ರಾಶಿ: 21 ಜೂನ್ 22 ಜುಲೈ
ವಸ್ತುಗಳ ಬಗ್ಗೆ ಜಾಗತಿಕ ನೋಟವನ್ನು ಪಡೆದುಕೊಳ್ಳಲು ಕರ್ಕ ರಾಶಿಗೆ ಅತ್ಯುತ್ತಮ ಸಮಯವಾಗಿದೆ. ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲಿ ಇರುವುದರಿಂದ ನೀವು ಓದುವುದು, ಪ್ರಯಾಣ ಕೈಗೊಳ್ಳುವುದು, ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳುವುದು ಹಾಗೂ ಹಣ ಗಳಿಸುವ ವಿಷಯದಲ್ಲಿ ಜಯ ಹಾಗೂ ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಕೆಲಸದಿಂದ ನೀವು ಸಾಹಸ ಪ್ರಯತ್ನವನ್ನು ಕೈಗೊಳ್ಳುವಿರಿ. ಅದರ ಕುರಿತು ಅಧಿಕ ಚಿಂತನೆ ಹಾಗೂ ಆಶ್ಚರ್ಯಕ್ಕೆ ಒಳಗಾಗಬೇಕಿಲ್ಲ. ಯಾವ ಸಂಗತಿಯ ಬಗ್ಗೆಯೂ ಹಿಂಜರಿಕೆ ಅಥವಾ ಭಯ ಬೇಡ.
ಸಿಂಹ ರಾಶಿ: 23 ಜುಲೈ-22 ಆಗಸ್ಟ್
ಜೀವನದಲ್ಲಿ ಗಳಿಸುವುದು ಅಥವಾ ಸಂಪಾದಿಸುವುದೊಂದೇ ಮುಖ್ಯವಲ್ಲ ಎನ್ನುವುದನ್ನು ಅರಿಯುವಿರಿ. ಹಣಕಾಸಿನ ಲಾಭ ಎಲ್ಲರಿಗೂ ಅಗತ್ಯವಾದದ್ದು. ನಿಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಕೆಲಸ ಹಾಗೂ ಆಟಗಳು ಯಾವುದೂ ಮಂದ ಸ್ಥಿತಿಯನ್ನು ಇರುವುದಿಲ್ಲ. ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಹಾಗೂ ಹೊಸ ಹವ್ಯಾಸದ ಕಡೆಗೆ ಆಸಕ್ತಿ ತೋರಲು ಸೂಕ್ತವಾದ ಸಮಯ.
ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ಕೆಲವು ತಿಂಗಳಿಂದ ಈಚೆಗೆ ನೀವು ಮಾನಸಿಕವಾಗಿ ಒಂದಷ್ಟು ಒತ್ತಡ ಹಾಗೂ ನೋವನ್ನು ಅನುಭವಿಸುತ್ತಿದ್ದೀರಿ. ಆದರೆ ಅಂತಹ ಪರಿಸ್ಥಿತಿಗಳು ಈಗ ನಿವಾರಣೆಯಾಗುತ್ತವೆ. ನೀವು ಜೀವನದಲ್ಲಿ ಕಲಿತ ಸಂಗತಿಗಳು ಜೀವನಕ್ಕೆ ಉತ್ತಮ ಪಾಠವನ್ನು ನೀಡುವುದು. ಈ ದಿನದ ಅಂತ್ಯದ ಒಳಗೆ ಸಾಕಷ್ಟು ಉತ್ತಮ ಸ್ಥಿತಿಗಳನ್ನು ಎದುರಿಸುವಿರಿ.
ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ನಿಮ್ಮಲ್ಲಿ ಅವಿಶ್ವಾಸ ಉಂಟಾಗುವುದು. ಆಗ ನೀವು ನಿಮ್ಮ ಸುತ್ತಲೂ ಇರುವ ಸಂಗತಿಯನ್ನು ಪರಿಶೀಲಿಸಿ. ಜೊತೆಗೆ ನೀವು ಹೊಂದಿರುವ ಸಂಗತಿಯ ಬಗ್ಗೆ ತೃಪ್ತಿಯನ್ನು ಪಡೆಯಿರಿ. ಜೊತೆಗೆ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಬಹುತೇಕ ವಿಷಯದಲ್ಲಿ ನೀವು ಇಂದು ನಿಮ್ಮ ವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ. ಇದೀಗ ನೀವು ನಿಮ್ಮ ಭಾವನೆಗಳನ್ನು ಬದಲಿಸಿಕೊಂಡು ಮುಂದೆ ಸಾಗುವ ಸಮಯ ಎನ್ನುವುದನ್ನು ಅರಿಯಿರಿ.
ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ಇಂದು ನೀವು ಹೊಸ ಜನರನ್ನು ಭೇಟಿಮಾಡಬಹುದು. ವೃತ್ತಿ ಜೀವನದಲ್ಲಿ ಈ ಹಿಂದೆ ಯಾರೂ ಮಾಡದಿರುವ ಸಾಹಸ ಕಾರ್ಯವನ್ನು ನಿರ್ವಹಿಸಲು ಮುಂದಾಗುವಿರಿ. ಹೊಸ ಸೇವೆಯನ್ನು ರಚಿಸಲು ಮುಂದಾಗುವಿರಿ. ಹೊಸ ಮಾರ್ಗವನ್ನು ಹಡಿಯುವುದರ ಮೂಲಕ ಹೊಸ ಸಾಧನೆಯನ್ನು ಅನ್ವೇಷಿಸಲು ಮುಂದಾಗುವಿರಿ.
ಧನು ರಾಶಿ: 22 ನವೆಂಬರ್-21 ಡಿಸೆಂಬರ್
ನೀವು ಕೆಲವು ಟೀಕೆಗಳನ್ನು ಮಾಡಲು ಇಂದು ಮುಂದಾಗುವಿರಿ ಎಂದು ತೋರುತ್ತದೆ. ಇತರರ ತಪ್ಪುಗಳನ್ನು ಕಂಡುಹಿಡಿಯಲು ಮುಂದಾಗದಿರಿ. ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ಹಾಗೂ ಗುರಿಯನ್ನು ಹೊಂದಿ. ಇತರರಿಂದ ನೀವು ಟೀಕೆಯನ್ನು ಅನುಭವಿಸ ಬೇಕಾಗಬಹುದು. ಅದರ ಬಗ್ಗೆ ಹೆಚ್ಚಿನ ಚಿಂತನೆಯ ಅಗತ್ಯವಿಲ್ಲ. ನೀವು ದಿನದ ಅಂತ್ಯದ ವೇಳೆಗೆ ಸ್ವಲ್ಪ ಪರಿಹಾರವನ್ನು ಕಂಡುಕೊಳ್ಳುವಿರಿ. ಅಲ್ಲದೆ ಕೆಲವು ಅಭಿನಂದನೆಗಳು ಸಹ ದಿನದ ಕೊನೆಯಲ್ಲಿ ಸಿಗುವುದು.
ಮಕರ ರಾಶಿ: 22 ಡಿಸೆಂಬರ್ -19 ಜನವರಿ
ನಗುವಿನಿಂದ ಆರಂಭವಾಗುವ ನಿಮ್ಮ ಈ ದಿನ ಪ್ರಕಾಶಮಾನವಾಗಿರುತ್ತದೆ. ಇಂದು ಕುತೂಹಲಕಾರಿ ಮನಃಸ್ಥಿತಿಯನ್ನು ಪಡೆದುಕೊಳ್ಳುವಿರಿ. ಬಹುಶಃ ಇದು ನಿಮ್ಮ ಪ್ರೀತಿಯ ಜೀವನಕ್ಕೆ ಮಸಾಲವನ್ನು ನೀಡುವುದು. ಹಣಕಾಸಿನ ವಿಷಯದಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಸಾಹಸ ಮನೋಭಾವವು ಮೇಲುಗೈ ಸಾಧಿಸುವುದು.
ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ಇಂದು ನಿಮಗೆ ಉತ್ತಮ ದಿನವಾಗುವುದು. ನಿಮಗೆ ಕೆಲವು ವಿಷಯದ ಬಗ್ಗೆ ತೃಪ್ತಿ ದೊರೆಯದು. ಹಾಗಾಗಿ ನೀವು ನಿಮ್ಮ ಹಿಂದಿನ ದಿನಗಳು ಹಾಗೂ ಪರಿಸ್ಥಿತಿಗಳನ್ನು ಒಮ್ಮೆ ನೋಡಿದರೆ ಒಂದಷ್ಟು ಅರಿವು ನಿಮಗೆ ಉಂಟಾಗುವುದು. ಒಂದೇ ಸ್ಥಳದಲ್ಲಿ ಉಳಿದುಕೊಳ್ಳಲು ಕಷ್ಟವಾಗುವುದು. ಮುಂದಿನ ದಿನಗಳು ಉತ್ತಮವಾಗಿರುತ್ತವೆ. ಜೊತೆಗೆ ಅನೇಕ ಆಸೆಗಳನ್ನು ಈಡೇರಿಸುವುದು.
ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಇತರರ ಜೀವನದ ಬಗ್ಗೆ ಮೂಗು ತೂರಿಸುವುದು ಅಥವಾ ಆಸಕ್ತಿ ಹೊಂದುವುದನ್ನು ನಿಲ್ಲಿಸಿ. ಇತರರ ಬಗ್ಗೆ ನಿಮಗಿರುವ ಭಾವನೆಯನ್ನು ಮೆಚ್ಚಲಾಗುವುದು. ಕುಟುಂಬದಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಸೂಕ್ತ ಗಮನ ಹಾಗೂ ಕಾಳಜಿಯನ್ನು ತೋರುವಿರಿ. ನೀವು ನಿಮ್ಮ ಶಕ್ತಿಯ ಬಗ್ಗೆ ನಿರ್ಲಕ್ಷ್ಯ ತೋರದಿರಿ. ನಿಮ್ಮಲ್ಲಿ ಎಲ್ಲವನ್ನೂ ಒಟ್ಟುಗೂಡಿಸುವ ಸಾಮಥ್ರ್ಯ ಇದೆ ಎನ್ನುವುದನ್ನು ಅರಿಯಬೇಕಿದೆ.