Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯ ಪ್ರಕಾರ ಬುಧವಾರದಂದು ಏನು ಮಾಡಬಾರದು?
ಜ್ಯೋತಿಷ್ಯದಲ್ಲಿ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷವಿದೆ, ಗ್ರಹಗಳ ಚಲನೆ, ಆ ದಿನದ ಅಧಿಪತಿ ಯಾರು ಎಂಬುವುದರ ಆಧಾರದ ಮೇಲೆ ಆ ದಿನ ವಿಶೇಷತೆ ಹಾಗೂ ಏನು ಮಾಡಬೇಕು, ಏನು ಮಾಡಬಾರದು ಎಂಬುವುದಾಗಿ ಹೇಳಲಾಗುವುದು.
ಬುಧವಾರದ ಅಧಿಪತಿ ಬುಧ. ಅಲ್ಲದೆ ಈ ದಿನ ವಿಘ್ನ ನಿವಾರಕ ಗಣಪತಿಗೆ ಈ ದಿನ ಗರಿಕೆ ಹುಲ್ಲನ್ನು ಅರ್ಪಿಸಬೇಕು. ನಾವಿಲ್ಲಿ ಜ್ಯೋತಿಷ್ಯ ಪ್ರಕಾರ ಬುಧವಾರ ಏನು ಮಾಡಬಾರದು ಎಂಬುವುದಾಗಿ ಹೇಳಿದ್ದೇವೆ ನೋಡಿ.

ಮಹಿಳೆಯರನ್ನು ಅವಮಾನಿಸಬಾರದು
ತಾಯಿ, ಸಹೋದರಿ, ಮಗಳು ಹೀಗೆ ಮಹಿಳೆಯರನ್ನು ಬುಧವಾರ ಅವಮಾನಿಸಬಾರದು. ಬುಧವಾರ ಹಸಿರು ಬಳೆಯನ್ನು ಮಹಿಳೆಯರಿಗೆ ನೀಡುವುದು ಒಳ್ಳೆಯದು.

ಸಾಲ ಪಡೆಯಬಾರದು
ಬುಧವಾರ ಸಾಲ ಪಡೆಯುವುದು ಅಥವಾ ಸಾಲ ಕೊಡುವುದು ಮಾಡಬಾರದು. ಈ ದಿನ ಹಣ ಸಾಲ ಪಡೆದರೆ ಆರ್ಥಿಕ ಲಾಭ ಉಂಟಾಗುವುದಿಲ್ಲ ಎಂದು ಹೇಳಲಾಗುವುದು. ಆದ್ದರಿಂದ ಈ ದಿನದಂದು ಯಾರ ಕೈಯಿಂದ ಸಾಲ ಪಡೆಯಬಾರದು ಎಂದು ಹೇಳಲಾಗುವುದು.

ಕೆಟ್ಟ ಪದಗಳನ್ನು ಬಳಸಬಾರದು
ಯಾರಿಗಾದರೂ ಬೈಯ್ಯುವುದು, ಕೆಟ್ಟ ಪದಗಳಿಂದ ನಿಂದಿಸುವುದು ಮಾಡಿದರೆ ನಿಮಗೆ ಬುಧನ ಬಲ ಕುಗ್ಗುವುದು. ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುವುದು ಅಲ್ಲದೆ ಐಶ್ವರ್ಯ, ಸಂಪತ್ತು ನಶಿಸಿ ಹೋಗುವುದು ಎಂದು ಹೇಳಲಾಗಿದೆ. ಆದ್ದರಿಂದ ಬುಧವಾರ ಕೆಟ್ಟ ಪದಗಳನ್ನು ಬಳಸಿ ಯಾರ ಮನಸ್ಸನ್ನೂ ನೋಯಿಸಬೇಡಿ.

ಹೂಡಿಕೆ ಮಾಡಬೇಡಿ
ಬುಧವಾರ ಹೂಡಿಕೆ ಮಾಡಲು ಸೂಕ್ತವಲ್ಲ ಎಂದು ಹೇಳಲಾಗುವುದು. ಹೂಡಿಕೆಗೆ ಸೂಕ್ತ ದಿನ ಶುಕ್ರವಾರ.

ಮಂಗಳಮುಖಿಯರನ್ನು ಅವಮಾನಿಸಬಾರದು
ಈ ದಿನ ಮಂಗಳಮುಖಿಯರನ್ನು ಅವಮಾನಿಸಬಾರದು, ಬದಲಿಗೆ ಅವರಿಗೆ ಹಣವನ್ನು ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು. ಇದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುವುದು.

ಪಶ್ಚಿಮದ ಕಡೆ ಪ್ರಯಾಣ ಒಳ್ಳೆಯದಲ್ಲ
ಬುಧವಾರ ಪಶ್ಚಿಮದ ಕಡೆ ಪ್ರಯಾಣ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು.

ಮುತ್ತೈದೆಯರು ಕಪ್ಪು ಬಟ್ಟೆ ಧರಿಸಬಾರದು
ಕಪ್ಪುವಾರದಂದು ವಿವಾಹಿತ ಮಹಿಳೆಯರು ಕಪ್ಪು ಬಟ್ಟೆ ಧರಿಸಬಾರದು ಎನ್ನುತ್ತಾರೆ. ಹಸಿರು ವಸ್ತ್ರ ಒಳ್ಳೆಯದು ಎಂದು ಹೇಳಲಾಗುವುದು.
ಕೊನೆಯದಾಗಿ: ಇಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರದಂದು ಏನು ಮಾಡಬಾರದು ಎಂದು ಹೇಳಲಾಗಿದೆ. ಇಲ್ಲಿ ಹೇಳಿರುವ ವಿಷಯಗಳನ್ನು ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು....



Click it and Unblock the Notifications











