Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಜ್ಯೋತಿಷ್ಯ ಪ್ರಕಾರ ಬುಧವಾರದಂದು ಏನು ಮಾಡಬಾರದು?
ಜ್ಯೋತಿಷ್ಯದಲ್ಲಿ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷವಿದೆ, ಗ್ರಹಗಳ ಚಲನೆ, ಆ ದಿನದ ಅಧಿಪತಿ ಯಾರು ಎಂಬುವುದರ ಆಧಾರದ ಮೇಲೆ ಆ ದಿನ ವಿಶೇಷತೆ ಹಾಗೂ ಏನು ಮಾಡಬೇಕು, ಏನು ಮಾಡಬಾರದು ಎಂಬುವುದಾಗಿ ಹೇಳಲಾಗುವುದು.
ಬುಧವಾರದ ಅಧಿಪತಿ ಬುಧ. ಅಲ್ಲದೆ ಈ ದಿನ ವಿಘ್ನ ನಿವಾರಕ ಗಣಪತಿಗೆ ಈ ದಿನ ಗರಿಕೆ ಹುಲ್ಲನ್ನು ಅರ್ಪಿಸಬೇಕು. ನಾವಿಲ್ಲಿ ಜ್ಯೋತಿಷ್ಯ ಪ್ರಕಾರ ಬುಧವಾರ ಏನು ಮಾಡಬಾರದು ಎಂಬುವುದಾಗಿ ಹೇಳಿದ್ದೇವೆ ನೋಡಿ.

ಮಹಿಳೆಯರನ್ನು ಅವಮಾನಿಸಬಾರದು
ತಾಯಿ, ಸಹೋದರಿ, ಮಗಳು ಹೀಗೆ ಮಹಿಳೆಯರನ್ನು ಬುಧವಾರ ಅವಮಾನಿಸಬಾರದು. ಬುಧವಾರ ಹಸಿರು ಬಳೆಯನ್ನು ಮಹಿಳೆಯರಿಗೆ ನೀಡುವುದು ಒಳ್ಳೆಯದು.

ಸಾಲ ಪಡೆಯಬಾರದು
ಬುಧವಾರ ಸಾಲ ಪಡೆಯುವುದು ಅಥವಾ ಸಾಲ ಕೊಡುವುದು ಮಾಡಬಾರದು. ಈ ದಿನ ಹಣ ಸಾಲ ಪಡೆದರೆ ಆರ್ಥಿಕ ಲಾಭ ಉಂಟಾಗುವುದಿಲ್ಲ ಎಂದು ಹೇಳಲಾಗುವುದು. ಆದ್ದರಿಂದ ಈ ದಿನದಂದು ಯಾರ ಕೈಯಿಂದ ಸಾಲ ಪಡೆಯಬಾರದು ಎಂದು ಹೇಳಲಾಗುವುದು.

ಕೆಟ್ಟ ಪದಗಳನ್ನು ಬಳಸಬಾರದು
ಯಾರಿಗಾದರೂ ಬೈಯ್ಯುವುದು, ಕೆಟ್ಟ ಪದಗಳಿಂದ ನಿಂದಿಸುವುದು ಮಾಡಿದರೆ ನಿಮಗೆ ಬುಧನ ಬಲ ಕುಗ್ಗುವುದು. ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುವುದು ಅಲ್ಲದೆ ಐಶ್ವರ್ಯ, ಸಂಪತ್ತು ನಶಿಸಿ ಹೋಗುವುದು ಎಂದು ಹೇಳಲಾಗಿದೆ. ಆದ್ದರಿಂದ ಬುಧವಾರ ಕೆಟ್ಟ ಪದಗಳನ್ನು ಬಳಸಿ ಯಾರ ಮನಸ್ಸನ್ನೂ ನೋಯಿಸಬೇಡಿ.

ಹೂಡಿಕೆ ಮಾಡಬೇಡಿ
ಬುಧವಾರ ಹೂಡಿಕೆ ಮಾಡಲು ಸೂಕ್ತವಲ್ಲ ಎಂದು ಹೇಳಲಾಗುವುದು. ಹೂಡಿಕೆಗೆ ಸೂಕ್ತ ದಿನ ಶುಕ್ರವಾರ.

ಮಂಗಳಮುಖಿಯರನ್ನು ಅವಮಾನಿಸಬಾರದು
ಈ ದಿನ ಮಂಗಳಮುಖಿಯರನ್ನು ಅವಮಾನಿಸಬಾರದು, ಬದಲಿಗೆ ಅವರಿಗೆ ಹಣವನ್ನು ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು. ಇದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುವುದು.

ಪಶ್ಚಿಮದ ಕಡೆ ಪ್ರಯಾಣ ಒಳ್ಳೆಯದಲ್ಲ
ಬುಧವಾರ ಪಶ್ಚಿಮದ ಕಡೆ ಪ್ರಯಾಣ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು.

ಮುತ್ತೈದೆಯರು ಕಪ್ಪು ಬಟ್ಟೆ ಧರಿಸಬಾರದು
ಕಪ್ಪುವಾರದಂದು ವಿವಾಹಿತ ಮಹಿಳೆಯರು ಕಪ್ಪು ಬಟ್ಟೆ ಧರಿಸಬಾರದು ಎನ್ನುತ್ತಾರೆ. ಹಸಿರು ವಸ್ತ್ರ ಒಳ್ಳೆಯದು ಎಂದು ಹೇಳಲಾಗುವುದು.
ಕೊನೆಯದಾಗಿ: ಇಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರದಂದು ಏನು ಮಾಡಬಾರದು ಎಂದು ಹೇಳಲಾಗಿದೆ. ಇಲ್ಲಿ ಹೇಳಿರುವ ವಿಷಯಗಳನ್ನು ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು....



Click it and Unblock the Notifications