Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಜ್ಯೋತಿಷ್ಯ ಪ್ರಕಾರ ಬುಧವಾರದಂದು ಏನು ಮಾಡಬಾರದು?
ಜ್ಯೋತಿಷ್ಯದಲ್ಲಿ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷವಿದೆ, ಗ್ರಹಗಳ ಚಲನೆ, ಆ ದಿನದ ಅಧಿಪತಿ ಯಾರು ಎಂಬುವುದರ ಆಧಾರದ ಮೇಲೆ ಆ ದಿನ ವಿಶೇಷತೆ ಹಾಗೂ ಏನು ಮಾಡಬೇಕು, ಏನು ಮಾಡಬಾರದು ಎಂಬುವುದಾಗಿ ಹೇಳಲಾಗುವುದು.
ಬುಧವಾರದ ಅಧಿಪತಿ ಬುಧ. ಅಲ್ಲದೆ ಈ ದಿನ ವಿಘ್ನ ನಿವಾರಕ ಗಣಪತಿಗೆ ಈ ದಿನ ಗರಿಕೆ ಹುಲ್ಲನ್ನು ಅರ್ಪಿಸಬೇಕು. ನಾವಿಲ್ಲಿ ಜ್ಯೋತಿಷ್ಯ ಪ್ರಕಾರ ಬುಧವಾರ ಏನು ಮಾಡಬಾರದು ಎಂಬುವುದಾಗಿ ಹೇಳಿದ್ದೇವೆ ನೋಡಿ.

ಮಹಿಳೆಯರನ್ನು ಅವಮಾನಿಸಬಾರದು
ತಾಯಿ, ಸಹೋದರಿ, ಮಗಳು ಹೀಗೆ ಮಹಿಳೆಯರನ್ನು ಬುಧವಾರ ಅವಮಾನಿಸಬಾರದು. ಬುಧವಾರ ಹಸಿರು ಬಳೆಯನ್ನು ಮಹಿಳೆಯರಿಗೆ ನೀಡುವುದು ಒಳ್ಳೆಯದು.

ಸಾಲ ಪಡೆಯಬಾರದು
ಬುಧವಾರ ಸಾಲ ಪಡೆಯುವುದು ಅಥವಾ ಸಾಲ ಕೊಡುವುದು ಮಾಡಬಾರದು. ಈ ದಿನ ಹಣ ಸಾಲ ಪಡೆದರೆ ಆರ್ಥಿಕ ಲಾಭ ಉಂಟಾಗುವುದಿಲ್ಲ ಎಂದು ಹೇಳಲಾಗುವುದು. ಆದ್ದರಿಂದ ಈ ದಿನದಂದು ಯಾರ ಕೈಯಿಂದ ಸಾಲ ಪಡೆಯಬಾರದು ಎಂದು ಹೇಳಲಾಗುವುದು.

ಕೆಟ್ಟ ಪದಗಳನ್ನು ಬಳಸಬಾರದು
ಯಾರಿಗಾದರೂ ಬೈಯ್ಯುವುದು, ಕೆಟ್ಟ ಪದಗಳಿಂದ ನಿಂದಿಸುವುದು ಮಾಡಿದರೆ ನಿಮಗೆ ಬುಧನ ಬಲ ಕುಗ್ಗುವುದು. ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುವುದು ಅಲ್ಲದೆ ಐಶ್ವರ್ಯ, ಸಂಪತ್ತು ನಶಿಸಿ ಹೋಗುವುದು ಎಂದು ಹೇಳಲಾಗಿದೆ. ಆದ್ದರಿಂದ ಬುಧವಾರ ಕೆಟ್ಟ ಪದಗಳನ್ನು ಬಳಸಿ ಯಾರ ಮನಸ್ಸನ್ನೂ ನೋಯಿಸಬೇಡಿ.

ಹೂಡಿಕೆ ಮಾಡಬೇಡಿ
ಬುಧವಾರ ಹೂಡಿಕೆ ಮಾಡಲು ಸೂಕ್ತವಲ್ಲ ಎಂದು ಹೇಳಲಾಗುವುದು. ಹೂಡಿಕೆಗೆ ಸೂಕ್ತ ದಿನ ಶುಕ್ರವಾರ.

ಮಂಗಳಮುಖಿಯರನ್ನು ಅವಮಾನಿಸಬಾರದು
ಈ ದಿನ ಮಂಗಳಮುಖಿಯರನ್ನು ಅವಮಾನಿಸಬಾರದು, ಬದಲಿಗೆ ಅವರಿಗೆ ಹಣವನ್ನು ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು. ಇದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುವುದು.

ಪಶ್ಚಿಮದ ಕಡೆ ಪ್ರಯಾಣ ಒಳ್ಳೆಯದಲ್ಲ
ಬುಧವಾರ ಪಶ್ಚಿಮದ ಕಡೆ ಪ್ರಯಾಣ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು.

ಮುತ್ತೈದೆಯರು ಕಪ್ಪು ಬಟ್ಟೆ ಧರಿಸಬಾರದು
ಕಪ್ಪುವಾರದಂದು ವಿವಾಹಿತ ಮಹಿಳೆಯರು ಕಪ್ಪು ಬಟ್ಟೆ ಧರಿಸಬಾರದು ಎನ್ನುತ್ತಾರೆ. ಹಸಿರು ವಸ್ತ್ರ ಒಳ್ಳೆಯದು ಎಂದು ಹೇಳಲಾಗುವುದು.
ಕೊನೆಯದಾಗಿ: ಇಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರದಂದು ಏನು ಮಾಡಬಾರದು ಎಂದು ಹೇಳಲಾಗಿದೆ. ಇಲ್ಲಿ ಹೇಳಿರುವ ವಿಷಯಗಳನ್ನು ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು....



Click it and Unblock the Notifications