Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಜ್ಯೋತಿಷ್ಯ ಪ್ರಕಾರ ಬುಧವಾರದಂದು ಏನು ಮಾಡಬಾರದು?
ಜ್ಯೋತಿಷ್ಯದಲ್ಲಿ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷವಿದೆ, ಗ್ರಹಗಳ ಚಲನೆ, ಆ ದಿನದ ಅಧಿಪತಿ ಯಾರು ಎಂಬುವುದರ ಆಧಾರದ ಮೇಲೆ ಆ ದಿನ ವಿಶೇಷತೆ ಹಾಗೂ ಏನು ಮಾಡಬೇಕು, ಏನು ಮಾಡಬಾರದು ಎಂಬುವುದಾಗಿ ಹೇಳಲಾಗುವುದು.
ಬುಧವಾರದ ಅಧಿಪತಿ ಬುಧ. ಅಲ್ಲದೆ ಈ ದಿನ ವಿಘ್ನ ನಿವಾರಕ ಗಣಪತಿಗೆ ಈ ದಿನ ಗರಿಕೆ ಹುಲ್ಲನ್ನು ಅರ್ಪಿಸಬೇಕು. ನಾವಿಲ್ಲಿ ಜ್ಯೋತಿಷ್ಯ ಪ್ರಕಾರ ಬುಧವಾರ ಏನು ಮಾಡಬಾರದು ಎಂಬುವುದಾಗಿ ಹೇಳಿದ್ದೇವೆ ನೋಡಿ.

ಮಹಿಳೆಯರನ್ನು ಅವಮಾನಿಸಬಾರದು
ತಾಯಿ, ಸಹೋದರಿ, ಮಗಳು ಹೀಗೆ ಮಹಿಳೆಯರನ್ನು ಬುಧವಾರ ಅವಮಾನಿಸಬಾರದು. ಬುಧವಾರ ಹಸಿರು ಬಳೆಯನ್ನು ಮಹಿಳೆಯರಿಗೆ ನೀಡುವುದು ಒಳ್ಳೆಯದು.

ಸಾಲ ಪಡೆಯಬಾರದು
ಬುಧವಾರ ಸಾಲ ಪಡೆಯುವುದು ಅಥವಾ ಸಾಲ ಕೊಡುವುದು ಮಾಡಬಾರದು. ಈ ದಿನ ಹಣ ಸಾಲ ಪಡೆದರೆ ಆರ್ಥಿಕ ಲಾಭ ಉಂಟಾಗುವುದಿಲ್ಲ ಎಂದು ಹೇಳಲಾಗುವುದು. ಆದ್ದರಿಂದ ಈ ದಿನದಂದು ಯಾರ ಕೈಯಿಂದ ಸಾಲ ಪಡೆಯಬಾರದು ಎಂದು ಹೇಳಲಾಗುವುದು.

ಕೆಟ್ಟ ಪದಗಳನ್ನು ಬಳಸಬಾರದು
ಯಾರಿಗಾದರೂ ಬೈಯ್ಯುವುದು, ಕೆಟ್ಟ ಪದಗಳಿಂದ ನಿಂದಿಸುವುದು ಮಾಡಿದರೆ ನಿಮಗೆ ಬುಧನ ಬಲ ಕುಗ್ಗುವುದು. ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುವುದು ಅಲ್ಲದೆ ಐಶ್ವರ್ಯ, ಸಂಪತ್ತು ನಶಿಸಿ ಹೋಗುವುದು ಎಂದು ಹೇಳಲಾಗಿದೆ. ಆದ್ದರಿಂದ ಬುಧವಾರ ಕೆಟ್ಟ ಪದಗಳನ್ನು ಬಳಸಿ ಯಾರ ಮನಸ್ಸನ್ನೂ ನೋಯಿಸಬೇಡಿ.

ಹೂಡಿಕೆ ಮಾಡಬೇಡಿ
ಬುಧವಾರ ಹೂಡಿಕೆ ಮಾಡಲು ಸೂಕ್ತವಲ್ಲ ಎಂದು ಹೇಳಲಾಗುವುದು. ಹೂಡಿಕೆಗೆ ಸೂಕ್ತ ದಿನ ಶುಕ್ರವಾರ.

ಮಂಗಳಮುಖಿಯರನ್ನು ಅವಮಾನಿಸಬಾರದು
ಈ ದಿನ ಮಂಗಳಮುಖಿಯರನ್ನು ಅವಮಾನಿಸಬಾರದು, ಬದಲಿಗೆ ಅವರಿಗೆ ಹಣವನ್ನು ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು. ಇದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುವುದು.

ಪಶ್ಚಿಮದ ಕಡೆ ಪ್ರಯಾಣ ಒಳ್ಳೆಯದಲ್ಲ
ಬುಧವಾರ ಪಶ್ಚಿಮದ ಕಡೆ ಪ್ರಯಾಣ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು.

ಮುತ್ತೈದೆಯರು ಕಪ್ಪು ಬಟ್ಟೆ ಧರಿಸಬಾರದು
ಕಪ್ಪುವಾರದಂದು ವಿವಾಹಿತ ಮಹಿಳೆಯರು ಕಪ್ಪು ಬಟ್ಟೆ ಧರಿಸಬಾರದು ಎನ್ನುತ್ತಾರೆ. ಹಸಿರು ವಸ್ತ್ರ ಒಳ್ಳೆಯದು ಎಂದು ಹೇಳಲಾಗುವುದು.
ಕೊನೆಯದಾಗಿ: ಇಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರದಂದು ಏನು ಮಾಡಬಾರದು ಎಂದು ಹೇಳಲಾಗಿದೆ. ಇಲ್ಲಿ ಹೇಳಿರುವ ವಿಷಯಗಳನ್ನು ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು....



Click it and Unblock the Notifications
