Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
06-1-2019: ಭಾನುವಾರದ ದಿನ ಭವಿಷ್ಯ
ರವಿವಾರದ ದಿನ ಅಪಾರ ಶಕ್ತಿಯ ಸೂರ್ಯ ದೇವನನ್ನು ಆರಾಧಿಸಿ, 'ದೇವ /ಭಗವಂತ ವಿಷ್ಣುವಿನ' ಅಪರಾವತಾರ ಎಂದು ತಿಳಿಯಲಾಗಿದೆ. 'ಮಹಾ ವಿಷ್ಣು'ವಿನ ಅಪರಾವತಾರವೇ ಆದ ಸೂರ್ಯನನ್ನು ಸಾಮಾನ್ಯವಾಗಿ ಈ ದಿನ ಪೂಜಿಸುತ್ತಾರೆ. ಸಾಮಾನ್ಯವಾಗಿ , 'ರಥಸಪ್ತಮಿ'ಯಂದು ಮನೆಮನೆಗಳಲ್ಲಿ ಕೆಲವು 'ಬಿಲ್ವಪತ್ರೆ' ಗಳನ್ನು ತಲೆಯ ಮೇಲಿಟ್ಟು ಸ್ನಾನ ಮಾಡುತ್ತಾ, ಶ್ಲೋಕಗಳನ್ನು ಹೇಳುತ್ತಾ, ಸೂರ್ಯನ ಔದಾರ್ಯವನ್ನು ವರ್ಣಿಸುತ್ತಾ,ಇಡೀ ವರ್ಷಕ್ಕೆ ಒಮ್ಮೆ ಮಾತ್ರ ಪೂಜಿಸುವುದಾಗಿದೆ.
ಪೂಜೆಯ ಜೊತೆಗೆ, ಶಾಸ್ತ್ರ ರೀತ್ಯಾ 'ನೈವೇದ್ಯಕ್ಕೆಂದು' ಹೂಗಳು ಮತ್ತು ಹಣ್ಣುಗಳನ್ನು ಅರ್ಪಿಸಲಾಗುತ್ತದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807
ಮೇಷ
ವೃತ್ತಿಯಲ್ಲಿ ಕೊಂಚ ಪ್ರಗತಿಯ ಅನುಭವ ಕಂಡು ಬರುವುದು. ಆದರೆ ನಿರೀಕ್ಷಿಸಿದ ಲಾಭ ಸಿಗದೆ ತುಸು ನಿರಾಸೆ ಉಂಟಾಗಲಿದೆ. ಪರಿಸ್ಥಿತಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದೇ ಉತ್ತಮ ಎನ್ನುವುದನ್ನು ಮರೆಯದಿರಿ. ಹೊಸ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗುವಿರಿ. ಅದರ ಫಲವನ್ನು ಮುಂದಿನ ದಿನಗಳಲ್ಲಿ ಕಾಣುವಿರಿ. ಆದರೆ ನಿರ್ಧಾರ ಕೈಗೊಳ್ಳಬೇಕಾದ ಅವಸರ ಏನಿಲ್ಲ. ಹೀಗಾಗಿ ಸದ್ಯ ಸುಮ್ಮನಿದ್ದು ಬಿಡಿ. ಉಪಾಯದಿಂದ ಬಂದ ಸಮಯವನ್ನು ತಿರಸ್ಕರಿಸಿ. ವೃತ್ತಿಯಲ್ಲಿ ಹೊಸ ಹೊಸ ಸವಾಲು, ಸಮಸ್ಯೆಗಳು ಎದುರಾಗುವವು. ಅವುಗಳನ್ನು ಬಿಡಿಸಿಕೊಳ್ಳುವುದರಲ್ಲಿಯೇ ದಿನ ಪೂರ್ತಿ ಕಳೆದು ಹೋಗುವುದು. ಸ್ನೇಹಿತರ ಸಹಾಯ ಪಡೆದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು.9845743807
ಅದೃಷ್ಟ ಸಂಖ್ಯೆ:2
ವೃಷಭ
ಆರ್ಥಿಕವಾಗಿ ಸದೃಢ ದಿನವಾಗಿದೆ. ನಿಮ್ಮ ಹಣಕಾಸಿನ ವ್ಯವಸ್ಥೆ ಸುಭದ್ರವಾಗಿರುವುದು. ವೃತ್ತಿಯಲ್ಲಿ ಅತ್ಯಂತ ಉನ್ನತ ಸ್ಥಾನಮಾನಕ್ಕೆ ಏರುವಿರಿ. ಸಾಮಾಜಿಕ ಚಟುವಟಿಕೆಯಲ್ಲಿ ಒಳ್ಳೆಯ ಹೆಸರು ಸಿಗಲಿದೆ.ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ದೀರ್ಘಕಾಲದ ಅನಾರೋಗ್ಯ ಶಮನಗೊಳ್ಳುವುದು. ನಿವೇಶನ ಖರೀದಿಗೆ ಪತ್ನಿ ಒತ್ತಾಯಿಸುವಳು. ಕಚೇರಿಯಲ್ಲಿನ ಮಾನಸಿಕ ಕಿರಿಕಿರಿ ದೂರವಾಗುವುದು. ಮಗನಿಂದ ಸಿಹಿ ಸುದ್ದಿ ಕೇಳುವಿರಿ.ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಉಂಟಾಗುವ ಸಂಭವವಿದೆ. ಆದಷ್ಟು ಮನಸ್ಸು ಕೆಡಿಸಿಕೊಳ್ಳದೆ ಶಾಂತಚಿತ್ತರಾಗಿ ಸಂದರ್ಭಗಳನ್ನು ಎದುರಿಸಿ. ತೆರಿಗೆಯನ್ನು ಸರಿಯಾದ ಕಾಲಕ್ಕೆ ಕಟ್ಟುವುದು ಒಳಿತು.9845743807
ಅದೃಷ್ಟ ಸಂಖ್ಯೆ:1
ಮಿಥುನ
ಪ್ರಮುಖ ಕೆಲಸಗಳಿದ್ದರೆ ತ್ವರಿತವಾಗಿ ಮುಗಿಸಿಕೊಳ್ಳಿ. ಸರ್ಕಾರಿ ಕಚೇರಿ, ಬ್ಯಾಂಕಿಂಗ್ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳಲು ಸಕಾಲವಾಗಿದೆ. ಒಂದು ಮಹತ್ತರ ನಿರ್ಣಯ ತೆಗೆದುಕೊಳ್ಳುವಿರಿ. ಸಹೋದ್ಯೋಗಿಗಳೊಂದಿಗೆ ಪ್ರೀತಿವಿಶ್ವಾಸದಿಂದ ವರ್ತಿಸಿ. ನಿಮ್ಮ ಇಚ್ಛಿತ ಕಾರ್ಯಗಳನ್ನು ಪೂರೈಸಿಕೊಳ್ಳುವಿರಿ. ಇದರಿಂದಾಗಿ ನೀವು ಕೆಲಸ ಮಾಡುವ ಸಂಸ್ಥೆಯಲ್ಲಿ ನಿಮ್ಮ ವರ್ಚಸ್ಸು ಇನ್ನಷ್ಟು ಬೆಳೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ಹಮ್ಮಿಕೊಂಡ ಕಾರ್ಯಗಳು ಯಶಸ್ಸನ್ನು ತಂದುಕೊಡುವವು. ಮನೆಯ ಸದಸ್ಯರ ಸಹಕಾರವೂ ದೊರೆಯುವುದರಿಂದ ನೆಮ್ಮದಿ ಹೊಂದುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.9845743807
ಅದೃಷ್ಟ ಸಂಖ್ಯೆ:5
ಕಟಕ
ನಿಮ್ಮ ತಾಳ್ಮೆಯನ್ನು ಇತರರು ತಪ್ಪಾಗಿ ಅಥೈರ್ಸಿಕೊಳ್ಳುವರು. ಆದರೆ ಕೆಲಸ ಕಾರ್ಯಗಳಲ್ಲಿನ ನಿಮ್ಮ ತನ್ಮಯತೆ ನಿಮಗೆ ಹೆಚ್ಚಿನ ಗೌರವವನ್ನು ನೀಡುವುದು. ಮನಃಶಾಂತಿಗಾಗಿ ಕುಲದೇವರನ್ನು ಪ್ರಾರ್ಥಿಸಿ.ಪ್ರೀತಿ ಪಾತ್ರರಾದ ವ್ಯಕ್ತಿಗಳಿಂದ ಸಂತೋಷದ ಸಮಾಚಾರ ಕೇಳುವಿರಿ. ಕಚೇರಿಯಲ್ಲಿ ಒಂದಷ್ಟು ಒಳ್ಳೆಯ ಬದಲಾವಣೆಗಳು ಆಗುವವು. ವೃತ್ತಿಯಲ್ಲಿ ಅದ್ಭುತ ಸಾಧನೆ ಮಾಡುವಿರಿ. ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆಯುವುದು.ವೃತ್ತಿಯಲ್ಲಿ ಅತ್ಯಂತ ಖುಷಿಯ ದಿನವಾಗಿರುತ್ತದೆ. ಕೆಲವರಿಗೆ ಬಹುಮಾನ ರೂಪದಲ್ಲಿ ಪ್ರವಾಸ ಕೈಕೊಳ್ಳುವ ಅವಕಾಶ ಬರುವುದು. ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇರುವುದು.9845743807
ಅದೃಷ್ಟ ಸಂಖ್ಯೆ:6
ಸಿಂಹ
ನಿಮ್ಮ ಸಮಸ್ಯೆಗಳಿಗೆ ಆತ್ಮೀಯರಿಂದ ಉತ್ತಮ ಸಲಹೆ ಸಿಗುವುದು. ಖಾಸಗಿ ಕಂಪನಿ ನೌಕರರಿಗೆ ಸಂತಸದ ಸುದ್ದಿ ದೊರೆಯುವುದು. ತಾಯಿ ಕಡೆಯಿಂದ ಆರ್ಥಿಕ ನೆರವು ಸಿಗಲಿದೆ. ಆರ್ಥಿಕ ಸಮಸ್ಯೆಗಳು ಒಂದು ತಾತ್ವಿಕ ಕೊನೆ ಕಾಣಲಿದೆ.ಬಂಧುಗಳ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ಪರಿವಾರ ಸಮೇತ ತೆರಳುವಿರಿ. ಶತ್ರುಗಳ ಭೀತಿ ದೂರವಾಗಲಿದೆ. ಮನೆಯಲ್ಲಿ ಹಿರಿಯರ ಕಡೆಯಿಂದ ವಿವಾಹ ವಿಷಯ ಪ್ರಸ್ತಾಪವಾಗುವುದು. ಆಮೆ ವೇಗದಲ್ಲಿ ಸಾಗುತ್ತಿದ್ದ ಕೆಲಸಗಳು ವೇಗ ಹೆಚ್ಚಿಸಿಕೊಳ್ಳುವವು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಬಂಧುಗಳೊಡನೆ ಸಂಬಂಧ ಗಟ್ಟಿಗೊಳ್ಳುವುದು.9845743807
ಅದೃಷ್ಟ ಸಂಖ್ಯೆ:8
ಕನ್ಯಾ
ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ಕೊಟ್ಟ ಸಾಲ ಭಾಗಶಃ ವಸೂಲಾಗುವ ಸಾಧ್ಯತೆಯಿದೆ. ಆದಾಯ ಮೂಲಗಳು ಹೆಚ್ಚಾಗುವವು. ಖರ್ಚು ವೆಚ್ಚಗಳಿಗೆ ಸರಿಯಾದ ಲೆಕ್ಕವಿಡುವುದು ಒಳ್ಳೆಯದು. ಆಸ್ತಿ ಪಾಲು ಕುರಿತು ಚರ್ಚೆಯಾಗಲಿದೆ. ಕುಟುಂಬದಲ್ಲಿ ಒಗ್ಗಟ್ಟು ಮೂಡಲಿದೆ. ಪತ್ನಿಯ ಆರೋಗ್ಯ ಸುಧಾರಣೆಯಿಂದ ನೆಮ್ಮದಿ ಎನಿಸುವುದು. ಹಿಡಿದ ಕೆಲಸ ಕೈಗೂಡಲು ನವಗ್ರಹಾರಾಧನೆ ಮಾಡಿ.ನೀವು ಊಹಿಸದ ರೀತಿಯಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ನೀವು ಸಂಧಾನ ಚತುರರಾಗಿರುವ ಕಾರಣ ಅದನ್ನು ಸಮರ್ಥವಾಗಿ ಎದುರಿಸುವಿರಿ. ನಿಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ.9845743807
ಅದೃಷ್ಟ ಸಂಖ್ಯೆ:5
ತುಲಾ
ಪರಿವಾರದವರೊಂದಿಗೆ ವಿಹಾರಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ವಾಹನ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ನಿಮ್ಮ ಧೈರ್ಯ ಸ್ವಭಾವ ಎಲ್ಲರ ಮೆಚ್ಚುಗೆ ಪಡೆಯಲಿದೆ.ಅನಿರೀಕ್ಷಿತವಾಗಿ ಪ್ರೀತಿ ಪಾತ್ರರನ್ನು ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ ಕಂಡುಬರುವುದು. ಹಿರಿಯರ ಮೇಲೆ ವಿನಾಕಾರಣ ಮುನಿಸು ತೋರಿಸಬೇಡಿ. ಪ್ರೇಮ ಪ್ರಕರಣಗಳಿಂದ ದೂರವಿರುವುದು ಒಳ್ಳೆಯದು. ರಾಜಕಾರಣಿಗಳ ಸಹವಾಸದಿಂದ ದೂರವಿರುವುದು ಉತ್ತಮ. ಇಲ್ಲವಾದರೆ ಅವರಿಂದ ಮಾನಸಿಕ ಕಿರುಕುಳ ಆನುಭವಿಸಬೇಕಾಗುವುದು. ಪಾಲುದಾರರ ಇಬ್ಬಗೆಯ ನೀತಿಯಿಂದಾಗಿ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾದೀತು.9845743807
ಅದೃಷ್ಟ ಸಂಖ್ಯೆ:8
ವೃಶ್ಚಿಕ
ಪೂರ್ವ ಸಿದ್ಧತೆ ಇಲ್ಲದೆ ಪ್ರಯಾಣ ಮಾಡ ಬೇಡಿ. ತಾಂತ್ರಿಕ ಪರಿಣಿತರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಸರ್ಕಾರಿ ನೌಕರರಿಗೆ ಅನಿರೀಕ್ಷಿತವಾಗಿ ಅಸ್ಥಿರತೆ ಕಾಣುವುದು. ಕುಲದೇವರ ಪ್ರಾರ್ಥನೆ ಮಾಡಿ.ಆರ್ಥಿಕ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಬಹುದು. ಲೇವಾದೇವಿ ವ್ಯವಹಾರಕ್ಕೆ ಕೊಂಚ ಹಿನ್ನಡೆಯುಂಟಾಗುವುದು. ಮಾಧ್ಯಮದವರಿಗೆ ಸರ್ಕಾರದಿಂದ ಸವಲತ್ತುಗಳು ದೊರೆಯುತ್ತವೆ. ಹೊಸ ವ್ಯವಹಾರದ ಆರಂಭವನ್ನು ಮುಂದೂಡುವುದು ಉತ್ತಮ. ಯೋಚಿಸಿ ಮಾತನಾಡಿ. ಅನವಶ್ಯಕ ಘರ್ಷಣೆ ಬೇಡ. ಅವಿವಾಹಿತ ಕನ್ಯೆಗೆ ಯೋಗ್ಯ ವರ ದೊರೆಯುವನು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ.9845743807
ಅದೃಷ್ಟ ಸಂಖ್ಯೆ:6
ಧನುಸ್ಸು
ಬಂಧುಗಳು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಎಲ್ಲದಕ್ಕೂ ಅನುಮಾನ ಪಡುವುದು ಒಳ್ಳೆಯದಲ್ಲ. ಪ್ರಯಾಣವನ್ನು ಮಾಡದಿರುವುದು ಒಳ್ಳೆಯದು. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಹಣಕಾಸು ಉತ್ತಮವಾಗಿರುತ್ತದೆ.ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಿಮ್ಮ ನಿಸ್ವಾರ್ಥ ಸೇವೆಯು ಇತರರಿಂದ ಪ್ರಶಂಸೆಗೆ ಒಳಗಾಗುವುದು. ಆರೋಗ್ಯದಲ್ಲಿ ಸ್ಥಿರತೆ ಮೂಡಲಿದೆ. ಮಗಳಿಗೆ ಕಂಕಣಭಾಗ್ಯ ಕೂಡಿಬರಲಿದೆ. ಬರಲಿರುವ ಹಣ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುವುದು. ಉದ್ಯಮದಲ್ಲಿ ಬರುವ ಲಾಭವನ್ನು ಮರು ಹೂಡಿಕೆ ಮಾಡುವ ಮೊದಲು ಮತ್ತೊಮ್ಮೆ ಆಲೋಚಿಸಿ. ಬರಹಗಾರರಿಗೆ ವಿವಾದಗಳು ಎದುರಾಗುವ ಪ್ರಸಂಗ ಮಾಡುವ ವ್ಯವಹಾರದಲ್ಲಿ ಜಾಣ್ಮೆ ತೋರಿದಲ್ಲಿ ಈದಿನ ಸಂತಸದಿಂದ ಇರುವಿರಿ.9845743807
ಅದೃಷ್ಟ ಸಂಖ್ಯೆ:4
ಮಕರ
ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಮ್ಮ ಸೇವೆ ಹಾಗೂ ನಿಷ್ಟೆಯನ್ನು ಗುರುತಿಸಲಿದೆ. ಆದರೆ ನೀವು ಆಡುವ ಮಾತಿನಲ್ಲಿ ಹಿಡಿತವಿದ್ದರೆ ಒಳ್ಳೆಯದು. ಒತ್ತಡ ವಾತಾವರಣದಲ್ಲಿ ಕೆಲಸ ಮಾಡಬೇಕಾಗುವುದು. ಈದಿನ ತಾಳ್ಮೆಯಿಂದಿರಿ.ನೀವು ಹಮ್ಮಿಕೊಂಡಿರುವ ಕೆಲಸದಿಂದ ಸಮಾಜ ನಿಮ್ಮನ್ನು ಗೌರವಿಸುವುದು. ಸರ್ಕಾರಿ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು. ಮಗನು ತೋರುವ ಪಿತೃಭಕ್ತಿಗೆ ತಲೆತೂಗುವಿರಿ. ಆತನಿಗೆ ನಿಮ್ಮಿಂದ ಪೂರ್ಣ ಸಹಕಾರ ಸಿಗಲಿದೆ. ಎದುರಾಗುವ ಅಲ್ಪ ನಷ್ಟವನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರುವುದು ಒಳ್ಳೆಯದು. ಸಭೆ ಸಮಾರಂಭಗಳಲ್ಲಿ ಜನರೊಡನೆ ಪ್ರೀತಿ ವಾತ್ಸಲ್ಯದಿಂದ ವರ್ತಿಸಿ. ಕುಟುಂಬದಲ್ಲಿ ನೆಮ್ಮದಿ ಮೂಡಲಿದೆ. ಜಾಮೀನಿನ ವಿಷಯದಲ್ಲಿ ತಟಸ್ಥರಾಗಿರಿ.9845743807
ಅದೃಷ್ಟ ಸಂಖ್ಯೆ:5
ಕುಂಭ
ನಿಮ್ಮ ವ್ಯವಹಾರದಲ್ಲಿ ಗೊಂದಲ, ತೊಡಕುಗಳು ಇದ್ದಲ್ಲಿ ಮೊದಲು ಅವನ್ನು ಪರಿಹರಿಸಿಕೊಳ್ಳಿ. ವಿವಿಧ ಮೂಲಗಳಿಂದ ಆದಾಯ ಹೆಚ್ಚಾಗಲಿದ್ದು, ಮನೆ ಕಟ್ಟಲು ಈಗ ಸಕಾಲ. ಶೀಘ್ರದಲ್ಲಿ ಮುಂದುವರೆಯಿರಿ. ವಾಹನದಲ್ಲಿ ಸಂಚರಿಸುವಾಗ ಎಚ್ಚರದಿಂದಿರಿ. ಮನೆದೇವರ ಮತ್ತು ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರಡಿ. ಎಲ್ಲರಲ್ಲಿ ಅತಿಯಾದ ಆತ್ಮವಿಶ್ವಾಸ ಸರಿಯಲ್ಲ. ವೈಯಕ್ತಿಕ ವಿಚಾರಗಳನ್ನು ಬಹಿರಂಗಗೊಳಿಸುವುದು ಸೂಕ್ತವಲ್ಲ.ನಿಮ್ಮ ದುಡುಕು ಸ್ವಭಾವದಿಂದಾಗಿ ಸಹೋದ್ಯೋಗಿಗಳಲ್ಲಿ ವೈಮನಸ್ಸು ಮೂಡುವುದು. ಆದಾಯದ ಮೂಲ ಹೆಚ್ಚಲಿದೆ. ಕಟ್ಟಡ ಸಾಮಗ್ರಿಗಳ ಖರೀದಿಯನ್ನು ಮಾಡುವಿರಿ. ಸಾಲ ಮರುಪಾವತಿಯ ಬಗ್ಗೆ ಚಿಂತನೆ ಅಗತ್ಯ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.9845743807
ಅದೃಷ್ಟ ಸಂಖ್ಯೆ:2
ಮೀನ
ಮಕ್ಕಳ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ದೈನಂದಿನ ಕೆಲಸಗಳನ್ನು ಉತ್ಸಾಹದಿಂದ ನಿರ್ವಹಿಸುವಿರಿ. ಗೃಹಾಲಂಕಾರದ ವಸ್ತುಗಳನ್ನು ಖರೀದಿ ಮಾಡುವಿರಿ. ದೂರದ ಪ್ರಯಾಣ ಮಾಡದಿರುವುದೇ ಉತ್ತಮ.ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಯಾರಲ್ಲಿಯೂ ಅತಿಯಾದ ವಿಶ್ವಾಸ ಇಟ್ಟುಕೊಳ್ಳದಿರುವುದು ಒಳ್ಳೆಯದು. ಅತಿಯಾದ ವಿಶ್ವಾಸ ನಿಮ್ಮ ಕಾರ್ಯವನ್ನು ಕೆಡಿಸುವುದು. ಆಸ್ತಿ ಸಂಬಂಧಿತ ವಿವಾದಗಳು ಸುಖಾಂತ್ಯ ಕಾಣಲಿವೆ. ಹಿರಿಯರ ಸಲಹೆಗಳನ್ನು ಯಾವುದೇ ಕಾರಣಕ್ಕೂ ಅಲಕ್ಷಿಸಬೇಡಿ. ಸ್ವಂತ ಬುದ್ಧಿಯಿಂದ ಮಾಡಿದ ಕೆಲಸಗಳು ಹೆಚ್ಚಿನ ತೃಪ್ತಿಯನ್ನು ನೀಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.9845743807
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp