Just In
- 25 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 2 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Lakshmibaramma: ಗೊಂದಲದಲ್ಲಿರುವ ಲಕ್ಷ್ಮೀಗೆ ಕಲರ್ಸ್ ಕನ್ನಡದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡಲು ಹೇಳಿದ ಟ್ರೋಲರ್ಸ್
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
4-7-2019: ಗುರುವಾರದ ದಿನ ಭವಿಷ್ಯ
ನವಗ್ರಹದಲ್ಲಿ ಗುರು ಗ್ರಹ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.ಮನುಷ್ಯನ ಪ್ರತಿಯೊಂದು ಯಶಸ್ಸಿಗೂ ಗುರು ಗ್ರಹದ ಕೃಪೆ ಬೇಕು. ಗುರು ಗ್ರಹದ ಅನುಗ್ರಹವಿದ್ದಲ್ಲಿ ಸುಖ,ಶಾಂತಿ, ಸಂಪತ್ತು, ವಿವಾಹ, ಸಂತಾನ ಯೋಗ ಎಲ್ಲವೂ ಸಿಗಲಿದೆ.
ಜಾತಕದಲ್ಲಿ ಗುರು ಪ್ರಬಲವಾಗಿದ್ದರೆ ಯಶಸ್ಸು ಲಭಿಸುತ್ತದೆ. ದುರ್ಬಲವಾಗಿದ್ದರೆ ಅಪಜಯ, ನೋವು, ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಗುರುವಿನ ಅನುಗ್ರಹ ಪಡೆಯಲು ಬಯಸುವ ವ್ಯಕ್ತಿ ಗುರುವಾರದ ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನವನ್ನು(ಮಂದಿರಗಳಲ್ಲಿ) ಪಡೆಯಿರಿ.ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.
ಮೇಷ (4 july 2019)
ನಿಮ್ಮ ನಡೆ ನುಡಿ ಮತ್ತು ಮಾತಿನ ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಕ್ರಿಯಾಶೀಲತೆಯೇ ನಿಮ್ಮ ಪಾಲಿಗೆ ಶ್ರೀರಕ್ಷೆ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಾಲ ನೀಡಲು ಇಲ್ಲವೆ ಸಾಲ ತೆಗೆದುಕೊಳ್ಳಲು ಮುಂದಾಗದಿರಿ. ನಿಮ್ಮ ಆತ್ಮಸ್ಥೈರ್ಯ ಕುಂದುವ ಸಾಧ್ಯತೆ ಇದೆ. ಕೆಮ್ಮು ಕಫದಂತಹ ತೊಂದರೆಗಳಿಂದ ನರಳಬೇಕಾಗುವುದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. 9845743807 ಅದೃಷ್ಟ ಸಂಖ್ಯೆ:2
ವೃಷಭ
ಪ್ರೇಮ ಕುರುಡು ಅದಕ್ಕೆ ಹೊರಗಿನ ರೀತಿ ರಿವಾಜುಗಳ ಗೊಡವೆ ಬೇಡ. ತಾನು ಅಂದುಕೊಂಡಿದ್ದೇ ಸತ್ಯ ಎಂದು ತಿಳಿದು ಮುಂದುವರೆಯುವುದರಿಂದ ತೊಂದರೆ ಎದುರಿಸಬೇಕಾಗುವುದು. ಕೆಲವರಿಗೆ ಕಂಕಣಭಾಗ್ಯ ದೊರೆಯವುದು. ಒಳ್ಳೆಯ ರೀತಿಯ ಲಾಭಕ್ಕೆ ದಾರಿ ಆಗಬಹುದಾದ ವಹಿವಾಟುಗಳನ್ನು ನೀವು ಹೆಚ್ಚಿನ ಎಚ್ಚರದಿಂದಲೇ ನಡೆಸಿ. ಆಸ್ತಿ ವ್ಯವಹಾರದಲ್ಲಿ ಅನುಕೂಲವಾಗುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.9845743807 ಅದೃಷ್ಟ ಸಂಖ್ಯೆ:1
ಮಿಥುನ
ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಚಿಕ್ಕ ಮಕ್ಕಳಂತೆ ದಂಡಿಸಿದರೆ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ. ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಮಧ್ಯಸ್ಥಿಕೆ ಹಾಗೂ ಮಾರಾಟ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಸೂಕ್ತ ದಾಖಲಾತಿಗಳೊಂದಿಗೆ ವ್ಯವಹರಿಸುವುದು ಉತ್ತಮ. ಈ ಸಂಬಂಧ ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ.9845743807 ಅದೃಷ್ಟ ಸಂಖ್ಯೆ:2
ಕಟಕ
ಸಿನಿಮಾ ಹಾಗೂ ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುವುದು ಸೂಕ್ತವಲ್ಲ. ಅಂತೆಯೆ ಕಟ್ಟಡ ಕೆಲಸಗಾರರು ಮತ್ತು ತಾಂತ್ರಿಕರಿಂದ ಎಚ್ಚರಿಕೆಯಿಂದ ಕೆಲಸ ತೆಗೆದುಕೊಳ್ಳಿ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಂದರ್ಭ ಇದೆ. ನೆರೆಹೊರೆ ಜನರ ಜತೆ ಎಷ್ಟು ಸೌಹಾರ್ದತೆಯಿಂದ ಇದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಅವರು ಜಗಳ ತೆಗೆಯುವ ಸಾಧ್ಯತೆ ಇದೆ. ಸದ್ಯದ ಗ್ರಹಸ್ಥಿತಿ ಸರಿ ಇಲ್ಲದ ಕಾರಣ ಕೆಲವನ್ನು ಕಂಡರೂ ಕಾಣದಂತೆ ಇರಬೇಕಾಗುವುದು.9845743807 ಅದೃಷ್ಟ ಸಂಖ್ಯೆ:4
ಸಿಂಹ
ದುಷ್ಮನ್ ಕಹಾ ಹೇ ಅಂದರೆ ಬಗಲ್ ಮೆ ಹೇ ಎನ್ನುವಂತೆ ದೂರದ ಶತ್ರುಗಳಿಂದ ನಿಮಗೆ ತೊಂದರೆ ಇಲ್ಲ. ಹತ್ತಿರದವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಂದರ್ಭ ಇದೆ. ಅಪರಿಚಿತರಿಂದ ಆದಷ್ಟು ದೂರವಿರಿ. ಪ್ರತಿ ಹಣಕಾಸಿನ ವ್ಯವಹಾರಕ್ಕೆ ಲೆಕ್ಕ ಪಕ್ಕಾ ಇಡಿ. ಭಗವಂತನ ಒಲುಮೆ ಇದ್ದರೆ ಬೇರೆ ಯಾರ ಹಂಗೂ ಬೇಡ. ಅಂತೆಯೆ ನಿಮ್ಮ ಕಠಿಣ ತಪಸ್ಸಿಗೆ, ಪರಿಶ್ರಮಕ್ಕೆ ತಕ್ಕಂತೆ ವ್ಯಾಪಾರ, ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ.9845743807 ಅದೃಷ್ಟ ಸಂಖ್ಯೆ:6
ಕನ್ಯಾ
ಪ್ರವಾಸದಿಂದ ಮನಸ್ಸು ಪ್ರಫುಲ್ಲವಾಗುವುದು. ಸಹೋದರನ ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಭಾಗವಹಿಸಿ. ಮಾತಾಪಿತರೊಂದಿಗೆ ಸ್ನೇಹದಿಂದ ವರ್ತಿಸಿ, ಅವರ ಕೃಪಾಶೀರ್ವಾದವನ್ನು ಪಡೆಯುವಿರಿ. ವಿಶಿಷ್ಟ ಮತ್ತು ನಿಗೂಢ ಅನುಭವವೊಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಅದರಿಂದ ಆಧ್ಯಾತ್ಮದ ಹರಿವು ಹೆಚ್ಚಾಗುವುದು. ಅಂತರ್ಮುಖಿಗಳಾಗಿ ದೇವರನ್ನು ಆರಾಧನೆ ಮಾಡುವಿರಿ.9845743807 ಅದೃಷ್ಟ ಸಂಖ್ಯೆ:4
ತುಲಾ
ಅಮೃತಪೂರ್ಣ ಸಿಹಿಯೊಂದಿಗಿನ ನಿಮ್ಮ ಮಾತುಗಳು ನಿಮ್ಮ ವಿರೋಧಿಗಳನ್ನು ಕೂಡಾ ನಿಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುವವು. ಅಜಾತ ಶತ್ರುಗಳಿಂದ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಹಲವಾರು ಕಾರ್ಯ ಯೋಜನೆಗಳನ್ನು ಒತ್ತಡದಲ್ಲಿ ನಿರ್ವಹಿಸಲು ಮುಂದಾಗುವಿರಿ. ನಿಧಾನವಾಗಿ ಆದರೂ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ನಿಮ್ಮ ದೌರ್ಬಲ್ಯವನ್ನು ಪರರ ಮುಂದೆ ಪ್ರದರ್ಶಿಸದಿರುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:9
ವೃಶ್ಚಿಕ
ಬಹು ದೊಡ್ಡ ಬಂಡವಾಳದೊಂದಿಗೆ ವ್ಯಾಪಾರ, ವ್ಯವಹಾರಗಳನ್ನು ಆರಂಭಿಸುವಿರಿ. ಇದರಿಂದ ಹೆಚ್ಚಿನ ಲಾಭ ಕಂಡು ಬರುವುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು.ನಿಮ್ಮ ವಿಶೇಷವಾದ ಕಾರ್ಯಕ್ಷ ಮತೆ ಕಚೇರಿಯಲ್ಲಿ ಪ್ರಶಂಸೆಗೆ ಒಳಗಾಗುವ ಹೇರಳ ಅವಕಾಶಗಳು ಲಭ್ಯವಾಗಿರುತ್ತವೆ. ಸ್ಥಿರಾಸ್ತಿ ಖರೀದಿಯ ಬಗ್ಗೆ ಮಾತುಕತೆ ನಡೆಸುವಿರಿ ಮತ್ತು ಅದರಲ್ಲಿ ಸಫಲತೆಯನ್ನು ಕಾಣುವಿರಿ.9845743807 ಅದೃಷ್ಟ ಸಂಖ್ಯೆ:4
ಧನುಸ್ಸು
ಮಕ್ಕಳ ವಿಚಾರವಾಗಿ ಆತಂಕದ ಕ್ಷ ಣಗಳನ್ನು ಎದುರಿಸುವಿರಾದರೂ ಸಂತೋಷದ ವಾರ್ತೆಯೂ ಸಿಗಲಿದೆ. ವಿದ್ಯಾಗುರುಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುವಿರಿ. ಇದರಿಂದ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ನಿಮ್ಮದೇ ಆದ ಕೆಲವು ನಿರ್ದಿಷ್ಟ ಯೋಜನೆಗಳನ್ನು ನೀವು ಸಾಧಿಸಿ ತೋರಿಸುವ ಮೂಲಕ ಬಂಧು ಬಳಗದವರಲ್ಲಿ ವಿಶೇಷ ಅಭಿಮಾನಕ್ಕೆ ಪಾತ್ರರಾಗುವಿರಿ. ಒಂದು ಮಹತ್ತರ ಕಾರ್ಯವನ್ನು ಮಾಡಿ ಮುಗಿಸಿದ ತೃಪ್ತಿ ನಿಮ್ಮದಾಗುವುದು.9845743807 ಅದೃಷ್ಟ ಸಂಖ್ಯೆ:6
ಮಕರ
ಸಾಮಾಜಿಕವಾದ ನೆಲೆಯಲ್ಲಿ ತೊಂದರೆಗಳಿಗೆ ಹೆಚ್ಚಿನ ಅವಕಾಶಗಳು ಬರುವವು. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಖರ್ಚು ವೆಚ್ಚಗಳಲ್ಲಿ ಕೈ ಹಿಡಿತ ಮಾಡಬೇಕಾಗುವುದು.ಮನೆಯಲ್ಲಿ ಅಶಾಂತಿಯ ವಾತಾವರಣ ತಲೆದೋರುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಭಕ್ತಿಯಿಂದ ಪೂಜಿಸಿ. ಆಕೆಯು ನಿಮ್ಮ ಸಂಕಷ್ಟಗಳನ್ನು ದೂರಮಾಡಿ ಮನಸ್ಸಿಗೆ ನೆಮ್ಮದಿ ನೀಡುವಳು.9845743807 ಅದೃಷ್ಟ ಸಂಖ್ಯೆ:8
ಕುಂಭ
ನಿಮ್ಮ ಹಲವು ವಿಚಾರಗಳಿಗೆ ಹಿರಿಯರೊಬ್ಬರ ಸಲಹೆಯನ್ನು ಸ್ವೀಕರಿಸಿ ಮತ್ತು ನಿಮಗೆ ಸ್ತ್ರೀ ಸಮೂಹ ಬೆಂಗಾವಲಿಗೆ ನಿಲ್ಲಲಿದೆ. ದೇವಿಯು ನಿಮಗೆ ಮಹಿಳೆ ರೂಪದಲ್ಲಿ ಸಹಾಯ ಮಾಡುವಳು.ಮಹತ್ತರವಾದ ಕಾರ್ಯಗಳನ್ನು ಮುಂದೂಡುವುದು ಒಳಿತು. 5 ವರ್ಷದ ಒಳಗೆ ಇರುವ ಹೆಣ್ಣು ಮಕ್ಕಳಿಗೆ ಸಿಹಿ ಹಂಚಿರಿ. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಕೈ ಹಿಡಿತ ಮಾಡಬೇಕಾಗುವುದು. 9845743807 ಅದೃಷ್ಟ ಸಂಖ್ಯೆ:2
ಮೀನ
ಪ್ರಜ್ಞಾರೂಪದಿಂದ ಇಡೀ ಜಗತ್ತನ್ನೇ ವ್ಯಾಪಿಸಿಕೊಂಡಿರುವ ಶ್ರೀದೇವಿಯು ನಿಮಗೆ ಅಭಯ ಹಸ್ತ ನೀಡಿರುವಳು. ಆಕೆಯ ಕೃಪಾ ಕಟಾಕ್ಷ ದಿಂದ ನಿಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು.
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರು ಹಿರಿಯರು. ಹಾಗಾಗಿ ನೀವು ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯ ರೂಪಿಸಿಕೊಳ್ಳಿ. ಇದರಿಂದ ಹೆಚ್ಚಿನ ಆತಂಕದಿಂದ ದೂರ ಉಳಿಯಬಹುದು9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು. ಮದುವೆ, ಸಂತಾನಕೊರತೆ , ಶತ್ರುಕಾಟ, ಕುಜದೋಷ ಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp