For Quick Alerts
ALLOW NOTIFICATIONS  
For Daily Alerts

24-6-2019: ಸೋಮವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯ�
|

ಸೋಮವಾರದ ದಿನ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ.

ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ.ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ (24 june 2019)

ಮೇಷ (24 june 2019)

ಸರ್ರನೆ ಯಾರ ಬಗೆಗೂ ನಿಮ್ಮ ಪ್ರತಿಕ್ರಿಯೆ ತಿಳಿಸದಿರಿ. ನಿಮ್ಮ ಸುತ್ತಮುತ್ತಲು ಹಿತಶತ್ರುಗಳೇ ತುಂಬಿಕೊಂಡಿರುವರು. ನಿಮ್ಮ ನಿಧಾನ ನಡೆ ಮತ್ತು ಯೋಚಿಸಿ ಮಾತನಾಡುವ ಪರಿಯು ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಮಹತ್ತರ ವಿಷಯ ವೊಂದನ್ನು ತಿಳಿಯುವಿರಿ. ಎಲ್ಲದಕ್ಕೂ ಕೋಲೆ ಬಸವನಂತೆ ಒಪ್ಪಿಗೆ ಸೂಚಿಸದಿರಿ. ನನ್ನಿಂದ ಈ ಕೆಲಸ ಆಗುವುದಿಲ್ಲ ಎನ್ನುವ ದಿಟ್ಟ ನಿಲುವನ್ನು ತಿಳಿಸಿ. ಇಲ್ಲದೆ ಇದ್ದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾಗುವುದು. ತಂದೆಗೆ ಸಂಬಂಧಿಸಿದ ಸ್ಥಿರಾಸ್ತಿಯೊಂದರ ಬಗೆಗಿನ ಹೊಸ ಮಾಹಿತಿಗಳು ಕುಟುಂಬದ ಹಿರಿಯರೊಬ್ಬರಿಂದ ಲಭ್ಯವಾಗಲಿದೆ. ಇದು ನಿಮಗೆ ಪೂರಕವಾಗಿದ್ದು ಮುಂದಿನ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗುವುದು.

ಅದೃಷ್ಟ ಸಂಖ್ಯೆ:2

 ವೃಷಭ

ವೃಷಭ

ಹೋಟೆಲ್‌, ರತ್ನವ್ಯಾಪಾರಿಗಳು ಇಲ್ಲವೆ ಔಷಧ ವ್ಯವಹಾರ ದಲ್ಲಿರುವವರು ಸರ್ಕಾರಿ ಅಧಿಕಾರಿಗಳಿಂದ ದಿಢೀರನೆ ತಪಾಸಣೆಯನ್ನು ಎದುರಿಸಬೇಕಾಗುವುದು. ಸೂಕ್ತ ಲೆಕ್ಕಪತ್ರ ಮತ್ತು ಸ್ಥಳದ ಶುಚಿತ್ವದ ಕಡೆ ಗಮನ ಹರಿಸಿ. ಆದಾಗ್ಯೂ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.ಬಹುದಿನಗಳ ನಂತರ ಜೀವನದಲ್ಲಿ ನೆಮ್ಮದಿಯ ಮತ್ತು ಸಂತೋಷದ ದಿನಗಳನ್ನು ಕಾಣುವಿರಿ. ನಿಮ್ಮ ಮೇಲೆ ಇದ್ದ ಅಪವಾದಗಳಲ್ಲಿ ಹುರುಳಿಲ್ಲ ಎಂದು ಸಾಬೀತು ಆಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣ ವಾಗಿರುತ್ತದೆ. ಹರ್ಷಕ್ಕೆ ಕಾರಣವಾಗುವ ವಿಚಾರ ಬಲಯುತವಾಗಿದ್ದು ನಿಮ್ಮ ಬದುಕಿನ ದಾರಿಯನ್ನೆ ಬದಲಿಸಲು ಅವಕಾಶ ಕೂಡಿ ಬರುತ್ತದೆ. ಮನೆಗೆ ನೂತನ ಸದಸ್ಯನ ಆಗಮನದ ಸಂಭ್ರಮ ಗರಿಗೆದರುವುದು.ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಅರಸನನ್ನು ಕಂಡು ತನ್ನ ಪುರುಷನನ್ನು ಮರೆತ ಮಹಿಳೆಯಂತೆ ಯಾರೋ ನಿಮಗೆ ಸಹಾಯ ಮಾಡುವರೆಂದು ಭಾವಿಸಿ ಇದ್ದ ಅಲ್ಪಸ್ವಲ್ಪ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಮನೆಯ ಹಿರಿಯರ ವಿಚಾರಗಳಿಗೆ ಗೌರವ ಕೊಡಿ. ನಿಮ್ಮ ದಾರಿ ಸುಗಮವಾಗಿಲ್ಲ. ಬಸವಳಿಯುವಂತೆ ಕಲ್ಲುಮುಳ್ಳುಗಳೇ ದಾರಿ ತುಂಬಾ ಹರಡಿವೆ. ಆದಾಗ್ಯೂ ತಾಳ್ಮೆ ಮತ್ತು ಅನುಭವಗಳ ದೃಷ್ಟಿಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಲ್ಲ. ಉಸಿರು ಕಟ್ಟಿಸುವ ವಾತಾವರಣ ಇರುತ್ತದೆ. ಕುಲದೇವರ ಪ್ರಾರ್ಥನೆಯೊಂದಿಗೆ ಮನೆಯಿಂದ ಹೊರಡಿ. ಸಹೋದ್ಯೋಗಿಗಳೊಡನೆ ಅನಗತ್ಯ ಚರ್ಚೆ ಬೇಡ. ಕುಲದೇವರನ್ನು ಸ್ಮರಣೆ ಮಾಡಿ. ಹೆಚ್ಚಿನ ತೊಂದರೆ ಆಗುವುದಿಲ್ಲ. ಅದೃಷ್ಟ ಸಂಖ್ಯೆ:4

ಕಟಕ

ಕಟಕ

ಕೆಲವು ಅನಪೇಕ್ಷಿತ ಅತಿಥಿಗಳು ನಿಮ್ಮ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸಿ ಕಿರಿಕಿರಿಯನ್ನುಂಟು ಮಾಡುವ ಸಾಧ್ಯತೆ ಇರುವುದು. ಅವರನ್ನು ನಯವಾದ ಮಾತುಗಳಿಂದ ದೂರ ಇಡುವುದು ಒಳ್ಳೆಯದು.ನಿಮ್ಮ ಬಹು ಅಮೂಲ್ಯವಾದ ಕಡತವೊಂದನ್ನು ಅಪಹರಿಸಲು ಕೆಲವರು ಸಂಚು ಹೂಡಿರುವರು. ಹಾಗಾಗಿ ಅಂತಹ ಮುಖ್ಯವಾದ ಕಡತವನ್ನು ಜೋಪಾನವಾಗಿಟ್ಟು ಕೊಳ್ಳಿ. ಇಲ್ಲವೆ ಅದನ್ನು ಹಿರಿಯ ಅಧಿಕಾರಿಗೆ ಕೊಟ್ಟಿರುವೆ ಎಂದು ಅವರನ್ನು ಸಾಗಹಾಕಿ.ವಿರೋಧಿಗಳನ್ನು ಉದ್ರೇಕಗೊಳಿಸುವ ಕೆಲಸಕ್ಕೆ ಕೈಹಾಕದಿರಿ. ಒಂದು ಮಹತ್ತರ ಕಾರ್ಯ ಆಗಲು ಸ್ನೇಹಿತನ ಸಹಾಯವನ್ನು ಪಡೆಯಿರಿ. ಬರೀ ಒಣ ಮಾತಿನಿಂದ ಕಾರ್ಯವನ್ನು ನಿರ್ವಹಿಸಲು ಆಗುವುದಿಲ್ಲ.

ಅದೃಷ್ಟ ಸಂಖ್ಯೆ:6

ಸಿಂಹ

ಸಿಂಹ

ಖರ್ಚು ವೆಚ್ಚಗಳು ಹನುಮನ ಬಾಲದಂತೆ ಎದುರಾಗಲಿದೆ. ಅನವಶ್ಯಕವಾದದ್ದನ್ನು ಬಿಟ್ಟು, ಸದ್ಯದ ಪರಿಸ್ಥಿತಿಗೆ ಬೇಕಾಗಬಹುದಾದ ಪದಾರ್ಥಗಳನ್ನು ಮಾತ್ರ ಖರೀದಿ ಮಾಡಿ. ಹಣದ ಉಳಿತಾಯಕ್ಕಾಗಿ ಹಾಕಿದ ಶ್ರಮ ಅಸಫಲತೆ ಕಾಣುವುದು. ಯಾವುದೇ ಕಾರಣಕ್ಕೂ ಬೇರೊಬ್ಬರ ಜತೆಯಲ್ಲಿ ವಾಗ್ವಾದ ಮಾಡುವುದಕ್ಕೆ ಹೋಗಬೇಡಿ ಅದು ನಿಮಗೆ ಅಷ್ಟು ಶುಭವಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಸಹೋದರರೊಂದಿಗೆ ವೈಮನಸ್ಸು ಬೆಳೆಯಲು ಕಾರಣವಾಗುವುದು. ಅದನ್ನು ಮೂಲದಲ್ಲಿಯೇ ಕತ್ತರಿಸಿ ಹಾಕಿ.ಜನರ ಮನಸ್ಸು ಗೆಲ್ಲುವಂತಹ ಕೆಲಸವೊಂದನ್ನು ಮಾಡುವಿರಿ. ಹಾಗಾಗಿ ಆ ಕೆಲಸ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಖುಷಿ ತಂದುಕೊಡುವುದು. ಅದೃಷ್ಟ ಸಂಖ್ಯೆ:4

ಕನ್ಯಾ

ಕನ್ಯಾ

ಸದಾ ಚಿಂತೆಯಲ್ಲಿದ್ದು ಎಲ್ಲಾ ಕಳೆದುಕೊಂಡ ಭಾವ ಬೇಡ. ಧೈರ್ಯವಾಗಿ ಮುನ್ನುಗ್ಗಿ ಕಾರ‍್ಯ ಸಾಧಿಸಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ನೀವಾಡುವ ಮಾತಿನಿಂದ ವಿರಸ ಉಂಟಾಗುವ ಸಾಧ್ಯತೆ ಇದೆ. ತಾಳ್ಮೆ ಯಿಂದಿರಿ.ಆಂಜನೇಯ ಸ್ವಾಮಿಯನ್ನು ಆರಾಧಿಸಿ, ಆನಂದವನ್ನು ಹೊಂದಿ. ಸಂಜೆಯ ವೇಳೆಗೆ ಮನದ ಅಭಿಲಾಷೆಗಳಿಗೆ ಉತ್ತಮ ಸಿದ್ಧಿ ದೊರೆಯುವುದು. ಹಣದ ಸಂಕಷ್ಟವನ್ನು ಎದುರಿಸುವಿರಿ. ಮನೆಯ ಸದಸ್ಯರೊಡನೆ ಹೆಚ್ಚಿನ ಸಮಯವನ್ನು ಕಳೆಯಿರಿ. ಇದರಿಂದ ಉಭಯರಿಗೂ ಒಳಿತಾಗುವುದು. ಕರಿದ ಪದಾರ್ಥಗಳ ಅತಿಯಾದ ಸೇವನೆಯಿಂದ ದೂರವಿರಿ. ಶೀತಬಾಧೆ, ನಿಶ್ಯಕ್ತಿ ಕಾಡುವುದು.

ಅದೃಷ್ಟ ಸಂಖ್ಯೆ:7

ತುಲಾ

ತುಲಾ

ಧ್ವನಿಯಲ್ಲಿ ಗಾಂಭೀರ್ಯವಿರಲಿ. ವ್ಯಾಪಾರ ವ್ಯವಹಾರದ ವಿಷಯದಲ್ಲಿ ದುಡುಕಿ ನಿರ್ಧಾರ ತಳೆಯವುದು ಸೂಕ್ತವಲ್ಲ. ಆಕಾಶಕ್ಕೆ ಏಣಿ ಹಾಕದೆ ಹಾಸಿಗೆ ಇದ್ದಷ್ಟು ಕಾಲು ಚಾಚಿ. ಹಣದ ವ್ಯವಹಾರದಲ್ಲಿ ಕೈಹಿಡಿತ ಮಾಡುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿ ಹಲವು ಕಿರಿಕಿರಿಗಳನ್ನು ಎದುರಿಸುವಿರಿ. ಆ ಕಿರಿಕಿರಿಯನ್ನು ಮನೆಗೆ ತಂದು ಮನೆಯವರ ಮೇಲೆ ರೇಗಾಡದಿರಿ. ಮನಸ್ಸಿನ ಶಾಂತತೆಗಾಗಿ ಶಿವ ಪಂಚಾಕ್ಷ ರಿ ಮಂತ್ರವನ್ನು ಜಪಿಸಿ. ಬಡವರಿಗೆ ಆಹಾರ ನೀಡಿ.ಹೃದಯ ವೈಶಾಲ್ಯತೆ ಇರುವ ಮನು ಜನಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ಈ ಹಿಂದೆ ಆಗದೆ ಇದ್ದ ಕೆಲಸವು ದೈವಾನು ಕೂಲತೆಯಿಂದ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ಸದ್ಯದ ಗ್ರಹಸ್ಥಿತಿಗಳು ಉತ್ತಮವಿಲ್ಲ. ಹಗ್ಗವೆಂದು ತುಳಿದದ್ದು ಹಾವಾಗಿ ಕಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಹತ್ತರ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಆರೋಗ್ಯದ ಕಡೆ ಗಮನ ಹರಿಸಿ. ಭಗವಂತನು ನಿಮ್ಮ ಜೀವನದಲ್ಲಿ ಬಯಸಿ ದ್ದೆಲ್ಲವನ್ನು ನೀಡುತ್ತಿರುವನು. ಹಾಗಾಗಿ ಆತನ ಕಾರುಣ್ಯವನ್ನು ಕೊಂಡಾಡುತ್ತ ವಿನೀತ ಭಾವದಿಂದ ಇರಿ. ಒಂದು ವೇಳೆ ಅಹಂಕಾರ ತೋರಿದಲ್ಲಿ ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ಆಗುವುದು.ಮಾತಿನ ಭರದಲ್ಲಿ ಆಡಿದ ಒಂದು ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಹಾಗಾಗಿ ಅದನ್ನು ಅನ್ಯರು ಗುರುತಿಸುವುದಕ್ಕಿಂತ ಮುಂಚೆಯೆ ತಿದ್ದಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಗೌರವ ಹೆಚ್ಚಾಗುವುದು.ಅದೃಷ್ಟ ಸಂಖ್ಯೆ:9

ಧನುಸ್ಸು

ಧನುಸ್ಸು

ಬರೀ ಪೊಳ್ಳುಮಾತಿನಿಂದ ನಿಮ್ಮನ್ನು ಮರಳು ಮಾಡುವ ಜನರಿಂದ ಸಾಧ್ಯವಾದಷ್ಟು ದೂರವಿರಿ. ಇಲ್ಲವೆ ಸುಮ್ಮನೆ ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡುವರು. ಸಾಧ್ಯವಾದರೆ ಯಾವುದಾದರೂ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸ ಮಾಡಿ. ನಿಮ್ಮ ಮೇಲಿನ ಅಭಿಮಾನದಿಂದ ನಿಮಗೆ ಪರಿಚಯ ಇಲ್ಲದವರು ಸಹಾಯ ಮಾಡುವ ಸಾಧ್ಯತೆ ಇರುವುದು. ಹಾಗಾಗಿ ಸಂಬಂಧವಿರದ ವ್ಯಕ್ತಿಗಳೆಂದು ತಾತ್ಸಾರ ಬೇಡ. ಮಕ್ಕಳ ಪ್ರಗತಿಯು ನಿಮಗೆ ಸಂತಸವನ್ನು ನೀಡುವುದು.ಹಳೆಯ ವಸ್ತುಗಳ ವಿಲೇವಾರಿ ಸಂದರ್ಭದಲ್ಲಿ ಅಮೂಲ್ಯವಾದ ದಾಖಲೆಯ ಪತ್ರಗಳನ್ನು ಗುಜರಿಗೆ ಹಾಕದಿರಿ. ಅವು ತತ್ಕಾಲದಲ್ಲಿ ನಿಮಗೆ ಉಪಯೋಗಕ್ಕೆ ಬರದಿದ್ದರೂ ಮುಂದೊಂದು ದಿನ ನಿಮ್ಮ ರಕ್ಷಣೆ ಮಾಡುವವು.ಅದೃಷ್ಟ ಸಂಖ್ಯೆ:8

ಮಕರ

ಮಕರ

ನಿಮ್ಮ ಕಾರ್ಯ ಯೋಜನೆಗಳು ಉತ್ತಮವಾಗಿದ್ದರೂ ಈ ಬಗ್ಗೆ ಸಂಗಾತಿಯ ಸಂಗಡ ಚರ್ಚಿಸಿ ಮುಂದುವರಿಯುವುದು ಒಳ್ಳೆಯದು. ಕೆಲವು ವಿಷಯಗಳಲ್ಲಿ ಗೊಂದಲ ಮೂಡುವುದು. ಹಿರಿಯರ ಆಶೀರ್ವಾದ ಮತ್ತು ಸಹಕಾರದಿಂದ ಒಳಿತಾಗುವುದು.

ನೀವು ಮಾಡುತ್ತಿರುವ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುವುದು ಎಂದು ಮನಸ್ಸಿನಲ್ಲಿ ಎಣಿಸಿದ್ದೀರಿ. ಆದರೆ ಅದು ಕೇವಲ ನಿಮ್ಮ ಕರ್ತವ್ಯ ಅದರಲ್ಲಿ ಹೆಗ್ಗಳಿಕೆ ಏನಿದೆ ಎಂಬ ಮಾತುಗಳ ಮೂಲಕ ಕೆಲವರು ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವರು.ಕುಟುಂಬದ ವಿಚಾರ ಇಲ್ಲವೆ ಸಾರ್ವಜನಿಕವಾಗಿ ಹಮ್ಮಿಕೊಳ್ಳುವ ಕೆಲಸ ಕಾರ್ಯಗಳ ಬಗ್ಗೆ ಅನಗತ್ಯ ಒತ್ತಡವನ್ನು ಎದುರಿಸುತ್ತಿರುವಿರಿ. ನಿಮ್ಮ ಸಹೋದ್ಯೋಗಿಗಳಿಗೆ ಕೆಲಸವನ್ನು ಆದ್ಯತೆಯ ಮೇಲೆ ಹಂಚಿ ನಿಶ್ಚಿಂತರಾಗಿ.ಅದೃಷ್ಟ ಸಂಖ್ಯೆ:6

ಕುಂಭ

ಕುಂಭ

ದೂರಾಲೋಚನೆಯನ್ನು ಅವಶ್ಯ ಮಾಡಬೇಕಿದೆ. ಸಂತೆ ಹೊತ್ತಿಗೆ ಮೂರು ಮೊಳ ನೇಯ್ದರಾಯಿತು ಎಂದು ಉದಾಸೀನ ಮಾಡದಿರಿ. ಈ ದಿನ ಉತ್ತಮ ಫಲಗಳನ್ನು ಹೊಂದಬಹುದಾಗಿದೆ. ವಿಶೇಷವಾದ ಗಣ್ಯ ವ್ಯಕ್ತಿಯೊಬ್ಬರಿಂದ ಅಪರೂಪದ ಸಹಾಯವೊಂದು ದೊರೆಯಲಿದೆ. ಇದರಿಂದ ಮುಂದಿನ ಜೀವನ ಸುಖಮಯ ವಾಗಿರುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಜಾಣತನ ದಿಂದಲೇ ಬದುಕನ್ನು ಗೆಲ್ಲುವುದು ಸೂಕ್ತ. ಆದರೆ ಆ ವಿಷಯದ ಬಗ್ಗೆ ಅತಿ ವಿನಯತೆಯನ್ನು ತೊರದಿರುವುದು ಒಳ್ಳೆಯದು. ಮಾತಿನಲ್ಲಿ ಮತ್ತು ವ್ಯವಹಾರ ಸಂಬಂಧ ಗುರು ಹಿರಿಯರ ಅಶೀರ್ವಾದ ಪಡೆಯಿರಿ.ಅದೃಷ್ಟ ಸಂಖ್ಯೆ:2

ಮೀನ

ಮೀನ

ಅವರಿವರ ಹುಸಿ ಮಾತಿಗೆ ಬೆಲೆ ಕೊಡದಿರಿ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮನ್ನು ಕುರಿತು ಕೆಲವರು ಸಕಾರಾತ್ಮಕವಾಗಿ ಯೋಚಿಸುತ್ತಾ ಬೆಂಬಲ ನೀಡುವರು. ಕಷ್ಟದ ಸಮಯದಲ್ಲಿ ಕುಲದೇವರನ್ನು ಸ್ಮರಿಸಿಕೊಳ್ಳಿ.ನಿಮ್ಮ ಪ್ರತಿಭೆ ಹಾಗೂ ಮುತ್ಸದ್ಧಿತನಗಳಿಂದ ಹೊಸ ಕೆಲಸಕ್ಕೆ ಅವಕಾಶ ಕೂಡಿಬರುವ ಸಾಧ್ಯತೆ ಇರುವುದು. ಮೇಲಧಿಕಾರಿಗಳು ನಿಮ್ಮ ಕಾಯಕ ನಿಷ್ಠೆಯನ್ನು ಬಹುವಾಗಿ ಕೊಂಡಾಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. 'ಆರೋಗ್ಯವೇ ಭಾಗ್ಯ'. ನಿಮ್ಮ ಆರೋಗ್ಯ ಇಲ್ಲವೆ ಕುಟುಂಬ ಸದಸ್ಯರ ಆರೋಗ್ಯದ ಕಡೆ ಗಮನ ಹರಿಸಬೇಕಾಗುವುದು. ಮಹತ್ತರ ಕೆಲಸ ಕಾರ್ಯಗಳನ್ನು ಮುಂದೂಡುವುದು ಒಳಿತು. ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು.ಮದುವೆ, ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ,ಮನೆಕಟ್ಟುವ ಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ,ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope 24 June 2019

Know what astrology and the planets have in store for you today. Choose your zodiac sign and read the details..
Story first published: Monday, June 24, 2019, 9:52 [IST]
X
Desktop Bottom Promotion