Just In
- 3 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 4 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
20-2-2019- ಬುಧವಾರದ ದಿನ ಭವಿಷ್ಯ
ಮಹಾವಿಷ್ಣು ವಿಷ್ಣುವಿನ ಒಂದು ಅಂಶ, ಮಾನವ ಗ್ರಹಿಕೆಗೆ ಮೀರಿದ ಮತ್ತು ಎಲ್ಲ ಗುಣಲಕ್ಷಣಗಳನ್ನು ಮೀರಿದ ಪರಮ ರೂಪ. ವೈಷ್ಣವ ಪಂಥದ ಒಂದು ಪರಂಪರೆಯಾದ ಗೌಡೀಯ ವೈಷ್ಣವ ಪಂಥದಲ್ಲಿ, ಸಾತ್ವತ ತಂತ್ರವು ವಿಷ್ಣುವಿನ ಮೂರು ಭಿನ್ನ ರೂಪಗಳನ್ನು ವಿವರಿಸುತ್ತದೆ: ಮಹಾವಿಷ್ಣು, ಗರ್ಭೋದಕಷಾಯಿ ವಿಷ್ಣು ಮತ್ತು ಕ್ಷೀರೋದಕಷಾಯಿ ವಿಷ್ಣು. ಮಹಾವಿಷ್ಣು ಪದವು ಬ್ರಹ್ಮನ್ಪದವನ್ನು ಹೋಲುತ್ತದೆ, ಮತ್ತು ದೇವರ ಪರಮೋಚ್ಚ ವ್ಯಕ್ತಿತ್ವವಾಗಿದೆ. ಇದರರ್ಥ ಪರಮ ಸತ್ಯವನ್ನು ಮೊದಲು ಬ್ರಹ್ಮನ್ ಆಗಿ (ನಿರಾಕಾರ ಅಂಶ), ನಂತರ ಪರಮಾತ್ಮವಾಗಿ (ವ್ಯಕ್ತಿಗತ ಅಂಶ) ಮತ್ತು ಅಂತಿಮವಾಗಿ ಭಗವಾನ್ (ಮೈದಾಳಿದ ಪರಿಪೂರ್ಣತೆ) ಆಗಿ ಸಿದ್ಧಿ ಮಾಡಿಕೊಳ್ಳಲಾಗುತ್ತದೆ.
ಹಾಗಾಗಿ ಭಕ್ತಿ ಭಗವಾನ್ ಕೃಷ್ಣನಿಗೆ (ವಿಷ್ಣುವಿನ ಅವತಾರ) ಹೋಗುತ್ತದೆ. ಈ ರೀತಿಯಲ್ಲಿ, ಭಕ್ತಿಯು ಯೋಗವನ್ನೂ ಮೀರಿಸುತ್ತದೆ ಮತ್ತು ಇದರ ಗುರಿ ಪರಮಾತ್ಮವಾಗಿದೆ. ಮಹಾವಿಷ್ಣುವು ಎಲ್ಲ ಭೌತಿಕ ಬ್ರಹ್ಮಾಂಡಗಳಲ್ಲಿ ಎಲ್ಲ ಜೀವಾತ್ಮಗಳ ಪರಮಾತ್ಮವಾಗಿದೆ. ಹಾಗಾಗಿ ಶಿವ, ಪರಾಶಕ್ತಿ, ಬ್ರಹ್ಮಸೇರಿದಂತೆ ಎಲ್ಲ ದೇವತೆಗಳು ಮಹಾವಿಷ್ಣು ವಿಸ್ತರಣೆಯ ಭಾಗವೆಂದು ಪರಿಗಣಿಸಲಾಗಿದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807
ಮೇಷ (20 ಫೆಬ್ರವರಿ 2019)
ನೀವು ನಿರ್ಭಯವಾಗಿ ನಿಮ್ಮದೇ ಆದ ಅಧಿಕಾರವನ್ನು ಚಲಾಯಿಸಲು ಸ್ವತಂತ್ರರಿದ್ದೀರಿ. ಹಾಗಾಗಿ ವಿರೋಧಿಗಳ ಅಥವಾ ಕುಹಕಿಗಳ ಮಾತಿಗೆ ಬೆಲೆ ನೀಡದಿರಿ. ಆನೆ ನಡೆದದ್ದೇ ದಾರಿ ಎನ್ನುವಂತೆ ಧೈರ್ಯವಾಗಿ ನಿಮ್ಮ ಪಥದಲ್ಲಿ ಸಾಗಿ. ಯಶಸ್ಸನ್ನು ಹೊಂದುವಿರಿ. ಹತ್ತಿರದವರೊಬ್ಬರು ನಿಮ್ಮನ್ನು ಆರಾಧಿಸಿ, ಹೊಗಳಿ ಸನ್ಮಾನಿಸುವ ಸಾಧ್ಯತೆ ಇದೆ ಮತ್ತು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಲಿದ್ದಾರೆ. ಬಹಳ ದಿನಗಳ ನಂತರ ಬಂಧುಬಾಂಧವರು ಒಂದೆಡೆ ಸೇರಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯೂ ಇದೆ.9845743807 ಅದೃಷ್ಟ ಸಂಖ್ಯೆ:2
ವೃಷಭ
ನಿಮ್ಮ ಜ್ಞಾನ ಸಂಪಾದನೆಯ ಮಾರ್ಗವು ಉತ್ತಮವಾಗಿದ್ದು ಮುಖದಲ್ಲಿ ತೇಜಸ್ಸು ತನ್ನಿಂದತಾನೆ ಪ್ರಕಾಶವಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸಿನ ದಾರಿ ತೆರೆದುಕೊಳ್ಳವುದು. ಮಾತಿನ ಮೇಲೆ ಹಿಡಿತವಿದ್ದಲ್ಲಿ ಒಳಿತಾಗುವುದು. ಕೂಡಿಟ್ಟ ಹಣ ಅಪವ್ಯಯವಾಗುವುದನ್ನು ಕಂಡು ಸುಮ್ಮನಿರಬೇಕಾದ ಪರಿಸ್ಥಿತಿ ನಿಮ್ಮದಾಗುವುದು. ಹಣ ಖರ್ಚಾಗುವುದನ್ನು ತಡೆಗಟ್ಟಲು ಪ್ರಯತ್ನ ಮಾಡುವಿರಿ. ಆದರೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ.9845743807 ಅದೃಷ್ಟ ಸಂಖ್ಯೆ:1
ಮಿಥುನ
ಮಹತ್ವದ ಸಾತ್ವಿಕ ಶಕ್ತಿಯೊಂದು ನಿಮ್ಮಲ್ಲಿ ಪ್ರವೇಶಿಸಿ ಮಹತ್ತರ ಕಾರ್ಯವನ್ನು ಸುಲಭವಾಗಿ ಮಾಡಲು ಪ್ರೇರೇಪಿಸುವುದು. ಮಗನ ಮದುವೆಯನ್ನು ವಿದ್ಯುಕ್ತವಾಗಿ ಮಾಡುವ ಕನಸು ನನಸಾಗುವುದು. ಇದರಿಂದ ಬಂಧುಬಾಂಧವರಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಅನ್ಯೋನ್ಯತೆಯನ್ನು ಸಾಧಿಸಿ ಕುಟುಂಬದಲ್ಲಿ ಸಂತೋಷವನ್ನು ನಿರ್ಮಿಸುವಿರಿ. ನಿಮ್ಮ ಈ ಗುಣವೇ ಎಲ್ಲೆಡೆ ನಿಮಗೆ ಗೌರವ ತಂದುಕೊಡುವುದು. ಹಲವು ಪ್ರಮುಖ ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.9845743807 ಅದೃಷ್ಟ ಸಂಖ್ಯೆ:2
ಕಟಕ
ಅನವರತವಾದ ಸಿದ್ಧಿಯು ದೊರೆಯುವುದು ಮತ್ತು ಮುಂದಿನ ಏಳಿಗೆಗಾಗಿ ಹೊಸದಾದ ಯೋಜನೆಗಳನ್ನು ಕ್ರಮಬದ್ಧವಾಗಿ ಆಯೋಜಿಸಿಕೊಂಡಲ್ಲಿ ಗೆಲುವನ್ನು ಸಾಧಿಸುವಿರಿ. ಗುರು ಹಿರಿಯರ ಎಚ್ಚರಿಕೆಯ ಮಾತುಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.ಅನಿರೀಕ್ಷಿತ ಒತ್ತಡಗಳು ದುತ್ತನೆ ಮೇಲೆದ್ದು ಬರಲು ಹವಣಿಸುತ್ತಿವೆ. ಈ ಬಗ್ಗೆ ಹುಷಾರಾಗಿರಿ. ನೀವು ನಂಬಿದ ಗುರುವಿನ ಮೊರೆ ಹೋಗಿ ಮತ್ತು ಯಾವುದೇ ಗುರು ಮಂದಿರಕ್ಕೆ ಹೋಗಿ ಗುರುಗಳ ದರ್ಶನ ಮಾಡಿಕೊಂಡು ಬನ್ನಿ.9845743807 ಅದೃಷ್ಟ ಸಂಖ್ಯೆ:4
ಸಿಂಹ
ಜನ್ಮಶನಿಯು ಹೇಗೆ ತೊಂದರೆಗಳನ್ನು ಉಂಟು ಮಾಡುವನು ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ ನೀವು ನಿಮ್ಮ ಎಚ್ಚರಿಕೆಯಲ್ಲಿರುವುದು ಒಳ್ಳೆಯದು. ಆದಷ್ಟು ಹನುಮಾನ್ ಚಾಲೀಸ್ ಪಠಣ ಮಾಡುತ್ತಿರಿ. ಹಣಕಾಸಿನ ವ್ಯವಹಾರವನ್ನು ಮುಂದೂಡುವುದು ಒಳ್ಳೆಯದು.ಕೃಷಿ ಸಂಬಂಧ ಮತ್ತು ಭೂಸಂಬಂಧ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುವುದು. ನಿಮಗೆ ಬರಬೇಕಾಗಿದ್ದ ದೊಡ್ಡ ಮೊತ್ತದ ಹಣವು ನಿಮ್ಮ ಬ್ಯಾಂಕಿಗೆ ಜಮಾ ಆಗುವ ಸಂದರ್ಭ ಹೇರಳವಾಗಿರುವುದು. ಕುಲದೇವರನ್ನು ಪ್ರಾರ್ಥನೆ ಮಾಡಿ.9845743807 ಅದೃಷ್ಟ ಸಂಖ್ಯೆ:6
ಕನ್ಯಾ
ಯಶಸ್ಸಿಗಾಗಿ ಮಾಡಿದ ಸಂಕಲ್ಪದಿಂದಲೇ ಅರ್ಧ ಗೆಲುವನ್ನು ಸಾಧಿಸಬಲ್ಲಿರಿ. ಇನ್ನರ್ಧ ಕೆಲಸವು ದೇವರ ಕೃಪೆಯಿಂದ ಮತ್ತು ನಿಮ್ಮ ಮೇಲಧಿಕಾರಿಗಳ ಜಯದಿಂದ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.ನಿಮ್ಮ ಅತ್ಯಂತ ಸಮೀಪದವರೇ ವಿನಾಕಾರಣ ಜಗಳವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಆದರೆ ಗುರುವಿನ ಪೂರ್ಣ ಅನುಗ್ರಹ ನಿಮ್ಮ ರಾಶಿಯ ಮೇಲೆ ಇರುವುದರಿಂದ ಚಿಂತಿಸುವ ಅಗತ್ಯವಿಲ್ಲ. ಎಲ್ಲವೂ ಒಳಿತಾಗುವುದು.9845743807 ಅದೃಷ್ಟ ಸಂಖ್ಯೆ:4
ತುಲಾ
ನಿಮ್ಮ ಇತಿ ಮಿತಿ ಅರಿತು ಕಾರ್ಯ ಪ್ರವೃತ್ತರಾಗಿ. ಸಮಾಜವನ್ನು ತಿದ್ದುವ ಇಲ್ಲದ ಉಸಾಬರಿ ತೆಗೆದುಕೊಂಡು ಅವಮಾನಕ್ಕೆ ಗುರಿಯಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದ್ದು ಈ ಬಗ್ಗೆ ಜಾಗ್ರತೆ ಇರಲಿ.ನಿಮ್ಮ ಬದುಕಿನ ಕನಸೊಂದು ಕೆಲವು ರಾಜಿಗಳೊಡನೆ ಈಡೇರಲು ಸಾಧ್ಯವಿದೆ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಕೆಲವರು ನಿಮ್ಮಿಂದ ಹಣದ ಪ್ರತಿಫಲಾಪೇಕ್ಷೆ ಬಯಸುವರು. ಅವರಿಗೆ ಸುತಾರಾಂ ಹಣ ನೀಡದಿರಿ.9845743807 ಅದೃಷ್ಟ ಸಂಖ್ಯೆ:2
ವೃಶ್ಚಿಕ
ಅತ್ಯಂತ ಮೇಧಾವಿ ಆದ ನೀವು ಕೆಲವೊಮ್ಮೆ ನಿಮ್ಮ ಹಠಮಾರಿತನದಿಂದ ಬಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳುವಿರಿ. ಬಹು ದೊಡ್ಡ ಬಂಡವಾಳದೊಂದಿಗಿನ ವ್ಯವಹಾರ ವಹಿವಾಟುಗಳ ಬಗ್ಗೆ ಸಂಯಮ ಇರಲಿ.ಹಲವು ತಪ್ಪುಗಳು ನಿಮ್ಮನ್ನು ಪಾಪಪ್ರಜ್ಞೆಯಲ್ಲಿ ಇರಿಸುವವು. ಈ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ. ದೈವಕೃಪೆ ಇರುವುದರಿಂದ ಮಾನಹಾನಿ ಪ್ರಸಂಗ ಬರುವುದಿಲ್ಲ.9845743807 ಅದೃಷ್ಟ ಸಂಖ್ಯೆ:8
ಧನುಸ್ಸು
ಅನವಶ್ಯಕ ಕೆಲಸ ಮಾಡಲು ಮುಂದಾಗುವಿರಿ. ಇದರಿಂದ ಮನೆಯ ಸದಸ್ಯರಿಂದಲೇ ಟೀಕೆಗೆ ಒಳಗಾಗುವಿರಿ. ಕೆಲವು ವೇಳೆ ಅತಿ ಸಣ್ಣತನ ತೋರಿ ಅಪಹಾಸ್ಯಕ್ಕೆ ಈಡಾಗುವಿರಿ. ನಿಮ್ಮ ವಿದ್ಯೆ, ವಯಸ್ಸಿಗೆ ತಕ್ಕಂತೆ ಗಂಭೀರವಾಗಿರಿ. ಹಿರಿಯರ ಬಳಿ ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಿ. ಅವರಿಂದ ನಿಮಗೆ ಸೂಕ್ತ ಪರಿಹಾರ ಸಿಗುವುದು. ಮಗನ ನೌಕರಿ ವಿಷಯದಲ್ಲಿ ಒಂದು ಶುಭವಾರ್ತೆ ಕೇಳುವಿರಿ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.9845743807 ಅದೃಷ್ಟ ಸಂಖ್ಯೆ:5
ಮಕರ
ಸಿಟ್ಟು ಮಾನವನ ಮೊದಲ ಶತ್ರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಆದಷ್ಟು ತಾಳ್ಮೆಯನ್ನು ತಮ್ಮ ಅಸ್ತ್ರವನ್ನಾಗಿ ಉಪಯೋಗಿಸಿ ಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ಕೆಲವು ನಿರ್ಣಯಗಳು ನಿಮ್ಮನ್ನು ಪೇಚಿಗೆ ಸಿಲುಕಿಸುವವು. ಯಾವ ದಿಕ್ಕಿಗೆ ಹೋದರೂ ನೆಮ್ಮದಿ ಇಲ್ಲ. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು ಎನ್ನುವಂತಾಗಿದೆ. ಆದಷ್ಟು ತಾಳ್ಮೆಯಿಂದ ಇರಿ. ಧೈರ್ಯ ಕಳೆದುಕೊಳ್ಳಬೇಡಿ. ಕತ್ತಲು ಕಳೆದ ಮೇಲೆ ಉಜ್ವಲ ಬೆಳಗಿನ ಆಗಮನ ಆಗಲೇಬೇಕು.9845743807 ಅದೃಷ್ಟ ಸಂಖ್ಯೆ:8
ಕುಂಭ
ಜನ್ಮಸ್ತ ಶನಿ ನಿಮ್ಮ ವಿಚಾರಧಾರೆಗಳಲ್ಲಿ ನಿಧಾನ ತರುವನು. ನಿಧಾನವೇ ಪ್ರಧಾನ ಎಂಬ ಮಾತಿದೆ. ಅಂತೆಯೇ ಒಂದು ಬಾರಿ ಅವಘಡದಿಂದ ಪಾರಾಗುವಿರಿ. ಅದಕ್ಕೆ ಕಾರಣ ನಿಮ್ಮ ನಿಧಾನ ಪ್ರವೃತ್ತಿಯೇ ಆಗಿರುತ್ತದೆ. ಹಾಗಾಗಿ ಅವಸರಿಸಬೇಡಿ. ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಗೊಣಗುವಿರಿ. ನಿಮ್ಮ ಹಿರಿಯರು ಕೂಡಾ ನಿಮ್ಮ ಬಗ್ಗೆ ಇದೇ ಮಾತನ್ನು ಆಡುವರು. ಕಾಲಗರ್ಭದಲ್ಲಿ ಇತಿಹಾಸ ಪುನಾರಾವರ್ತನೆ ಆಗುತ್ತದೆ. ಅದಕ್ಕಾಗಿ ಬೇಸರ ಮಾಡಿಕೊಳ್ಳದಿರಿ. ಪ್ರೀತಿಯಿಂದ ಮಕ್ಕಳನ್ನು ತಿದ್ದಿ.9845743807 ಅದೃಷ್ಟ ಸಂಖ್ಯೆ:2
ಮೀನ
ಯಾರ ವ್ಯಕ್ತಿತ್ವವನ್ನೂ ನಿರ್ಣಯಿಸಲು ಸಾಧ್ಯವಿಲ್ಲ. ಜಗತ್ತಿನ ಪ್ರತಿ ವಸ್ತು ತನ್ನದೇ ಆದ ವೈಶಿಷ್ಟತೆಯಿಂದ ಕೂಡಿರುತ್ತದೆ. ಜನರಲ್ಲಿನ ಉತ್ತಮ ಅಂಶವನ್ನು ಮಾತ್ರ ಗುರುತಿಸಿ ನಡೆದಲ್ಲಿ ನಿಮಗೆ ಅನುಕೂಲವಾಗುವುದು. ಪ್ರತಿರೋಧಗಳ ಮಧ್ಯೆಯೂ ಗೆಲ್ಲುವ ಅವಕಾಶ ನಿಮಗೆ ಲಭಿಸುವುದು. ಗುರು ಹಿರಿಯರ ಆಶೀರ್ವಾದದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆರ್ಥಿಕ ಸ್ಥಿತಿ ಸಾಧಾರಣದಿಂದ ಉತ್ತಮ ಮಟ್ಟಕ್ಕೆ ಹೋಗುವುದು.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp