Just In
Don't Miss
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
19-2-2019: ಮಂಗಳವಾರದ ದಿನ ಭವಿಷ್ಯ
ಜೀವನದಲ್ಲಿ ನಾವು ಸೋಲುವುದು ಸಣ್ಣ ಪುಟ್ಟ ತಪ್ಪುಗಳಿಂದ ಹೊರತು ದೊಡ್ಡ ತಪ್ಪುಗಳಿಂದ ಅಲ್ಲ. ಉದಾಹರಣೆಗೆ ನಾವು ನಡೆದು ಸಾಗುವಾಗ ಒಂದು ಸಣ್ಣ ಕಲ್ಲು ತಾಗಿದಾಗ ಎಡವಿ ಬೀಳುತ್ತೇವೆಯೇ ಹೊರತು, ದೊಡ್ಡ ಬಂಡೆಗೆ ಎಡವಿ ಬೀಳುವುದಿಲ್ಲ... ಅದಕ್ಕಾಗಿಯೇ ನಮ್ಮ ನಡವಳಿಕೆಯಲ್ಲಿ ಸೂಕ್ಷ್ಮತೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ನಾವು ಮಾಡುವ ಕೆಲಸಗಳಲ್ಲಿ ಅಥವಾ ತೀರ್ಮಾನಗಳಲ್ಲಿ ಸಣ್ಣ ಪುಟ್ಟ ತಪ್ಪುಗಳಿದ್ದಾಗ, ಒಂದು ದೊಡ್ಡ ಸಮಸ್ಯೆಗಳು ಅಥವಾ ಕಷ್ಟಗಳು ಎದುರಾಗಬಹುದು. ಹಾಗಾಗಿ ನಾವು ಮಾತನಾಡುವಾಗ ಅಥವಾ ಕೆಲಸ ಮಾಡುವಾಗ ಒಂದು ಸಣ್ಣ ತಪ್ಪು ಅಥವಾ ಸಣ್ಣ ವಿಚಾರ ಎಂದು ಯಾವುದನ್ನೂ ನಿರ್ಲಕ್ಷಿಸಬಾರದು. ಜೀವನದಲ್ಲಿ ಸಣ್ಣ ಸಣ್ಣ ವಿಚಾರಗಳು ಸಹ ಮಹತ್ತರವಾದದ್ದೇ ಆಗಿರುತ್ತದೆ.
ಮಂಗಳವಾರವಾದ ಇಂದು ಗೌರಿ ದೇವಿಗೆ ಪ್ರಶಸ್ತವಾದ ದಿನ. ಮಾಡುವ ಕೆಲಸದ ಮೊದಲು ಮಂಗಳ ಗೌರಿಯನ್ನು ನೆನೆದು ಕೆಲಸವನ್ನು ಪ್ರಾರಂಭಿಸಿ. ನಿಮ್ಮ ಇಂದಿನ ಕೆಲಸ ಕಾರ್ಯಗಳಲ್ಲಿ ರಾಶಿ ಚಕ್ರಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ರಾಶಿ ಭವಿಷ್ಯವನ್ನು ನೋಡಿ ಅರಿಯಿರಿ....
ಮೇಷ(19 ಫೆಬ್ರವರಿ 2019)
ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವವು. ಅಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆಯುವಿರಿ. ಮನಸ್ಸಿಗೆ ಮುದ ನೀಡುವ ದಿನ. ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿವೆ.ಸ್ನೇಹಿತರ ಮನೆಯ ಸಡಗರದಲ್ಲಿ ಪಾಲ್ಗೊಳ್ಳುವಿರಿ. ಮೃಷ್ಟಾನ್ನ ಭೋಜನ ಸವಿಯುವಿರಿ. ನಿಮ್ಮ ಇಷ್ಟದಂತೆ ಕೆಲಸ ಕಾರ್ಯಗಳು ನಡೆಯುವವು. ನೂತನ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಕಾಲವಾಗಿದೆ.ಕೆಲಸದಲ್ಲಿ ಬಂಧುಬಾಂಧವರ ಹಾಗೂ ಸ್ನೇಹಿತರ ಸಹಕಾರ ದೊರೆಯುವುದು. ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡುವಿರಿ. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳುವಿರಿ.9845743807 ಅದೃಷ್ಟ ಸಂಖ್ಯೆ:2
ವೃಷಭ
ವಿವಾಹ ಯೋಗ್ಯರಿಗೆ ಕಂಕಣಬಲ ಕೂಡಿಬರುವುದು. ಮದುವೆ ಮಾತುಕತೆ ಫಲಪ್ರದವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಸಂಗಾತಿಯ ತಮಾಷೆ ಮಾತಿಗೆ ಕೋಪಗೊಳ್ಳುವುದು ತರವಲ್ಲ. ಮಕ್ಕಳ ಪ್ರಗತಿ ಸಂತಸ ನೀಡುವುದು.ವ್ಯಾಪಾರ ವ್ಯವಹಾರದಲ್ಲಿ ನಿಗದಿತ ಲಾಭಾಂಶ ಕಂಡುಬರುವುದು. ಹಣಕಾಸಿನ ನೆರವು ಕೇಳಿಕೊಂಡು ನಿಮ್ಮ ಸ್ನೇಹಿತರು ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.ವಾಹನ, ನಿವೇಶನ ಖರೀದಿಸುವವರಿಗೆ ಸಕಾಲ. ಒಂದು ಮಹತ್ತರ ಕಾರ್ಯದ ಒಪ್ಪಂದಕ್ಕೆ ಸಹಿ ಹಾಕುವಿರಿ. ಕೆಲಸ ಕಾರ್ಯಗಳು ದೈವಕೃಪೆಯಿಂದಾಗಿ ಪೂರ್ಣಗೊಳ್ಳುವವು. ಸಣ್ಣವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ.9845743807 ಅದೃಷ್ಟ ಸಂಖ್ಯೆ:1
ಮಿಥುನ
ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಸದಾ ಹೊರಜಗತ್ತಿನ ಚಿಂತೆ ಮಾಡುವ ನೀವು ಕೌಟುಂಬಿಕ ಸದಸ್ಯರ ಬೇಕು ಬೇಡಗಳಿಗೆ ಸ್ಪಂದಿಸುವುದು ಉತ್ತಮ. ನಿಮ್ಮ ಒಳ್ಳೆಯ ಕಾರ್ಯಗಳಿಗೆ ಕುಟುಂಬ ಸದಸ್ಯರ ಬೆಂಬಲ ದೊರೆಯುವುದು.ಒಳ್ಳೆಯ ಕಾರ್ಯಗಳಿಗೆ ಅನೇಕ ವಿಘ್ನಗಳು ತಲೆದೋರುವವು. ಹಿರಿಯರ ಮಾರ್ಗದರ್ಶನದಂತೆ ನಡೆದರೆ ಒಳಿತಾಗುವುದು. ಆಂಜನೇಯ ಸ್ವಾಮಿಯ ಜಪ ಮಾಡಿ. ಆರೋಗ್ಯದ ಕಡೆ ಗಮನ ಹರಿಸಿ.ಲೇವಾದೇವಿ ವ್ಯವಹಾರದಲ್ಲಿ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿಯ ಕಾಲವಾಗಿದ್ದು, ನಿಮ್ಮ ಕನಸು ನನಸಾಗುವುದು. ಬಾಕಿ ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಇದರಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯುವುದು.9845743807 ಅದೃಷ್ಟ ಸಂಖ್ಯೆ:2
ಕಟಕ
ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಕೆಲಸ ಕಾರ್ಯಗಳು ಸುಗಮವಾಗಿ ಆಗಲು ಹಿರಿಯರ ಮಾರ್ಗದರ್ಶನ ಪಡೆಯಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಿರಿಯರ ಆರೋಗ್ಯದ ಕಡೆ ಗಮನ ನೀಡಿ.ಮುಂದಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕಾರ್ಯ ವೈಖರಿಯನ್ನು ಮೆಚ್ಚುವರು. ಸಂಶೋಧನಾತ್ಮಕ ಲೇಖನಗಳಿಗೆ ಮನ್ನಣೆ ದೊರೆಯುವುದು.ವೃತ್ತಿಯಲ್ಲಿ ಸ್ವಲ್ಪ ಪರಿಶ್ರಮ ಅಗತ್ಯ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಪ್ರಯಾಣ ಕಾಲದಲ್ಲಿ ನರಸಿಂಹ ದೇವರ ಪ್ರಾರ್ಥನೆ ಮಾಡಿ. ಒಳಿತಾಗುವುದು.9845743807 ಅದೃಷ್ಟ ಸಂಖ್ಯೆ:5
ಸಿಂಹ
ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ತೋರುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರಿಂದಲೇ ಅಸಹಕಾರ ಮನೋಭಾವನೆ ವ್ಯಕ್ತವಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಉದ್ಯೋಗದ ವಿಚಾರದಲ್ಲಿ ಹೊಸ ಒಪ್ಪಂದ ಏರ್ಪಡುವುದು. ಬಂದ ನೂತನ ಕೆಲಸವನ್ನು ಒಪ್ಪಿಕೊಳ್ಳುವುದು ಒಳ್ಳೆಯದು. ಕೌಟುಂಬಿಕವಾಗಿ ನಿಮಗೆ ಸಹಾಯ ಹಸ್ತ ದೊರೆಯುವುದು.ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡೆ-ನುಡಿ ಇರಲಿ. ಅನಗತ್ಯವಾದ ವಿವಾದಗಳಲ್ಲಿ ಸಿಲುಕದಿರಿ.9845743807 ಅದೃಷ್ಟ ಸಂಖ್ಯೆ:7
ಕನ್ಯಾ
ಸಕಲ ಕಾರ್ಯಗಳಲ್ಲಿ ಮುನ್ನಡೆ ಸಿಗಲಿದೆ. ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ದೂರ ಸಂಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಬಂಧು ಬಾಂಧವರು ನಿಮಗೆ ನೆರವಾಗುವರು.ಕಾಡುತ್ತಿದ್ದ ಆತಂಕಗಳೆಲ್ಲ ಮರೆಯಾಗುವುದು. ಸಾಮಾಜಿಕವಾಗಿ ಹೆಚ್ಚಿನ ಪ್ರತಿಷ್ಠೆ ದೊರೆಯುವುದು. ಆಸ್ತಿ ಖರೀದಿಗೆ ಸಂಬಂಧಿಸಿದ ಮಾತುಕತೆಗಳು ಫಲಪ್ರದವಾಗುವುದು. ವ್ಯವಹಾರವು ಸುಲಲಿತವಾಗುವುದು.ನಿಮಗೆ ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈಸೇರುವ ನಿರೀಕ್ಷೆ ಇದೆ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಪರಾಕ್ರಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು.9845743807 ಅದೃಷ್ಟ ಸಂಖ್ಯೆ:6
ತುಲಾ
ನೀವು ಅಂದುಕೊಂಡಿದ್ದನ್ನೆಲ್ಲಾ ಸಾಧಿಸುವಿರಿ. ಕೌಟುಂಬಿಕ ವ್ಯಾಜ್ಯವೊಂದು ದಿಢೀರ್ ಇತ್ಯರ್ಥವಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ವ್ಯವಹಾರ ಮಾಡುವಾಗ ಯೋಚಿಸಿ ಮಾತನಾಡಿ. ಬಾಯಿ ತಪ್ಪಿ ಆಡಿದ ಮಾತಿಗೆ ಹೆಚ್ಚಿನ ಪಶ್ಚಾತ್ತಾಪ ಪಡಬೇಕಾಗುವುದು. ಹಮ್ಮಿಕೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಆತ್ಮಸ್ಥೈರ್ಯವೇ ಪ್ರಮುಖ ಅಸ್ತ್ರ ಮತ್ತು ಶಕ್ತಿ. ಎದುರಾಳಿಗಳು ನಿಮ್ಮತ್ತ ಆರೋಪಗಳ ಪಟ್ಟಿಯನ್ನೆ ತಂದರೂ ನೀವು ಶಾಂತವಾಗಿ ಎಲ್ಲದಕ್ಕೂ ಸಮಂಜಸ ಉತ್ತರ ಕೊಡುವ ಮೂಲಕ ಅವರ ಮನಸ್ಸನ್ನು ಗೆಲ್ಲುವಿರಿ.9845743807 ಅದೃಷ್ಟ ಸಂಖ್ಯೆ:5
ವೃಶ್ಚಿಕ
ಅಪಾತ್ರರಿಗೆ ಧಾರಾಳವಾಗಿ ಖರ್ಚು ಮಾಡುತ್ತೀರೆಂದು ಮನೆಯಲ್ಲಿ ಆಕ್ಷೇಪ ಮಾಡುವರು. ಕೌಟುಂಬಿಕವಾಗಿ ಸೌಹಾರ್ದ ಮಾತುಕತೆಗಳು ನಡೆಯುವವು. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಮಹತ್ವದ ಕೆಲಸಕ್ಕೆ ನಿಯೋಜಿಸಲ್ಪಡುವಿರಿ. ಮೇಲಧಿಕಾರಿಗಳ ಕರುಣೆ ನಿಮ್ಮ ಮೇಲಿರುವುದರಿಂದ ನೀವು ಮಾಡುವ ತಪ್ಪನ್ನು ಕ್ಷ ಮಿಸುವರು. ಸಹೋದರರೊಡನೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವಿರಿ.ಮಹತ್ವದ ಕೆಲಸಗಳನ್ನು ಕೈಗೆತ್ತಿಕೊಳ್ಳದಿರುವುದೇ ಒಳ್ಳೆಯದು. ಏಕೆಂದರೆ ಈ ದಿನ ಹಮ್ಮಿಕೊಂಡ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕುಲದೇವರ ಪ್ರಾರ್ಥನೆಯನ್ನು ತಪ್ಪದೆ ಮಾಡಿ.9845743807 ಅದೃಷ್ಟ ಸಂಖ್ಯೆ:8
ಧನುಸ್ಸು
ಗುರು-ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ವಾದ ಸ್ಪರ್ಧೆಯಲ್ಲಿ ಜಯವಾಗಲಿದೆ. ವಿದ್ಯಾಬುದ್ಧಿಯಲ್ಲಿ ಯಶಸ್ಸು ಸಿಗಲಿದೆ. ಮಧ್ಯಾಹ್ನದ ನಂತರ ಶಿರೋವೇದನೆ ಬರುವ ಸಾಧ್ಯತೆ ಇದೆ. ಕೌಟುಂಬಿಕ ವಿರಸ ತೋರುವುದು. ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರದಿರಿ. ಸಣ್ಣಪುಟ್ಟ ಜ್ವರಾದಿಗಳು ಕಾಡುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯದಿಂದ ಪರಿಹಾರ ದೊರೆಯಲಿದೆ. ದೂರದ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ಆರ್ಥಿಕ ತೊಂದರೆ ಕಡಿಮೆ ಇರುತ್ತದೆ. ದೂರದ ಊರಿನಿಂದ ಬರುವ ವಾರ್ತೆಯು ನಿಮ್ಮ ಮನಸ್ಸನ್ನು ಅರಳಿಸುವುದು. ಬಂಧು ಬಳಗದವರ ಭೇಟಿ ಆಗುವ ಸಂಭವವಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಉದ್ಯೋಗ-ದಂಧೆಗಳಲ್ಲಿ ಉತ್ಕರ್ಷಕಂಡುಬರುವುದು . 9845743807 ಅದೃಷ್ಟ ಸಂಖ್ಯೆ:4
ಮಕರ
ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಕಂಡು ಬರುವುದು. ಕೌಟುಂಬಿಕ ಸೌಖ್ಯ, ಕಾರ್ಯಸಿದ್ಧಿ ಆಗುವುದು. ಆನಂದದಾಯಕ ಸಂಗತಿ. ಮಿತ್ರಪ್ರೇಮ, ದೈವಾನುಕೂಲತೆಯಿಂದ ಜನಾನುಕೂಲತೆ ದೊರೆಯುವುದು.ಸಮಯಾನುಸಾರ ಕಾರ್ಯಗಳು ನೆರವೇರುತ್ತವೆ. ಹಣಕಾಸಿನ ಒತ್ತಡ ಕಡಿಮೆ ಆಗುವುದು. ಬಂಧು ಬಳಗದವರ ಭೇಟಿ ಮಾಡುವಿರಿ. ಸುವಾರ್ತೆ ಕೇಳುವಿರಿ. ಬೆಲೆ ಬಾಳುವ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ.ಸಕಾಲದಲ್ಲಿ ಪ್ರಮುಖ ಕೆಲಸಗಳನ್ನು ಮುಗಿಸಬೇಕೆಂದರೂ ಈ ದಿನ ವಿಳಂಬ ತೋರುವುದು. ಗಣಪತಿಯ ಪ್ರಾರ್ಥನೆಯೊಂದಿಗೆ ದಿನಚರಿಯನ್ನು ಆರಂಭಿಸಿರಿ ಒಳಿತಾಗುವುದು. ಸಂತೋಷಕರ ಸುದ್ದಿಗಳನ್ನು ಕೇಳುವಿರಿ.9845743807 ಅದೃಷ್ಟ ಸಂಖ್ಯೆ:9
ಕುಂಭ
ನಿಮ್ಮ ಹೆಚ್ಚಿನ ಸಮಯವನ್ನು ಸಂಶೋಧನೆಯಲ್ಲಿ ಕಳೆಯುವುದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮಹತ್ತರವಾದದ್ದು ಪಡೆಯುವಿರಿ. ಮೇಲಧಿಕಾರಿಗಳ ಪ್ರಶಂಸೆಗೂ ಪಾತ್ರರಾಗುವಿರಿ. ಆರ್ಥಿಕ ಸಮಸ್ಯೆ ಇರುವುದಿಲ್ಲ.ಬಂಧು-ಮಿತ್ರರ ಭೇಟಿ. ಕ್ಷುಲ್ಲಕ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆ ಇರುವುದು. ಜಾಣ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿರಿ. ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಶುಭ ಸಮಾಚಾರ ಕೇಳುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಅಮೂಲ್ಯ ವಸ್ತುವಿನ ಖರೀದಿ-ವಿಕ್ರಿಯಿಂದ ಲಾಭವುಂಟಾಗುವುದು.9845743807 ಅದೃಷ್ಟ ಸಂಖ್ಯೆ:2
ಮೀನ
ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಉಂಟಾಗುವುದು. ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.ನೀವು ಈ ಹಿಂದೆ ಕಾರ್ಯಕ್ಷ ಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. ಮುಖ್ಯ ಕೆಲಸವೊಂದಕ್ಕೆ ಹೆತ್ತವರ ನೆರವು ದೊರೆಯಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಸಾಧಕವಲ್ಲದ ಸಾಧ್ಯತೆಗಳು ನಿಮ್ಮತ್ತ ತಿರುಗುತ್ತವೆ. ಸಾಮಾಜಿಕವಾಗಿ ನಿಮ್ಮ ಮಾನ-ಪ್ರತಿಷ್ಠೆಗಳು ವೃದ್ಧಿಗೊಳ್ಳುವುದು. ನೀವು ಬಯಸಿದ ಕಾರ್ಯ ಇಂದು ನೆರವೇರುವುದು.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp