For Quick Alerts
ALLOW NOTIFICATIONS  
For Daily Alerts

18-6-2019-ಮಂಗಳವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯ�
|

ಮಂಗಳವಾರದ ದಿನ ಕಾಳಿ ಎನ್ನುವುದರ ಅರ್ಥ "ಕಪ್ಪಗಿರುವುದು". ಶಿವನನ್ನು ಕಾಲ ಎನ್ನುವುದರಿಂದ -ಅನಂತ ಕಾಲ, ಕಾಳಿ ಆತನ ಪತ್ನಿ, "ಸಮಯ" ಅಥವಾ "ಸಾವು" ಎನ್ನುವ ಅರ್ಥಗಳೂ ಇವೆ. (ಕಾಲವು ಬಂದಂತೆ). ಹೀಗೆ ಕಾಳಿಯು ಕಾಲ ಮತ್ತು ಪರಿವರ್ತನೆಯ ದೇವತೆ. ಹೀಗಿದ್ದರೂ ಕೆಲವೊಮ್ಮೆ ಕಪ್ಪಾಗಿ ಮತ್ತು ರೌದ್ರಾಕಾರವಾಗಿ ಕಾಣಿಸಿಕೊಳ್ಳುವಳು.

horoscope

ಅವಳ ಮೊತ್ತಮೊದಲ ಅವತಾರ ಸರ್ವನಾಶಕ ಶಕ್ತಿಸ್ವರೂಪಿಣಿಯದು, ಇನ್ನೂ ಕೆಲವು ಪ್ರಭಾವವನ್ನು ಹೊಂದಿದೆ. ವಿವಿಧ ಶಾಕ್ತ ಹಿಂದೂ ವಿಶ್ವಶಾಸ್ತ್ರಗಳಲ್ಲಿ, ಅದೇ ರೀತಿ ಶಾಕ್ತ ತಾಂತ್ರಿಕ ನಂಬಿಕೆಗಳಲ್ಲಿ ಆಕೆಯನ್ನೇ ಪರಮಸತ್ಯ ಅಥವಾ ಬ್ರಹ್ಮನ್ ಎಂದು ಪೂಜಿಸುತ್ತಾರೆ. ಅವಳನ್ನು ಭವತಾರಿಣಿ (ಅಕ್ಷರಶಃ "ಭವಬಂಧನದಿಂದ ಪಾರುಮಾಡುವವಳು") ಎಂದು ಪೂಜಿಸುತ್ತಾರೆ. ಇತ್ತೀಚಿನ ಭಕ್ತಿ ಪಂಥದವರು ಕಾಳಿಯನ್ನು ಮಂಗಳವನ್ನುಂಟುವಾಡುವ ಮಹಾಮಾತೆ ಮಹಾದೇವಿ ಎಂದು ಪರಿಗಣಿಸಿದ್ದಾರೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ( 18 ಜೂನ್ 2019)

ಮೇಷ( 18 ಜೂನ್ 2019)

ಸಂತೋಷಪಡುವ ಸಂಭ್ರಮದ ಕಾರ್ಯಕ್ರಮವೊಂದು ದಿಢೀರಾಗಿ ನಿಶ್ಚಯವಾಗುವುದರಿಂದ ದೂರ ಪ್ರಯಾಣದ ಸಾಧ್ಯತೆ ಇರುವುದು. ಸಂತೋಷದಿಂದ ಮನಸ್ಸು ಹಕ್ಕಿಯಂತೆ ಹಾರಾಡುವುದು. ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷಮಿಸಿಬಿಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಮಾಜದಲ್ಲಿ ಗೌರವ, ಸನ್ಮಾನಗಳು ಏರ್ಪಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ನಿಮ್ಮ ವಿರೋಧಿಗಳು ನಿಮ್ಮ ಸಾಮಾಜಿಕ ಗೌರವದ ಪ್ರಭಾವ ತಗ್ಗಿಸಲು ಪ್ರಯತ್ನ ಪಡುವರು. ಆದಾಗ್ಯೂ ಗೋಡೆಗೆ ಪುಟಿದ ಚೆಂಡಿನಂತೆ ನೀವು ಹೆಚ್ಚು ಜನಪ್ರಿಯರಾಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕೆಲ ಗ್ರಹಗಳು ಮಕ್ಕಳಿಂದ ನಿಮ್ಮ ಕನಸುಗಳು ನನಸಾಗುವಂತೆ ಮಾಡುವವು. ಮಗನಿಗೆ ಉತ್ತಮ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಹೊಸ ರೀತಿಯ ಕಾರ್ಯಗಳು ನೆರವೇರುವವು. ಕುಲದೇವತಾ ಸ್ಮರಣೆ ಮಾಡಿ. ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕುವ ಅಪರೂಪದ ಕಾಯಕದಲ್ಲಿ ಜಯಶೀಲರಾಗಲು ಅವಕಾಶವಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ನಿಮ್ಮ ಕೈಸೇರುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. 9845743807 ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಹಳೆಯ ಕಡತವೊಂದನ್ನು ಅಪಹರಿಸಲು ಇಲ್ಲವೆ ಹಳೆಯ ಲೆಕ್ಕಪತ್ರಗಳನ್ನು ಕೆದಕಿ ನಿಮ್ಮ ಮೇಲೆ ಅಪವಾದ ತರುವ ಹುನ್ನಾರ ನಡೆಯುತ್ತಿದೆ. ಆದಷ್ಟು ಎಚ್ಚರಿದಿಂದ ಇರಿ. ನಿಮ್ಮ ಪ್ರಾಮಾಣಿಕತೆ ನಿಮಗೆ ಸಹಾಯ ಮಾಡುವುದು. ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿ ಪತಿ ಪತ್ನಿ ನಡುವಿನ ಭಿನ್ನಾಭಿಪ್ರಾಯ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿ ವಾತಾವರಣ ಕಾಣುವಿರಿ.ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು. ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಲಕ್ಷ್ಮೀನಾರಸಿಂಹ ದೇವರ ಸ್ಮರಣೆ ಮಾಡಿ. ಬಂದ ದುರಿತಗಳು ನಶಿಸಿಹೋಗುವವು.9845743807

ಅದೃಷ್ಟ ಸಂಖ್ಯೆ:2

ಸಿಂಹ

ಸಿಂಹ

ಗ್ರಹಗಳು ನಿಮ್ಮನ್ನು ಸುಮ್ಮನೆ ಕೂರಲು ಬಿಡುತ್ತಿಲ್ಲ. ಜೀವನದಲ್ಲಿ ಉತ್ಸಾಹ ಹೆಚ್ಚಿಸುತ್ತಿದೆ. ಇದರಿಂದಾಗಿ ನಿಮ್ಮೊಳಗಿನ ಉತ್ತಮ ಕ್ರಿಯಾಶೀಲತೆಯನ್ನು ದುಡಿಸಿಕೊಳ್ಳಿ. ಬೇರೆಯವರ ಕಷ್ಟಸುಖಗಳಿಗೆ ಸ್ಪಂದಿಸುವ ನಿಮ್ಮ ಗುಣ ಮೆಚ್ಚುಗೆಗೆ ಪಾತ್ರವಾಗುವುದು.ಮನಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಗ್ರಹಸ್ಥಿತಿಗಳು ಉತ್ತಮವಾಗಿಲ್ಲ. ಹಾಗಾಗಿ ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಹರಿಯನ್ನು ಪ್ರಾರ್ಥಿಸಿ.ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ ಹೆಚ್ಚು ಚಿಂತಿಸದೆ ನಿಮ್ಮ ಕಾರ್ಯ ಯೋಜನೆಗಳನ್ನು ರೂಪಿಸಿ. ಅದರಲ್ಲಿ ಗೆಲ್ಲುವ ಅವಕಾಶ ಹೇರಳವಾಗಿದೆ. ಗುರುವನ್ನು ಮನಸಾ ಸ್ಮರಿಸಿ ಕಾರ್ಯ ಆರಂಭಿಸಿ.9845743807 ಅದೃಷ್ಟ ಸಂಖ್ಯೆ:6

ಕಟಕ

ಕಟಕ

ಬೆಲೆಬಾಳುವ ವಸ್ತುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದ ಇರಿ. ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ನೀವು ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.ನಿಮ್ಮ ಬಂಧುಬಳಗದವರು ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ. 'ಸಮಯವೇ ದುಡ್ಡು' ಎಂದು ಅನುಭಾವಿಗಳು ಹೇಳುತ್ತಾರೆ. ನನ್ನ ಸಮಯ ಸರಿಯಿಲ್ಲ ಎಂದು ಪರಿತಪಿಸುತ್ತಾ ಕಾಲಹರಣ ಮಾಡದಿರಿ. ಯಾವುದಾದರೊಂದು ಸಕಾರಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಆನಂದವನ್ನು ಹೊಂದಿ.9845743807 ಅದೃಷ್ಟ ಸಂಖ್ಯೆ:4

ಕನ್ಯಾ

ಕನ್ಯಾ

ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆ ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ. ದೃಢ ನಿರ್ಧಾರ ತಳೆಯುವಲ್ಲಿ ಹೆಸರಾದ ನಿಮಗೆ ಇಂದಿನ ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಅದರಲ್ಲಿ ವಿಜಯವನ್ನು ತಂದುಕೊಳ್ಳಲು ನಿಮ್ಮ ಪರಿಪಕ್ವ ಮನಸ್ಸು ಸಹಾಯ ಮಾಡುವುದು. ಇದಕ್ಕೆ ಸಂಗಾತಿ ನೆರವು ಸಿಗುವುದು. ವ್ಯವಹಾರಕ್ಕೆ ಸಂಬಂಧಪಟ್ಟಲೆಕ್ಕಪತ್ರಗಳನ್ನುಸರಿಯಾಗಿಟ್ಟುಕೊಂಡಿರುವ ಬಗ್ಗೆ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಅವಶ್ಯಕತೆಗಿಂತ ಹೆಚ್ಚು ಪ್ರಾಮಾಣಿಕತನ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವುದು. ಈ ಬಗ್ಗೆ ಹಿರಿಯರಿಂದ ಸೂಕ್ತ ಸಲಹೆ ಪಡೆಯಿರಿ.9845743807 ಅದೃಷ್ಟ ಸಂಖ್ಯೆ:4

ತುಲಾ

ತುಲಾ

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸ ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು. ಎಲ್ಲಾ ಕೆಲಸ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಕೆಲಸ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲ ಕೆಲಸಗಳು ಇನ್ನು ಹೆಚ್ಚಿನ ಪರಿಪಕ್ವತೆಯಿಂದಯಶಸ್ಸುಹೊಂದುವುದು.ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡು ಏನು ಪ್ರಯೋಜನ. ಹಾಗಾಗಿ ಕಷ್ಟ ಬಂದಿದೆ ಎಂದು ಮರುಗುವುದಕ್ಕಿಂತ ಬಂದಿರುವ ಕಷ್ಟವನ್ನು ಎದುರಿಸುವ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ.9845743807 ಅದೃಷ್ಟ ಸಂಖ್ಯೆ:5

ವೃಶ್ಚಿಕ

ವೃಶ್ಚಿಕ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ದೊಡ್ಡವರ ಸಹವಾಸದಿಂದ ದೂರ ಇರುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಾಡುವ ತಪ್ಪುಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ. ದೈವಬಲ ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಪ್ರಭಾವ ಬೀರುತ್ತದೆ. ಹಾಗಾಗಿ ಕಠಿಣ ಕಾರ್ಯ ಕೂಡಾ ಸುಲಲಿತವಾಗಿ ನೆರವೇರುವುದು.ಹಣಕಾಸಿನಸ್ಥಿತಿಉತ್ತಮವಾಗಿರುತ್ತದೆ.ಏಕಾಂತ ನಿಮ್ಮ ಮನಸ್ಸನ್ನು ಹಿಂಡುತ್ತಿದೆ. ಮನುಜ ಸಂಘಜೀವಿ. ಹಾಗಾಗಿ ಆದಷ್ಟು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗೆಳೆಯರೊಡನೆ ಬೆರೆಯಿರಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.9845743807 ಅದೃಷ್ಟ ಸಂಖ್ಯೆ:8

ಧನುಸ್ಸು

ಧನುಸ್ಸು

ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಜಾಗ್ರತೆಯಾಗಿರಿ. ಕಲ್ಮಶ ರಹಿತ ನಿಮ್ಮ ಧೈರ್ಯ ಧೋರಣೆಗಳುನಿರೀಕ್ಷಿತಯಶಸ್ಸುತಂದುಕೊಡುವವು. ಯಾರದೋ ಮುಲಾಜಿಗೆ ಕಟ್ಟುಬಿದ್ದು ಹಣಕಾಸಿನ ವಿಷಯದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಈ ದಿನ ತುಸು ನಿರಾಳತೆ ಇರುವುದು. ದುಡಿದ ಹಣ ನೀರಿನಂತೆ ಖರ್ಚಾಗುವ ಸಾಧ್ಯತೆ ಇದೆ. ಆಂಜನೇಯನ ಸ್ಮರಣೆ ಮಾಡಿ.ಕಚೇರಿ ವಾತಾವರಣದಲ್ಲಿ ಮೇಲಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ನೀವು, ಕಚೇರಿಯಲ್ಲಿನ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಅನಾಯಾಸವಾಗಿ ಪಡೆಯುವಿರಿ. ನಿಮ್ಮ ಈ ಪ್ರಗತಿ ಇತರೆಯವರಿಗೆ ಅಸೂಯೆಯನ್ನು ತರುವುದು.9845743807 ಅದೃಷ್ಟ ಸಂಖ್ಯೆ:5

ಮಕರ

ಮಕರ

ಸ್ಥಿರಾಸ್ತಿ ಕೊಂಡುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆದರೆ ಶೀರೋವೇದನೆ ನಿಮ್ಮ ಮೂಡನ್ನು ಹಾಳುಮಾಡುವುದು. ಹೊತ್ತು ಬಂದಂತೆ ಛತ್ರಿ ಹಿಡಿಯಬೇಕು ಎನ್ನುವಂತೆ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ಮಾಡುವಿರಿ. ಮನೋವೇಗವನ್ನು ಹೊಂದಿರುವ ಆಂಜನೇಯ ಸ್ವಾಮಿ ಸ್ಮರಣೆಯಿಂದ ನಿಮ್ಮ ಕಾರ್ಯ ಕೈಗೂಡುವುದು.ಕಲಿತ ವಿದ್ಯೆಯು ಯಾವಾಗಲೂ ನಶಿಸುವುದಿಲ್ಲ. ಆದರೆ ಕಾಲಕಾಲಕ್ಕೆ ಅದನ್ನು ಸಾಣೆ ಹಿಡಿಯಬೇಕು. ಉಪಯೋಗಿಸದೆ ಇದ್ದು ಚೂಪಾದ ಚೂರಿ ಮೊಂಡು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನಿತ್ಯ ಬದುಕಿನಸತ್ಯದರ್ಶನವಾಗುವುದು.9845743807 ಅದೃಷ್ಟ ಸಂಖ್ಯೆ:8

ಕುಂಭ

ಕುಂಭ

ಅವಸರ ಅವಘಡಕ್ಕೆ ಮೂಲ ಎನ್ನುವಂತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅವಸರ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಸಂಗಾತಿ ಸಲಹೆ ಸ್ವೀಕರಿಸಿ. ಮುದ್ದು ಮಗುವಿನ ಮಾತು ನಿಮಗೆ ಖುಷಿ ನೀಡುವುದು. ತೆರೆಮರೆ ಕಾರ್ಯಗಳಿಗೆ, ಫೋಟೋಗ್ರಫಿ ರಂಗದಲ್ಲಿರುವವರಿಗೆ ಅಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ದುರ್ಗಾಮಾತೆಯನ್ನು ಮನಸಾ ಭಜಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಮನೆಯ ಸದಸ್ಯರೊಟ್ಟಿಗೆ ಸೌಹಾರ್ದತೆ ಬೆಳೆಸಿಕೊಳ್ಳಿ. ಯಾವುದೇ ಕಾರ್ಯ ರಾತ್ರಿ ಕಳೆದು ಬೆಳಕು ಆಗುವುದರೊಳಗೆ ಪೂರ್ಣಗೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.9845743807 ಅದೃಷ್ಟ ಸಂಖ್ಯೆ:2

ಮೀನ

ಮೀನ

ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು. ಕೆಲಸದ ಸ್ಥಳದಲ್ಲಿ ಒತ್ತಡ ಇದ್ದರೂ ಪರಿಣಾಮಕಾರಿ ಹಂತಕ್ಕೆ ಏರುವ ಮುನ್ಸೂಚನೆಗಳು ನಿಮಗೆ ಗೋಚರಿಸುವುದು. ನಿಮ್ಮ ಕುಟುಂಬದ ಇಷ್ಟದೇವತೆಯ ಸನ್ನಿದಾನಕ್ಕೆ ಭೇಟಿ ನೀಡಿ. ಚಿಕ್ಕ ಮಕ್ಕಳೊಂದಿಗೆ ಸಂಜೆ ಸಂತೋಷವಾಗಿ ಕಳೆಯುವಿರಿ.ನಿಮ್ಮ ಮಾತುಗಳು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ.9845743807 ಅದೃಷ್ಟ ಸಂಖ್ಯೆ:1

English summary

your daily horoscope 18 June 2019

Know what astrology and the planets have in store for you today. Choose your zodiac sign and read the details..
X
Desktop Bottom Promotion