Just In
Don't Miss
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯಂದಿರ ದಿನದಂದೇ ಮಗನಿಗೆ ಇಷ್ಟದ ಅಡುಗೆ ಮಾಡಿಟ್ಟು ಸಾವನ್ನಪ್ಪಿದ ತಾಯಿ!
ಕೆಲವೊಂದು ವಿಶೇಷ ದಿನಗಳಲ್ಲಿ ನಾವು ತುಂಬಾ ಸಂತೋಷವಾಗಿ ಇರುತ್ತೇವೆ ಮತ್ತು ಆ ದಿನವನ್ನು ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುತ್ತೇವೆ. ಇದರಲ್ಲಿ ಮುಖ್ಯವಾಗಿ ಮದರ್ಸ್ ಡೇ ಎನ್ನುವುದು ತುಂಬಾ ಜನಪ್ರಿಯ. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ತುಂಬಾ ಮನಕಲಕುವಂತಹ ಘಟನೆಯನ್ನು. ಮದರ್ಸ್ ಡೇ ದಿನ ತನ್ನ ಪುತ್ರನಿಗೆ ಇಷ್ಟವಾಗಿರುವಂತಹ ಅಡುಗೆಗಳನ್ನು ಮಾಡಿದ ಬಳಿಕ ತಾಯಿಯು ಆತನಿಗಾಗಿ ತುಂಬಾ ಹೊತ್ತು ಕಾಯುತ್ತಾರೆ. ಆದರೆ ಆತ ಮಾತ್ರ ಬರುವುದೇ ಇಲ್ಲ. ಈ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆದ ಬಳಿಕ ತನ್ನ ಸ್ವಂತ ಬಲದಿಂದ ಮಗನನ್ನು ಸಾಕುತ್ತಾಳೆ ಮತ್ತು ಇದರ ಬಳಿಕ ಮಗ ಬೇರೆ ನಗರಕ್ಕೆ ಕೆಲಸಕ್ಕೆಂದು ತೆರಳುತ್ತಾನೆ.
ಬೇರೆ ನಗರದಲ್ಲಿ ವಾಸವಾಗಿದ್ದ ಮಗ ವಾರಕ್ಕೊಮ್ಮೆ ಬಂದು ಒಂಟಿಯಾಗಿದ್ದ ತನ್ನ ತಾಯಿಯನ್ನು ಭೇಟಿಯಾಗಿ ಹೋಗುತ್ತಿದ್ದ. ಆದರೆ ಸಮಯ ಕಳೆದಂತೆ ಆತ ಬರುವುದು ಕಡಿಮೆ ಆಯಿತು ಮತ್ತು ಇದರ ಬಗ್ಗೆ ತಾಯಿ ದೂರಲಿಲ್ಲ ಮತ್ತು ಆತನಿಗಾಗಿ ಯಾವಾಗಲೂ ಕಾಯುತ್ತಾ ಕುಳಿತಿರುತ್ತಿದ್ದಳು. ಕೆಲವೊಂದು ಸಲ ಹಲವಾರು ತಿಂಗಳುಗಳ ಕಾಲ ಆತ ಬರುತ್ತಲೇ ಇರಲಿಲ್ಲ.
Most Read: ಪತ್ನಿಯ ಜನನಾಂಗದೊಳಗೆ ಬೈಕ್ನ ಹ್ಯಾಂಡ್ಗ್ರಿಪ್ ತುರುಕಿದ ಪತಿ!
ಮದರ್ಸ್ ಡೇ ದಿನ ತನ್ನ ತಾಯಿ ಜತೆಗೆ ಸಮಯ ಕಳೆಯಲು ಬಯಸಿದ ಮಗ, ತಾನು ಮನೆಗೆ ಬರುತ್ತಿರುವುದಾಗಿ ಹೇಳಿದ ಮತ್ತು ತನ್ನ ಇಷ್ಟದ ಅಡುಗೆ ಮಾಡಿಡುವಂತೆ ಹೇಳಿದ. ಆ ವೃದ್ಧ ಮಹಿಳೆಯು ತುಂಬಾ ಸಂತೋಷಗೊಂಡು, ಮಗನೊಂದಿಗೆ ಊಟ ಮಾಡುವ ಕನಸು ಕಂಡಳು. ಇದಕ್ಕಾಗಿ ಮದರ್ಸ್ ಡೇ ದಿನ ತನ್ನ ಪುತ್ರನಿಗೆ ಬೇಕಿರುವ ಇಷ್ಟದ ಅಡುಗೆಗಳನ್ನು ತಯಾರಿಸಿದಳು.
ತನ್ನ ಮಗನಿಗೆ ಎಲ್ಲಾ ಅಡುಗೆಗಳನ್ನು ಮಾಡಿ ಟೇಬಲ್ ಮೇಲಿಟ್ಟು ಸ್ನಾನ ಮಾಡಲು ಸ್ನಾನಗೃಹಕ್ಕೆ ಹೋದ ಆ ಮಹಿಳೆಗೆ ತೀವ್ರ ಹೃದಯಾ ಘಾತವಾಗಿ ಅಲ್ಲೇ ಕುಸಿದು ಬಿದ್ದರು. ಆಕೆ ಏಕಾಂಗಿಯಾಗಿದ್ದ ಕಾರಣ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವವರು ಯಾರು ಇರಲಿಲ್ಲ ಮತ್ತು ಅಲ್ಲೇ ಆಕೆ ಸಾವನ್ನಪ್ಪಿದರು. ಮನೆಯಿಂದ ದುರ್ವಾಸನೆ ಬರುತ್ತಿರುವುದಾಗಿ ನೆರೆಮನೆಯವರು ದೂರಿದ ಬಳಿಕ ಪೊಲೀಸರು ಬಂದು ಮನೆಯ ಬಾಗಿಲು ಮುರಿದರು.
ಪೊಲೀಸರು ಮಹಿಳೆಯ ಶವವನ್ನು ನೋಡಿದಾಗ ಅದರಲ್ಲಿ ಹುಳವಾಗಿತ್ತು ಮತ್ತು ಆಕೆ ಸಾವನ್ನಪ್ಪಿ ನಾಲ್ಕು ದಿನವಾಗಿತ್ತು ಎಂದು ವರದಿಗಳು ಹೇಳಿವೆ. ಮಹಿಳೆಯ ಮಗನಿಗೆ ಕರೆ ಮಾಡಿ, ಆತನಿಗೆ ತಾಯಿಯ ಸಾವಿನ ಬಗ್ಗೆ ತಿಳಿಸಿದ ವೇಳೆ ಆತ ಆಘಾತಕ್ಕೆ ಒಳಗಾದ ಮತ್ತು ತಾನು ಮದರ್ಸ್ ಡೇ ದಿನ ಬರುವುದಾಗಿ ಭರವಸೆ ನೀಡಿದ್ದೆ ಮತ್ತು ತುರ್ತು ಕೆಲಸದಿಂದಾಗಿ ಮನೆಗೆ ಬರಲು ಆಗಲಿಲ್ಲ ಎಂದು ಆತ ಹೇಳಿದ. ತನ್ನ ಇಷ್ಟದ ಅಡುಗೆಗಳನ್ನು ಮಾಡಿ ಟೇಬಲ್ ಮೇಲೆ ಇಟ್ಟಿರುವುದನ್ನು ನೋಡಿ ಆತ ಮತ್ತಷ್ಟು ಕುಸಿದು ಹೋದ. ಆ ಪುತ್ರ ವಿಶ್ವದ ಯುವಜನತೆಯಲ್ಲಿ ಮಾಡಿಕೊಂಡ ಕಳಕಳಿಯ ವಿನಂತಿಯೆಂದರೆ, ತಮ್ಮ ವಯೋವೃದ್ಧ ತಂದೆತಾಯಿ ಜತೆಗೆ ಯಾವಾಗಲೂ ಸಮಯ ಕಳೆಯಬೇಕು ಎಂದು ಕೇಳಿಕೊಂಡಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಬರೆಯಿರಿ.