Just In
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ರಾಶಿಚಕ್ರದವರು ತಾವು ಕೊಡುವುದಕ್ಕಿಂತ ಹೆಚ್ಚಿಗೆ ಪಡೆದುಕೊಳ್ಳುತ್ತಾರೆ
ಸಹಾಯ ಮಾಡುವುದು ಅಥವಾ ಅನುಕೂಲವಿರುವಾಗ ನಮ್ಮಿಂದ ಇನ್ನೊಬ್ಬರಿಗೆ ಒಂದಿಷ್ಟು ದಾನ ಮಾಡುವುದು ಉತ್ತಮ ಸಂಸ್ಕಾರ. ಮನುಷ್ಯನಲ್ಲಿ ಸ್ವಾರ್ಥ ಗುಣ ಇರುವುದು ಸಹಜ. ಆದರೆ ಇನ್ನೊಬ್ಬರು ಕಷ್ಟದಲ್ಲಿರುವಾಗ ಅಥವಾ ಯಾವುದೋ ಒಂದು ವಿಚಾರದಲ್ಲಿ ಅವರಿಗೆ ಅಗತ್ಯತೆ ಇರುವಾಗ ಸ್ವಾರ್ಥ ಭಾವನೆಯಿಂದ ಹೊರಬಂದು ಸಹಾಯ ಮಾಡಬೇಕು. ಆಗಲೇ ನಮ್ಮ ಪುಣ್ಯ ಹೆಚ್ಚುವುದು. ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ನಿಲ್ಲಬಹುದು. ಆದರೆ ಬಹುತೇಕ ಜನರು ಅದೆಷ್ಟೇ ಶ್ರೀಮಂತಿಕೆ ಅಥವಾ ಅನುಕೂಲಗಳಿದ್ದರೂ ತಮ್ಮಿಂದ ಇನ್ನೊಬ್ಬರಿಗೆ ಸಹಾಯ ಆಗಬೇಕೆಂದೇ ಭಾವಿಸುವುದಿಲ್ಲ.
ಸಾಮಾನ್ಯವಾಗಿ ಕಠೋರ ವ್ಯಕ್ತಿಗಳು ಹಾಗೂ ವಿಚಿತ್ರ ಮನಸ್ಸಿನವರನ್ನು ನಾವು ದ್ವೇಷಿಸುವುದು ಸಹಜ. ಏಕೆಂದರೆ ಅಗತ್ಯವಿದೆ ಎಂದಾಗಲೂ ಯಾರಿಗೂ ಸಹಾಯ ಮಾಡದೆ ಸ್ವಾರ್ಥಿಗಳಂತೆ ಇರುತ್ತಾರೆ. ತಮಗಾಗಿ ಬೇರೆಯಾರಾದರೂ ಏನನ್ನಾದರೂ ನೀಡಿದರೆ ಬಹುಬೇಗ ಸ್ವೀಕರಿಸುತ್ತಾರೆ. ಅದೇ ತಮ್ಮಿಂದ ಇನ್ನೊಬ್ಬರಿಗೆ ನೀಡಬೇಕು ಅಥವಾ ಸಹಾಯ ಆಗಬೇಕು ಎಂದಾಗ ಸುಮ್ಮನಾಗುತ್ತಾರೆ. ಈ ಗುಣವು ಕೆಲವು ರಾಶಿಚಕ್ರದವರಲ್ಲಿ ಆಳವಾಗಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಗುಣಗಳು ಏಕೆ ಹಾಗೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....
ಮೇಷ
ಈ ರಾಶಿಚಕ್ರದವರು ತಮ್ಮದೇ ಆದ ಸಮಯದಲ್ಲಿ ಕೆಲಸವನ್ನು ಮಾಡುತ್ತಾರೆ. ಶ್ರಮಜೀವಿಗಳಾದ ಇವರು ತಮಗೆ ಇಷ್ಟವಾದ ಕೆಲಸಗಳನ್ನು ಕಷ್ಟಪಟ್ಟು ಮಾಡುತ್ತಾರೆ. ಇದರಿಂದ ಇತರರಿಗೆ ಕಷ್ಟವಾದರೂ ಅವರು ಲೆಕ್ಕಿಸುವುದಿಲ್ಲ. ಲಾಭದಾಯಕವಾಗಿರುವ ಕೆಲಸವನ್ನು ಮಾಡಲು ಇವರು ಸದಾ ಸಿದ್ಧರಾಗಿರುತ್ತಾರೆ. ಇದರಿಂದ ಇತರರಿಗೆ ನೋವಾದರೂ ಅವರು ಚಿಂತಿಸುವುದಿಲ್ಲ. ಇನ್ನು ಮೇಷ ರಾಶಿಯವರು ಹೆಚ್ಚು ಧೈರ್ಯಶಾಲಿಗಳಾಗಿದ್ದು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೆಯೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿದ್ದಾರೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಸ್ವಭಾವವನ್ನು ಈ ರಾಶಿಯವರು ಹೊಂದಿಲ್ಲ. ಆ ತಿಂಗಳು ಅವರ ದಾರಿಗೆ ಯಾವ ವಿಷಯ ಬರುತ್ತದೆ ಎಂಬುದು ಮುಖ್ಯವಾಗಿರುತ್ತದೆ. ತಾವೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇವರು ಸಿದ್ಧಹಸ್ತರಾಗಿದ್ದು ಪ್ರತಿಯೊಂದು ಕೆಲಸವನ್ನು ಇವರು ಆರಂಭಿಸಿ ಅದನ್ನು ಮುಗಿಸುವಲ್ಲಿ ಪ್ರವೀಣರಾಗಿದ್ದಾರೆ. ಇವರು ಸ್ವತಂತ್ರರಾಗಿದ್ದು ಗೌರವಪಾತ್ರೂ ಹೌದು. ಇದೇ ಸಮಯದಲ್ಲಿ ಇವರು ಕ್ರಿಯಾತ್ಮಕರಾಗಿದ್ದು ತಾಳ್ಮೆ ಕಳೆದುಕೊಳ್ಳವವರೂ ಹೌದು. ಮಂಗಳನ ಈ ಗ್ರಹದ ಅಧಿಪತಿಯಾಗಿದ್ದಾನೆ. ಆದ್ದರಿಂದಲೇ ಈ ರಾಶಿಯವರು ಹೆಚ್ಚು ಕ್ರಿಯಾತ್ಮಕರಾಗಿದ್ದು ಹಾಸ್ಯಪ್ರವೃತ್ತಿಯವರು ಮತ್ತು ಉತ್ತಮ ಕಲಾಭಿರುಚಿಯನ್ನು ಹೊಂದಿದವರಾಗಿದ್ದಾರೆ.
ಸಿಂಹ
ಈ ವ್ಯಕ್ತಿಗಳು ಬಹಳ ಸ್ವಾರ್ಥಗುಣವವನ್ನು ಒಳಗೊಂಡಿರುತ್ತಾರೆ. ಇವರು ಸದಾ ಯೋಚಿಸುವ ಒಂದು ಅಂಶವೆಂದರೆ ತಮ್ಮ ಸುತ್ತಲಿನವರಿಂದ ಏನನ್ನು ಪಡೆದುಕೊಳ್ಳಬಹುದು ಎನ್ನುವುದನ್ನು. ಇವರು ಸದಾ ಎಲ್ಲರಿಂದಲು ಕೇಂದ್ರೀಕೃತ ವ್ಯಕ್ತಿಗಳಾಗಿ ಇರಲು ಬಯಸುತ್ತಾರೆ. ಹಾಗಾಗಿಯೇ ಅವರು ಏನುಬೇಕಾದರು ಮಾಡಬಲ್ಲರು. ಅದರ ಬಗ್ಗೆ ಮೂರನೇಯವರ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲ. ಇನ್ನು ಸಿಂಹ ರಾಶಿಯವರು ಜೀವನದ ಬಹುತೇಕ ಎಲ್ಲಾ ವಿಚಾರಗಳಲ್ಲೂ ಮುಂಚಿತವಾಗಿಯೇ ಸುಧಾರಣೆಯನ್ನು ಕಾಣುವಿರಿ. ಹಾಗಾಗಿ ಸಿಂಹ ರಾಶಿಯವರಿಗೆ ಜೂನ್ ತಿಂಗಳು ಅತ್ಯುತ್ತಮವಾದ ತಿಂಗಳಾಗಲಿದೆ ಎಂದು ಊಹಿಸಲಾಗಿದೆ. ನಿಮ್ಮ ಸಂವಹನ ಕೌಶಲ್ಯವು ನಿಮಗೆ ಉತ್ತಮ ಬದಲಾವಣೆ ಹಾಗೂ ಸುಧಾರಣೆಯನ್ನು ತಂದುಕೊಡುತ್ತದೆ. ನಿಮ್ಮ ಹೆಚ್ಚಿನ ಸಮಯವನ್ನು ಸಂವಹನದಲ್ಲಿ ಕಳೆಯಲಿದ್ದೀರಿ. ನೀವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಹಾಗೂ ವಿಶ್ವಾಸವನ್ನು ಗಳಿಸಿಕೊಳ್ಳುವುದರ ಅಗತ್ಯವಿರುತ್ತದೆ. ಈ ತಿಂಗಳು ನಿಮಗೆ ಉತ್ತಮ ಸಂಗಾತಿಯನ್ನು ಆಕರ್ಷಿಸಲು ಸಹಾಯ ಮಾಡುವುದು. ನಿಮ್ಮ ರಾಶಿಚಕ್ರದ ಮನೆಯಲ್ಲಿರುವಸೂರ್ಯನು ನಿಮಗೆ ಧನಾತ್ಮಕ ಶಕ್ತಿಯನ್ನು ಆಶೀರ್ವದಿಸುತ್ತಾನೆ.
ಕನ್ಯಾ
ಈ ರಾಶಿಚಕ್ರದವರು ವಿಮರ್ಶಾತ್ಮಕರು ಹಾಗೂ ಟೀಕೆಗಳನ್ನು ಮಾಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಿಕ್ಕ ಸಂದರ್ಭವನ್ನು ಉಪಯೋಗಿಸಿಕೊಂಡ ಮೋಜುಮಾಡಲು ಸಿದ್ಧರಾಗಿರುತ್ತಾರೆ. ಇತರರಿಂದ ಏನುಬೇಕಾದರೂ ಸುಲಭವಾಗಿ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅದೇ ಇತರರಿಗೆ ನೀಡಬೇಕು ಎಂದಾಗ ಬಹಳ ಚಿಂತನೆಗೆ ಒಳಗಾಗುತ್ತಾರೆ. ಇನ್ನು ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗಿದ್ದರೂ ಸಹ ಕಷ್ಟದ ಸಂದರ್ಭದಲ್ಲಿ ಸನ್ನಿವೇಶವನ್ನು ಎದುರಿಸುವ ಸಾಮಥ್ರ್ಯವನ್ನು ಗ್ರಹಗತಿಗಳು ಕರುಣಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಲ್ಲದೆ ಅನಾವಶ್ಯಕವಾಗಿ ಕಾಡುವ ವಿವಾದಗಳನ್ನು ತಪ್ಪಿಸಲು ಇಂದು ನಿಮಗೆ ಗ್ರಹಗತಿಗಳು ಸಹಾಯ ಮಾಡುವವು. ಕೆಲವು ಸನ್ನಿವೇಶಗಳಲ್ಲಿ ನೀವು ಋಣಾತ್ಮಕ ಅನುಭವವನ್ನು ಅನುಭವಿಸಬೇಕಾಗುವುದು. ದುಷ್ಟಜನರಿಂದ ಅಥವಾ ವಂಚಕರಿಂದ ಆದಷ್ಟು
ದೂರವಿರಿ. ಅವರು ನಿಮ್ಮ ಸ್ವಾಭಿಮಾನಕ್ಕೆ ಕುಂದುಂಟುಮಾಡುವರು. ನಿಮ್ಮ ಕರ್ಮಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುವುದು. ತಿಂಗಳ ಕೊನೆಯ ಭಾಗದಲ್ಲಿ ನೀವು ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಒಲವು ತೋರುವಿರಿ. ಇದರಿಂದ ಮಾನಸಿಕವಾಗಿ ಶಾಂತಿಯು ದೊರೆಯುವುದು.
ಧನು
ಈ ರಾಶಿಯವರು ಪರಿಸ್ಥಿತಿಗೆ ಬಹಳ ಅವಲಂಬಿತರಾಗಿರುತ್ತಾರೆ. ಅವರು ನಿಜವಾಗಲು ಏನುಮಾಡಬೇಕು ಎನ್ನುವುದರ ಬಗ್ಗೆ ಸೂಕ್ತ ಭರವಸೆಯನ್ನು ನೀಡುತ್ತಾರೆ. ತಾಳ್ಮೆಯ ಗುಣವನ್ನು ಹೊಂದಿರುವ ಈ ವ್ಯಕ್ತಿಗಳು ತಾವು ಏನುಮಾಡಬೇಕು ಎಂದು ಬಯಸುತ್ತಾರೋ ಅದನ್ನು ಮಾಡಿಯೇ ಮುಗಿಸುತ್ತಾರೆ. ಅದರ ಬಗ್ಗೆ ಯಾರು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ಚಿಂತಿಸುವುದಿಲ್ಲ. ಧನು ರಾಶಿಯ ವ್ಯಕ್ತಿಗಳು ನೈಸರ್ಗಿಕವಾಗಿಯೇ ಸ್ವತಂತ್ರ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಅತ್ಯಂತ ಪ್ರಾಮಾಣಿಕ ಗುಣವನ್ನು ಹೊಂದಿದ ಇವರು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ದೃಢ ನಂಬಿಕೆಯನ್ನು ಹೊಂದಿರುತ್ತಾರೆ. ಇವರು ಕೆಲವೊಮ್ಮೆ ಪರಸ್ಪರ ಸಂಬಂಧಗಳಲ್ಲಿ ಘರ್ಷಣೆಯನ್ನು
ಉಂಟುಮಾಡುತ್ತಾರೆ ಎನ್ನಲಾಗುವುದು. ತನ್ನದೇ ಆದ ವಿಶೇಷ ವ್ಯಕ್ತಿತ್ವವನ್ನು ಹೊಂದಿರುವ ಇವರ ಮಾನಸಿಕ ಗುಣವು ವಿಭಿನ್ನತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಜೂನ್ 2018ರಲ್ಲಿ ಗ್ರಹಗಳು ವಿಭಿನ್ನ ಚಲನೆಯನ್ನು ಪಡೆದುಕೊಳ್ಳುತ್ತವೆ. ಇವುಗಳ ಬದಲಾವಣೆಯಿಂದ ಧನು ರಾಶಿಯವರ ಮೇಲೆ ಗಣನೀಯವಾದ ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ. ಪ್ರೀತಿ, ಸಂಬಂಧ, ಸಂಪಾದನೆ, ಉದ್ಯೋಗ ವಿಚಾರದಲ್ಲಿ ಗಮನೀಯ ರೀತಿಯಲ್ಲಿ ಬದಲಾವಣೆಯನ್ನು ಕಾಣುವ ಸಧ್ಯತೆಗಳಿವೆ.
ಮಕರ
ಇವರು ಸಾಮಾನ್ಯವಾಗಿ ಎಲ್ಲಾ ವಿಚಾರಗಳನ್ನು ತಿಳಿದಿರುತ್ತಾರೆ. ಹೆಚ್ಚಿನದಾಗಿ ಕೆಟ್ಟದ್ದನ್ನೇ ಬಯಸುತ್ತಾರೆ ಎನ್ನಬಹುದು. ಇವರು ಯಾವುದೇ ಕಾರಣಕ್ಕೂ ಇತರರನ್ನು ಕ್ಷಮಿಸುವುದಿಲ್ಲ. ಬದಲಿಗೆ ತಾವು ತಪ್ಪು ಮಾಡಿದರೆ ಅದನ್ನು ಗಣನೆಗೆ ತರುವುದಿಲ್ಲ. ಸೂಕ್ಷ್ಮ ಹಾಗೂ ದೃಢ ಮನಸ್ಸಿನವರಾದ ಇವರು ಇತರರಿಂದ ಬರುವ ಎಲ್ಲಾ ವಸ್ತುಗಳನ್ನು ಬಹಳ ಸಂತೋಷದಿಂದ ಸ್ವೀಕರಿಸುತ್ತಾರೆ. ಅದೇ ತಾವು ನೀಡಬೇಕು ಎಂದಾಗ ಮೌನವನ್ನು ಸ್ವೀಕರಿಸುವರು. ಇನ್ನು ಸೂರ್ಯನು ಮಕರ ರಾಶಿಚಕ್ರದ
ಮೇಲೆ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಜೀವನದಲ್ಲಿ ಕಠಿಣವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಜೂನ್ 21ರ ನಂತರ ಕೆಲವು ಸಮಸ್ಯೆಗಳು ನಿಮ್ಮನ್ನು ಸುತ್ತಬಹುದು. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸಂಚು ಮಾಡಬಹುದು. ಈ ಎಲ್ಲಾ ಪ್ರಕ್ರಿಯೆಯು ನಿಮ್ಮ ಮಾನಸಿಕ ಚಿಂತನೆಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಪನ್ಮೂಲಗಳನ್ನು ನೀವೇ ನಾಶಗೊಳಿಸಬಹುದು ಅಥವಾ ವ್ಯರ್ಥಗೊಳಿಸಬಹುದು. ಅದು ಸಮಯ ಅಥವಾ ಹಣವಾಗಿರಬಹುದು. ಯಾವುದಾದರನ್ನೂ ನಾವು ಕಳೆದುಕೊಂಡ ನಂತರವೇ ಅದರ ಬೆಲೆ ಅರ್ಥವಾಗುತ್ತದೆ. ಅಲ್ಲಿಯವರೆಗೂ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ.