For Quick Alerts
ALLOW NOTIFICATIONS  
For Daily Alerts

30-12-2018: ಭಾನುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಸೂರ್ಯದೇವರ ಹೆಂಡತಿ ಸಂಜಾದೇವಿ. ಈಕೆ ದೈತ್ಯಗುರು ಶುಕ್ರಾಚಾರ್ಯರ ಮೊಮ್ಮಗಳು. ದೇವಶಿಲ್ಪಿ ವಿಶ್ವಕರ್ಮ ಈಕೆಯ ಸಹೋದರ. ರೂಪವತಿಯಾದ ಇವಳನ್ನು ಸೂರ್ಯ ಇಷ್ಟಪಟ್ಟು ಮದುವೆಯಾಗುತ್ತಾನೆ. ಸಂಜಾಗೂ ಸೂರ್ಯ ಇಷ್ಟವಾದರೂ ಅವನ ದೇಹದ ಸುಡುವ ಶಾಖ ಅವಳಿಗೆ ಭಯ ಹುಟ್ಟಿಸುತ್ತದೆ. ಪ್ರತಿಬಾರಿ ಸೂರ್ಯ ತನ್ನ ಬಳಿಗೆ ಬಂದಾಗಲೂ ಅವಳಿಗೆ ತಾನು ಆ ಶಾಖಕ್ಕೆ ಸುಟ್ಟು ಹೋಗುತ್ತೇನೇನೋ ಎಂದೇ ಅನಿಸುತ್ತಿರುತ್ತದೆ. ಸೂರ್ಯನಿಗೂ ಸಂಜಾದೇವಿಗೂ ಮೂರುಮಕ್ಕಳು ಹುಟ್ಟುತ್ತಾರೆ. ಮೊದಲನೆಯವ ಯಮ, ಎರಡನೆಯವ ಮನು, ಮೂರನೆಯವಳು ಯಮುನೆ. ಮೂರು ಮಕ್ಕಳಾದ ಮೇಲೆ ಸಂಜಾದೇವಿಗೆ ಇನ್ನೂ ಸೂರ್ಯನ ಶಾಖ ಸಹಿಸುವುದು ಅಸಾಧ್ಯ ಎನಿಸುತ್ತದೆ.

ತನ್ನಂತೆಯೇ ಇರುವ ಛಾಯಾ ಮೂರ್ತಿಯನ್ನು ನಿರ್ಮಿಸಿ, ತನ್ನ ಶಕ್ತಿಯಿಂದ ಅದಕ್ಕೆ ಜೀವ ನೀಡಿ, ತನ್ನಂತೆಯೇ ಸೂರ್ಯನನ್ನೂ ಮಕ್ಕಳನ್ನೂ ನೊಡಿಕೊಳ್ಳಬೇಕೆಂದೂ, ಯಾವ ಕಾರಣಕ್ಕೂ ನಿಜ ವಿಷಯ ಹೇಳಬಾರದೆಂದು ಛಾಯೆಯಿಂದ ಪ್ರಮಾಣ ಮಾಡಿಸಿಕೊಂಡ ಸಂಜಾ ತಪಸ್ಸಿಗೆ ಹೊರಟು ಹೋಗುತ್ತಾಳೆ. ಸುಮಾರು ದಿನಗಳು ಸೂರ್ಯನಿಗೆ ಸಂಜ್ಞೆ ತನ್ನ ಬಳಿಯಿಲ್ಲವೆಂದು ತಿಳಿಯುವುದೇ ಇಲ್ಲ. ಛಾಯೆಯನ್ನೇ ಸಂಜ್ಞೆಯೆಂದು ತಿಳಿದಿರುತ್ತಾನೆ. ಅವಳಿಂದಲೂ ಮೂರು ಮಕ್ಕಳಾಗುತ್ತದೆ. ಶನಿ, ಸಾವರ್ಣಿ ಮನು ಹಾಗೂ ತಪತಿ. ಯಮುನೆ ಹಾಗೂ ತಪತಿ ನದಿಗಳಾಗಿ ಹರಿಯುತ್ತಾರೆ. ಸೂರ್ಯನಿಗೆ ಕ್ರಮೇಣ ಛಾಯೆಯಲ್ಲಿ ಅನುಮಾನ ಮೂಡುತ್ತದೆ. ಇವಳು ಸಂಜಾnಳಲ್ಲ ಬೇರೆ ಯಾರೋ ಎಂಬ ಭಾವನೆ ಬರುತ್ತದೆ. ಆದರೆ ಅವನ ಅನುಮಾನಕ್ಕೆ ಪುಷ್ಠಿ ದೊರೆಯುವುದಿಲ್ಲ. ತಪ್ತನಾದ ಸೂರ್ಯ ರೈವತ ಪರ್ವತದ ಮಗಳಾದ ರಾಯನ್ನು ಮದುವೆಯಾಗಿತ್ತಾನೆ. ಅವರಿಬ್ಬರಿಗೂ ರೇವತ ಎಂಬ ಮಗ ಹುಟ್ಟುತ್ತಾನೆ. ನಂತರ ಪ್ರಭೆ ಎಂಬುವಳನ್ನು ಮದುವೆಯಾಗುತ್ತಾನೆ. ಅವಳಿಂದ ಪ್ರಭಾತ ಜನಿಸುತ್ತಾನೆ. ಆದರೂ ಸೂರ್ಯನಿಗೆ ಸಮಾಧಾನವಿಲ್ಲ.

ಅವನಿಗೆ ಸಂಜ್ಞೆಯಷ್ಟು ಆಪ್ತರು ಯಾರೂ ಇಲ್ಲ ಎನಿಸುತ್ತದೆ.ಆದರೆ ಛಾಯೆ ಸಂಜ್ಞೆಯಲ್ಲ ಎಂಬ ಅನುಮಾನ. ಕೊನೆಗೆ ಛಾಯೆಯನ್ನೇ ಘಟ್ಟಿಸಿ ನಿಜ ವಿಷಯವನ್ನು ಹೇಳಲು ಆಗ್ರಹಿಸುತ್ತಾನೆ. ಹೆದರಿದ ಛಾಯೆ ಸಂಜಾ ತನ್ನನ್ನು ನಿರ್ಮಿಸಿ ತಪಸ್ಸಿಗೆ ಹೊರಟುಹೋದ ವಿಷಯ ತಿಳಿಸುತ್ತಾಳೆ. ಸಂಜಾದೇವಿ ತನ್ನ ತಾಪವನ್ನು ಸಹಿಸಲಾರದೆಯೇ ದೂರವಾದಳೆಂದು ಸೂರ್ಯನಿಗೆ ಅರ್ಥವಾಗುತ್ತದೆ. ಅವಳ ಬಗ್ಗೆ ಕನಿಕರ ಮೂಡುತ್ತದೆ. ಸಂಜಾnಳನ್ನು ಅವನು ಕಳೆದುಕೊಳ್ಳಲು ಇಷ್ಟವಿಲ್ಲದೆ ಅವಳು ಎಲ್ಲಿರುವಳೆಂದು ಹುಡುಕುತ್ತಾನೆ. ಸಂಜಾnದೇವಿ ಕುದುರೆಯ ವೇಷದಲ್ಲಿ ಉತ್ತರ ಕುರುದೇಶದಲ್ಲಿ ಇರುತ್ತಾಳೆ. ಸೂರ್ಯನೂ ಸಹ ಕುದುರೆಯ ವೇಷದಲ್ಲಿ ಅಲ್ಲಿಗೆ ಹೋಗುತ್ತಾನೆ. ಸೂರ್ಯ ಸಂಜಾnದೇವಿಯರ ಸಮಾಗಮವಾಗುತ್ತದೆ. ಆಗ ಹುಟ್ಟುವ ಮಕ್ಕಳೇ ಅಶ್ವಿ‌ನಿದೇವತೆಗಳು. ಇವರು ಅವಳಿಜವಳಿ. ಯಮಳರೆಂದೂ ಇವರನ್ನು ಕರೆಯುತ್ತಾರೆ. ಮುಂದೆ ಇವರು ದೇವವೈದ್ಯರೆಂದು ಹೆಸರುವಾಸಿಯಾಗುತ್ತಾರೆ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ಮಂ ಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ(30 ಡಿಸೆಂಬರ್ 2018)

ಮೇಷ(30 ಡಿಸೆಂಬರ್ 2018)

ಕೆಲಸದ ಸ್ಥಳದಲ್ಲಿ ಬೇಸರ, ನೀರಸ ವಾತಾವರಣ ಉಂಟಾಗಲಿದೆ. ಯಾವ ಕೆಲಸವೂ ವೇಗವಾಗಿ ನಡೆಯುವುದಿಲ್ಲ. ಎಲ್ಲವೂ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಈದಿನ ಬಹು ದೀರ್ಘವಾಗಿದೆ ಎನಿಸುವುದು. ಕುಲದೇವರನ್ನು ಪ್ರಾರ್ಥಿಸಿ ಮತ್ತು ನವಗ್ರಹ ದೇವಸ್ಥಾನಕ್ಕೆ ಭೇಟಿ ಕೊಡಿ. ಅನೇಕರಿಗೆ ಕೆಲಸ ಕಾರ್ಯಗಳಲ್ಲಿ ಉನ್ನತಿ ದೊರೆಯುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಮಕ್ಕಳ ಮತ್ತು ಮೊಮ್ಮಕ್ಕಳ ಭೇಟಿಯು ಮನಸ್ಸಿಗೆ ಸಂತೋಷವನ್ನುಂಟು ಮಾಡುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ.ಕಲಿಯುವ ವಿಚಾರದಲ್ಲಿ ಅತಿ ಆಸಕ್ತಿಯನ್ನು ಹೊಂದಿರುವ ನಿಮಗೆ ಅದರಿಂದ ದೊರೆಯುವ ಆನಂದವನ್ನು ಅನುಭವಿಸುವಿರಿ. ಸಮಾಜದಲ್ಲಿ ಗೌರವ ಆದರಗಳು ದೊರೆಯುವವು. ನೂತನ ವಾಹನ ಖರೀದಿ ಬಗ್ಗೆ ಚಿಂತೆ ಮಾಡುವಿರಿ.9845743807 ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಉದ್ಯೋಗದ ಸಲುವಾಗಿ ಸಂದರ್ಶನಕ್ಕಾಗಿ ದೂರದ ಊರಿಗೆ ತೆರಳುವ ಸಾಧ್ಯತೆ ಇರುವುದು. ಮನೆಯವರ ಅಸಹಕಾರವನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನೀವು ಕಾರ್ಯ ಪ್ರವೃತ್ತ ರಾದಲ್ಲಿಯಶಸ್ಸನ್ನುಹೊಂದುವಿರಿ.ಒತ್ತಡ ತರುವ ವಿರೋಧಿಗಳು ನಿಮ್ಮ ಸುತ್ತಲೂ ಇರುತ್ತಾರೆ. ನಿಮ್ಮನ್ನೆ ಇಕ್ಕಟ್ಟಿಗೆ ಸಿಲುಕಿಸುವ ತಂತ್ರವೂ ಅವರದಾಗಿರುತ್ತದೆ. ಆದರೆ ವಿರೋಧಿಗಳ ಆಟ ನಡೆಯದೆ ಅವರು ಹಿಮ್ಮೆಟ್ಟುವರು.ಮನೆಯ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ. ಜರೂರು ಆಗಿರುವ ಕೆಲಸದ ರೂಪರೇಷೆಗಳನ್ನು ತಿಳಿದು ಕಾರ್ಯಪ್ರವೃತ್ತರಾಗಿ. ಹಣ ಹೇಗೆ ಬರುತ್ತದೆಯೋ ಹಾಗೇ ಖರ್ಚಾಗುವುದು. ವ್ಯವಹಾರದಲ್ಲಿ ಹಿಡಿತವಿರಲಿ.9845743807 ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಬೇರೆಯವರೊಂದಿಗೆ ಅತಿಯಾದ ಮಾತು, ಹರಟೆಯು ನಿಮ್ಮ ಸಂಗಾತಿಯ ಮುನಿಸಿಗೆ ಕಾರಣವಾಗುವುದು. ಸಣ್ಣ ವಿಷಯವೇ ದೊಡ್ಡ ರಾದ್ಧಾಂತವಾಗಿ ಪರಿಣಮಿಸುವುದರಿಂದ ಈ ಬಗ್ಗೆ ಜಾಗ್ರತೆ ಅಗತ್ಯ. ಮಕ್ಕಳ ವರ್ತನೆಯಿಂದ ಸಹನೆಯನ್ನು ಕಳೆದುಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವಿಶ್ವಾಸದಿಂದ ಇರಿ. ಬಂದವರೆದುರು ಮಕ್ಕಳ ಅವಗುಣಗಳನ್ನು ಹೇಳಿಕೊಳ್ಳಬೇಡಿ. ಮಾನಸಿಕ ಕಿರಿಕಿರಿಯಿಂದ ಹೊರಬರಲು ಶಿವ ಪಂಚಾಕ್ಷ ರಿ ಮಂತ್ರವನ್ನು ಪಠಿಸಿ. ಹತ್ತಿರದ ಬಹುಮುಖ್ಯ ಪ್ರವಾಸವನ್ನು ಕೈಗೊಳ್ಳುವಿರಿ. ಕೆಲವರಿಗೆ ಕಚೇರಿಯ ಬದಲಾವಣೆಯ ಬಗ್ಗೆ ಸುತ್ತೋಲೆ ದೊರೆಯುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಪಠಿಸುವುದರಿಂದ ಒಳಿತಾಗುವುದು. ನಿಮ್ಮ ಇಚ್ಛಿತ ಕಾರ್ಯಗಳಿಗೆ ಹಣ ಖರ್ಚಾಗುವುದು.9845743807

ಅದೃಷ್ಟ ಸಂಖ್ಯೆ:4

ಕಟಕ

ಕಟಕ

ನಿಮ್ಮ ಹತ್ತಿರದ ಬಂಧು, ಬಾಂಧವರು ಮತ್ತು ಸ್ನೇಹಿತರು ನಿಮ್ಮ ಜೊತೆಗೆ ಬರುವರು. ನಿಮ್ಮ ಕಾರ್ಯವನ್ನು ಶ್ಲಾಘಿಸುವ ಜನರು ಹಣ ಕೊಡುವ ಮೂಲಕ ನಿಮ್ಮ ಕಾರ್ಯಗಳಿಗೆ ನೆರವಾಗುವರು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.ಅತ್ಯಂತ ಸೂಕ್ಷ್ಮವಾದ ಕೆಲಸ ಮತ್ತು ಗೌಪ್ಯತೆಯ ಕೆಲಸದಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿದ್ದು ಈ ಬಗ್ಗೆ ನಿಮ್ಮ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ. ಕೆಲವರಿಗೆ ಸ್ಥಿರಾಸ್ಥಿ ಖರೀದಿಸುವ ಸಾಧ್ಯತೆ ಇರುತ್ತದೆ. ನವವಿವಾಹಿತರಿಗೆ ಮಧುಚಂದ್ರದ ಸಮಯಕ್ಕೆ ಅವಕಾಶ ಕೂಡಿ ಬರಲಿದೆ. ವೃತ್ತಿಯಲ್ಲಿನ ಸಮಸ್ಯೆಗಳನ್ನು ಬದಿಗೊತ್ತಿ ಹಾಯಾಗಿ 2 ದಿನ ಪ್ರವಾಸ ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು.9845743807 ಅದೃಷ್ಟ ಸಂಖ್ಯೆ:9

ಸಿಂಹ

ಸಿಂಹ

ಹೊಸ ವಿಚಾರಗಳು ನಿಮ್ಮ ದಾರಿಗೆ ಅನಿರೀಕ್ಷಿತ ತೊಡಕಾಗಬಲ್ಲವು. ನೀವು ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು. ಇಲ್ಲವೇ ಅಪವಾದಗಳು ಸುತ್ತುವರಿಯುವವು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದರಿಂದ ಅನಗತ್ಯ ತಲ್ಲಣಗಳನ್ನು ಬಿಡಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಹಸುವಿಗೆ ತೊಗರಿಬೇಳೆ ಮತ್ತು ಸ್ವಲ್ಪ ಬೆಲ್ಲವನ್ನು ತಿನ್ನಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಮನೆಯಿಂದ ಹೊರಡುವಾಗ ಲಕ್ಷ್ಮೀನಾರಸಿಂಹದೇವರನ್ನು ಸ್ಮರಿಸಿಕೊಂಡು ಹೊರಡಿ. ಮನಸ್ಸಿನಲ್ಲಿ ಇಲ್ಲದ ವಿಚಾರಗಳನ್ನು ತುಂಬಿಕೊಂಡು ವಾಹನ ಚಲಾಯಿಸದಿರಿ. ಬಹುಮುಖ್ಯ ಕೆಲಸಗಳಿಗೆ ನೀಡುವ ಪರವಾನಗಿ ಪತ್ರವನ್ನು ಓದಿ ಸಹಿ ಮಾಡಿ.9845743807 ಅದೃಷ್ಟ ಸಂಖ್ಯೆ:8

ಕನ್ಯಾ

ಕನ್ಯಾ

ನಿಮ್ಮ ನಿರೀಕ್ಷೆಯನ್ನು ಮೀರಿ ಕೆಲಸ ಕಾರ್ಯಗಳು ನಡೆಯುವವು. ಹೆಚ್ಚಿನ ಧೈರ್ಯದ ಅಗತ್ಯವಿದೆ. ಇದರಿಂದ ಆರ್ಥಿಕ ಸಬಲತೆ ಸಿಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.ನೀವು ಧೈರ್ಯಶಾಲಿಗಳೆಂಬ ಮಾತು ನಿಜ. ಆದರೆ ಕೆಲವು ಜವಾಬ್ದಾರಿಗಳ ಕಹಿ ಅನುಭವವು ಇಂದಿನ ಕಾರ್ಯದಲ್ಲಿ ನೆನಪಾಗಿ ನೂತನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ನೆಪ ಹುಡುಕುವಿರಿ. ಹಾಗೆ ಮಾಡದೆ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಾಗಿ. ಅನುಕೂಲವಾಗುವುದು.ನಿಮ್ಮ ಅನೇಕ ರೀತಿಯ ಹೊಸ ಸಂಪರ್ಕಗಳು ನಿಮ್ಮನ್ನು ಹುರಿದುಂಬಿಸುವವು ಮತ್ತು ಮನದಲ್ಲಿ ನೂತನ ಕಾರ್ಯವನ್ನು ಹಮ್ಮಿಕೊಳ್ಳಲು ಸಹಕಾರಿಯಾಗುವುದು. ನಿಮ್ಮ ಗೆಳೆಯರು ನಿಮ್ಮ ಬುದ್ಧಿಮತ್ತೆಯನ್ನು ಕೊಂಡಾಡುವರು.9845743807 ಅದೃಷ್ಟ ಸಂಖ್ಯೆ:6

ತುಲಾ

ತುಲಾ

ಮಾಡುವ ಕೆಲಸದಲ್ಲಿ ಒಂದು ಕ್ರಮ ಇರಲಿ. ಒಂದನ್ನು ಅರ್ಧಕ್ಕೆ ಬಿಟ್ಟು ಮತ್ತೊಂದು ಕೆಲಸವನ್ನು ಆರಂಭಿಸದಿರಿ. ಸಾಲ ಕೊಟ್ಟವರು ನಿಮ್ಮ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಆದರೆ ಸ್ವಲ್ಪವಾದರೂ ಸಾಲ ತೀರಿಸುವುದು ಕ್ಷೇಮ.ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯ ಗೊತ್ತಿದ್ದರೂ ಮತ್ತೆ ಮತ್ತೆ ಎಡುವುತ್ತಿದ್ದೀರಿ. ಸ್ನೇಹಿತನ ಮಾತಿಗೆ ಮರುಳಾಗಿ ಹಣವನ್ನು ಕೊಡುವಿರಿ. ಆದರೆ ಅದು ಪುನಃ ವಾಪಾಸ್ಸು ಬರುವ ಸಾಧ್ಯತೆ ಕಡಿಮೆ ಇರುತ್ತದೆ.ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಗೆ ಇತರರು ಬೇಸರ ವ್ಯಕ್ತಪಡಿಸುವರು. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಗ್ರಹಗತಿಗಳು ಕೆಟ್ಟಾಗ ಮಡದಿ ಮಕ್ಕಳೇ ದೂರುವರು. ಮೌನವಾಗಿ ಭಗವಂತನನ್ನು ಪ್ರಾರ್ಥಿಸಿ.9845743807 ಅದೃಷ್ಟ ಸಂಖ್ಯೆ:5

ವೃಶ್ಚಿಕ

ವೃಶ್ಚಿಕ

ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು. ಬಂಧು ಬಾಂಧವರು ನಿಮ್ಮ ಸಹಾಯಕ್ಕೆ ಬರುವರು. ವಿವಿಧ ಮೂಲಗಳಿಂದ ಬರಬೇಕಾದ ಹಣ ನಿಮ್ಮ ಕೈಸೇರುವ ಸಾಧ್ಯತೆ ಇರುತ್ತದೆ. ಹೊಸ ಹೊಸ ಚಿಂತನೆಗಳು ಸಾಕಾರಗೊಳ್ಳುವವು. ನಿಮ್ಮ ಜೀವನದ ಮಾರ್ಗದರ್ಶಕರಿಂದ ಹೆಚ್ಚಿನ ಮಾಹಿತಿ ದೊರೆಯುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.ವೃತ್ತಿಯಲ್ಲಿ ಅನುಕೂಲವಾಗುವುದು. ನಿಮ್ಮ ಕಾರ್ಯ ಯೋಜನೆಗಳಿಗೆ ಹಸಿರು ನಿಶಾನೆ ದೊರೆಯುವುದು. ನಿಮ್ಮ ಬರಹಗಳಿಗೆ ಹೆಚ್ಚಿನ ಬೇಡಿಕೆ ಬರುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:4

ಧನುಸ್ಸು

ಧನುಸ್ಸು

ಅಮೃತಪೂರ್ಣ ಸಿಹಿಯೊಂದಿಗಿನ ನಿಮ್ಮ ಮಾತುಗಳು ನಿಮ್ಮ ವಿರೋಧಿಗಳನ್ನು ಕೂಡಾ ನಿಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುವವು. ಅಜಾತ ಶತ್ರುಗಳಿಂದ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಹಲವಾರು ಕಾರ್ಯ ಯೋಜನೆಗಳನ್ನು ಒತ್ತಡದಲ್ಲಿ ನಿರ್ವಹಿಸಲು ಮುಂದಾಗುವಿರಿ. ನಿಧಾನವಾಗಿ ಆದರೂ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ನಿಮ್ಮ ದೌರ್ಬಲ್ಯವನ್ನು ಪರರ ಮುಂದೆ ಪ್ರದರ್ಶಿಸದಿರುವುದು ಒಳ್ಳೆಯದು.ಬಹು ದೊಡ್ಡ ಬಂಡವಾಳದೊಂದಿಗೆ ವ್ಯಾಪಾರ, ವ್ಯವಹಾರಗಳನ್ನು ಆರಂಭಿಸುವಿರಿ. ಇದರಿಂದ ಹೆಚ್ಚಿನ ಲಾಭ ಕಂಡು ಬರುವುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು. 9845743807 ಅದೃಷ್ಟ ಸಂಖ್ಯೆ:5

ಮಕರ

ಮಕರ

ನಿಮ್ಮ ವಿಶೇಷವಾದ ಕಾರ್ಯಕ್ಷ ಮತೆ ಕಚೇರಿಯಲ್ಲಿ ಪ್ರಶಂಸೆಗೆ ಒಳಗಾಗುವ ಹೇರಳ ಅವಕಾಶಗಳು ಲಭ್ಯವಾಗಿರುತ್ತವೆ. ಸ್ಥಿರಾಸ್ತಿ ಖರೀದಿಯ ಬಗ್ಗೆ ಮಾತುಕತೆ ನಡೆಸುವಿರಿ ಮತ್ತು ಅದರಲ್ಲಿ ಸಫಲತೆಯನ್ನು ಕಾಣುವಿರಿ.ಮಕ್ಕಳ ವಿಚಾರವಾಗಿ ಆತಂಕದ ಕ್ಷ ಣಗಳನ್ನು ಎದುರಿಸುವಿರಾದರೂ ಸಂತೋಷದ ವಾರ್ತೆಯೂ ಸಿಗಲಿದೆ. ವಿದ್ಯಾಗುರುಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುವಿರಿ. ಇದರಿಂದ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.ನಿಮ್ಮದೇ ಆದ ಕೆಲವು ನಿರ್ದಿಷ್ಟ ಯೋಜನೆಗಳನ್ನು ನೀವು ಸಾಧಿಸಿ ತೋರಿಸುವ ಮೂಲಕ ಬಂಧು ಬಳಗದವರಲ್ಲಿ ವಿಶೇಷ ಅಭಿಮಾನಕ್ಕೆ ಪಾತ್ರರಾಗುವಿರಿ. ಒಂದು ಮಹತ್ತರ ಕಾರ್ಯವನ್ನು ಮಾಡಿ ಮುಗಿಸಿದ ತೃಪ್ತಿ ನಿಮ್ಮದಾಗುವುದು.9845743807 ಅದೃಷ್ಟ ಸಂಖ್ಯೆ:9

ಕುಂಭ

ಕುಂಭ

ಸಾಮಾಜಿಕವಾದ ನೆಲೆಯಲ್ಲಿ ತೊಂದರೆಗಳಿಗೆ ಹೆಚ್ಚಿನ ಅವಕಾಶಗಳು ಬರುವವು. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಖರ್ಚು ವೆಚ್ಚಗಳಲ್ಲಿ ಕೈ ಹಿಡಿತ ಮಾಡಬೇಕಾಗುವುದು. ಮನೆಯಲ್ಲಿ ಅಶಾಂತಿಯ ವಾತಾವರಣ ತಲೆದೋರುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಭಕ್ತಿಯಿಂದ ಪೂಜಿಸಿ. ಆಕೆಯು ನಿಮ್ಮ ಸಂಕಷ್ಟಗಳನ್ನು ದೂರಮಾಡಿ ಮನಸ್ಸಿಗೆ ನೆಮ್ಮದಿ ನೀಡುವಳು.ನಿಮ್ಮ ಹಲವು ವಿಚಾರಗಳಿಗೆ ಹಿರಿಯರೊಬ್ಬರ ಸಲಹೆಯನ್ನು ಸ್ವೀಕರಿಸಿ ಮತ್ತು ನಿಮಗೆ ಸ್ತ್ರೀ ಸಮೂಹ ಬೆಂಗಾವಲಿಗೆ ನಿಲ್ಲಲಿದೆ. ದೇವಿಯು ನಿಮಗೆ ಮಹಿಳೆ ರೂಪದಲ್ಲಿ ಸಹಾಯ ಮಾಡುವಳು.9845743807

ಅದೃಷ್ಟ ಸಂಖ್ಯೆ:2

 ಮೀನ

ಮೀನ

ಮಹತ್ತರವಾದ ಕಾರ್ಯಗಳನ್ನು ಮುಂದೂಡುವುದು ಒಳಿತು. 5 ವರ್ಷದ ಒಳಗೆ ಇರುವ ಹೆಣ್ಣು ಮಕ್ಕಳಿಗೆ ಸಿಹಿ ಹಂಚಿರಿ. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಕೈ ಹಿಡಿತ ಮಾಡಬೇಕಾಗುವುದು. ಪ್ರಜ್ಞಾರೂಪದಿಂದ ಇಡೀ ಜಗತ್ತನ್ನೇ ವ್ಯಾಪಿಸಿಕೊಂಡಿರುವ ಶ್ರೀದೇವಿಯು ನಿಮಗೆ ಅಭಯ ಹಸ್ತ ನೀಡಿರುವಳು. ಆಕೆಯ ಕೃಪಾ ಕಟಾಕ್ಷ ದಿಂದ ನಿಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು.ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರು ಹಿರಿಯರು. ಹಾಗಾಗಿ ನೀವು ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯ ರೂಪಿಸಿಕೊಳ್ಳಿ. ಇದರಿಂದ ಹೆಚ್ಚಿನ ಆತಂಕದಿಂದ ದೂರ ಉಳಿಯಬಹುದು.9845743807

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-30-December-2018

Know what astrology and the planets have in store for you today. Choose your zodiac sign and read the details..
Story first published: Saturday, December 29, 2018, 16:58 [IST]
X
Desktop Bottom Promotion