For Quick Alerts
ALLOW NOTIFICATIONS  
For Daily Alerts

28-10-2018: ಭಾನುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಭಾನುವಾರದ ದಿನ ಸೂರ್ಯೋದಯದಿಂದ ದಿನ, ಎಂದಿನ ಕೆಲಸಗಳು ಪ್ರಾರಂಭ. ಕೆಲಸಗಳಿಂದಲೇ ಜೀವನ. ಆದುದರಿಂದ ಕೆಲಸಕ್ಕೆ ಕಾರಕ ಸೂರ್ಯ. ಇದರಿಂದ ಸೂರ‍್ಯನು ಉದ್ಯೋಗಕಾರಕನಾದನು.

ಮನುಷ್ಯನಿಗೆ ಬದುಕುವ ಶಕ್ತಿ ಕೊಡುವವನೇ ದೇವರು. ಅಂತಹ ಶಕ್ತಿ ಕೊಡುವವನು ಈ ಸೂರ್ಯ. ನಾವು ಜೀವಿಸುತ್ತಿರುವ ಪ್ರಕೃತಿಯೇ ಆ ಸೂರ್ಯನದು. ನಮ್ಮ ದರ್ಶನ ನಮಗಾಗಬೇಕೆಂದರೆ ಸೂರ್ಯ ಬೇಕು. ನಾವು ಜ್ಞಾನಿಗಳಾಗುತ್ತ ಹೋದಂತೆ ನಂಬಿಕೆಯ ರೀತಿಯನ್ನೂ ಬದಲಾಯಿಸಿಕೊಂಡಿದ್ದೇವೆ.

your daily horoscope-28-october-2018

ಹಿಂದಿನವರು ಸೌರಮಂಡಲದ ಬಗ್ಗೆ ತಿಳಿದಿರದಿದ್ದರೂ ಸೂರ್ಯನನ್ನು ನಮಿಸಿ ಪೂಜಿಸುತ್ತಿದ್ದರು. ಸದಾ ಸನ್ನಡತೆಯಲ್ಲಿಯೇ ಜೀವಿಸಲು ಯೋಚಿಸುತ್ತಿದ್ದರು.ಪ್ರತ್ಯಕ್ಷ ದೈವನಾಗಿರವುದರಿಂದ ಭಾಸ್ಕರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಮೇಷ

ಮೇಷ

ದೂರದ ಸಂಬಂಧಿಗಳು ಅಥವಾ ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇರುವುದು. ಅವರಿಗೆ ಅಗತ್ಯವಾದ ಸಲಹೆ, ಸಹಕಾರಗಳನ್ನು ನೀಡಿ ಸಂತೋಷ ಪಡಿಸುವಿರಿ.ಮಾತೃ ವರ್ಗದವರಿಂದ ಅಲ್ಪ ಕಿರಿಕಿರಿ ಆಗುವುದು. ಮಾತಿನ ಜಾಣ್ಮೆ ಹಾಗೂ ಹಿರಿತನದಿಂದಾಗಿ ಕುಟುಂಬದಲ್ಲಿನ ಬಿಗುವಿನ ವಾತಾವರಣವನ್ನು ದೂರ ಮಾಡಬಲ್ಲಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು.ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ಸಂಗಾತಿಯ ಸಲಹೆಯನ್ನು ಈ ವಿಷಯದಲ್ಲಿ ಕೇಳಿ ಪಡೆಯಿರಿ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಯಾರನ್ನು ದಿಢೀರನೆ ನಂಬಲು ಹೋಗದಿರಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯಕವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆಯ ಸದಸ್ಯರೊಡನೆ ಮತ್ತು ನೆರೆಹೊರೆಯ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳುವುದು ಕ್ಷೇಮ.ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ. ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ನೊಂದುಕೊಳ್ಳದಿರಿ. ಕೆಲವರಿಗೆ ತಮ್ಮ ಪ್ರೀತಿ, ವಿಶ್ವಾಸವನ್ನು ಅಭಿವ್ಯಕ್ತಗೊಳಿಸುವ ಕ್ರಿಯೆ ಗೊತ್ತಿರುವುದಿಲ್ಲ. ಅಂತಹವರು ನಿಮ್ಮನ್ನು ಅಂತರಂಗದಿಂದ ಪ್ರೀತಿಸುವರು.ತೀರ ಸನಿಹದಲ್ಲೇ ಇದ್ದ ಯಶಸ್ಸು ದೂರಕ್ಕೆ ಹೋಗುತ್ತಿದೆ ಎಂದು ಅನಿಸುತ್ತದೆ. ಮನೆಯ ಹಿರಿಯರ ಸಲಹೆ ಸೂಚನೆಯಂತೆ ಮುನ್ನಡೆಯಿರಿ. ಇದರಿಂದ ಅನುಕೂಲವಾಗುವುದು. ಆಂಜನೇಯ ಸ್ವಾಮಿ ಸ್ಮರಣೆ ಮಾಡಿ.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಕಾರ್ಯಾರಂಭದ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯವನ್ನು ಆರಂಭಿಸಿ. ನಿಮ್ಮ ಸದಿಚ್ಛೆಯಂತೆ ಭಗವಂತನು ಕರುಣೆ ತೋರುವರು.ಫಲಿತಾಂಶದ ಕಡೆಗೆ ತಲೆ ಕೆಡಿಸಿಕೊಳ್ಳದಿರಿ. ನಿಮ್ಮದು ಪರಿಶ್ರಮದ ಕೆಲಸವಾಗಿದ್ದರೆ ನಿಶ್ಚಿತವಾದ ಯಶಸ್ಸು ದೊರೆಯುವುದು. ದೈವಕೃಪೆ ನಿಮ್ಮ ಮೇಲೆ ಇರುವುದರಿಂದ ಫಲಿತಾಂಶದ ಕಡೆಗೆ ಅನುಮಾನ ಬೇಡ.ಕನಸ್ಸಿನಲ್ಲಿ ಕಂಡ ವಿಚಾರಗಳಿಗೂ ಈ ದಿನ ನಡೆಯುವ ವಿಚಾರಗಳಿಗೂ ತಾಳೆ ಆಗುತ್ತಿರುವುದು ನಿಮಗೆ ಸೋಜಿಗವನ್ನುಂಟು ಮಾಡುವುದು. ಕೆಲವು ಸಂದರ್ಭದಲ್ಲಿ ಮುಂದಾಗುವ ವಿಚಾರಗಳನ್ನು ಭಗವಂತನು ಕನಸ್ಸಿನ ರೂಪದಲ್ಲಿ ತೋರುವನು.

ಅದೃಷ್ಟ ಸಂಖ್ಯೆ:3

ಕಟಕ

ಕಟಕ

ಎಲ್ಲಾ ಕಾರ್ಯ, ಕಲಾಪಗಳಲ್ಲಿ ಸೋಲು ಕಾಣುತ್ತಿರುವ ಈ ಸಂದರ್ಭದಲ್ಲಿ ಸಕಲ ನಿರ್ವಿಘ್ನದಾಯಕನಾದ ಚೇತೋಹಾರಿ ಮಹಾಗಣಪನನ್ನು ಆರಾಧಿಸಿ. ಆತನ ಕೃಪೆಯಿಂದ ನಿಮ್ಮ ಕಾರ್ಯಗಳು ಕೈಗೂಡುವುದು.

ಕಷ್ಟಕಾಲದಲ್ಲಿಯೇ ನಿಜವಾದ ಗೆಳೆಯರ ಸ್ವಭಾವ ಗೊತ್ತಾಗುವುದು. ಹಾಗಾಗಿ ನಿಮ್ಮನ್ನು ಓಲೈಸಿ ನಿಮ್ಮಿಂದ ಸಹಾಯ ಪಡೆಯುವ ಗೆಳೆಯರು ನಿಮ್ಮಿಂದ ದೂರವಾಗುವರು. ನಿಮ್ಮ ಕಾರ್ಯದಲ್ಲಿ ತಪ್ಪನ್ನು ತಿಳಿಸುವ ಸ್ನೇಹಿತರೇ ನಿಮಗೆ ಸಹಾಯ ಮಾಡುವರು.ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬ ದಿಶೆಯಲ್ಲಿ ನೀವು ಹಲವು ಷೇರು ವ್ಯವಹಾರಗಳಲ್ಲಿ ಹಣ ಹೂಡುವಿರಿ. ನಿಮ್ಮ ದೂರದೃಷ್ಟಿಯಂತೆ ಖರೀದಿಸಿದ ಷೇರುಗಳ ಮೌಲ್ಯ ಹೆಚ್ಚಾಗುವ ಸಂಭವವಿರುತ್ತದೆ.

ಅದೃಷ್ಟ ಸಂಖ್ಯೆ:2

ಸಿಂಹ

ಸಿಂಹ

ಭಗವಂತನ ಆಟ ಬಲ್ಲವರಾರು ಒಮ್ಮೆ ಸುಖವನ್ನು ಕೊಡುವನು ಮತ್ತೊಮ್ಮೆ ದುಃಖವನ್ನುಂಟು ಮಾಡುವನು. ಅಂತೆಯೇ ನಿಮ್ಮನ್ನು ಗೌರವಿಸುವ ಅಭಿಮಾನಿಗಳ ಪ್ರಶಂಸೆಯು ನಿಮ್ಮನ್ನು ಹುರಿದುಂಬಿಸುವುದು. ಮುಂದಿನ ಕಾರ್ಯಗಳಿಗೆ ನಾಂದಿ ಆಗುವುದು.

ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಪರಿಶ್ರಮವಿರದ ಪ್ರಯತ್ನದಿಂದ ಲಕ್ಷ್ಮೀಯು ಪ್ರಸನ್ನಳಾಗಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಿ. ಸದ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚು ಶ್ರಮ ಪಡಬೇಕಾಗುವುದು.

ಪದೇ ಪದೇ ಬರುವ ನಿಮ್ಮಮುಂಗೋಪದಿಂದಾಗಿ ನಿಮ್ಮ ಸಂಗಾತಿಯ ಜತೆಯಲ್ಲಿ ಘರ್ಷಣೆ ಉಂಟಾಗುವುದು. ತದನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತಗಳು ಆಗದಂತೆ ಎಚ್ಚರ ವಹಿಸಿ.

ಅದೃಷ್ಟ ಸಂಖ್ಯೆ:1

ಕನ್ಯಾ

ಕನ್ಯಾ

ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್‌ ಕಹಾ ಹೇ ಅಂತ ನೋಡಿದರೆ ಬಗಲ್‌ ಮೇ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿ.ಸಮಯ ಸಾಧಕರನ್ನು ಎಷ್ಟೆಂದು ದೂರ ಇಡುತ್ತೀರಿ? ಆದರೂ ನಿಮ್ಮ ತಾರ್ಕಿಕ ಹೆಜ್ಜೆಗಳು ಅವರಿಗೆ ಪಾಠವನ್ನು ಕಲಿಸುವುದು ಮತ್ತು ಅವರು ನಿಮ್ಮಿಂದ ದೂರ ಸರಿಯಲು ಸಹಕಾರಿಯಾಗುವುದು.ಯಾರು ಹಿತವರು ಮೂವರೊಳಗೆ ಎಂಬ ಮಾತಿನ ಆಂತರ್ಯ ತಿಳಿಯಲು ಬಹಳ ಪ್ರಯತ್ನ ಪಡುವಿರಿ. ಆದರೆ ಯಾವುದೇ ದೃಢ ನಿರ್ಧಾರ ತಳೆಯುವಲ್ಲಿ ವಿಫಲರಾಗುವಿರಿ. ಮೂವರು ಗಣ್ಯವ್ಯಕ್ತಿಗಳ ಸಂಘರ್ಷ ನಿಮ್ಮನ್ನು ಚಿಂತೆಗೆ ಈಡು ಮಾಡುವುದು.

ಅದೃಷ್ಟ ಸಂಖ್ಯೆ:3

ತುಲಾ

ತುಲಾ

ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸದಾದ ಆಲೋಚನೆಯು ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.ದೂರದ ಊರಿಗೆ ಕ್ಷಿಪ್ರವಾದ ಪ್ರವಾಸ ಕೈಗೊಳ್ಳುವ ನಿರ್ಧಾರ ಮಾಡುವಿರಿ. ಇದರಿಂದ ಮಡದಿ ಮಕ್ಕಳು ಸಂತೋಷವನ್ನು ಹೊಂದುವರು. ನಿಮಗೂ ಯಾಂತ್ರಿಕ ಜೀವನದಿಂದ ಕೆಲಕಾಲ ವಿಶ್ರಾಂತಿ ದೊರೆಯುವುದು.ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ನಿಮ್ಮ ಕಚೇರಿಯಲ್ಲಿನ ದಿಗ್ಗಜರ ಭಿನ್ನಾಭಿಪ್ರಾಯವು ನಿಮಗೆ ವರವಾಗಿ ಪರಿಣಮಿಸುವುದು. ಇದರಿಂದ ನಿಮ್ಮ ಕಾರ್ಯ ಸುಲಲಿತವಾಗುವುದು.

ಅದೃಷ್ಟ ಸಂಖ್ಯೆ:2

ವೃಶ್ಚಿಕ

ವೃಶ್ಚಿಕ

ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡ ಹಾಗೆ ಇಂದಿನ ಪರಿಸ್ಥಿತಿ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ನೀವು ಪರರಿಗೆ ಉಪಕಾರ ಆಗಲಿ ಎಂದು ಬುದ್ಧಿಮಾತು ಹೇಳಿದರೆ ಅದು ವ್ಯರ್ಥವಾಗುವುದು. ವ್ಯರ್ಥವಾಗುವ ಇಂತಹ ಕಾರ್ಯಗಳಿಗೆ ಕೈ ಹಾಕಬೇಡಿ.ವೈದ್ಯರ ಸಲಹೆ ಸೂಚನೆಗಳನ್ನು ಶಿಸ್ತಿನಿಂದ ಪರಿಪಾಲಿಸಿ. ಇದರಿಂದ ವಿಮುಖರಾದರೆ ಕಷ್ಟವೇ ಎದುರಾಗುವುದು. ಹಣವು ನೀರಿನಂತೆ ಖರ್ಚಾಗುವುದು. ಅನಾವಶ್ಯಕ ವಾದ, ವಿವಾದಗಳಿಂದ ದೂರವಿರಿ.ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಪುನಃ ಜೋಡಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳು ನಿಮ್ಮಂತೆ ಆಗುತ್ತಿಲ್ಲ ಎಂದು ದುಡುಕಿ ಪರರನ್ನು ನೋಯಿಸದಿರಿ. ಆದಷ್ಟು ತಾಳ್ಮೆ ಇರಲಿ. ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗಿ.

ಅದೃಷ್ಟ ಸಂಖ್ಯೆ:6

ಧನಸ್ಸು

ಧನಸ್ಸು

ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ವಿಷ್ಣುವಿನ ಸ್ತೋತ್ರ ಪಠಿಸಿ ಮತ್ತು ಹೆಸರುಕಾಳನ್ನು ದಾನ ಮಾಡಿ.

ಹಳೆ ಕಬ್ಬಿಣ, ರದ್ದಿ ಪೇಪರ್‌ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಯಿಂದ ಹಣಕಾಸು ಸಾಧ್ಯತೆ ಇದೆ. ಶನೇಶ್ಚರ ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ ಆತನ ಪ್ರಸನ್ನತೆಯನ್ನು ಪಡೆಯಿರಿ.ಮಕ್ಕಳ ತುಂಟತನ ವಿಪರೀತವಾಗುವುದು. ಮನೆಯಲ್ಲಿರುವುದು ಕಷ್ಟ ಎನಿಸಬಹುದು. ಸಂಜೆ ಪ್ರಶಾಂತ ವಾತಾವರಣದಲ್ಲಿ ಕೆಲಕಾಲ ಏಕಾಂತವಾಗಿ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದು.

ಅದೃಷ್ಟ ಸಂಖ್ಯೆ:9

ಮಕರ

ಮಕರ

ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ದೊರೆಯುವುದು. ಕೆಲವರಿಗೆ ತಮ್ಮ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಕೆಲಸಕ್ಕೆ ರಾಜೀನಾಮೆ ನೀಡುವಂತಹ ಸಂದರ್ಭ ಬರುವುದು. ಯಾವುದಕ್ಕೂ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.ಯುದ್ಧದ ಮೊದಲೇ ಸೋಲುವ ಕುರಿತು ಚಿಂತಿಸದಿರಿ. ಮಾಡು ಇಲ್ಲವೆ ಮಡಿ ಎನ್ನುವ ಧ್ಯೇಯೋದ್ದೇಶದಿಂದ ಹೋರಾಟ ಮಾಡಿ. ಯಶಸ್ಸು ದೊರೆತರೆ ಜನರು ಹರ್ಷಿಸುವರು. ಸೋತರೆ ಅದು ಜೀವನಕ್ಕೊಂದು ಪಾಠ ಆಗುವುದು.ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ನಡೆಸುವಿರಿ. ಇದರಿಂದ ಕೊಂಚಮಟ್ಟಿನ ಪ್ರಯೋಜನ ಕಂಡುಬರುವುದು. ಇನ್ನು ಸ್ವಲ್ಪ ಕಾಲ ಇದ್ದ ಸ್ಥಳದಲ್ಲಿಯೇ ಕೆಲಸವನ್ನು ಮುಂದುವರೆಸುವಿರಿ.

ಅದೃಷ್ಟ ಸಂಖ್ಯೆ:5

ಕುಂಭ

ಕುಂಭ

ನಿಮ್ಮ ಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿಗಳು ಆಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು.ನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಇನ್ನು ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಎಲ್ಲರಿಗೂ ಒಳ್ಳೆಯವರಾಗುವುದು ಅಷ್ಟು ಸುಲಭವಲ್ಲ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಗೊತ್ತಿದ್ದು ಗೊತ್ತಿದ್ದು ಅಯೋಗ್ಯರ ಜತೆ ನಿಮ್ಮ ಮುಂದಿನ ಕಾರ್ಯ ರೂಪರೇಷೆಗಳ ವಿಚಾರವನ್ನು ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.ನೀರಿನಂತೆ ಹಣ ಖರ್ಚಾಗುವುದು. ಆದಾಗ್ಯೂ ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಚಿತ್ತ ಚಾಂಚಲ್ಯ ಉಂಟಾಗುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ.

ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರ್‌ ರೂಪಿಸಿಕೊಳ್ಳುತ್ತ ಬರುವಿರಿ. ಇದರಿಂದ ನಿಮ್ಮ ಗೌರವ ಘನತೆ ಸಮಾಜದಲ್ಲಿ ಹೆಚ್ಚಾಗುವುದು.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-28-october-2018

Know what astrology and the planets have in store for you today. Choose your zodiac sign and read the details...
Story first published: Saturday, October 27, 2018, 14:56 [IST]
X
Desktop Bottom Promotion