For Quick Alerts
ALLOW NOTIFICATIONS  
For Daily Alerts

27-12-2018: ಗುರುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಗುರು ಗ್ರಹನವಗ್ರಹಗಳಲ್ಲಿ ಅತಿ ಶುಭ ಹಾಗೂಶಾಂತ ಗ್ರಹ ಎಂದರೆ ಗುರು.ಈತನ ಸ್ವಕ್ಷೇತ್ರ ಧನುಸ್ಸು ಮತ್ತು ಮೀನ ರಾಶಿ. ಕಟಕರಾಶಿ ಉಚ್ಚರಾಶಿಯಾದರೆ ಮಕರ ನೀಚರಾಶಿಯಾಗಿದೆ. ಗುರು ವಿದ್ಯಾವಂತನು, ಶಾಂತ ಸ್ವಭಾವದವನು, ಅಧ್ಯಾತ್ಮಿಕ ಶಾಸ್ತ್ರ ನಿಪುಣನು, ಸಮಾಜ ಕಾರ‍್ಯದಲ್ಲಿ ಪ್ರವೀಣ, ಬುದ್ಧಿವಂತನು, ಪರೋಪಕಾರಿ, ಹಣದ ವಿಷಯದಲ್ಲಿ ಉದಾರಿ, ಪುತ್ರಕಾರಕ, ಶಿಕ್ಷಣ ನೀಡುವವನೂ ಆಗಿರುವನು. ಜಾತಕದಲ್ಲಿ ಗುರುಕುಂಡಲಿಯಲ್ಲಿ ಗುರುವು ಲಗ್ನ ಅಥವಾ ಮೊದಲನೆ ಭಾವದಲ್ಲಿ ಇದ್ದರೆ ಆ ಜಾತಕದವರು ಸುಂದರ ದೇಹವುಳ್ಳವರು, ಅವರು ದೀರ್ಘ ಆಯುಸ್ಸು ಉಳ್ಳವರು, ಪಂಡಿತರೂ, ಧೀರರೂ, ಶ್ರೇಷ್ಠ ವ್ಯಕ್ತಿಯೂ ಆಗಿರುತ್ತಾರೆ.ಕುಂಡಲಿಯಲ್ಲಿ ಗುರುವು ಎರಡನೇ ಮನೆಯಲ್ಲಿದ್ದರೆ ಆ ಜಾತಕದವರು ಧನಿಕರೂ, ಉತ್ತಮ ಆಹಾರ ಸೇವಿಸುವವರೂ, ವಾಕ್‌ ಚಾತುರ‍್ಯ ಹೊಂದಿರುವವರೂ, ಮೃದುಭಾಷಿಗಳೂ ಆಗಿರುತ್ತಾರೆ.

horoscope

ಮೂರನೇ ಮನೆಯಲ್ಲಿದ್ದರೆ ಬೇರೆಯವರಿಂದ ತಿರಸ್ಕರಿಸಲ್ಪಡುವವರೂ, ಕೃಪಣರೂ, ಸ್ತ್ರೀಯರಿಂದ ಪರಾಜಿತನೂ, ಹೆಚ್ಚು ಪಾಪ ಕಾರ್ಯ ಮಾಡುವವರೂ ಆಗಿರುತ್ತಾರೆ.ಕುಂಡಲಿಯಲ್ಲಿ ಗುರು 4ನೇಮನೆಯಲ್ಲಿದ್ದರೆ ಆ ಜಾತಕರು ವಾಹನ ಸುಖವನ್ನು ಹೊಂದುವರು, ಬುದ್ಧಿವಂತರೂ, ಭೋಗವಂತರೂ, ಶ್ರೇಷ್ಠರೂ, ಶತ್ರುಗಳನ್ನು ಜಯಿಸುವವರೂ ಆಗಿರುತ್ತಾರೆ.

ಗುರು ಐದನೇ ಮನೆಯಲ್ಲಿದ್ದರೆ ಪುತ್ರ ಸಂತಾನ, ಉತ್ತಮ ಮಿತ್ರರನ್ನು ಹೊಂದುವರು. ಧೈರ‍್ಯವಂತರಾಗಿದ್ದು ಎಲ್ಲಾ ವಿಧದ ಸುಖವನ್ನು ಹೊಂದುತ್ತಾರೆ. ಆರನೇ ಮನೆಯಲ್ಲಿದ್ದರೆ ಕೊಟ್ಟ ಮಾತಿನಂತೆ ನಡೆಯುವವರು, ಯಾವಾಗಲೂ ಹೊಟ್ಟೆಗೆ ಸಂಬಂಧಪಟ್ಟ ತೊಂದರೆ ಅನುಭವಿಸುವರು. ಪತ್ನಿಯಿಂದ ಕೀರ್ತಿಯನ್ನು ಹೊಂದುವರು.7ನೇ ಮನೆಯಲ್ಲಿದ್ದರೆ ಭಾಗ್ಯವಂತರಾಗಿ ಉತ್ತಮ ಪತ್ನಿ ಅಥವಾ ಪತಿಯನ್ನು ಹೊಂದುತ್ತಾರೆ. ಸಂಸಾರದಲ್ಲಿ ನೆಮ್ಮದಿಯಿಂದ ಇರುವವರೂ, ಸಮಯಕ್ಕೆ ಸರಿಯಾಗಿ ಮಾತಾಡುವವರೂ ಕವಿಯೂ, ಲೇಖಕರೂ ಆಗಿರುತ್ತಾರೆ.ಗುರು 8 ನೇ ಮನೆಯಲ್ಲಿದ್ದರೆ ಆಯಸ್ಸು ಕಡಿಮೆ ಇರುತ್ತದೆ. ಸಾಲಗಾರರೂ, ಆರೋಗ್ಯದಲ್ಲಿ ಆಗಾಗ ತೊಂದರೆ ಅನುಭವಿಸುವವರೂ, ಉತ್ತಮ ಕೆಲಸದಲ್ಲಿ ಇರುವವರೂ ಆಗಿರುತ್ತಾರೆ.

9ನೇ ಮನೆಯಲ್ಲಿದ್ದರೆ ದೇವರಲ್ಲಿ, ಗುರುಹಿರಿಯರಲ್ಲಿ ಅಪಾರ ಭಕ್ತಿ ಹೊಂದಿರುವವರೂ, ವಿದ್ಯಾವಂತರೂ, ಮಂತ್ರಿಗಳ ಭಾಗ್ಯ ಹೊಂದಿರುವವರೂ, 10ನೇ ಮನೆಯಲ್ಲಿದ್ದರೆ ಪ್ರಾರಂಭಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೂ, ಸಕಲ ಉಪಾಯ ಮತ್ತು ಕುಶಲತೆಯನ್ನು ಹೊಂದಿರುವವರೂ, ವಾಹನ, ಧನ, ಭಾಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡುವವರು ಆಗಿರುತ್ತಾರೆ.11ನೇ ಮನೆಯಲ್ಲಿದ್ದರೆ ಅಧಿಕ ಲಾಭ ಗಳಿಸುವವರು, ಅನೇಕ ಸೇವಕರನ್ನು ಹೊಂದಿರುವವರು, ಜನಗಳಿಂದ ಪ್ರೀತಿ ಹೊಂದುವವರು, ಅಲ್ಪ ಸಂತಾನ ಹೊಂದಿರುವವರು ಆಗಿರುತ್ತಾರೆ. 12ನೇ ಮನೆಯಲ್ಲಿದ್ದರೆ ಆಲಸಿಯೂ, ಜಗಳಗಂಟರೂ, ಜನಗಳಲ್ಲಿ ದ್ವೇಷ ಹೊಂದಿದವರೂ, ಯಾವ ಕೆಲಸಕ್ಕೂ ಹೇಸದವರೂ ಆಗಿರುತ್ತಾರೆ. ನಿಮ್ಮ ಜಾತಕದಲ್ಲಿ ಗುರುಗ್ರಹ ಬಲ ವಿಲ್ಲದಿದ್ದರೇ ಅಥವಾ ನೀಚ ಅಥವಾ ಆಗ್ರಹ ದ ದೋಷ ತಿಳಿದು ಸೂಕ್ತ ವಾದ ಪರಿಹಾರ ಮಾಡಿ ಎಲ್ಲವೂ ಶುಭ ವಾಗುತ್ತದೆ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ(27 ಡಿಸೆಂಬರ್ 2018)

ಮೇಷ(27 ಡಿಸೆಂಬರ್ 2018)

ನಿಮ್ಮ ನಂಬಿಕೆ ಹಾಗೂ ಸ್ಥೈರ್ಯ, ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ನಿಮಗಾಗಿ ಬಹು ಸೂಕ್ತ ಸಮಯದ ಪದೋನ್ನತಿಯೊಂದು ಕಾದಿದೆ. ನಿರಾಳ ಆಗಿ. ಮನಸ್ಸಿನ ತುಮುಲಗಳೆಲ್ಲ ತಮ್ಮಷ್ಟಕ್ಕೆ ಕಡಿಮೆ ಆಗುವವು. ಜಗತ್ತು ಸುಂದರವಾಗಿ ಕಾಣಿಸಿಕೊಳ್ಳುವುದು.ಬಹು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುವುದು. ಅನವಶ್ಯಕ ವಾದ ವಿವಾದಗಳಲ್ಲಿ ಸಿಲುಕದಿರಿ. ಕುಲದೇವರನ್ನು ಪ್ರಾರ್ಥನೆ ಮಾಡಿ. ಆರೋಗ್ಯದ ಕಡೆ ಎಚ್ಚರವಿರಲಿ..9845743807

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಜನರಿಗೆ ಸಹಾಯ ಮಾಡುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ದೈವಾನುಗ್ರಹ ಆಗುತ್ತಿರುವುದರಿಂದ ನಿಮ್ಮಎಲ್ಲಾಮನೋಕಾಮನೆಗಳುಪೂರ್ಣಗೊಳ್ಳುವವು. ನಿಮ್ಮ ಬುದ್ಧಿಬಲ ಶಕ್ತಿಯುತವಾದದ್ದು. ಸಂಪನ್ನವಾದ ನಿಮ್ಮ ಊಹೆಗಳು ಕಾರ್ಯರೂಪಕ್ಕೆ ಯಶಸ್ಸನ್ನು ನೀಡುವವು. ಮಡದಿ ಮಕ್ಕಳ ಜತೆ ಸ್ವಲ್ಪ ಕಾಲ ಕಳೆಯುವುದು ಒಳ್ಳೆಯದು. ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವುದು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವುದು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು..9845743807

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಹೊಸದಾದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು. ಹಿರಿಯರನ್ನು ದೂರ ಇಡಬೇಡಿ ಮತ್ತು ಅವರ ದಿನಚರಿಗಳನ್ನು ದೂಷಿಸಬೇಡಿ. ಅವರ ಸೇವೆಯನ್ನು ಮಾಡಿ. ಇದು ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲಕರ.ಅಪತ್‌ ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮ್ಮ ಕಷ್ಟದ ದಿನಗಳಲ್ಲಿ ನಿಮ್ಮ ಮಕ್ಕಳು, ಬಂಧು- ಬಾಂಧವರು ಸಹಾಯ ಹಸ್ತ ನೀಡುವುದರಿಂದ ಜೀವನದಲ್ಲಿ ಹೊಸ ಬೆಳಕೊಂದು ಮೂಡುವುದು. ಜೀವನ ನಡೆಸಲು ಧೈರ್ಯ ಬರುವುದು..9845743807

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಮೇಲಧಿಕಾರಿಯ ಎದುರು, ವಿಷಯ ಗೊತ್ತಿದ್ದರೂ ಮಾಡುವ ಕೆಲಸದಲ್ಲಿ ಅವರ ಸಲಹೆಯನ್ನು ಸ್ವೀಕರಿಸಿ ಮುಂದಡಿ ಇಟ್ಟಲ್ಲಿ ಅವರಿಗೂ ಖುಷಿ ಆಗುವುದು. ಇಲ್ಲವೆ ನಿಮ್ಮ ಬುದ್ಧಿಚಾತುರ‍್ಯಕ್ಕೆ ಅಸೂಯೆ ಪಡುವರು. ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿ ಮಾಡುವರು. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ. ನಿಮಗೆ ನೀವೇ ಗುರುವಾಗಿ ನಿಮ್ಮ ಮಿತಿಯ ಬಗ್ಗೆ ತಿಳಿಯಿರಿ. ಜನರು ನಿಮ್ಮನ್ನು ಪ್ರಶಂಸಿಸುವಂತಹ ದೈವಕೃಪೆಗೆ ಪಾತ್ರರಾಗಿರುವುದರಿಂದ ಮುಂದಿನ ದಿನಗಳು ಸಹ ಉತ್ತಮವಾಗಿರುತ್ತವೆ..9845743807

ಅದೃಷ್ಟ ಸಂಖ್ಯೆ:4

ಸಿಂಹ

ಸಿಂಹ

ನಿಮ್ಮ ವರ್ಚಸ್ಸನ್ನು ಹಾಳು ಮಾಡಲು ಸಂಚು ನಡೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲವು ವಿಚಾರಗಳಲ್ಲಿ ನಿರ್ಬಂಧ ಹೇರಿಕೊಳ್ಳುವುದು ಒಳ್ಳೆಯದು. ಇಲ್ಲದೆ ಇದ್ದರೆ ಜನ ದುರುಪಯೋಗ ಮಾಡಿಕೊಳ್ಳುವರು.ನಿಮಗೆ ತಿಳಿದುದಕ್ಕಿಂತಲೂ ಹೆಚ್ಚು ತಿಳಿದುಕೊಂಡು ಏನೂ ತಿಳಿಯದಂತೆ ನಟಿಸುವ ಜನರಿರುವುದರಿಂದ ಎಚ್ಚರದಿಂದ ಇರಬೇಕು. ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿ. ಎಲ್ಲವೂ ಒಳಿತಾಗುವುದು.ಅತಿ ಆಸೆ ಗತಿ ಗೆಡಿಸಿತು ಎನ್ನುವಂತೆ ಆಕಾಶಕ್ಕೆ ಏಣಿ ಹಾಕುವ ದುಃಸಾಹಸಕ್ಕೆ ಕೈಹಾಕದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿತರೆ ಜೀವನದಲ್ಲಿ ಯಶಸ್ಸನ್ನು ಹೊಂದುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು..9845743807

ಅದೃಷ್ಟ ಸಂಖ್ಯೆ:5

ಕನ್ಯಾ

ಕನ್ಯಾ

ನೀವು ತಳೆಯುವ ನಿರ್ಧಾರವನ್ನು ವಿರೋಧಿಸುವವರು ಬಹಳ ಮಂದಿ ಇದ್ದಾರೆ. ಹಾಗಂತ ನೀವು ನಿಮ್ಮ ವಿಚಾರಧಾರೆಯಿಂದ ಹಿಂದಕ್ಕೆ ಸರಿಯದಿರುವುದು ಒಳಿತು. ನಂತರ ನಿಮ್ಮ ತೀರ್ಮಾನವನ್ನು ಎಲ್ಲರೂ ಕೊಂಡಾಡುವರು.ಬರೀ ಹಗುರ ಮಾತನಾಡುತ್ತ ದಿನ ಕಳೆಯಬೇಡಿ. ನಿಮ್ಮ ವಿದ್ವತ್‌, ಪಾಂಡಿತ್ಯಕ್ಕೆ ಬೆಲೆ ನೀಡಿ ನಿಮ್ಮನ್ನು ಜನರು ಆದರಿಸುವರು. ಹಾಗಾಗಿ ಸಣ್ಣತನ ತೋರಿ ಹಗುರ ಆಗದಿರಿ. ನಿಮ್ಮ ನಡೆ ನುಡಿಯಲ್ಲಿ ಗಾಂಭೀರ್ಯತೆಯನ್ನು ರೂಢಿಸಿಕೊಳ್ಳಿ.ವಿರೋಧಿಗಳನ್ನು ಮಾತಿನ ಮೂಲಕ ಸೋಲಿಸುವ ಚಾಕಚಕ್ಯತೆ ನಿಮ್ಮಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಅಪರಿಚಿತರ ಬಳಿ ವ್ಯವಹರಿಸುವಾಗ ಮಾತ್ರ ಎಚ್ಚರದಿಂದ ಇರಿ..9845743807

ಅದೃಷ್ಟ ಸಂಖ್ಯೆ:6

ತುಲಾ

ತುಲಾ

ಹೊಸ ಯೋಜನೆಗಳು ಜೀವನದಲ್ಲಿ ಹೊಸದಾದ ಚೈತನ್ಯವನ್ನು ತುಂಬಿಕೊಡುವುದು. ಇದರಿಂದ ಸಂಗಾತಿ ಮತ್ತು ಮನೆಯ ಸದಸ್ಯರು ಹೆಚ್ಚು ಸಂತೋಷಪಡುವರು. ಭಗವಂತನು ನೀಡಿದ್ದನ್ನು ತೃಪ್ತಿಯಿಂದ ಸ್ವೀಕರಿಸಿ. ಜೀವನವನ್ನು ಸುಖಮಯವಾಗಿ ಕಳೆಯಿರಿ.ಮಾತು ಆಡಿದರೆ ಆಯಿತು. ಮುತ್ತು ಒಡೆದರೆ ಹೋಯಿತು ಎನ್ನುವಂತೆ ನಿಮ್ಮ ಸಂಕಷ್ಟದ ದಿನಗಳಲ್ಲಿ ಬಹು ಎಚ್ಚರಿಕೆಯಿಂದ ಎದುರಾಳಿಯನ್ನು ಎದುರಿಸಬೇಕು. ಬಾಯಿ ತಪ್ಪಿ ಆಡಿದ ಮಾತಿಗೆ ವಿಪರೀತವಾದ ದಂಡ ತೆರಬೇಕಾಗುವುದು. ಅನೇಕರು ಹೊಸ ವಹಿವಾಟನ್ನು ಆರಂಭಿಸಲು ನಿಮಗೆ ಸಲಹೆ ನೀಡುವರು. ಆದರೆ ಅದಕ್ಕೆ ಕಾಲ ಪಕ್ವವಾಗಿಲ್ಲ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮೊದಲು ಮನೆಯವರ ವಿಶ್ವಾಸವನ್ನು ಗಳಿಸಿಕೊಳ್ಳಿ..9845743807

ಅದೃಷ್ಟ ಸಂಖ್ಯೆ:4

ವೃಶ್ಚಿಕ

ವೃಶ್ಚಿಕ

ಒಂದೇ ಒಂದು ಸಣ್ಣ ತಪ್ಪಿನಿಂದ ನಿಮ್ಮ ಮಹತ್ತರವಾದ ಕೆಲಸ ಹಾಳಾಗುವ ಸಂಭವ ಇದೆ. ಅದಕ್ಕೆ ಆಸ್ಪದ ಕೊಡದೆ ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿ. ಎಲ್ಲವೂ ಒಳಿತಾಗುವುದು. ಸತ್ಪಾತ್ರರಿಗೆ ದಾನ ಮಾಡಬೇಕೆಂಬ ನಿಮ್ಮ ಯೋಚನೆ ಸರಿ. ಆದರೆ ಯಾವುದಕ್ಕೂ ಅವಸರ ಬೇಡವೇ ಬೇಡ. ಭಗವಂತ ನಿಮ್ಮ ಎಲ್ಲಾ ಕಾರ್ಯಗಳಿಗೂ ಅಭಯ ಹಸ್ತವನ್ನು ನೀಡುವನು.ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಬಲವಿದೆ. ದೂರವಾಗಿದ್ದ ಮಿತ್ರರು ಹತ್ತಿರ ಬರುವರು. ನಿಮ್ಮ ಕೆಲಸಗಳು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುವವು. ಹಣಕಾಸು ಸ್ಥಿತಿ ಉತ್ತಮವಾಗಿರುವುದು.

.9845743807

ಅದೃಷ್ಟ ಸಂಖ್ಯೆ:2

ಧನುಸ್ಸು

ಧನುಸ್ಸು

ನಿಮ್ಮ ಬಳಿ ವಿವಿಧ ರೀತಿಯ ಜನರು ಬಂದು ತಮ್ಮ ಸ್ವಾರ್ಥವನ್ನು ಮೊದಲು ಪೂರೈಕೊಳ್ಳುವರು. ಅಂಥವರನ್ನು ಎಚ್ಚರದಿಂದ ಸಾಗ ಹಾಕಿ. ನಿಮ್ಮ ಸಾಮಾಜಿಕ ಕಳಕಳಿ ಬಹು ಮೆಚ್ಚುಗೆಗೆ ಪಾತ್ರವಾಗುವುದು. ನಿಮ್ಮ ಮಾರ್ಗದರ್ಶನವನ್ನು ನೆರೆಹೊರೆಯವರು ಬಯಸುತ್ತಾರೆ. ಇದರಿಂದ ಅತಿ ಹೆಚ್ಚಿನ ಪ್ರಶಂಸೆ ಪಡೆಯುವಿರಿ.ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು. ಅವರನ್ನು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಅವರನ್ನು ದೂರವಿಡಿ..9845743807

ಅದೃಷ್ಟ ಸಂಖ್ಯೆ:2

ಮಕರ

ಮಕರ

ತೀರಾ ಸರಳ ಮಾರ್ಗದಿಂದ ಧನ ಲಾಭದ ದಾರಿ ತೆರೆದುಕೊಳ್ಳುವುದೆಂಬ ದಡ್ಡತನವನ್ನು ಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣ ದೊರೆಯುವುದಿಲ್ಲ.ಸಮಾಜದಲ್ಲಿ ಜನಾನುರಾಗಿಗಳಾಗುವಂತಹ ವಿಶಿಷ್ಟ ಅವಕಾಶವೊಂದನ್ನು ನೀವು ಸಂಪಾದಿಸುವಿರಿ. ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ನಡೆಯಬೇಕಾದ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವ ದಾರಿ ನೇರ ಮತ್ತು ಕಠಿಣವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು..9845743807

ಅದೃಷ್ಟ ಸಂಖ್ಯೆ:8

ಕುಂಭ

ಕುಂಭ

ಬಹು ದಿನಗಳಿಂದಲೂ ಅಪೂರ್ಣವಾಗಿದ್ದ ನಿಮ್ಮ ಸಂಶೋಧನೆಯ ಕೆಲಸಗಳು ಪೂರ್ಣಗೊಳ್ಳುವವು. ನಿಮಗೆ ಮಾರ್ಗದರ್ಶನ ನೀಡುತ್ತಿದ್ದ ವ್ಯಕ್ತಿ ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು.ಬರೀ ಕಷ್ಟಗಳಿಂದಾಗಿ ನಿಮಗೆ ಬೇಸರ ಬಂದಿರುವ ಸಾಧ್ಯತೆ ಇದೆ. ಇದರಿಂದ ಮನಸ್ಸು ಗಲಿಬಿಲಿಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಮನಸ್ಸು ವಿಚಲಿತವಾಗಿದ್ದಾಗ ವಾಹನ ಚಲಾಯಿಸಬೇಡಿ.

ಎಲ್ಲಾ ಕೆಲಸಗಳು ವಿಳಂಬವಾಗುವವು. ನಿಧಾನವೇ ಪ್ರಧಾನ ಎಂದು ಅರಿತು ನಡೆಯದೆ ವಿಧಿಯಿಲ್ಲ. ಆಂಜನೇಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ. ಹಣಕಾಸು ಸ್ಥಿತಿ ಸಾಧಾರಣವಾಗಿರುತ್ತದೆ..9845743807

ಅದೃಷ್ಟ ಸಂಖ್ಯೆ:2

ಮೀನ

ಮೀನ

ನೀವು ಮಾಡುತ್ತಿರುವ ಕೆಲಸಗಳಲ್ಲಿ ಕೆಲವರು ಮೂಗು ತೂರಿಸಿ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುತ್ತಾರೆ. ನಿಮ್ಮ ಬುದ್ಧಿಮತ್ತೆಯನ್ನು ನಂಬಿ ಕೆಲಸ ಮಾಡಿ.ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಬರುವವು. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ.

ನಿಮ್ಮದು ಮೀನಿನಂತೆ ಚುರುಕಾದ ಓಡಾಟ, ನಡೆನುಡಿ ಇದ್ದರೂ ಗಾಳಕ್ಕೆ ಸಿಕ್ಕ ಮೀನು ಒದ್ದಾಡುವಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯ ಪ್ರವೃತ್ತರಾಗಿ. ಅನವಶ್ಯಕ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ..9845743807

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp

English summary

your daily horoscope-27-December-2018

Know what astrology and the planets have in store for you today. Choose your zodiac sign and read the details..
Story first published: Wednesday, December 26, 2018, 16:15 [IST]
X
Desktop Bottom Promotion