For Quick Alerts
ALLOW NOTIFICATIONS  
For Daily Alerts

21-10-2018: ಭಾನುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|
21-10-2018- ಭಾನುವಾರದ ದಿನ ಭವಿಷ್ಯ | Boldsky

ಭಾನುವಾರದ ದಿನದ ವಿಶೇಷವಾಗಿ ಕರೆಯುವ ಸೂರ್ಯ, ಆದಿತ್ಯ, ರವಿ,ದಿನಕರ, ದಿವಾಕರ, ದ್ಯುಮಣಿ, ಭಾಸ್ಕರ, ಅಹಸ್ಕರ, ವಿಭಾಕರ, ಅರ್ಕ , ಪ್ರಭಾಕರ ಮುಂತಾಗಿ ನೂರಾರು ಹೆಸರುಗಳಿಂದ ಕರೆಸಿಕೊಳ್ಳುವವ ಸೂರ್ಯ. ಸೌರಕೇಂದ್ರ ವ್ಯವಸ್ಥೆಯೇ ಸತ್ಯ ಎಂಬುದು ಸಾಬೀತಾದ ಮೇಲೆ ಸೂರ್ಯನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ.

your daily horoscope-21-october-2018

ಜಗತ್ತಿನ ಪ್ರತಿ ಆಗುಹೋಗಿಗೂ ಪ್ರತ್ಯಕ್ಷ ಸಾಕ್ಷಿಯಾದವನು ಸೂರ್ಯ. ಅಂಥ ಸೂರ್ಯನು ಅನೇಕ ಗ್ರಹಗಳಿಗೆ ಅಧಿಪತಿಯಾಗಿದ್ದಾನೆ. ಹಾಗೂ ಹನ್ನೆರೆಡು ರಾಶಿಗಳಿಗೂ ಕುತೂಹಲಕಾರಿ ಸಂಗತಿಗಳನ್ನು ನೀಡುತ್ತಾನೆ. ಇದರಿಂದ ಈ ದಿನ ರವಿವಾರದ ದಿನ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.

ಮೇಷ

ಮೇಷ

ನಿಮಗೆ ರಾಜಕೀಯ ಅತ್ಯಂತ ಆಸಕ್ತಿ ಇರುವ ಕ್ಷೇತ್ರ. ಅಂತೆಯೆ ಈ ದಿನದ ವಿದ್ಯಮಾನಗಳು ನಿಮಗೆ ಸಹಾಯವನ್ನು ಮಾಡುವುದು. ಸಮಾಜದ ಜನರು ನಿಮ್ಮನ್ನು ಗುರುತಿಸಿ ಆರಾಧಿಸುವರು. ಹಣವು ನೀರಿನಂತೆ ಖರ್ಚಾಗುವುದು.ನಿಮ್ಮ ನಡೆ ನುಡಿ ಮತ್ತು ಮಾತಿನ ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಕ್ರಿಯಾಶೀಲತೆಯೇ ನಿಮ್ಮ ಪಾಲಿಗೆ ಶ್ರೀರಕ್ಷೆ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆಯನ್ನು ರೂಢಿಸಿಕೊಳ್ಳಿ. ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರುವ ಸಾಧ್ಯತೆ ಇರುತ್ತದೆ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಹೆಚ್ಚಿನ ಲವಲವಿಕೆ ಹಾಗೂ ಮುತುವರ್ಜಿಯನ್ನು ಪ್ರದರ್ಶಿಸಿ ಕಾರ್ಯ ಸಾಫಲ್ಯತೆಯನ್ನು ಹೊಂದುವಿರಿ. ಮಕ್ಕಳು ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಕೊಡುವುದರಿಂದ ಆಂತರಿಕವಾಗಿ ಹೆಚ್ಚು ಆನಂದಿತರಾಗುವಿರಿ. ವೈಯಕ್ತಿಕ ಆರೋಗ್ಯದ ಕಡೆ ಗಮನ ನೀಡಿ.

ಸಾಲ ನೀಡಲು ಇಲ್ಲವೆ ಸಾಲ ತೆಗೆದುಕೊಳ್ಳಲು ಮುಂದಾಗದಿರಿ. ಪರಾಕ್ರಮ ರಾಹು ನಿಮ್ಮ ಆತ್ಮಸ್ಥೈರ್ಯವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಕೆಮ್ಮು ಕಫದಂತಹ ತೊಂದರೆಗಳಿಂದ ನರಳ ಬೇಕಾಗುವುದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.ಹಿಂದಿನ ದಿನಗಳ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇರಿಸಿ. ಕಿರಿಕಿರಿ ಮಾಡುವವರನ್ನು ನಿಯಂತ್ರಣಕ್ಕೆ ಒಳಪಡಿಸುವುದು ಒಳ್ಳೆಯದು. ದುಂದುವೆಚ್ಚಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ.

ಅದೃಷ್ಟ ಸಂಖ್ಯೆ:3

ಮಿಥುನ

ಮಿಥುನ

ಜನರ ಬಳಿ ಮಾತನಾಡುವಾಗ ಬೇಕಾಬಿಟ್ಟಿ ಮನ ಬಂದಂತೆ ಮಾತನಾಡದಿರಿ. ಹಿತಶತ್ರುಗಳು ನಿಮ್ಮನ್ನು ಮಣಿಸಲು ಹೊಂಚು ಹಾಕಿರುವರು. ಆದಷ್ಟು ಕುಲದೇವತಾ ಆರಾಧನೆ ಮಾಡಿ ಇದರಿಂದ ನೆಮ್ಮದಿಯನ್ನು ಕಾಣುವಿರಿ.ಪ್ರೇಮ ಕುರುಡು ಅದಕ್ಕೆ ಹೊರಗಿನ ರೀತಿ ರಿವಾಜುಗಳ ಗೊಡವೇ ಬೇಡ. ತಾನು ಅಂದುಕೊಂಡದ್ದೆ ಸತ್ಯ ಎಂದು ತಿಳಿದು ಮುಂದುವರೆಯುವುದರಿಂದ ತೊಂದರೆಯನ್ನು ಎದುರಿಸಬೇಕಾಗುವುದು. ಕೆಲವರಿಗೆ ಕಂಕಣ ಭಾಗ್ಯ ಕೂಡಿ ಬರುವುದು.ಬಂಧುಗಳು ಅಥವಾ ಒಡಹುಟ್ಟಿದ ಸಹೋದರ, ಸಹೋದರಿಯರೇ ಆಸ್ತಿ ಪಾಲು ವಿಚಾರದಲ್ಲಿ ತಕರಾರು ಮಾಡುವ ಸಾಧ್ಯತೆ ಇದೆ. ಗುರು, ಹಿರಿಯರ ಮಧ್ಯಸ್ಥಿಕೆಯಿಂದ ಒಳಿತಾಗುವುದು. ನಿಮಗೆ ನ್ಯಾಯಯುತವಾಗಿ ಬರಬೇಕಾದ ಪಾಲು ದೊರೆಯುವುದು.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಕೃಷಿಕರಿಗೆ ಭೂಮಿಯ ಸಂಬಂಧ ಸೃಜನಾತ್ಮಕ ಕಾರ್ಯ ಯೋಜನೆಗಳಲ್ಲಿ ಇತರೆ ರೈತಾಪಿ ಜನರ ಬೆಂಬಲ ದೊರೆಯುವುದು. ಹಾಗಾಗಿ ಕೆಲವರು ಜಮೀನು, ಆಸ್ತಿ ಖರೀದಿಸಲು ಮುಂದಾಗುವರು. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವರು.ಒಳ್ಳೆಯ ರೀತಿಯ ಲಾಭಕ್ಕೆ ದಾರಿ ಆಗಬಹುದಾದ ವಹಿವಾಟುಗಳನ್ನು ನೀವು ಹೆಚ್ಚಿನ ಎಚ್ಚರದಿಂದಲೇ ನಡೆಸಿ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಅನುಕೂಲವಾಗುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಹೆಂಡ ಕುಡಿದರು ಎಂದೇ ಪಿತೂರಿ ಎಬ್ಬಿಸುವರು. ಹಾಗಾಗಿ ಯಾವುದೇ ಕಾರ್ಯ ಮಾಡುವ ಮೊದಲು ಸ್ಥಾನಬಲ ಮುಖ್ಯ. ಯಾವುದೇ ಸೂಕ್ತ ನಿರ್ಧಾರ ತಳೆಯುವ ಮುನ್ನ ಎರಡು ಬಾರಿ ಯೋಚಿಸಿ.

ಅದೃಷ್ಟ ಸಂಖ್ಯೆ:9

ಸಿಂಹ

ಸಿಂಹ

ಬರೀ ಬೊಗಳೆ ಮಾತಿನಿಂದ ಏನನ್ನು ಸಾಧಿಸಲು ಆಗುವುದಿಲ್ಲ. ಬರೀ ಸ್ವಾರ್ಥದ ಜೀವನ ಎಂದೂ ಉನ್ನತಮಟ್ಟಕ್ಕೆ ಏರುವುದಿಲ್ಲ. ಹೃದಯ ವೈಶಾಲ್ಯತೆಯನ್ನು ಬೆಳಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನಕ್ಕೆ ಸಹಾಯ ಹಸ್ತ ನೀಡಿ.

ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಚಿಕ್ಕಮಕ್ಕಳಂತೆ ದಂಡಿಸಿದರೆ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ.ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗ್ಗಾಡದೆ ಅಥವಾ ಕಾದಾಡದೆ ಸುಮ್ಮನೆ ಮಾತುಕತೆ ನಡೆಸಿ. ಇದರಿಂದ ಒಳಿತಾಗುವುದು. ಇತರರಿಗೆ ಸಹಾಯ ಮಾಡಲು ಮನಸ್ಸು ಇಲ್ಲದಿದ್ದರೆ ಸಹಾಯ ಮಾಡುವವರಿಗೂ ದಾರಿ ತಪ್ಪಿಸಬೇಡಿ.

ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ನಿಮ್ಮ ಎದುರೇ ಎದುರಾಳಿಗಳನ್ನು ಹೊಗಳುವ ಧೂರ್ತರ ಬಗೆಗೆ ಕಿಡಿಕಾರದಿರಿ. ಸಹನೆಯಿಂದ ಒಳಿತಾಗುವುದು ಮತ್ತು ಇದರಿಂದ ಒಂದು ದೊಡ್ಡ ಪಾಠವನ್ನು ಕಲಿಯುವಿರಿ. ನಿಮ್ಮ ಕೈಲಿ ಆದರೆ ಕೆಲಸಗಳನ್ನು ಒಪ್ಪಿಕೊಳ್ಳಿ. ಇಲ್ಲವೆ ನಯವಾಗಿ ತಿರಸ್ಕರಿಸಿ.ಭೂಮಿ ಸಂಬಂಧವಾದ ಮಧ್ಯವರ್ತಿತನ ಹಾಗೂ ಮಾರಾಟದ ವ್ಯವಹಾರಗಳಲ್ಲಿ ವಿಶೇಷವಾದ ಎಚ್ಚರಿಕೆ ಇರಲಿ. ಸೂಕ್ತವಾದ ದಾಖಲಾತಿಗಳೊಂದಿಗೆ ವ್ಯವಹರಿಸುವುದು ಉತ್ತಮ. ಈ ಸಂಬಂಧ ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ.ಅಡಕೆ ಕದ್ದ ಮಾನ ಆನೆ ಕೊಟ್ಟರೂ ಸರಿಹೋಗದು ಎಂಬ ಜಾಣ್ಮೆಯ ಗಾದೆ ಮಾತು ನಿಮ್ಮನ್ನು ಕಾಡುವುದು. ಆದಾಗ್ಯೂ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲವೂ ಸುಗಮವಾಗುವುದು.

ಅದೃಷ್ಟ ಸಂಖ್ಯೆ:7

ತುಲಾ

ತುಲಾ

ಮ್ಯಾನೇಜ್‌ಮೆಂಟ್‌ಗೆ ಸಂಬಂಧಪಟ್ಟಂತೆ ಉತ್ತಮ ಸಂವಹನಶೀಲರಾದ ನೀವು ಪ್ರಮುಖ ಕಾರ್ಯಾಗಾರದಲ್ಲಿ ಕೇಂದ್ರ ಬಿಂದುವಾಗುವಿರಿ. ನಿಮ್ಮ ಮಾತುಕತೆ ಮತ್ತು ವಿಚಾರ ಲಹರಿಯ ಪ್ರಭಾವದಿಂದ ಜನರು ನಿಮ್ಮತ್ತ ಆಕರ್ಷಿತರಾಗುವರು.ಸಿನಿಮಾ ಸಂಬಂಧವಾದ, ವಜ್ರಾಭರಣ ವ್ಯಾಪಾರ ಸಂಬಂಧಪಟ್ಟ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುವುದು ಸೂಕ್ತವಲ್ಲ. ಅಂತೆಯೆ ಕಟ್ಟಡ ಕೆಲಸಗಾರರು, ತಾಂತ್ರಿಕರು ಎಚ್ಚರಿಕೆಯಿಂದ ಕೆಲಸ ತೆಗೆದುಕೊಳ್ಳಿ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಂದರ್ಭವಿರುತ್ತದೆ.ವಿದೇಶದಿಂದ ಬರುವ ಸ್ನೇಹಿತ ಅಥವಾ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ಬಹುದಿನ ವ್ಯಾಜ್ಯ ಸಮಾಪ್ತಿಯಾಗುವುದು. ಕೆಲಸ ಕಾರ್ಯಗಳಲ್ಲಿನ ನಿಷ್ಠೆಯು ನಿಮಗೆ ಗೌರವವನ್ನು ತಂದುಕೊಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:2

ವೃಶ್ಚಿಕ

ವೃಶ್ಚಿಕ

ಮಕ್ಕಳು ಜೀವನಾನುಭವದ ಕೊರತೆಯಿಂದ ಕೆಲ ತಪ್ಪುಗಳನ್ನು ಮಾಡುವರು. ಹಾಗಂತ ಅವರ ಮೇಲೆ ಹೆಚ್ಚು ಕೋಪಗೊಳ್ಳದೆ ಶಾಂತ ರೀತಿಯಿಂದ ತಿದ್ದಲು ಪ್ರಯತ್ನಿಸಿ ಅವರು ತಮ್ಮ ತಪ್ಪನ್ನು ಅರಿತು ತಿದ್ದಿಕೊಳ್ಳುವರು. ಭಗವಂತನ ಒಲುಮೆ ಇದ್ದರೆ ಬೇರೆ ಯಾರ ಹಂಗೂ ಬೇಡ. ಅಂತೆಯೆ ನಿಮ್ಮ ಕಠಿಣ ತಪಸ್ಸಿಗೆ, ಪರಿಶ್ರಮಕ್ಕೆ ತಕ್ಕಂತೆ ವ್ಯಾಪಾರ, ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಅದನ್ನು ಪೂರ್ಣ ಪ್ರಮಾಣವಾಗಿ ಬಳಸಿಕೊಳ್ಳಿ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ತಿಳಿದೂ ದೂರದ ಬಂಧುಗಳು ಸಹಾಯ ಮಾಡುವರೆಂಬ ಭ್ರಮೆಯಲ್ಲಿರಬೇಡಿ. ಸದ್ಯದ ಗ್ರಹಸ್ಥಿತಿಗಳು ಪೂರಕವಾಗಿಲ್ಲದ ಕಾರಣ ಅರಿತು ಸುಮ್ಮನಿರುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:1

ಧನಸ್ಸು

ಧನಸ್ಸು

ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ. ಅದರೊಂದಿಗ ಸ್ನೇಹ ಸಂಪರ್ಕವನ್ನು ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷ ಉಂಟಾಗುವುದು.ದುಷ್ಮನ್‌ ಕಹಾ ಹೇ ಅಂದರೆ ಬಗಲ್‌ ಮೆ ಹೇ ಎನ್ನುವಂತೆ ದೂರದ ಶತ್ರುಗಳಿಂದ ನಿಮಗೆ ತೊಂದರೆ ಇಲ್ಲ. ಹತ್ತಿರದವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಂದರ್ಭವಿದೆ. ಆದಷ್ಟು ಅಪರಿಚಿತರಿಂದ ದೂರವಿರಿ. ಪ್ರತಿ ಹಣಕಾಸಿನ ವ್ಯವಹಾರಕ್ಕೆ ಲೆಕ್ಕ ಪಕ್ಕಾ ಇಡಿ.ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.

ಅದೃಷ್ಟ ಸಂಖ್ಯೆ:6

ಮಕರ

ಮಕರ

ಮನಸ್ಸನ್ನು ಗೊಂದಲಕ್ಕೆ ಈಡು ಮಾಡುವಂತಹ ಅಸಹಜ ಪ್ರೇಮ ಪ್ರಕರಣಗಳಿಂದ ದೂರ ಇರುವುದು ಒಳ್ಳೆಯದು. ಸದ್ಯಕ್ಕೆ ಗುರುವಿನ ಬಲ ಇಲ್ಲದೆ ಇರುವುದರಿಂದ ಮನೆಯ ಹಿರಿಯರಿಂದ ಈ ಬಗ್ಗೆ ವಿರೋಧ ವ್ಯಕ್ತವಾಗುವ ಸಂಭವ ಇರುತ್ತದೆ.ನೆರೆಹೊರೆಯ ಜನರ ಜತೆ ಎಷ್ಟು ಸೌಹಾರ್ದತೆಯಿಂದ ಇದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜಗಳ ತೆಗೆಯುವ ಸಾಧ್ಯತೆ ಇರುತ್ತದೆ. ಸದ್ಯದ ಗ್ರಹಸ್ಥಿತಿ ಸರಿ ಇಲ್ಲದ ಕಾರಣ ಕೆಲವನ್ನು ಕಂಡರೂ ಕಾಣದಂತೆ ಇರಬೇಕಾಗುವುದು.ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ತೀರ್ಮಾನ ಅಪಹಾಸ್ಯಕ್ಕೆ ಗುರಿ ಆಗುವ ಸಂದರ್ಭ ಇರುತ್ತದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಅಧಿಕ ಖರ್ಚಿನ ದಾರಿ ಎದುರಾಗುವುದು.

ಅದೃಷ್ಟ ಸಂಖ್ಯೆ:9

ಕುಂಭ

ಕುಂಭ

ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ. ಪ್ರವಾಸದಿಂದ ಮನಸ್ಸು ಪ್ರಫುಲ್ಲವಾಗುವುದು. ಸಹೋದರನ ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಭಾಗವಹಿಸಿ. ಮಾತಾಪಿತರೊಂದಿಗೆ ಸ್ನೇಹದಿಂದ ವರ್ತಿಸಿ. ಅವರ ಕೃಪಾಶೀರ್ವಾದವನ್ನು ಪಡೆಯುವಿರಿ.

ವಿಷ್ಣು ಸಹಸ್ರನಾಮ ಪಾರಾಯಣದಿಂದ ಇಚ್ಛಿತ ಕಾರ್ಯಗಳು ಬೇಗನೆ ಕೈಗೂಡುವುದು. ನೀವು ನಿಮ್ಮ ವಿದ್ಯಾಭ್ಯಾಸದಲ್ಲಿ ಚಾಕಚಕ್ಯತೆ ತೋರಿ ಅಂತಿಮ ಗುರಿ ತಲುಪಲು ಈ ಸ್ತೋತ್ರ ಸಹಕಾರಿಯಾಗುವುದು.

ಅದೃಷ್ಟ ಸಂಖ್ಯೆ:2

ಮೀನ

ಮೀನ

ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.ವಿಶಿಷ್ಟವಾದ ಮತ್ತು ನಿಗೂಢವಾದ ಅನುಭವವೊಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಅದರಿಂದ ಅಧ್ಯಾತ್ಮದ ಹರಿವು ಹೆಚ್ಚಾಗುವುದು. ಅಂತರ್‌ಮುಖಿಗಳಾಗಿ ದೇವತಾ ಆರಾಧನೆ ಮಾಡುವಿರಿ.ಕೆಲವು ಪ್ರಮುಖ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅಂತೆಯೇ ಬಹು ಮುಖ್ಯವಾದ ಕಡತವೊಂದನ್ನು ಹುಡುಕಿಕೊಡಲೇ ಬೇಕೆಂದು ನಿಮ್ಮ ಮೇಲಧಿಕಾರಿಗಳು ಆದೇಶ ಹೊರಡಿಸುವರು. ದೇವರನ್ನು ಸ್ಮರಿಸಿ ಕಾರ್ಯ ಪ್ರವೃತ್ತರಾಗಿ.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp

Read more about: ಭವಿಷ್ಯ horoscope
English summary

your daily horoscope-21-october-2018

Know what astrology and the planets have in store for you today. Choose your zodiac sign and read the details...
Story first published: Saturday, October 20, 2018, 17:00 [IST]
X
Desktop Bottom Promotion