For Quick Alerts
ALLOW NOTIFICATIONS  
For Daily Alerts

20 january 2018 ಶನಿವಾರದ ದಿನ ಭವಿಷ್ಯ

By Divya Pandith
|

ಜೀವನದಲ್ಲಿ ಎಂದಿಗೂ ಎರಡು ವಸ್ತುಗಳನ್ನು ವ್ಯರ್ಥ ಮಾಡಬಾರದು. ಒಂದು ಅನ್ನದ ಅಗುಳು, ಇನ್ನೊಂದು ಆನಂದದ ಕ್ಷಣಗಳು. ಊಟ ಮಾಡುವಾಗ ಅಗತ್ಯಕ್ತಿಂತ ಹೆಚ್ಚು ಆಹಾರ ಪದಾರ್ಥಗಳನ್ನು ಬಳಸುವುದು. ನಂತರ ಅದನ್ನು ತಿನ್ನಲು ಸಾಧ್ಯವಾಗದೆ ಎಸೆಯುವ ಕೆಲಸ ಮಾಡಬಾರದು. ಆ ಅನ್ನದ ಅಗುಳು ಹಸಿದಿರುವ ಇನ್ನೊಬ್ಬ ವ್ಯಕ್ತಿಗೆ ಜೀವನಾಧಾರವಾಗುವುದು.

ಅದೇ ರೀತಿ ಸಿಕ್ಕ ಸಂತೋಷ ಕ್ಷಣಗಳನ್ನು ಅಲ್ಲಗಳೆಯಬಾರದು. ಸಂತೋಷದ ಘಳಿಗೆ ಚಿಕ್ಕ ವಿಷಯದ್ದೇ ಆಗಿರಬಹುದು. ಅದು ಒಮ್ಮೆ ಮನಸ್ಸಿಗೆ ನಿರಾಳತೆಯನ್ನು ನೀಡುವುದು. ಜೊತೆಗೆ ಇನ್ನೊಬ್ಬರ ಸಂತೋಷಕ್ಕೂ ಕಾರಣವಾಗಬಹುದು. ನೆಮ್ಮದಿಯ ಜೀವನಕ್ಕೆ ಸಾಕ್ಷಿಯಾಗುವುದು.

ಶನಿವಾರದ ದಿನವಾದ ಇಂದು ನಿಮ್ಮ ಭವಿಷ್ಯದಲ್ಲಿ ಗಣನೀಯ ಬದಲಾವಣೆ ಉಂಟಾಗಬಹುದು. ಅದಕ್ಕಾಗಿ ನೀವು ಸಿದ್ಧತೆ ನಡೆಸಿಕೊಳ್ಳಬೇಕು. ಅಂತಹ ಯಾವ ಬದಲಾವಣೆಯು ಭವಿಷ್ಯದಲ್ಲಿ ಜರುಗಬಹುದು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲದಲ್ಲಿದ್ದರೆ ಈ ಮುಂದಿರುವ ದಿನ ಭವಿಷ್ಯವನ್ನು ತಿಳಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಸಮಾಧಾನದ ಬದುಕು ಲಭಿಸುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಸ್ತ್ರೀಯರಿಗೆ ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುವುದು. ಹೊಸ ಸಂಬಂಧಗಳಲ್ಲಿ ವೃದ್ಧಿಕಾಣುವುದು. ಪ್ರೇಮಿಗಳಿಗೂ ಸಹ ಉತ್ತಮವಾದ ದಿನವಾಗಲಿದೆ. ಪಾಲಕರ ಒಪ್ಪಿಗೆಯಿಂದ ಪ್ರೇಮಕ್ಕೆ ಒಪ್ಪಿಗೆಯನ್ನು ಪಡೆದುಕೊಳ್ಳುವಿರಿ. ಮಕ್ಕಳಿಂದ ಶುಭ ವಾರ್ತೆಯನ್ನೇ ಕೇಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಜೀವನಕ್ಕಾಗಿ ಆಂಜನೇಯನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಸುಂದರವಾದ ಕನಸು ನನಸಾಗುವುದು. ಮನೆಯಲ್ಲಿ ನೆಮ್ಮದಿ ದೊರೆಯುವುದು. ಬಂಧುಗಳಿಂದ ಸಂಪೂರ್ಣ ಸಹಕಾರ ದೊರೆಯುವುದು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಆದಷ್ಟು ಕಾಳಜಿಯಿಂದ ಇರಿ. ವಂಚಕರ ಜಾಲಕ್ಕೆ ತುತ್ತಾಗುವ ಲಕ್ಷಣಗಳಿವೆ. ಯುವತಿಯರ ಜೀವನದಲ್ಲಿ ಪ್ರೇಮ ವೈಫಲ್ಯತೆ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕೆ ದೇವಿಯ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಮನೆಯಲ್ಲಿ ನೆಮ್ಮದಿಯನ್ನು ಕಣುವಿರಿ. ಜೀವನದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಲಾಭವನ್ನು ತಂದುಕೊಡುವುದು. ಸ್ಥಿರಾಸ್ತಿಯಿಂದ ಲಾಭವನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಸಮಾಧಾನ ಹಾಗೂ ಸಂತೋಷಕರವಾದ ಜೀವನಕ್ಕೆ ಆಂಜನೇಯನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಜಂಟಿ ವ್ಯವಹಾರವನ್ನು ಮಾಡದಿರಿ. ಆಘಾತ ಉಂಟಾಗುವ ಸಾಧ್ಯತೆಗಳಿವೆ. ಅನಿವಾರ್ಯ ಕಾರಣಗಳಿಂದ ದೂರದ ಪ್ರಯಾಣ ಮಾಡಬೇಕಾಗುವುದು. ಶಿಕ್ಷಣಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಕೆಲವು ಅಡೆತಡೆಗಳು ನಿಮ್ಮನ್ನು ಹೈರಾಣಗೊಳಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೇ ಹಾಗೂ ಉತ್ತಮ ಪ್ರಗತಿಗಾಗಿ ಗುರುವಿನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಮಾನಸಿಕ ಕಿರಿಕಿರಿ ಮುಂದುವರಿಯುವುದು. ಮಾನಸಿಕ ಆರೋಗ್ಯ ಹಾಳಾಗುವುದು. ಆರೋಗ್ಯದ ನಿಮಿತ್ತ ವೈದ್ಯರನ್ನು ಕಾಣಬೇಕಾಗುವುದು. ರಕ್ತ ಸಂಬಂಧಿ ಕಾಯಿಲೆ ಕಾಡುವ ಸಾಧ್ಯತೆಗಳಿವೆ. ಸಾಲ ಕೊಡುವುದು ಅಥವಾ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗದಿರಿ. ದೂರದ ಸಂಬಂಧಿಗಳು ಮರಣ ಹೊಂದಿದ ಸುದ್ದಿ ಕೇಳುವ ಸಾಧ್ಯತೆಗಳಿವೆ. ಕಪ್ಪು ಬಟ್ಟೆಯನ್ನು ಧರಿಸದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಆಂಜನೇಯನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಮನೆಯಲ್ಲಿ ನೆಮ್ಮದಿಯ ವಾತಾವರಣ. ಬಂಧುಗಳ ಆಗಮನವಾಗುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಮಾನಸಿಕ ನೆಮ್ಮದಿ ಉಂಟಾಗುವುದು. ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಸಮಾಧಾನಕರವಾದ ಜೀವನವನ್ನು ಅನುಭವಿಸಲಿದ್ದೀರಿ. ಮನೆಯಲ್ಲಿ ನೆಮ್ಮದಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಧನಾತ್ಮಕ ವಿಚಾರಗಳಿಂದ ಸಮೃದ್ಧಿ ಕಾಣುವಿರಿ. ಮನಸ್ಸಿಗೆ ಇನ್ನಷ್ಟು ಹುಮ್ಮಸ್ಸು ದೊರೆಯುವುದು. ಸ್ಥಿರಾಸ್ತಿಗಾಗಿ ಕಚ್ಚಾಟ ನಡೆಯುವ ಸಾಧ್ಯತೆಗಳಿವೆ. ಸಾಲ ಪಡೆಯುವುದು ಅಥವಾ ನೀಡುವ ಕೆಲಸಕ್ಕೆ ಮುಂದಾಗದಿರಿ. ಪ್ರಗತಿಯ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಆಂಜನೇಯನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇಂದು ನೀವು ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ. ಭಿನ್ನಾಭಿಪ್ರಾಯಗಳು ನಿಮ್ಮ ಮನಸ್ಸಿಗೆ ನೋವನ್ನು ಉಂಟುಮಾಡುವ ಸಾಧ್ಯತೆ ಇದೆ. ಅನಿವಾರ್ಯ ಕಾರಣದಿಂದ ದೂರದ ಪ್ರಯಾಣ ಕೈಗೊಳ್ಳುಬೇಕಾಗುವುದು. ಟ್ರಾವೆಲ್ ಏಜೆನ್ಸಿಯಲ್ಲಿ ಇರುವವರು ಒಂದಷ್ಟು ಅಡೆತಡೆಯನ್ನು ನಿರ್ವಹಿಸ ಬೇಕಾಗುವುದು. ಬೆಂಕಿಯ ಬಗ್ಗೆ ಎಚ್ಚರಿಕೆಯಿಂದ ಇರಿ. ಮಕ್ಕಳಿಗೆ ಗದರಿಸುವ ಕೆಲಸ ಮಾಡದಿರಿ. ಪ್ರಗತಿಯ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಮಾನಸಿಕ ಕಿರಿಕಿರಿ ಮುಂದುವರಿಯುವುದು. ಇಲ್ಲ ಸಲ್ಲದ ಆರೋಪ ನಿಮ್ಮ ಬೆನ್ನೇರಲಿದೆ. ಮಾನಸಿಕ ನೆಮ್ಮದಿ ಹಾಳಾಗುವುದು. ಹಣಕಾಸಿನ ವಿಚಾರದಲ್ಲಿ ವಿಪರೀತವಾಗಿ ವ್ಯಯ ಉಂಟಾಗುವುದು. ಮೋಸಗಾರರು ಅಥವಾ ವಂಚಕರ ಜಾಲಕ್ಕೆ ಸಿಲುಕುವ ಸಾಧ್ಯತೆಗಳಿವೆ. ಬಟ್ಟೆ ವ್ಯಾಪಾರದಲ್ಲಿ ಸಾಮಾನ್ಯವಾದ ಲಾಭವನ್ನು ಗಳಿಸಿಕೊಳ್ಳುವಿರಿ. ಮಕ್ಕಳಿಂದ ಅಶುಭ ವಾರ್ತೆ ಕೇಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಸಂಪೂರ್ಣವಾದ ಸಮಾಧಾನ ದೊರೆಯದು. ಶೇ. 50ರಷ್ಟು ಉತ್ತಮ ವಾದದ್ದು ಮತ್ತು ಶೇ.50ರಷ್ಟು ಕೆಟ್ಟ ಫಲಗಳನ್ನು ನೀವು ಅನುಭವಿಸಬೇಕಾಗುವುದು. ಬಂಧು ಮಿತ್ರರಿಂದ ಕಿರಿಕಿರಿ ಉಂಟಾಗುವುದು. ಅಂದುಕೊಂಡ ಕಾರ್ಯವು ವಿಳಂಬವಾಗುವುದು. ದೂರದ ಪ್ರಯಾಣ ಹಾಗೂ ಪ್ರಯಾಣಕ್ಕಾಗಿ ಅಧಿಕ ಹಣವನ್ನು ವ್ಯಯಿಸ ಬೇಕಾಗುವುದು. ಕೆಲವು ಅನಿರೀಕ್ಷಿತ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುವುದು. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಕುಂಭ ರಾಶಿಯವರಿಗೆ ಶುಭ ದಿನ. ಮಾಡುತ್ತಿರುವ ಕಾರ್ಯದಲ್ಲಿ ಪ್ರಗತಿಯನ್ನು ಕಾಣುವಿರಿ. ಬಂಧುಗಳ ಆಗಮನವಾಗುವುದು. ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಾಣುವಿರಿ. ಅನಿವಾರ್ಯವಾಗಿ ಮಾಡಿಕೊಂಡ ಸಾಲವನ್ನು ತೀರಿಸುವಿರಿ. ಕೆಲವರು ಹೊಸ ವ್ಯವಹಾರಗಳಿಗೆ ಹಣವನ್ನು ವ್ಯಯಿಸುವ ಸಾಧ್ಯತೆಗಳಿವೆ. ಸ್ಥಿರಾಸ್ತಿಗಾಗಿ ಕಚ್ಚಾಟ ನಡೆಯುವ ಸಾಧ್ಯತೆಗಳಿವೆ. ಆದಷ್ಟು ಎಚ್ಚರಿಕೆಯಿಂದ ಇರಿ. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ನಿಮಗೆ ಇಂದು ಶುಭ ದಿನ. ಅಂದು ಕೊಂಡ ಕೆಲಸಗಳು ಸುಲಭವಾಗಿ ನೆರವೇರುವುದು. ವಾಹನಗಳ ವ್ಯಾಪಾರಸ್ಥರಿಗೂ ಅನುಕೂಲ ಉಂಟಾಗುವುದು. ದೂರದ ಪ್ರದೇಶಗಳಿಗೆ ಅನಿವಾರ್ಯವಾಗಿ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಸರ್ಕಾರಿ ನೌಕರರಿಗೆ ಇರುವ ಅಡ್ಡಿ ಆತಂಕಗಳು ದೂರಾಗುವುದು. ಶುಭ ಫಲಗಳನ್ನೇ ಎದುರಿಸುವಂತಹ ಲಕ್ಷಣಗಳಿವೆ. ರಾಜಕೀಯ ನಾಯಕರು ಪ್ರಶಂಸಾತ್ಮಕ ಮಾತುಗಳನ್ನು ಕೇಳುವರು. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

English summary

your-daily-horoscope-20-january

Know what astrology and the planets have in store for you today. Choose your zodiac sign and read the details..
X
Desktop Bottom Promotion