Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬಾವಿ ಭೂಮಿಯೊಳಕ್ಕೆ ಕುಸಿಯುತ್ತಿರುವ ಮೈನವಿರೇಳಿಸುವ ದೃಶ್ಯ
ನಮ್ಮ ಭೂಮಿಯು ಬಹಳ ಸಹನೆಯುಳ್ಳದ್ದು. ನಾವು ಎಷ್ಟೇ ಅಪಕಾರಗಳನ್ನು ಭೂಮಿ ತಾಯಿಗೆ ಮಾಡಿದ್ದರೂ ಆಕೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ ಮತ್ತು ಮಾನವರನ್ನು ಕ್ಷಮಿಸಿಬಿಡುತ್ತಾಳೆ. ಅದಕ್ಕಾಗಿಯೇ ತಾಳ್ಮೆ ಭೂತಾಯಿಯಷ್ಟಿರಬೇಕು ಎಂದು ಹೇಳುವುದು. ಆದರೆ ಇಂದಿನ ದಿನಗಳಲ್ಲಿ ಮಾನವ ತನ್ನ ಅತಿಯಾಸೆಗೆ ಭೂತಾಯಿಯನ್ನು ಹಿಂಸಿಸುತ್ತಿದ್ದಾನೆ. ಅಲ್ಲಲ್ಲಿ ಅಗೆಯುವುದು, ಕಟ್ಟಗಳ ಸ್ಥಾಪನೆಯಿಂದ ಆಕೆಗೆ ಹೊರಲೂ ಕಷ್ಟವಾಗುತ್ತಿದೆ. ಮಾನವ ಕುಲಕ್ಕೆ ಅತ್ಯಗತ್ಯವಾಗಿರುವ ಮರಗಳ ನಾಶ, ವಾತಾವರಣವನ್ನು ಕಲುಷಿತ ಗೊಳಿಸುತ್ತಿರುವುದು, ಪ್ರಾಣಿಗಳ ನಾಶ ಹೀಗೆ ಮಾನಸ ಸುಖ ಲೋಪುಪತೆಯ ಆಸೆಗೆ ಬಿದ್ದು ಭೂತಾಯಿಯ ಪ್ರಕೃತಿಯ ಮನಸ್ಸಿಗೆ ಬರೆಯನ್ನು ಎಳೆಯುತ್ತಿದ್ದಾನೆ.
ಆಕೆಯ ತಾಳ್ಮೆಯನ್ನು ಪರೀಕ್ಷಿಸಲು ಹೋಗಿಯೇ ಅನೇಕ ವಿನಾಶಗಳು ಭೂಮಿಯಲ್ಲಿ ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಹೀಗೆ ಪ್ರಕೃತಿಯ ರುದ್ರ ನರ್ತನಕ್ಕೆ ಮಾನವ ಬಲಿಯಾಗುತ್ತಿದ್ದಾನೆ. ಆದರೂ ಮಾನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿರುವ ಒಂದು ದೃಶ್ಯವನ್ನು ತೋರಿಸುತ್ತಿದ್ದು ನಿಜಕ್ಕೂ ಇದು ಮೈರೋಮಾಂಚನವನ್ನುಂಟು ಮಾಡುತ್ತಿದೆ.

ಕೆಲವೇ ನಿಮಿಷದಲ್ಲಿ ಬಾವಿಯು ಭೂಕುಸಿತಕ್ಕೆ ಉಂಟಾಗುತ್ತಿರುವ ದೃಶ್ಯಾವಳಿಯನ್ನು ಈ ವೀಡಿಯೊ ಒಳಗೊಂಡಿದೆ. ಕೆಲವೇ ನಿಮಿಷಗಳಲ್ಲಿ ಬಾವಿಯು ಭೂಮಿಯ ಆಳಕ್ಕೆ ಹೋಗುತ್ತಿರುವುದನ್ನು ಜನರು ತಮ್ಮ ವೀಡಿಯೊದಲ್ಲಿ ಸೆರೆಯಾಗಿಸಿಕೊಂಡಿದ್ದರೂ ಪ್ರಕೃತಿಯ ಭೂಮಿತಾಯಿಯ ಸಾಮರ್ಥ್ಯವನ್ನು ನಾವು ಅರಿತುಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ವಯನಾಡ್ನ ಅಂಬುಕುಟಿ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಬಾವಿಯು ತುಂಬಾ ಹಳೆಯದಾಗಿದ್ದು ಇದನ್ನು ಅಜ್ಜಿಯ ಕಾಲದ ಬಾವಿ ಎಂದು ಕರೆಯುತ್ತಾರೆ. ಭಾರೀ ವರ್ಷಧಾರೆಯಿಂದಾಗಿ ಈ ಬಾವಿ ಭೂಕುಸಿತಕ್ಕೆ ಒಳಗಾಗಿದೆ. ಬಾವಿಯಿಂದ ವಿಚಿತ್ರ ಶಬ್ಧ ಬಂದ ಹಿನ್ನೆಲೆಯಲ್ಲಿ ಜನರು ಬಾವಿ ಇರುವ ಸ್ಥಳಕ್ಕೆ ಧಾವಿಸಿದಾಗ ಬಾವಿ ಕುಸಿಯುತ್ತಿರುವುದು ಕಂಡು ಬೆಚ್ಚಿ ಬಿದ್ದಿದ್ದಾರೆ.
ಅಂತೂ ನಮ್ಮ ತಂಡಕ್ಕೆ ಈ ರೋಚಕ ವೀಡಿಯೊ ದೊರೆತಿದ್ದು ಪ್ರಕೃತಿ ಮುನಿದರೆ ಏನು ಸಂಭವಿಸುತ್ತದೆ ಎಂಬುದನ್ನು ಈ ವೀಡಿಯೊ ಸ್ಪಷ್ಟವಾಗಿ ನಮಗೆ ತಿಳಿಸಿದೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ನಾವು ಹಾಗೂ ನಮ್ಮ ಮಕ್ಕಳು ಪ್ರಕೃತಿ ವಿಕೋಪಕ್ಕೆ ಬಲಿಯಾಗಬೇಕಾದ ನತದೃಷ್ಟ ಬಂದೊದಗಿದೆ. ಇಂತಹುದೇ ದೃಶ್ಯಗಳು ದೇಶದ ಹಲವೆಡೆ ನಡೆಯುತ್ತಿದ್ದರೂ ನಮ್ಮ ಭೂಮಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.



Click it and Unblock the Notifications











