Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬಾವಿ ಭೂಮಿಯೊಳಕ್ಕೆ ಕುಸಿಯುತ್ತಿರುವ ಮೈನವಿರೇಳಿಸುವ ದೃಶ್ಯ
ನಮ್ಮ ಭೂಮಿಯು ಬಹಳ ಸಹನೆಯುಳ್ಳದ್ದು. ನಾವು ಎಷ್ಟೇ ಅಪಕಾರಗಳನ್ನು ಭೂಮಿ ತಾಯಿಗೆ ಮಾಡಿದ್ದರೂ ಆಕೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ ಮತ್ತು ಮಾನವರನ್ನು ಕ್ಷಮಿಸಿಬಿಡುತ್ತಾಳೆ. ಅದಕ್ಕಾಗಿಯೇ ತಾಳ್ಮೆ ಭೂತಾಯಿಯಷ್ಟಿರಬೇಕು ಎಂದು ಹೇಳುವುದು. ಆದರೆ ಇಂದಿನ ದಿನಗಳಲ್ಲಿ ಮಾನವ ತನ್ನ ಅತಿಯಾಸೆಗೆ ಭೂತಾಯಿಯನ್ನು ಹಿಂಸಿಸುತ್ತಿದ್ದಾನೆ. ಅಲ್ಲಲ್ಲಿ ಅಗೆಯುವುದು, ಕಟ್ಟಗಳ ಸ್ಥಾಪನೆಯಿಂದ ಆಕೆಗೆ ಹೊರಲೂ ಕಷ್ಟವಾಗುತ್ತಿದೆ. ಮಾನವ ಕುಲಕ್ಕೆ ಅತ್ಯಗತ್ಯವಾಗಿರುವ ಮರಗಳ ನಾಶ, ವಾತಾವರಣವನ್ನು ಕಲುಷಿತ ಗೊಳಿಸುತ್ತಿರುವುದು, ಪ್ರಾಣಿಗಳ ನಾಶ ಹೀಗೆ ಮಾನಸ ಸುಖ ಲೋಪುಪತೆಯ ಆಸೆಗೆ ಬಿದ್ದು ಭೂತಾಯಿಯ ಪ್ರಕೃತಿಯ ಮನಸ್ಸಿಗೆ ಬರೆಯನ್ನು ಎಳೆಯುತ್ತಿದ್ದಾನೆ.
ಆಕೆಯ ತಾಳ್ಮೆಯನ್ನು ಪರೀಕ್ಷಿಸಲು ಹೋಗಿಯೇ ಅನೇಕ ವಿನಾಶಗಳು ಭೂಮಿಯಲ್ಲಿ ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಹೀಗೆ ಪ್ರಕೃತಿಯ ರುದ್ರ ನರ್ತನಕ್ಕೆ ಮಾನವ ಬಲಿಯಾಗುತ್ತಿದ್ದಾನೆ. ಆದರೂ ಮಾನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿರುವ ಒಂದು ದೃಶ್ಯವನ್ನು ತೋರಿಸುತ್ತಿದ್ದು ನಿಜಕ್ಕೂ ಇದು ಮೈರೋಮಾಂಚನವನ್ನುಂಟು ಮಾಡುತ್ತಿದೆ.

ಕೆಲವೇ ನಿಮಿಷದಲ್ಲಿ ಬಾವಿಯು ಭೂಕುಸಿತಕ್ಕೆ ಉಂಟಾಗುತ್ತಿರುವ ದೃಶ್ಯಾವಳಿಯನ್ನು ಈ ವೀಡಿಯೊ ಒಳಗೊಂಡಿದೆ. ಕೆಲವೇ ನಿಮಿಷಗಳಲ್ಲಿ ಬಾವಿಯು ಭೂಮಿಯ ಆಳಕ್ಕೆ ಹೋಗುತ್ತಿರುವುದನ್ನು ಜನರು ತಮ್ಮ ವೀಡಿಯೊದಲ್ಲಿ ಸೆರೆಯಾಗಿಸಿಕೊಂಡಿದ್ದರೂ ಪ್ರಕೃತಿಯ ಭೂಮಿತಾಯಿಯ ಸಾಮರ್ಥ್ಯವನ್ನು ನಾವು ಅರಿತುಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ವಯನಾಡ್ನ ಅಂಬುಕುಟಿ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಬಾವಿಯು ತುಂಬಾ ಹಳೆಯದಾಗಿದ್ದು ಇದನ್ನು ಅಜ್ಜಿಯ ಕಾಲದ ಬಾವಿ ಎಂದು ಕರೆಯುತ್ತಾರೆ. ಭಾರೀ ವರ್ಷಧಾರೆಯಿಂದಾಗಿ ಈ ಬಾವಿ ಭೂಕುಸಿತಕ್ಕೆ ಒಳಗಾಗಿದೆ. ಬಾವಿಯಿಂದ ವಿಚಿತ್ರ ಶಬ್ಧ ಬಂದ ಹಿನ್ನೆಲೆಯಲ್ಲಿ ಜನರು ಬಾವಿ ಇರುವ ಸ್ಥಳಕ್ಕೆ ಧಾವಿಸಿದಾಗ ಬಾವಿ ಕುಸಿಯುತ್ತಿರುವುದು ಕಂಡು ಬೆಚ್ಚಿ ಬಿದ್ದಿದ್ದಾರೆ.
ಅಂತೂ ನಮ್ಮ ತಂಡಕ್ಕೆ ಈ ರೋಚಕ ವೀಡಿಯೊ ದೊರೆತಿದ್ದು ಪ್ರಕೃತಿ ಮುನಿದರೆ ಏನು ಸಂಭವಿಸುತ್ತದೆ ಎಂಬುದನ್ನು ಈ ವೀಡಿಯೊ ಸ್ಪಷ್ಟವಾಗಿ ನಮಗೆ ತಿಳಿಸಿದೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ನಾವು ಹಾಗೂ ನಮ್ಮ ಮಕ್ಕಳು ಪ್ರಕೃತಿ ವಿಕೋಪಕ್ಕೆ ಬಲಿಯಾಗಬೇಕಾದ ನತದೃಷ್ಟ ಬಂದೊದಗಿದೆ. ಇಂತಹುದೇ ದೃಶ್ಯಗಳು ದೇಶದ ಹಲವೆಡೆ ನಡೆಯುತ್ತಿದ್ದರೂ ನಮ್ಮ ಭೂಮಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.



Click it and Unblock the Notifications
