Just In
- 14 hrs ago ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
- 15 hrs ago ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
- 16 hrs ago ನಾರಾಯಣ ಮೂರ್ತಿ 4 ತಿಂಗಳ ಮೊಮ್ಮಗ ಈಗ ₹240 ಕೋಟಿ ಆಸ್ತಿ ಒಡೆಯ..! ಹೇಗೆ ಸಾಧ್ಯ..?
- 17 hrs ago ಎಲ್ಲೀಸ್ ಪೆರ್ರಿ ಅತ್ಯುತ್ತಮ ಆಟಗಾರ್ತಿ ಅತ್ಯುತ್ತಮ ಮನುಷ್ಯಳು ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ
Don't Miss
- News Congress Candidates List : ಕಾಂಗ್ರೆಸ್ 2 ನೇ ಲಿಸ್ಟ್ ಗೆ ಕೌಂಟ್ ಡೌನ್ : ಯಾರ್ಯಾರಿಗೆ 'ಕೈ' ಟಿಕೆಟ್?
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- Movies ರಣ್ವೀರ್ ಸಿಂಗ್ ಗೆ ಶಕ್ತಿಮಾನ್ ಪಾತ್ರ ಮಾಡುವ ಅರ್ಹತೆ-ಯೋಗ್ಯತೆ ಇಲ್ಲ ; ಮುಖೇಶ್ ಖನ್ನಾ..!
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 7 ರಾಶಿಚಕ್ರದವರು ಮುಂಬರುವ ದಿನಗಳಲ್ಲಿ ಅತ್ಯಂತ ಶ್ರೀಮಂತರಾಗುವರು
ಯಾರ ಸಮಯ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅತ್ಯಂತ ಶ್ರೀಮಂತರು ಸಹ ಕೆಟ್ಟ ಸಮಯದಿಂದಾಗಿ ಬಡತನವನ್ನು ಅನುಭವಿಸಬಹುದು. ಅತ್ಯಂತ ಬಡತನದಲ್ಲಿ ಇರುವವರು ಸಹ ಶ್ರೀಮಂತರಾಗಿ ಮೆರೆಯಬಹುದು. ಏಕೆಂದರೆ ಮನುಷ್ಯನ ಜೀವನ ಇರುವುದು ಅವನ ಅದೃಷ್ಟದ ಮೇಲೆ. ಹೇಗೆ ತನ್ನ ಗ್ರಹಗತಿಗಳ ಪರಿಣಾಮವನ್ನು ಅನುಭವಿಸುತ್ತಾನೋ ಹಾಗೆಯೇ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತಾ ಸಾಗುತ್ತಾನೆ.
ವ್ಯಕ್ತಿಯ ಅದೃಷ್ಟವೆಂದರೆ ಕೇವಲ ಹಣದಕ್ಕೆ ಸೀಮಿತವಾದ ವಿಚಾರವಾಗಿರುವುದಿಲ್ಲ. ಆರೋಗ್ಯ, ಸಂಬಂಧ, ಖ್ಯಾತಿ, ಯಶಸ್ಸು ಕುಟುಂಬ ಹೀಗೆ ಎಲ್ಲಾ ವಿಚಾರದಲ್ಲೂ ಧನಾತ್ಮಕ ಬದಲಾವಣೆಯನ್ನು ಅವಲಂಬಿಸಿರುತ್ತದೆ. ಉತ್ತಮ ಫಲಿತಾಂಶವನ್ನು ಪಡೆಯುತ್ತಾ ಸಾಗಿದಂತೆ ಜೀವನದಲ್ಲಿ ಅತ್ಯುತ್ತಮ ಏಳಿಗೆಯನ್ನು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಮುಂದಿನ ದಿನದಲ್ಲಿ ಶ್ರೀಮಂತಿಕೆಯನ್ನು ಅನುಭವಿಸುವರು ಎನ್ನಲಾಗುತ್ತಿದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಅದೃಷ್ಟವೇನು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.
1.ಕನ್ಯಾ
ಈ ರಾಶಿಯವರು ಸಾಧನೆ ಮಾಡಲು ತಮ್ಮದೇ ಆದ ವೈಯಕ್ತಿಕ ಗುರಿಯನ್ನು ಹೊಂದಿದ್ದಾರೆ. ಇವರು ತಾವು ಮಾಡುವ ಕೆಲಸಗಳಿಗಾಗಿ ಯಾರ ಸಹಾಯವನ್ನು ಬಯಸುವುದಿಲ್ಲ. ಅವರು ಮಾಡುವ ಕಾರ್ಯಗಳಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಇವರ ಶ್ರಮಕ್ಕೆ ಯಾವುದೇ ನಿರಾಸೆ ಉಂಟಾಗದು. ಮುಂದಿನ ದಿನಗಳಲ್ಲಿ ಗುರಿಸಾಧನೆಯ ಜೊತೆಗೆ ಶ್ರೀಮಂತಿಕೆಯನ್ನು ಅನುಭವಿಸುವರು. ಇನ್ನು ಈ ರಾಶಿಯಲ್ಲಿ ಜನಿಸಿದವರು ಬಹಳ ನಿರ್ಧಾರಯುತ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಾವು ಮಾಡುವ ಕೆಲಸದ ಸಂಪೂರ್ಣ ವಿವರ ಪಡೆಯುವುದು, ಅದರ ಏಳಿಗೆಗಾಗಿ ಎಲ್ಲಾ ಶ್ರಮವನ್ನು ವ್ಯಯಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಬಹು ಬೇಗ ಶ್ರೀಮಂತಿಕೆ ಹಾಗೂ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಇವರು ತಮ್ಮ ಗುರಿಯನ್ನು ಸಾಧಿಸಲು ಬೇಕಾದ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತಾರೆ. ಮತ್ತು ಎಲ್ಲಾ ಪೂರ್ವತಯಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿರುತ್ತಾರೆ. ಕಷ್ಟದ ಕೆಲಸವನ್ನು ಬಹಳ ಸಹನೆಯಿಂದ ಯಶಸ್ವಿಯಾಗಿ ನಿರ್ವಹಿಸುವುದು ಹೇಗೆ? ಎನ್ನುವುದನ್ನು ಅರಿತಿರುತ್ತಾರೆ. ಅದೃಷ್ಟದ ಚಿಹ್ನೆ ಇವರಿಗೆ ಭೂಮಿಯಾದ್ದರಿಂದ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಥವಾ ಹಣ ಹೂಡಿಕೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣವನ್ನು ಗೌರವಿಸುವ ಇವರು ಅದರ ಸೂಕ್ತ ಬಗೆಯ ವ್ಯಯ ಹಾಗೂ ಉಳಿತಾಯದ ಬಗ್ಗೆ ಅರಿತಿರುತ್ತಾರೆ.
2.ವೃಶ್ಚಿಕ
ವೃಶ್ಚಿಕ ರಾಶಿಯವರು ಹುಟ್ಟಿದಾಗಿನಿಂದಲೇ ಅಂತದೃಷ್ಟಿಯ ಶಕ್ತಿ ಹಾಗೂ ದಿವ್ಯಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಇವರು ಜೀವನದಲ್ಲಿ ಮುಂದೆಬರಲು ತಮ್ಮ ಎಲ್ಲಾ ಜ್ಞಾನ ಮತ್ತು ಅರ್ಥಗರ್ಭಿತ ಪ್ರವೃತ್ತಿಯನ್ನು ಬಳಸುತ್ತಾರೆ. ಇವರು ತಾವು ಮಾಡುವ ಕೆಲಸದಲ್ಲಿ ಅತ್ಯಂತ ಪರಿಣಾಮಕಾರಿ ಯಶಸ್ಸನ್ನು ಪಡೆಯುವುದರಿಂದ ಬಹುಬೇಗ ಶ್ರೀಮಂತಿಕೆಯನ್ನು ಅನುಭವಿಸುವರು. ಈ ರಾಶಿಯವರು ಅರ್ಥಗರ್ಭಿತ ಮತ್ತು ಅತೀಂದ್ರಿಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಉತ್ತಮ ಆತ್ಮವಿಶ್ವಾಸದಿಂದಲೇ ಎಲ್ಲವನ್ನೂ ಸಾಧಿಸಿ ತೋರುತ್ತಾರೆ. ಶೈಕ್ಷಣಿಕವಾಗಿ ಉತ್ತಮ ಯಶಸ್ಸು ಹೊಂದುವ ಇವರು ಚಿಕ್ಕ ವಯಸ್ಸಿನಲ್ಲೇ ಅಧಿಕ ಹಣ ಹಾಗೂ ಉತ್ತಮ ಕೆಲಸವನ್ನು ಪಡೆದುಕೊಳ್ಳುತ್ತಾರೆ. ಸುಲಭವಾಗಿ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅರಿತಿರುತ್ತಾರೆ.
ತಮ್ಮ ತಪ್ಪುಗಳಿಂದ ಉಂಟಾದ ಪರಿಣಾಮಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪಾಠ ಕಲಿತು. ಅದರ ವಿಶ್ಲೇಷಣೆ ಮಾಡಿಕೊಳ್ಳುತ್ತಾರೆ. ಸ್ಪರ್ಧಾತ್ಮ ಸ್ವಭಾವದವರಾದ ಇವರು ತಮ್ಮ 30 ವರ್ಷದೊಳಗೆ ಅತ್ಯಂತ ಗೌರವ ಹಾಗೂ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಇವರು ಸಂತೋಷದ ಪ್ರಜ್ಞೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.
3. ಸಿಂಹ
ಈ ರಾಶಿಯವರು ಹಿಟ್ಟಿದಾಗಿನಿಂದಲೇ ನಾಯಕತ್ವದ ಪ್ರವೃತ್ತಿಯನ್ನು ಪಡೆದುಕೊಂಡು ಬಂದಿರುತ್ತಾರೆ. ಇವರು ಅಧಿಕಾರವನ್ನು ಪಡೆಯುವುದರಲ್ಲಿ ಪ್ರಮುಖ ವ್ಯಕ್ತಿಗಳಾಗಿರುತ್ತಾರೆ. ಜೊತೆಗೆ ಹೆಚ್ಚು ಜವಾಬ್ದಾರಿಯುತ ವ್ಯಕ್ತಿಗಳಾಗಿ ಮಿಂಚುವರು. ಉತ್ತಮ ಕೆಲಸ ಹಾಗೂ ಖ್ಯಾತಿಯನ್ನು ಪಡೆದುಕೊಳ್ಳುವ ಇವರು ಜೀವನದಲ್ಲಿ ಅತ್ಯಂತ ಶ್ರೀಮಂತಿಕೆಯನ್ನು ಅನುಭವಿಸುವರು. ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶಕ್ತಿಯುತರು, ಉತ್ಸಾಹಿಗಳು, ಆಶಾವಾದಿಗಳು ಹಾಗೂ ಮನವನ್ನು ರಂಜಿಸುವ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮೊಂದಿಗೆ ಇತರರನ್ನು ಮುಂನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸೃಜನಶೀಲ ಪ್ರವೃತ್ತಿಯವರಾದ ಇವರು ತಮ್ಮ 30 ವರ್ಷದೊಳಗೆ ಹೆಚ್ಚಿನ ಸಾಧನೆ ಹಾಗೂ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ. ಪ್ರಮುಖ ನಿರ್ಧಾರಗಳನ್ನು ಬಹಳ ನಿಷ್ಠೆಯಿಂದ ತೆಗೆದುಕೊಳ್ಳುವ ಇವರ ಸ್ವಭಾವದಲ್ಲಿ ಸ್ವಲ್ಪ ಅಹಂಕಾರ ಮತ್ತು ಹೆಮ್ಮೆ ಇರುವುದನ್ನು ಗಮನಿಸಬಹುದು. ಇವರು ಶ್ರೀಮಂತಿಕೆಯನ್ನು ಪಡೆದುಕೊಳ್ಳು ಅನುವಾಗುವಂತೆ ಅನೇಕ ಅವಕಾಶಗಳು ಬಹು ಸುಲಭವಾಗಿ ಇವರಿಗೆ ಲಭಿಸುವುದು.
4.ವೃಷಭ
ಈ ರಾಶಿಯ ವ್ಯಕ್ತಿಗಳು ಬಹುಬೇಗ ತಮ್ಮ ಕಾಲಮೇಲೆ ನಿಂತುಕೊಳ್ಳುತ್ತಾರೆ. ಕೆಲಸದಲ್ಲಿ ಉತ್ತಮ ರೀತಿಯಲ್ಲಿ ಗಮನವನ್ನು ಹರಿಸುತ್ತಾರೆ. ಕೆಲಸದಲ್ಲಿ ತೋರುವ ಗಮನ ಹಾಗೂ ಶ್ರದ್ಧೆಯು ಉತ್ತಮ ಯಶಸ್ಸನ್ನು ತಂದುಕೊಡುವುದು. ಇವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ವಿಯನ್ನು ಕಾಣುವುದರಿಂದ ಬಹುಬೇಗ ಶ್ರೀಮಂತಿಕೆಯನ್ನು ಅನುಭವಿಸುವರು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು. ಇನ್ನು ಈ ರಾಶಿಯವರು ಪ್ರತಿಯೊಂದು ವಿಚಾರದ ಕುರಿತು ತಾರ್ಕಿಕ ಮತ್ತು ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಉತ್ತಮ ವಸ್ತುಗಳನ್ನು ಮಾತ್ರ ಬಯಸುತ್ತಾರೆ. ತಮ್ಮ ಹಣವನ್ನು ಬಹಳ ಎಚ್ಚರಿಕೆಯಿಂದ ವ್ಯಯ ಮಾಡುತ್ತಾರೆ. ಇತರ ರಾಶಿಚಕ್ರಗಳಿಗೆ ಹೋಲಿಸಿದರೆ ಹೆಚ್ಚು ಹಣವನ್ನು ಉಳಿಸಬಲ್ಲರು. ಜೀವನಲ್ಲಿ ಹೆಚ್ಚು ಸ್ಥಿರತೆ ಮತ್ತು ಸುರಕ್ಷತೆಗೆ ಹೆಚ್ಚು ಬೆಲೆ ಕೊಡುತ್ತಾರೆ. ತಮ್ಮ 30 ವರ್ಷದೊಳಗೆ ಹೆಚ್ಚು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನವನ್ನು ಹೊಂದುವ ಇವರು ತಮ್ಮ ಕನಸುಗಳನ್ನು ಸಾಧಿಸಲು ಬಹಳ ತಾಳ್ಮೆಯಿಂದ ಮತ್ತು ನಿರಂತರವಾಗಿ ಕೆಲಸ ಕೈಗೊಳ್ಳುತ್ತಾರೆ.
5.ಕರ್ಕ
ಈ ರಾಶಿಯವರಿಗೆ ಸ್ವಲ್ಪ ನಾಚಿಕೆ ಸ್ವಭಾವ ಇರಬಹುದು. ಆದರೆ ಇವರಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಉತ್ತಮ ವ್ಯವಹಾರ ಕೌಶಲ್ಯ, ಉದ್ಯೋಗ ನಿರ್ವಹಣೆ ಹಾಗೂ ಅದೃಷ್ಟಗಳನ್ನು ಉತ್ತಮ ರೀತಿಯಲ್ಲಿಯೇ ಅನುಭವಿಸುವುದರಿಂದ ಮಾಡುವ ಕೆಲಸದಲ್ಲಿ ಹಾಗೂ ಜೀವನದಲ್ಲಿ ಬಹುಬೇಗ ಶ್ರೇಯಸ್ಸನ್ನು ಪಡೆದುಕೊಳ್ಳುವರು.
6.ಮಿಥುನ
ಈ ರಾಶಿಚಕ್ರದ ವ್ಯಕ್ತಿಗಳು ಅತ್ಯುತ್ತಮ ಉಳಿತಾಯ ಕ್ರಮವನ್ನು ಅನುಸರಿಸುವರು. ಹಾಗಾಗಿಯೇ ಮುಂದಿನ ದಿನದಲ್ಲಿ ಆಶ್ಚರ್ಯಕರವಾದ ರೀತಿಯಲ್ಲಿ ಹಣವನ್ನು ಉಳಿಸುವುದರ ಮೂಲಕ ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುವುದು. ತಮ್ಮ ಗುರಿಯ ಕಡೆಗೆ ಹೆಚ್ಚು ಗಮನವನ್ನು ನೀಡುವ ಇವರು ತಮ್ಮ ಸಮರ್ಪಣೆಗೆ ಸರಿಯಾಗಿ ಲಾಭವನ್ನು ಪಡೆದುಕೊಳ್ಳುವರು. ಇನ್ನು ಈ ರಾಶಿಯವರು ದ್ವಂದ್ವತೆ ಮತ್ತು ಎರಡು ವಿಭಿನ್ನ ದೃಷ್ಟಿಕೋನಗಳಿಂದ ಸನ್ನಿವೇಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ಬುದ್ಧಿವಂತ ರಾಶಿಚಕ್ರ ಚಿಹ್ನೆ. ಸಾಮಾನ್ಯವಾಗಿ ಮಿಥುನ ರಾಶಿಯವರು ಯಾವಾಗಲೂ ಸಮತೋಲನ ಕಂಡುಹಿಡಿಯುವ ಮತ್ತು ತಮ್ಮ ಘರ್ಷಣೆಗಳು ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಈ ರಾಶಿಚಕ್ರದವರು ಓದುವುದು, ವಿಶ್ಲೇಷಣೆ ನಡೆಸುವುದು ಮತ್ತು ಅವರ ಲಾಭಕ್ಕಾಗಿ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ಚತುರತೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು.
7.ತುಲಾ
ಈ ರಾಶಿಚಕ್ರದ ವ್ಯಕ್ತಿಗಳು ಬಹಳ ಸರಳ ವ್ಯಕ್ತಿಗಳಾಗಿರುತ್ತಾರೆ. ಹಣವನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಎಂತಲೇ ಹೇಳಬಹುದು. ಮನುಷ್ಯನ ದುರಾಸೆಯನ್ನು ತಿರಸ್ಕರಿಸುವ ಇವರು ಮಾನವೀಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕೆಲಸದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲೇ ಮುಂಬರುವ ದಿನದಲ್ಲಿ ಹೆಚ್ಚಿನ ಹಣವನ್ನು ಕಾಣುವರು ಎಂದು ಹೇಳಲಾಗುತ್ತದೆ. ನಿಮ್ಮ ಖುಷಿಪಡಿಸುವ ಸಲುವಾಗಿ ಹಾಗೂ ನಿಮ್ಮ ಸಂತೋಷವೇ ತುಂಬಾ ಮುಖ್ಯವೆಂದು ಅವರು ಪರಿಗಣಿಸಿರುವ ಕಾರಣದಿಂದಾಗಿ ತುಲಾ ರಾಶಿಯವರನ್ನು ಮರೆಯುವುದು ತುಂಬಾ ಕಠಿಣ. ಇವರೊಂದಿಗೆ ಹೊಂದಿಕೊಳ್ಳುವುದು ತುಂಬಾ ಸುಲಭ ಮತ್ತು ಇವರು ನಿಮ್ಮ ಕಷ್ಟದ ಸಮಯದಲ್ಲಿ ಒಂದು ಕ್ಷಣವೂ ಮರುಯೋಚಿಸದೆ ನೆರವಿಗೆ ಧಾವಿಸುವರು. ಇವರು ಏಕ ವ್ಯಕ್ತಿಯಾಗಿಯೇ ನೆರವು ಮಾಡುವರು. ಇವರ ರೋಮ್ಯಾಂಟಿಕ್ ಮತ್ತು ಕಾಳಜಿಯ ನಡವಳಿಕೆ ನಿಮಗೆ ತುಂಬಾ ವಿಶೇಷವೆನಿಸುವಂತೆ ಮಾಡುವುದು.