Just In
- 14 min ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 33 min ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- 1 hr ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 2 hrs ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
Don't Miss
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 6 ರಾಶಿಚಕ್ರದ ವ್ಯಕ್ತಿಗಳು ತಮ್ಮ ಭಾವನೆಯನ್ನು ಬಹುಬೇಗ ಬದಲಾಯಿಸುತ್ತಾರಂತೆ!
ಸಾಮಾನ್ಯವಾಗಿ ಒಂದು ಸ್ನೇಹಿತರ ಗುಂಪು ಅಥವಾ ಕುಟುಂಬದ ಸಂಬಂಧಿಕರಲ್ಲಿ ಕೆಲವರು ಬಹುಬೇಗ ಕಿರಿಕಿರಿಯನ್ನುಂಟುಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಕ್ಷಣದಲ್ಲಿಯೇ ಬದಲಾಗುವ ಅವರ ಮನೋಭಾವದ ಸ್ಥಿತಿ ಇತರರಿಗೆ ಆಶ್ಚರ್ಯವನ್ನುಂಟುಮಾಡುವುದು. ಇವರ ಕಿರಿಕಿರಿಯ ಪ್ರವೃತ್ತಿ ಇತರರಿಗೆ ಗೊಂದಲ ಉಂಟುಮಾಡಬಹುದು. ಜೊತೆಗೆ ಮೂಡಿ ಸ್ವಭಾವದ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು.
ಒಂದು ನಿರ್ದಿಷ್ಟ ಸಮಯದಲ್ಲಿ ಸ್ನೇಹಿತರ ವರ್ತನೆಗಳ ಬಗ್ಗೆ ಖಚಿತತೆ ಹೊಂದಿದ್ದರೂ, ಇತರರ ಭಾವನೆಗಳ ಕುರಿತು ಊಹೆ ಮಾಡುವುದು ಅಷ್ಟು ಸುಲಭವಾದದ್ದಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಗ್ರಹಗತಿಗನುಗುಣವಾಗಿ ವರ್ತನೆ ಹಾಗೂ ಭಾವನೆಗಳ ಮೇಲೆ ಶೀಘ್ರ ಬದಲಾವಣೆಯನ್ನು ಕಾಣುತ್ತಾರೆ. ಅದು ಇತರರಿಗೆ ಇರಿಸುಮುರಿಸು ಉಂಟಾಗುವುದು. ಹಾಗಾದರೆ ಯಾವ ರಾಶಿಚಕ್ರದ ವ್ಯಕ್ತಿಗಳು ತಮ್ಮ ಭಾವನೆಯಲ್ಲಿ ಬಹುಬೇಗ ಬದಲಾವಣೆಯನ್ನು ಕಾಣುತ್ತಾರೆ ಎನ್ನುವ ಕುತೂಹಲ ನಿಮಗಿದೆ ಅಥವಾ ನೀವು ಆ ರಾಶಿಚಕ್ರಗಳ ಪಟ್ಟಿಯಲ್ಲಿ ಬರುತ್ತೀರಾ? ಎನ್ನುವುದನ್ನು ತಿಳಿಯುವ ಕುತೂಹಲ ಇದ್ದರೆ ಲೇಖನದ ಮುಂದಿನ ಭಾಗವನ್ನು ಓದಿ.
1.ಮೇಷ
ಇವರು ಸಾಮಾನ್ಯವಾಗಿ ತಮ್ಮ ಭಾವನೆ ಅಥವಾ ಮನಃಸ್ಥಿತಿಯನ್ನು ಬದಲಿಸುವ ಅಗತ್ಯವಿರುವುದಿಲ್ಲ. ಆದರೆ ಕೆಲವು ಸಂದರ್ಭ ಹಾಗೂ ಸಮಯದಲ್ಲಿ ತಕ್ಷಣದ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ. ಇವರ ಈ ರೀತಿಯ ವರ್ತನೆ ಸರ್ವೇ ಸಾಮಾನ್ಯವಾಗಿರುತ್ತದೆ. ಇವರು ಸಂತೋಷದಲ್ಲಿ ಇರುವಾಗ ತಮ್ಮ ಶತ್ರುಗಳನ್ನು ಸಹ ದೊಡ್ಡ ನಗುವಿನ ಮೂಲಕ ತಬ್ಬಿಕೊಳ್ಳುವರು. ಅದೇ ಸಿಟ್ಟಿನಲ್ಲಿರುವಾಗ ಏನು ಮಾಡುತ್ತಾರೆ ಎನ್ನುವುದು ಅವರಿಗೇ ಅರಿವಿರುವುದಿಲ್ಲ.
2.ಮಿಥುನ
ಸಾಮಾಜಿಕ ಮಾಧ್ಯಮಗಳು ಇವರ ಮನಃಸ್ಥಿತಿಯನ್ನು ಉತ್ತಮವಾಗಿ ಪ್ರತಿಫಲಿಸುತ್ತದೆ. ಇವರ ಮನಸ್ಸಿನಲ್ಲಿ ಸಂತೋಷ ಅಥವಾ ದುಃಖ ಏನೇ ಆದರೂ ಅವುಗಳನ್ನು ಮೊದಲು ಸಾಮಾಜಿಕ ಕ್ಷೇತ್ರದಲ್ಲಿಯೇ ಹಂಚಿಕೊಳ್ಳುತ್ತಾರೆ. ಮನಃಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯನ್ನು ಸ್ವಲ್ಪ ನಿಮಿಷಗಳ ಕಾಲ ನಿಯಂತ್ರಿಸುವರು. ನಂತರ ಗಂಭೀರ ರೀತಿಯಲ್ಲಿ ಹೊರಹೊಮ್ಮುವುದು. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಇವರ ನಕಾರಾತ್ಮಕ ವರ್ತನೆಯಿಂದ ಉಂಟಾದ ತೊಂದರೆಗಳಿಗೆ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ವಿಷಾದಿಸುತ್ತಾರೆ.
Most Read: ಒಂದೆರಡು ಚಮಚ, 'ಕೊತ್ತಂಬರಿ ಕಾಳು'-ಹಲವಾರು ಸಮಸ್ಯೆಗಳಿಗೆ ರಾಮಬಾಣ!
3.ಕರ್ಕ
ಈ ರಾಶಿಯ ವ್ಯಕ್ತಿಗಳು ಎಲ್ಲಾ ಭಾವನೆಗಳನ್ನು ಬಹಳ ಆಳವಾಗಿ ಅನುಭವಿಸುತ್ತಾರೆ. ಭಾವನಾತ್ಮಕ ವರ್ತನೆಯನ್ನು ಹೊಂದಿರುವುದರಿಂದ ಇವರನ್ನು ಮೂಡಿ ವ್ಯಕ್ತಿಗಳು ಎಂದು ಹೇಳಲಾಗುವುದು. ಚಿತ್ತಾಕರ್ಷಕ ಹಾಗೂ ಉತ್ತಮ ಸ್ನೇಹಿತರ ಪಟ್ಟಿಯಲ್ಲಿ ನಿಲ್ಲುವ ವ್ಯಕ್ತಿಗಳು ಎನ್ನಬಹುದು. ಇವರು ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ಎಲ್ಲರ ಮೇಲೂ ತೋರುತ್ತಾರೆ. ಇವರು ಉತ್ತಮ ಸ್ಥಿತಿಯಲ್ಲಿ ಇರುವಾಗ ಯಾರನ್ನೂ ನೋಯಿಸುವುದಿಲ್ಲ. ಇತರರ ಮನಃಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಇವರು ಅಹಿತಕರ ಸನ್ನಿವೇಶ ಉಂಟಾದರೆ ಬಹುಬೇಗ ಮಾನಸಿಕ ಸ್ಥಿತಿಯ ಬದಲಾವಣೆಯನ್ನು ಹೊಂದುತ್ತಾರೆ. ಇದರ ಪರಿಣಾಮ ಇತರಮೇಲೆ ಋಣಾತ್ಮಕವಾಗಿ ಇರುವುದು.
4.ತುಲಾ
ಇವರು ತಮ್ಮ ಸುತ್ತಲಿನ ವಾತಾವರಣದಲ್ಲಿ ನಡೆಯುವ ಬದಲಾವಣೆಯಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಎಲ್ಲವನ್ನೂ ಅನುಭವಿಸುತ್ತಾರೆ. ಕೆಲವೊಮ್ಮೆ ಅವರೊಂದಿಗೆ ಏನೂ ಇಲ್ಲ ಎನ್ನುವ ರೀತಿಯ ಅನುಭವವನ್ನು ಪಡೆದುಕೊಳ್ಳುವರು. ಸಣ್ಣ ಸಣ್ಣ ವಿಚಾರಗಳಿಗೂ ಇವರು ಸಂತೋಷ ಹಾಗೂ ದುಃಖವನ್ನು ಅನುಭವಿಸುವರು. ಮನಸ್ಸು ಅಹಿತಕರವಾದ ಸ್ಥಿತಿಯಲ್ಲಿರುವಾಗ ಅಜಾಗರೂಕತೆಯಿಂದ ವರ್ತಿಸುತ್ತಾರೆ. ಕೆಲವೊಮ್ಮೆ ಹಾನಿ ಉಂಟುಮಾಡುವ ಸಾಧ್ಯತೆಗಳು ಇರುತ್ತವೆ ಎನ್ನಬಹುದು. ಇವರ ಮನಃಸ್ಥಿತಿಯು ಬಹುಬೇಗ ಪರಿವರ್ತನೆಯನ್ನು ಕಾಣುವ ವ್ಯಕ್ತಿಗಳಾಗಿರುತ್ತಾರೆ.
5.ವೃಶ್ಚಿಕ
ವೃಶ್ಚಿಕ ರಾಶಿಯವರು ಗಂಭೀರ ಮನಃಸ್ಥಿತಿಯನ್ನು ಹೊಂದಿರುವುದರಿಂದ ಪರಿಸ್ಥಿತಿಗಳು ಅವರ ಭಾವನೆಯ ಮೇಲೆ ಬಹುಬೇಗ ಪ್ರಭಾವವನ್ನು ಬೀರುತ್ತದೆ. ಸನ್ನೀವೇಶಗಳ ಪ್ರಭಾವದಿಂದ ಅವರ ಮುಖ ಹಾಗೂ ಭಾವನೆಗಳು ಬಹುಬೇಗ ಪರಿವರ್ತನೆಗೆ ಒಳಗಾಗುತ್ತವೆ. ಇವರು ಏನು ಚಿಂತಿಸುತ್ತಾರೆ ಎನ್ನುವುದನ್ನು ಸುಲಭವಾಗಿ ನಿರ್ಧರಿಸಲು ಕಷ್ಟವಾಗಬಹುದು. ತಮ್ಮ ಚಿತ್ತಸ್ಥಿತಿಯೊಂದಿಗೆ ಹೆಚ್ಚು ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಲಾಗುವುದು.
Most Read: ಅಂಗೈಯಲ್ಲಿರುವ ರೇಖೆಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳಿ!
6. ಮೀನ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ವಿಷಯವನ್ನು ತಮ್ಮ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಇವರು ಬಹುಬೇಗ ವಿಷಯಗಳಿಗೆ ಪ್ರಭಾವಿತರಾಗುತ್ತಾರೆ. ಇವರು ವಿಷಯಗಳನ್ನು ಬಲು ಸುಲಭವಾಗಿ ಅರ್ಥೈಸಿಕೊಳ್ಳುವರು. ಅಲ್ಲದೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದಾದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ತಮ್ಮ ಸ್ವಂತ ಸಮಸ್ಯೆಗಳನ್ನು ಹೆಚ್ಚು ಮನಸ್ಸಿನಲ್ಲಿ ಇಟ್ಟುಕೊಳ್ಳುವರು. ಸೂಕ್ಷ್ಮ ಮನಸ್ಸಿನವರಾದ ಇವರು ವಿಷಯಗಳಿಗೆ ಅನುಗುಣವಾಗಿ ಭಾವನೆಗಳ ಬದಲಾವಣೆಗೆ ಒಳಗಾಗುವರು. ಹಾಗಾಗಿ ಇವರನ್ನು ಮೂಡಿ ಮನಸ್ಸಿನವರು ಎಂದು ಹೇಳಲಾಗುವುದು.