Just In
- 1 hr ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 2 hrs ago ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- 4 hrs ago ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- 5 hrs ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
Don't Miss
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- News ಒಳರೋಗಿಗಳು ಆಸ್ಪತ್ರೆಯಲ್ಲಿನ ಆಹಾರವನ್ನೇ ಏಕೆ ಸೇವಿಸಬೇಕು? ಇದಕ್ಕೆ ಕಾರಣವೇನು?
- Movies Shrirasthu Shubhamasthu:ಪೂರ್ಣಿಮಾಗೆ ಮಗು ಚಿಂತೆ; ಸತ್ಯ ಹೇಳಲಾಗದೆ ತುಳಸಿ ತೊಳಲಾಟ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
26-12-2017 ಮಂಗಳವಾರದ ದಿನ ಭವಿಷ್ಯ
ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳಬಹುದು ಎನ್ನುವ ಭಯ ಇರುವುದಿಲ್ಲ. ಏಕೆಂದರೆ ಹಕ್ಕಿಗಳು ತಮ್ಮ ರೆಕ್ಕೆಯನ್ನು ನಂಬಿರುತ್ತವೆಯೇ ಹೊರತು ಕೊಂಬೆಗಳನ್ನಲ್ಲಾ. ನಾವು ಸಹ ಹಕ್ಕಿಯಂತೆ ನಮ್ಮ ಬಲದ ಬಗ್ಗೆ ಆತ್ಮ ವಿಶ್ವಾಸ ಹೊಂದಿರಬೇಕು. ಅದೃಷ್ಟ ಬರುವುದು ಎಂದು ಕೈ ಕಟ್ಟಿ ಕುಳಿತುಕೊಳ್ಳುವುದು, ಯಾರಾದರೂ ನಮ್ಮನ್ನು ಮೋಸ ಮಾಡಬಹುದು ಎನ್ನುವ ಭಯಕ್ಕೆ ಒಳಗಾಗಿರುವುದು ಅಥವಾ ನಮ್ಮನ್ನು ಯಾರಾದರೂ ಮೇಲೆತ್ತಬಹುದು ಎನ್ನುವ ಆಸೆಯಲ್ಲಿ ಮುಳುಗಿರಬಾರದು.
ನಮ್ಮ ಸಾಮರ್ಥ್ಯದಲ್ಲಿ ಸದಾ ಭರವಸೆಯನ್ನು ಇಟ್ಟುಕೊಳ್ಳಬೇಕು. ಮಾಡಬೇಕು ಎಂದು ಕೊಂಡ ಕೆಲಸಕ್ಕೆ ನಿರಂತರ ಶ್ರಮವನ್ನು ವಹಿಸಬೇಕು. ಆಗಲೇ ಯಶಸ್ಸು ಹಾಗೂ ಸಂತೋಷ ನಮ್ಮ ಜೀವನದಲ್ಲಿ ತುಂಬಿರುತ್ತದೆ. ಮಂಗಳವಾರವಾದ ಈ ಶುಭ ದಿನ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುವುದು ಎಂಬ ನಂಬಿಕೆಯನ್ನು ಹೊತ್ತು, ದಿನವನ್ನು ಪ್ರಾರಂಭಿಸಿ. ಈ ದಿನದ ನಿಮ್ಮ ಭವಿಷ್ಯದ ಬದಲಾವಣೆ ಅರಿಯಲು ಈ ಮುಂದೆ ನೀಡಿರುವ ರಾಶಿ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ....
ವೃಷಭ: ಏಪ್ರಿಲ್ 26-ಮೇ 20
ಇಂದು ಸ್ತ್ರೀಯರಿಗೆ ಉತ್ತಮವಾದ ದಿನ. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿ ಹಾಗೂ ನೆಮ್ಮದಿಯನ್ನು ಕಾಣುವರು. ಪುರುಷರು ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ರಾಹುಕಾಲದ ಪ್ರವಾಸವನ್ನು ಮಾಡದಿರಿ. ಮಕ್ಕಳ ಬಗ್ಗೆ ಆದಷ್ಟು ಕಾಳಜಿ ಇರಲಿ. ಸ್ಥಿರಾಸ್ತಿಯಿಂದ ಲಾಭ ಗಳಿಸುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ದೇವಿಯನ್ನು ಆರಾಧಿಸಿ.
ವೃಷಭ: ಏಪ್ರಿಲ್ 26-ಮೇ 20
ಇಂದು ನಿಮಗೆ ವಿಪರೀತ ಆಯಾಸ ಹಾಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರ್ಥಿಕ ಸ್ಥಿತಿಯಲ್ಲೂ ಕುಸಿತ ಕಾಣುವುದು. ಅನೇಕ ಸಮಸ್ಯೆಗಳು ಇಂದು ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಕಲಾವಿದರು ವಿವಿಧ ಅಡೆತಡೆಗಳನ್ನು ಎದುರಿಸಬೇಕಾಗುವುದು. ಹಣ ಹೂಡಿಕೆ ಮಾಡುವ ಮುನ್ನೆಚ್ಚರಿಕೆಯನ್ನು ವಹಿಸಿ. ಜಂಟಿ ವ್ಯವಹಾರಕ್ಕೆ ಕೈಹಾಕದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.
ಮಿಥುನ: ಮೇ 26 ಜೂನ್ 20
ಇಂದು ನಿಮಗೆ ಶುಭ ದಿನ. ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿಗೆ ಸಂತೋಷ ಲಭಿಸುವುದು. ಗುರು ಕೃಪೆಯಿಂದ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ. ಹಿರಿಯರ ಆಶೀರ್ವಾದಕ್ಕೆ ಒಳಗಾಗುವಿರಿ. ನಿರ್ದಿಷ್ಟ ಗುರಿಯನ್ನು ನೀವು ತಲುಪುವಿರಿ. ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.
ಕರ್ಕ: ಜೂನ್ 26-ಜುಲೈ 22
ಇಂದು ನಿಮಗೆ ಸಮಾಧಾನ ಲಭಿಸುವುದು. ಸ್ತ್ರೀಯರು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವರು. ಮನೆಯಲ್ಲಿ ನೆಮ್ಮದಿ ಹಾಗೂ ಸಂತೋಷ ಲಭಿಸುವುದು. ನಿಮ್ಮ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ವಿದೇಶಯಾನದ ಕನಸು ನನಸಾಗುವುದು. ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮ ದಲ್ಲಿರುವವರಿಗೂ ಉತ್ತಮ ಲಾಭ ದೊರೆಯುವುದು. ಜೀವನದಲ್ಲಿ ಇನ್ನಷ್ಟು ಸಮಾಧಾನ ಹಾಗೂ ಪ್ರಗತಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.
ಸಿಂಹ: ಜುಲೈ 26-ಆಗಸ್ಟ್ 23
ಪಂಚಮ ಶನಿಯ ಪ್ರಭಾವ ಇರುವುದರಿಂದ ಮಾನಸಿಕವಾದ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಸಾಲ ಕೊಡುವುದು ಅಥವಾ ಪಡೆದುಕೊಳ್ಳುವ ಕೆಲಸಕ್ಕೆ ಮುಂದಾಗದಿರಿ. ಮಕ್ಕಳ ನಡುವೆ ವೈಮನಸ್ಸು ಉಂಟಾಗುವ ಸಾಧ್ಯತೆಗಳಿವೆ. ಪ್ರಯಾಣ ಮಾಡುವಾಗ ಆದಷ್ಟು ಕಾಳಜಿಯಿಂದ ಇರಿ. ಹಣಕಾಸಿನ ಮಟ್ಟ ಒಂದಿಷ್ಟು ಕುಸಿತವನ್ನು ಕಾಣುವುದು. ಜನ ನಿಬಿಡ ಪ್ರದೇಶಗಳಿಗೆ ಸ್ತ್ರೀಯರು ಆಭರಣಗಳನ್ನು ಧರಿಸಿ ಹೋಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಸ್ತುತಿಯನ್ನು ಮಾಡಿ.
ಕನ್ಯಾ: ಆಗಸ್ಟ್ 26-ಸೆಪ್ಟಂಬರ್ 23
ಇಂದು ನಿಮಗೆ ನೆಮ್ಮದಿಯ ದಿನ. ಮನೆಯಲ್ಲಿ ಸಂತೋಷದ ವಾತಾವರಣ ಲಭಿಸುವುದು. ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸುವಿರಿ. ಪತ್ರಿಕೋದ್ಯಮ, ಚಿತ್ರೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೆಲ್ಲರು ಉತ್ತಮ ಲಾಭವನ್ನು ಪಡೆದುಕೊಳ್ಳುವರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲವರಿಗೆ ನ್ಯಾಯ ದೊರೆಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.
ತುಲಾ: ಸೆಪ್ಟಂಬರ್ 26-ಅಕ್ಟೋಬರ್ 23
ಮನೆಯಲ್ಲಿ ನೆಮ್ಮದಿ ಹಾಗೂ ಸಮಾಧಾನ ಲಭಿಸುವುದು. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿ ಹಾಗೂ ಲಾಭವನ್ನು ಪಡೆದುಕೊಳ್ಳುವಿರಿ. ಹದಗೆಟ್ಟಿರುವ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಬಂಧುಮಿತ್ರರ ಆಗಮನದಿಂದ ಹರ್ಷ ಉಂಟಾಗುವುದು. ಕಲಾವಿದರಿಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ನೆಮ್ಮದಿಯ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.
ವೃಶ್ಚಿಕ: 26 ಅಕ್ಟೋಬರ್ -22 ನವೆಂಬರ್
ಇಂದು ನಿಮಗೆ ಮನೆಯಲ್ಲಿ ಕಿರಿಕಿರಿಯ ವಾತಾವರಣ ಸೃಷ್ಟಿಯಾಗುವುದು. ಬಂಧುಮಿತ್ರರ ನಡುವೆ, ಕಲಹ ಉಂಟಾಗುವ ಸಾಧ್ಯತೆಗಳಿವೆ. ವೈಮನಸ್ಸುಗಳಿಂದ ಮನೆಯಲ್ಲಿ ನೆಮ್ಮದಿ ಹಾಳಾಗುವುದು. ಆರ್ಥಿಕ ಕುಸಿತದ ಲಕ್ಷಣವನ್ನು ಕಾಣುವ ಸಾಧ್ಯತೆಗಳಿವೆ. ದುರ್ಗಾ ಅಥವಾ ದೇವಿಯ ದೇವಸ್ಥಾನದಲ್ಲಿ ಸ್ತ್ರೀಯರು ನಿಂಬೆ ಹಣ್ಣಿನ ದೀಪವನ್ನು ಬೆಳಗಿದರೆ ಎಲ್ಲಾ ಕಷ್ಟಗಳು ನಿವಾರಣೆ ಹೊಂದುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.
ಧನು: 26 ನವೆಂಬರ್-22 ಡಿಸೆಂಬರ್
ನಿಮಗೆ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಅನಿರೀಕ್ಷಿತ ಖರ್ಚುಗಳಿಗಾಗಿ ಸಾಲ ಮಾಡುವ ಸಾಧ್ಯತೆಗಳಿವೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ತೊಂದರೆ ಉಂಟಾಗಬಹುದು. ಸ್ನೇಹಿತರೊಂದಿಗೆ ಮಾತಿನ ಚಕಮಕಿ ನಡೆಸದಿರಿ. ಸ್ತ್ರೀಯರು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸಬೇಕಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಖನಿಜೋತ್ಪನ್ನಗಳಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಪ್ರಾರ್ಥನೆ ಮಾಡಿ.
ಮಕರ: ಡಿಸೆಂಬರ್ 26-ಜನವರಿ 20
ಇಂದು ನಿಮಗೆ ಸಮಾಧಾನಕರವಾದ ದಿನ. ಮನೆಯಲ್ಲಿ ನೆಮ್ಮದಿ ಕಾಣುವಿರಿ. ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಬೇಕಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿರುವವರಿಗೆ ಲಾಭ ಉಂಟಾಗುವ ಸಾಧ್ಯತೆಗಳಿವೆ. ಕೆಲವರು ನಷ್ಟವನ್ನು ಅನುಭವಿಸಬಹುದಾದ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.
ಕುಂಬ: 26 ಜನವರಿ-19 ಫೆಬ್ರುವರಿ
ಇಂದು ನಿಮಗೆ ಶುಭ ದಿನ. ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿಗೆ ಸಮಾಧಾನ ದೊರೆಯುವುದು. ಸ್ತ್ರೀಯರು ಪತಿಯಿಂದ ಉಡುಗೊರೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಕೆಲವರು ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯೆಗಳಿವೆ. ಸಹೋದರಿಯ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಕೆಲವರು ಸಿಹಿ ಭೋಜನ ಸವಿಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.
ಮೀನ: 26 ಫೆಬ್ರವರಿ -20 ಮಾರ್ಚ್
ನಿಮ್ಮ ಸುಂದರ ಕನಸು ನನಸಾಗುವುದಕ್ಕೆ ದೇವರ ಕೃಪೆ ಲಭಿಸುವುದು. ಅನೇಕ ದಿನಗಳಿಂದ ನೀವು ಅನುಭವಿಸುತ್ತಿದ್ದ ನೋವುಗಳು ದೂರವಾಗುವುದು. ಉತ್ತಮ ವೈದ್ಯರ ಸಲಹೆ ಪಡೆದುಕೊಳ್ಳುವುದರಿಂದ ಚರ್ಮ ರೋಗವು ಗುಣಮುಖವಾಗುವುದು. ಆರೋಗ್ಯ ಸುಧಾರಣೆಯೂ ಆಗುವುದು. ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬಹುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಹಾಗೂ ಶಕ್ತಿಯ ಉಪಾಸನೆ ಮಾಡಿ.