Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೇತವಿವಾಹ ಸಂಪ್ರದಾಯ! ಇಲ್ಲಿ ಸತ್ತ ಮಕ್ಕಳಿಗೂ ಮದುವೆ ಮಾಡಿಸುತ್ತಾರೆ!!
ಈ ವಿಶ್ವದಲ್ಲಿರುವ ಕೆಲವು ವಿಚಿತ್ರ ಸಂಪ್ರದಾಯಗಳು ನಂಬಲಿಕ್ಕೇ ಕಷ್ಟವಾಗಿವೆ. ಕೆಲವಂತೂ ಮಾನವತೆಯನ್ನೇ ಅಪಹಾಸ್ಯಕ್ಕೆ ಗುರಿಯಾಗಿಸುತ್ತಿವೆ. ನಮ್ಮ ಭಾರತದಲ್ಲಿಯೇ ನಡೆಯುವ ಅಮಾನವೀಯ ಸಂಪ್ರದಾಯಗಳಾದ ಯುವತಿಯನ್ನು ಕಪ್ಪೆ, ನಾಯಿಗೆ ಮದುವೆ ಮಾಡಿಕೊಡುವುದು ಇತ್ಯಾದಿ.
ಹೀಗೆ ಮಾಡಿದರೆ ಊರಿಗೆ ಒಳ್ಳೆಯದಾಗುತ್ತದೆ, ಮಾರಿಯನ್ನು ದೂರ ಮಾಡಲು ಹೀಗೆ ಮಾಡಲೇಬೇಕು ಎಂದೆಲ್ಲಾ ಕಪಟವಾಡುವ ಕಳ್ಳ ಸಾಧು ಬಾಬಾಗಳೂ ನಮ್ಮ ಭಾರತದಲ್ಲಿಯೇ ಬೇಕಾದಷ್ಟಿದ್ದಾರೆ. ಆದರೆ ಊರಿಗೆ ಒಳ್ಳೆಯದು ಮಾಡಲು ಹೋಗಿ ಈ ಮುಗ್ಧ ಯುವತಿಯರು ತಮ್ಮ ಜೀವನವನ್ನೇ ನರಕವಾಗಿಸಬೇಕಾಗುತ್ತದೆ. ಇಂತಹ ಇನ್ನೊಂದು ಬೆಚ್ಚಿ ಬೀಳಿಸುವಂತಹ ಇನ್ನೊಂದು ಸಂಪ್ರದಾಯವೂ ನಮ್ಮ ಭಾರತದಲ್ಲಿಯೇ ಇದೆ. ಅದೇ ಪ್ರೇತಕಲ್ಯಾಣಂ ಅಥವಾ ಭೂತಗಳ ಮದುವೆ. ಈ ವಿವಾಹದಲ್ಲಿ ಪ್ರಾಪ್ತ ವಯಸ್ಸಿಗೂ ಮುನ್ನವೇ ಗತಿಸಿದ ಮಕ್ಕಳ ಆತ್ಮಗಳಿಗೂ ಕಂಕಣಬಲ ಒದಗಿಸಲಾಗುತ್ತದೆ. ಬನ್ನಿ, ಏನಿದು ಕಥೆ? ಮುಂದೆ ಓದಿ..

ಜಾತಕವನ್ನೂ ನೋಡಲಾಗುತ್ತದೆ
ಇತರ ವಿವಾಹಗಳಂತೆಯೇ ಈ ವಿವಾಹದಲ್ಲಿಯೂ ಗಂಡು ಹೆಣ್ಣಿನ ಜಾತಕಗಳನ್ನು ಪರಿಶೀಲಿಸಿ ಎಲ್ಲಾ ಗುಣಗಳು ಹೊಂದುತ್ತವೆಯೇ, ವಿವಾಹವಾಗಲು ಯಾವುದೇ ಅಡ್ಡಿಯಿಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಪ್ಪಿಗೆ ದೊರೆತ ಬಳಿಕ ಗಂಡುಹೆಣ್ಣಿನ ಗೊಂಬೆಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸಿ ಮದುವೆಯನ್ನು ನಡೆಸಲಾಗುತ್ತದೆ.

ಇತರ ಮದುವೆಗಳಂತೆಯೇ ಇದೂ ನಡೆಯುತ್ತದೆ
ಇಲ್ಲಿ ವಧೂ ವರರು ಜೀವಂತವಾಗಿಲ್ಲ ಎಂಬ ಒಂದೇ ಕಾರಣದ ಹೊರತಾಗಿ ಇತರ ಎಲ್ಲಾ ಸಂಪ್ರದಾಯಗಳು, ಊಟ, ಉಪಚಾರ ಮೊದಲಾದವು ಉಳಿದ ಮದುವೆಗಳಂತೆಯೇ ಇರುತ್ತದೆ. ವಧು ಗೊಂಬೆಯ ಕೊರಳಿಗೆ ಮಂಗಳಸೂತ್ರ ಧರಿಸುವುದು, ವಧೂವರರು ಪರಸ್ಪರ ಹೂವಿನ ಹಾರ ಹಾಕುವುದು ಇತ್ಯಾದಿ, ಕೊನೆಯಲ್ಲಿ ಗಡದ್ದು ಕೇರಳ ಬಾಳೆ ಎಲೆ ಊಟವನ್ನು ಎಲ್ಲರೂ ಸವಿಯುತ್ತಾರೆ.

ಈ ಸಂಪ್ರದಾಯ ಪ್ರಾರಂಭವಾಗಿದ್ದಾದರೂ ಹೇಗೆ?
ಮೂಲಗಳ ಪ್ರಕಾರ ಒಂದು ವೇಳೆ ಗರ್ಭಾಪಾತದ ಮೂಲಕ ಗರ್ಭದಲ್ಲಿರುವ ಮಗು ಜಗತ್ತಿನಲ್ಲಿ ಕಣ್ಣು ಬಿಡುವುದಕ್ಕೂ ಮುನ್ನವೇ ಗತಿಸಿದರೆ ಅಥವಾ ಹದಿನೆಂಟು ತುಂಬುವ ಮುನ್ನವೇ ಮಕ್ಕಳು ಗತಿಸಿದರೆ ಈ ಮಕ್ಕಳಿಗೂ ನ್ಯಾಯಯುತ ಮದುವೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕುಟುಂಬಕ್ಕೆ ಅಥವಾ ಈ ಕುಟುಂಬದ ಸದಸ್ಯರಿಗೆ ಹಾಗೂ ಅವರ ಮಕ್ಕಳಿಗೂ ಮುಂದೆ ತೊಂದರೆಯುಂಟಾಗಬಹುದೆಂದು ಜೋತಿಷ್ಯಾಸ್ತ್ರಜ್ಞರು ಈ ಮಕ್ಕಳಿಗೂ ಮದುವೆ ಮಾಡಿಸಲು ಸಲಹೆ ಮಾಡುತ್ತಾರೆ. ಎಂದಿನಿಂದ ಪ್ರಾರಂಭವಾಯಿತು ಎಂಬ ಖಚಿತ ಮಾಹಿತಿ ಇಲ್ಲ.

ಗತಿಸಿದ ಮಕ್ಕಳಿಗೂ ಕಂಕಣಭಾಗ್ಯ!
ಒಮ್ಮೆ ವಿವಾಹದ ದಿನಾಂಕ ನಿಗದಿಯಾದ ಬಳಿಕ ಎರಡೂ ಕುಟುಂಬದ ಹಿರಿಯರು ಜಗತ್ತಿನ ಸುಖದಿಂದ ವಂಚಿತರಾದ ತಮ್ಮ ಮಕ್ಕಳು ಮರಣಾನಂತರವಾದರೂ ಸುಖಕರ ಜೀವನ ನಡೆಸಲಿ ಎಂದು ಹಾರೈಸಿ ಈ ವಿವಾಹವನ್ನು ನಡೆಸಿಕೊಡುತ್ತಾರೆ. ಈ ವಿವಾಹವನ್ನು ಮಾಡಿಕೊಡುವ ಮೂಲಕ ತಮ್ಮ ಗತಿಸಿದ ಮಕ್ಕಳ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ಭಾವಿಸಲಾಗಿದೆ.

ಕುಟುಂಬದವರ ನಂಬಿಕೆ
ಯಾವುದೇ ಕುಟುಂಬಕ್ಕೆ ಮಕ್ಕಳನ್ನು ಕಳೆದುಕೊಂಡ ದುಃಖ ಇಡಿಯ ಜೀವಮಾನ ಕಾಡುತ್ತದೆ. ಈ ಮೂಲಕವಾದರೂ ಮಕ್ಕಳ ಆತ್ಮಕ್ಕೆ ಶಾಂತಿ ಸಿಕ್ಕಲು ನಾವು ನಮ್ಮ ಪ್ರಯತ್ನ ಮಾಡಿದ್ದೇವೆ ಎಂಬ ಸಾರ್ಥಕ ಭಾವನೆಯಿಂದ ಹಿರಿಯರು ಹಾಗೂ ಕುಟುಂಬ ಸದಸ್ಯರಿಗೆ ನೆಮ್ಮದಿ ದೊರಕುವುದು ನಿಜವಾಗಿರುವ ಕಾರಣ ಈ ಸಂಪ್ರದಾಯವನ್ನು ತಪ್ಪು ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ.

ಕುಟುಂಬದವರ ನಂಬಿಕೆ
ಇದೇ ಕಾರಣಕ್ಕೆ ಈ ಸಂಪ್ರದಾಯ ಇಂದಿಗೂ ಉಳಿದುಕೊಂಡು ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯುವ ಮೂಲಕ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.



Click it and Unblock the Notifications











