Just In
- 3 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 4 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 5 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
30-11-2017 ಗುರುವಾರದ ದಿನ ಭವಿಷ್ಯ
ಪ್ರತಿಯೊಬ್ಬರು ಜೀವನದಲ್ಲಿ ಸುಖವನ್ನು ಬಯಸುತ್ತಾರೆ. ಸುಖ ಎನ್ನುವುದನ್ನು ಯಾವುದೇ ಕೈಗಾರಿಕೆಯಲ್ಲಿ ಉತ್ಪಾದಿಸುವುದಿಲ್ಲ. ಯಾವುದೇ ಅಂಗಡಿಯಲ್ಲೂ ಮಾರುವುದಿಲ್ಲ. ಇನ್ನೊಬ್ಬರ ಏಳಿಗೆಗೆ ಸಹಾಯ ಮಾಡಿದಾಗ ನಮಗೇ ಅರಿವಿಲ್ಲದಂತೆ ನಮ್ಮ ಪುಣ್ಯ ಹೆಚ್ಚುವುದು. ಸುಖ ಸಂತೋಷವು ನಮಗೆ ಲಭಿಸುವುದು. ಪರರಿಗೆ ಅನ್ಯಾಯ ಮಾಡದೆ, ಪ್ರೀತಿ ವಿಶ್ವಾಸದಿಂದ ಕಂಡಾಗ ಜೀವನವು ಸಾರ್ಥಕವಾಗುವುದು.
ಅಲ್ಲದೆ ಆ ಭಗವಂತನು ನಮ್ಮ ಇಷ್ಟಾರ್ಥಗಳನ್ನು ಪೂರೈಸುವನು. ಗುರುವಾರಾದ ಇಂದು ನಿಮ್ಮ ಕುಂಡಲಿಯಲ್ಲಿ ಗ್ರಹ ಗತಿಗಳು ಯಾವ ಬಗೆಯಲ್ಲಿ ಪರಿಣಾಮ ಬೀರುತ್ತವೆ. ಅದಕ್ಕೆ ದೇವರ ಆಶೀರ್ವಾದ ಲಭಿಸುವುದೇ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಿದ್ದರೆ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ...
ಮೇಷ
ಸಹೋದರರಿಂದ ಧನಾತ್ಮಕ ಸಹಾಯವನ್ನು ಪಡೆಯುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಬಂಧು ಬಾಂಧವರು ನಿಮ್ಮ ಸಹಾಯಕ್ಕೆ ನಿಲ್ಲುವರು. ಉದಾರ ಗುಣದವರಾದ ನಿಮಗೆ ದೇವರ ಆಶೀರ್ವಾದ ಲಭಿಸುವುದು. ಇನ್ನಷ್ಟು ಒಳಿತಿಗಾಗಿ ಗುರುವಿನ ಪ್ರಾರ್ಥನೆ ಹಾಗೂ ವಿಷ್ಣುವಿನ ಆರಾಧನೆ ಮಾಡಿ.
ವೃಷಭ
ಸಮಾಧಾನದ ಬದುಕನ್ನು ಕಾಣಲಿದ್ದೀರಿ. ನಿಮ್ಮ ನಿರೀಕ್ಷೆಗಳು ನೆರವೇರುವುದು. ಮಕ್ಕಳ ವಿವಾಹ ಕಾರ್ಯ ನಡೆಸಲು ಅನುಕೂಲವಾಗುವುದು. ಸ್ಥಿರಾಸ್ತಿಯಿಂದ ಅಲ್ಪ ಪ್ರಮಾಣದ ಲಾಭ ಉಂಟಾಗುವುದು. ಯಶಸ್ವಿ ಬದುಕು ಹಾಗೂ ಕಷ್ಟಗಳ ನಿವಾರಣೆಗೆ ಗಣೇಶನ ಆರಾಧನೆ ಮಾಡಿ.
ಮಿಥುನ
ಇಂದು ನಿಮಗೆ ಸಮಾಧಾನದ ದಿನ. ನಿರೀಕ್ಷಿತ ಮಟ್ಟಕ್ಕಿಂತ ಮಿಗಿಲಾಗಿ ಸ್ತ್ರೀಯರ ಸಹಕಾರ ಸಿಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಆರ್ಥಿಕವಾಗಿ ಸುಧಾರಣೆಯನ್ನು ಕಾಣುವಿರಿ. ಬಂಧು ಮಿತ್ರರ ಸಹಕಾರವು ದೊರೆಯುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.
ಕರ್ಕ
ಇಂದು ನಿಮಗೆ ಅದೃಷ್ಟದ ದಿನ. ನೀವು ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಸುಗಮವಾಗಿ ನೆರವೇರುವುದು. ಎರಡು ವರ್ಷಗಳಿಂದ ಸಂಕಷ್ಟಗಳನ್ನು ಅನುಭವಿಸಿದ್ದ ನಿಮಗೆ ಇದೀಗ ಸಮಾಧಾನ ಹಾಗೂ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಕಲಾವಿದರಿಗೆ ಅನುಕೂಲ. ಮಾಡುತ್ತಿರುವ ಕೆಲಸದಲ್ಲಿ ಲಾಭಗಳ ಸುರಿಮಳೆ ಹಾಗೂ ವಿದೇಶ ಪ್ರಯಾಣದ ಕನಸು ನನಸಾಗುವದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಇನ್ನಷ್ಟು ಉತ್ತಮ ಫಲಕ್ಕಾಗಿ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.
ಸಿಂಹ
ಪಂಚಮ ಶನಿ ಇರುವುದರಿಂದ ವಿಪರೀತವಾದ ಮಾನಸಿಕ ವೈಪರೀತ್ಯವನ್ನು ಅನುಭವಿಸುವಿರಿ. ಆರೋಗ್ಯದಲ್ಲೂ ಅಡೆತಡೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅವಮಾನ ಉಂಟಾಗುವುದು. ದೂರದ ಸಂಬಂಧಿಕರು ಅಗಲಿದ ಸುದ್ದಿ ಕೇಳುವಿರಿ. ರಾಹು ಕಾಲದ ಪ್ರಯಾಣ ಮಾಡದಿರಿ. ಮಕ್ಕಳಿಂದಲೇ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಗುರುವಿನ ಆರಾಧನೆ ಮಾಡಿ.
ಕನ್ಯಾ
ನಿಮಗೆ ಇಂದು ಉತ್ತಮವಾದ ದಿನ. ಮನೆಯಲ್ಲಿ ನೆಮ್ಮದಿ ಸಿಗುವುದು. ಸ್ತ್ರೀಯರಿಂದ ಸಕಾರಾತ್ಮಕ ವರ್ತನೆ ಕಾಣುವಿರಿ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಅತ್ಯಗತ್ಯ. ಕೈಗಾರಿಕಾ ಕ್ಷೇತ್ರದಲ್ಲಿ ಲಾಭ ಉಂಟಾಗುವುದು. ವಿದ್ಯಾರ್ಥಿಗಳಿಗೆ ಶುಭ ದಿನ. ಇನ್ನಷ್ಟು ಸಮಾಧಾನ ಹಾಗೂ ಯಶಸ್ವಿ ಬದುಕಿಗಾಗಿ ಗುರುವಿನ ಉಪಾಸನೆ ಮಾಡಿ.
ತುಲಾ
ಅಧಿಕ ಪ್ರಮಾಣದ ಲಾಭವನ್ನು ಪಡೆಯುವಿರಿ. ಎಲ್ಲಾ ವ್ಯಾಪಾರ ವಹಿವಾಟುಗಳಲ್ಲೂ ಲಾಭ ದೊರೆಯುವುದು. ಚಾಲಕರಿಗೆ ಸಮಾಧಾನ ದೊರೆಯುವುದು. ಪ್ರಗತಿಪರ ಜೀವನವನ್ನು ನೀವು ಅನುಭವಿಸಲಿದ್ದೀರಿ. ಇತರರ ಮಾತಿನ ನಡುವೆ ನೀವು ಮಧ್ಯಸ್ಥಿಕೆ ತೋರಬೇಡಿ. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ
ನಿಮ್ಮ ಆಂತರಿಕ ವಿಚಾರವನ್ನು ಯಾರೊಂದಿಗೂ ಚರ್ಚಿಸದಿರಿ. ಮನೆಯಲ್ಲಿ ಪೂರ್ಣ ಪ್ರಮಾಣದ ನೆಮ್ಮದಿ ದೊರೆಯದು. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಶಿವ ಸ್ಮರಣೆ ಮಾಡಿದರೆ ಕಷ್ಟಗಳು ದೂರಾಗುವುದು. ಹಿರಿಯರು ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆಗಳಿವೆ. ಮಾಡಿದ ನಿರ್ಧಾರವನ್ನು ಕೈಬಿಡದಿರಿ. ಶಿವನ ಆರಾಧನೆ ಹಾಗೂ ವಿಷ್ಣುವಿನ ಸ್ಮರಣೆ ಮಾಡಿ ಉತ್ತಮ ಭವಿಷ್ಯ ನಿಮ್ಮದಾಗುವುದು.
ಧನು
ಹೆಚ್ಚು ಕಾಳಜಿಯಿಂದ ಇರಿ. ನೀವು ಮಾಡದ ತಪ್ಪಿಗೆ ಹೊಣೆಯಾಗಬೇಕಾಗುವುದು. ನಿಮಗೆ ಇದೊಂದು ಪರೀಕ್ಷೆಯ ಸಮಯ ಎನ್ನಬಹುದು. ಹಿತ ಶತ್ರುಗಳಿಂದಲೇ ತೊಂದರೆ ಉಂಟಾಗುವುದು. ಆದಷ್ಟು ಸತ್ಯ ನಿಷ್ಠೆಯಿಂದ ವರ್ತಿಸಿ. ಕಪ್ಪು ಬಟ್ಟೆಯನ್ನು ತೊಡದಿರಿ. ಹಿರಿಯರ ಮಾತನ್ನು ಮೀರದಿರಿ. ಕಷ್ಟಗಳ ನಿವಾರಣೆಗೆ ಶನಿಯ ಅಷ್ಟೋತ್ತರವನ್ನು ಓದಿ.
ಮಕರ
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಮನೆಯಲ್ಲಿ ಕಿರಿಕಿರಿ ಹಾಗೂ ಬಂಧು ಮಿತ್ರರರ ನಡುವೆ ಕಲಹದ ವಾತಾವರಣ ಸೇರಿದಂತೆ ಅಶುಭ ಫಲವನ್ನು ಹೆಚ್ಚು ಕಾಣಬೇಕಾದಂತಹ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.
ಕುಂಬ
ಇಂದು ಸಮಾಧಾನಕರವಾದ ದಿನ. ಸ್ತ್ರೀಯರಿಗೆ ಇಂದು ಅದೃಷ್ಟದ ದಿನ. ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ದೂರದ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವಿರಿ. ರೂಪದರ್ಶಿಗಳಿಗೆ ಅನುಕೂಲಕರವಾದ ದಿನ. ಕಬ್ಬಿಣ ಹಾಗೂ ಕೈಗಾರಿಕೆ ಕೆಲಸದಲ್ಲಿರುವವರಿಗೆ ಲಾಭ ಉಂಟಾಗುವುದು. ಉತ್ತಮ ಪ್ರಗತಿ ಹಾಗೂ ಯಶಸ್ವಿ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.
ಮೀನ
ಶುಭವಾದಂತಹ ದಿನ. ನೆಮ್ಮದಿಯನ್ನು ಕಾಣುವಿರಿ. ಆರೋಗ್ಯದ ಸುಧಾರಣೆ ಆಗುವುದು. ಮನೆಯಲ್ಲಿ ಹರ್ಷದ ವಾತಾವರಣ ಉಂಟಾಗುವುದು. ವಿದೇಶ ಪ್ರಯಾಣ ಕೈಗೊಳ್ಳುವಿರಿ. ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ಜೊತೆಗೆ ಅಧಿಕವಾದ ಖುಷಿಯು ನಿಮಗೆ ಲಭಿಸುವುದು. ಇನ್ನಷ್ಟು ಸಮಾಧಾನದ ಬದುಕಿಗಾಗಿ ಗಣೇಶನ ಮತ್ತು ಗುರುವಿನ ಆರಾಧನೆ ಮಾಡಿ.