Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ವಕೀಲೆಗೆ ನೆರೆಮನೆಯವರಿಂದ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಅತಿಕ್ರಮಣದ ವಿರುದ್ಧ ಮಾತನಾಡಲು ಹೋದ ದೆಹಲಿಯ ಮಹಿಳೆ ವಕೀಲೆಯೊಬ್ಬರನ್ನು ನೆರೆಮನೆಯವರು ಸರಿಯಾಗಿ ಥಳಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ...
ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರ ಭಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಇದೆ. ಆದರೆ ಸರಕಾರಿ ಜಾಗವನ್ನು ಅಕ್ರಮಿಸಿಕೊಂಡು ತಮ್ಮ ಹೆಸರಿಗೆ ಮಾಡಿಕೊಂಡಿರುವವರ ಬಗ್ಗೆ ಸರಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ಅತಿಕ್ರಮಣವೆನ್ನುವುದು ಸಾಮಾನ್ಯವಾಗಿದೆ. ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳ ತನಕ ಅತಿಕ್ರಮಣ ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಂತೂ ಕೆರೆಗಳನ್ನೇ ನುಂಗಿ ನೀರು ಕುಡಿದಿದ್ದಾರೆ.
ಇಂತಹ ಅಕ್ರಮಣದ ಬಗ್ಗೆ ಮಾತನಾಡಲು ಹೋದರೆ ಅವರಿಗೆ ಉಳಿಗಾಲವಿಲ್ಲ. ಯಾಕೆಂದರೆ ಅಕ್ರಮಣವೆನ್ನುವುದು ಭಾರೀ ದೊಡ್ಡ ದಂಧೆ. ಇಂತಹ ಅತಿಕ್ರಮಣದ ವಿರುದ್ಧ ಮಾತನಾಡಲು ಹೋದ ದೆಹಲಿಯ ಮಹಿಳೆ ವಕೀಲೆಯೊಬ್ಬರನ್ನು ನೆರೆಮನೆಯವರು ಸರಿಯಾಗಿ ಥಳಿಸಿದ ಘಟನೆ ನಡೆದಿದೆ. ದೆಹಲಿಯ ಅಂಜು ದೇವಿ ಎಂಬವರು ತನ್ನ ಪ್ರದೇಶದಲ್ಲಿದ್ದ ಸರಕಾರಿ ಜಾಗವನ್ನು ಕಬಳಿಸಿಕೊಂಡಿರುವ ವಿರುದ್ಧ ಕೇಸು ದಾಖಲಿಸಿದ್ದರು. ವಕೀಲೆಯಾಗಿರುವ ಅಂಜು ದೇವಿಗೆ ಅತಿಕ್ರಮಣ ಮಾಡಿಕೊಂಡಿರುವವರ ಏನು ಮಾಡಿದರು ಎಂದು ತಿಳಿಯಲು ಮುಂದೆ ಓದಿ.....

ಕೇಸು ದಾಖಲಿಸಿದ ಅಂಜು ದೇವಿ....
ತನ್ನ ನೆರೆಯಲ್ಲಿರುವ ಸರಕಾರಿ ಜಾಗದ ಅತಿಕ್ರಮಣ ಮಾಡಿರುವ ವಿರುದ್ಧ ಅಂಜು ದೇವಿ ಇತ್ತೀಚೆಗೆ ಕೇಸು ದಾಖಲಿಸಿದ್ದರು. ಅತಿಕ್ರಮಣ ಮಾಡಿರುವ ಸ್ಥಳವನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.

ನೆರೆಮನೆಯವರ ಮೆಟ್ಟಿಲು ಧ್ವಂಸ ಮಾಡಲಾಯಿತು
ಅತಿಕ್ರಮಣ ಮಾಡಿರುವಂತಹ ಜಾಗದಲ್ಲಿ ಕಟ್ಟಿರುವುದನ್ನು ಧ್ವಂಸ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಇದು ನೆರೆಮನೆಯವರನ್ನು ತುಂಬಾ ಕೆರಳಿಸಿತ್ತು ಮತ್ತು ವಕೀಲೆ ವಿರುದ್ಧ ಜಗಳಕ್ಕೆ ಬಿದ್ದರು. ನೆರೆಮನೆಯ ಮಹಿಳೆಗೆ ಆಕೆಯ ಮಗಳು ಕೂಡ ಬೆಂಬಲ ನೀಡಿದಳು.

ತಾಯಿ-ಮಗಳು ವಕೀಲೆಗೆ ಹಲ್ಲೆ ನಡೆಸಿದರು
ಈ ವಿಡಿಯೋದಲ್ಲಿ ನೆರೆಮನೆಯ ಮಹಿಳೆಯು ವಕೀಲೆಗೆ ಯಾವ ರೀತಿಯಿಂದ ಹಲ್ಲೆ ಮಾಡುತ್ತಿದ್ದಾರೆಂದು ತಿಳಿಯುತ್ತದೆ. ವಕೀಲೆಯ ಉಸಿರುಗಟ್ಟಿಸಿ ಆಕೆ ಪ್ರಜ್ಞೆ ಕಳೆದುಕೊಳ್ಳುವ ತನಕ ಹೊಡೆಯುತ್ತಾರೆ.
ವಿಡಿಯೋ ನೋಡಿ...
ವಿಡಿಯೋದಲ್ಲಿ ಇದು ಹೇಗೆ ಆರಂಭವಾಯಿತೆಂದು ತಿಳಿಯುತ್ತದೆ. ವಕೀಲೆಯು ಇದರ ಬಗ್ಗೆ ವಿವರ ನೀಡುತ್ತಿರಬೇಕಾದರೆ ನೆರೆಮನೆಯ ಮಹಿಳೆಯು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾಳೆ. ವಕೀಲೆಯ ಮೇಲೆ ಹಿಂದಿನಿಂದ ದಾಳಿ ಮಾಡಿದ ಮಹಿಳೆ ಆಕೆಗೆ ಚೆನ್ನಾಗಿ ಥಳಿಸುತ್ತಾಳೆ.
ಇನ್ನೊಂದು ವಿಡಿಯೋ ಹೀಗಿದೆ ನೋಡಿ..
ತಾಯಿ ಮಗಳು ವಕೀಲೆಗೆ ಹಿಗ್ಗಾಮುಗ್ಗಾ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ವಕೀಲೆಯ ಸೀರೆ ಜಾರಿದರೂ ಇದರ ಬಗ್ಗೆ ಚಿಂತೆ ಮಾಡಲು ತಾಯಿ ಮಗಳು ಚೆನ್ನಾಗಿ ಹೊಡೆಯುತ್ತಾರೆ. ಹೊಡೆತ ತಿಂದು ಬಲಹೀನಳಾದ ವಕೀಲೆ ಅಲ್ಲೇ ಕುಸಿಯುತ್ತಾಳೆ. ಅಕ್ರಮ ದಂಧೆಕೋರರು ಕಾನೂನನ್ನು ಕೈಗೆತ್ತಿಕೊಂಡು ಯಾವ ರೀತಿ ವರ್ತಿಸಬಲ್ಲರು ಎನ್ನುವುದು ಈ ವೀಡಿಯೋ ಸಾಕ್ಷಿಯಾಗಿದೆ.
ನ್ಯಾಯ ಸಿಗಲು ಸಾಧ್ಯವೇ?
ವಕೀಲೆಯ ಮಗನು ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಆತ ತನ್ನ ತಾಯಿಯನ್ನು ರಕ್ಷಿಸಲು ಹೋಗಿದ್ದರೆ ಮಹಿಳೆಯರು ಆತನ ಮೇಲೆಯೂ ದಾಳಿ ಮಾಡುವ ಸಾಧ್ಯತೆಯಿತ್ತು. ಅನ್ಯಾಯದ ವಿರುದ್ಧ ಮಾತನಾಡಲು ಹೋದವರಿಗೆ ಈ ಸ್ಥಿತಿ ಬರುವುದನ್ನು ನಾವು ಯಾವಾಗಲೂ ನೋಡುತ್ತೇವೆ. ಫೇಸ್ ಬುಕ್ ನಲ್ಲಿ ಈ ಘಟನೆಯ ವಿಚಾರವು ಕಾಡ್ಗಿಚ್ಚಿನಂತೆ ಹಬ್ಬುತ್ತಾ ಇದೆ. ಇದನ್ನು ನೀವು ನೋಡಬಹುದು.



Click it and Unblock the Notifications