Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವಕೀಲೆಗೆ ನೆರೆಮನೆಯವರಿಂದ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಅತಿಕ್ರಮಣದ ವಿರುದ್ಧ ಮಾತನಾಡಲು ಹೋದ ದೆಹಲಿಯ ಮಹಿಳೆ ವಕೀಲೆಯೊಬ್ಬರನ್ನು ನೆರೆಮನೆಯವರು ಸರಿಯಾಗಿ ಥಳಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ...
ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರ ಭಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಇದೆ. ಆದರೆ ಸರಕಾರಿ ಜಾಗವನ್ನು ಅಕ್ರಮಿಸಿಕೊಂಡು ತಮ್ಮ ಹೆಸರಿಗೆ ಮಾಡಿಕೊಂಡಿರುವವರ ಬಗ್ಗೆ ಸರಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ಅತಿಕ್ರಮಣವೆನ್ನುವುದು ಸಾಮಾನ್ಯವಾಗಿದೆ. ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳ ತನಕ ಅತಿಕ್ರಮಣ ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಂತೂ ಕೆರೆಗಳನ್ನೇ ನುಂಗಿ ನೀರು ಕುಡಿದಿದ್ದಾರೆ.
ಇಂತಹ ಅಕ್ರಮಣದ ಬಗ್ಗೆ ಮಾತನಾಡಲು ಹೋದರೆ ಅವರಿಗೆ ಉಳಿಗಾಲವಿಲ್ಲ. ಯಾಕೆಂದರೆ ಅಕ್ರಮಣವೆನ್ನುವುದು ಭಾರೀ ದೊಡ್ಡ ದಂಧೆ. ಇಂತಹ ಅತಿಕ್ರಮಣದ ವಿರುದ್ಧ ಮಾತನಾಡಲು ಹೋದ ದೆಹಲಿಯ ಮಹಿಳೆ ವಕೀಲೆಯೊಬ್ಬರನ್ನು ನೆರೆಮನೆಯವರು ಸರಿಯಾಗಿ ಥಳಿಸಿದ ಘಟನೆ ನಡೆದಿದೆ. ದೆಹಲಿಯ ಅಂಜು ದೇವಿ ಎಂಬವರು ತನ್ನ ಪ್ರದೇಶದಲ್ಲಿದ್ದ ಸರಕಾರಿ ಜಾಗವನ್ನು ಕಬಳಿಸಿಕೊಂಡಿರುವ ವಿರುದ್ಧ ಕೇಸು ದಾಖಲಿಸಿದ್ದರು. ವಕೀಲೆಯಾಗಿರುವ ಅಂಜು ದೇವಿಗೆ ಅತಿಕ್ರಮಣ ಮಾಡಿಕೊಂಡಿರುವವರ ಏನು ಮಾಡಿದರು ಎಂದು ತಿಳಿಯಲು ಮುಂದೆ ಓದಿ.....

ಕೇಸು ದಾಖಲಿಸಿದ ಅಂಜು ದೇವಿ....
ತನ್ನ ನೆರೆಯಲ್ಲಿರುವ ಸರಕಾರಿ ಜಾಗದ ಅತಿಕ್ರಮಣ ಮಾಡಿರುವ ವಿರುದ್ಧ ಅಂಜು ದೇವಿ ಇತ್ತೀಚೆಗೆ ಕೇಸು ದಾಖಲಿಸಿದ್ದರು. ಅತಿಕ್ರಮಣ ಮಾಡಿರುವ ಸ್ಥಳವನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.

ನೆರೆಮನೆಯವರ ಮೆಟ್ಟಿಲು ಧ್ವಂಸ ಮಾಡಲಾಯಿತು
ಅತಿಕ್ರಮಣ ಮಾಡಿರುವಂತಹ ಜಾಗದಲ್ಲಿ ಕಟ್ಟಿರುವುದನ್ನು ಧ್ವಂಸ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಇದು ನೆರೆಮನೆಯವರನ್ನು ತುಂಬಾ ಕೆರಳಿಸಿತ್ತು ಮತ್ತು ವಕೀಲೆ ವಿರುದ್ಧ ಜಗಳಕ್ಕೆ ಬಿದ್ದರು. ನೆರೆಮನೆಯ ಮಹಿಳೆಗೆ ಆಕೆಯ ಮಗಳು ಕೂಡ ಬೆಂಬಲ ನೀಡಿದಳು.

ತಾಯಿ-ಮಗಳು ವಕೀಲೆಗೆ ಹಲ್ಲೆ ನಡೆಸಿದರು
ಈ ವಿಡಿಯೋದಲ್ಲಿ ನೆರೆಮನೆಯ ಮಹಿಳೆಯು ವಕೀಲೆಗೆ ಯಾವ ರೀತಿಯಿಂದ ಹಲ್ಲೆ ಮಾಡುತ್ತಿದ್ದಾರೆಂದು ತಿಳಿಯುತ್ತದೆ. ವಕೀಲೆಯ ಉಸಿರುಗಟ್ಟಿಸಿ ಆಕೆ ಪ್ರಜ್ಞೆ ಕಳೆದುಕೊಳ್ಳುವ ತನಕ ಹೊಡೆಯುತ್ತಾರೆ.
ವಿಡಿಯೋ ನೋಡಿ...
ವಿಡಿಯೋದಲ್ಲಿ ಇದು ಹೇಗೆ ಆರಂಭವಾಯಿತೆಂದು ತಿಳಿಯುತ್ತದೆ. ವಕೀಲೆಯು ಇದರ ಬಗ್ಗೆ ವಿವರ ನೀಡುತ್ತಿರಬೇಕಾದರೆ ನೆರೆಮನೆಯ ಮಹಿಳೆಯು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾಳೆ. ವಕೀಲೆಯ ಮೇಲೆ ಹಿಂದಿನಿಂದ ದಾಳಿ ಮಾಡಿದ ಮಹಿಳೆ ಆಕೆಗೆ ಚೆನ್ನಾಗಿ ಥಳಿಸುತ್ತಾಳೆ.
ಇನ್ನೊಂದು ವಿಡಿಯೋ ಹೀಗಿದೆ ನೋಡಿ..
ತಾಯಿ ಮಗಳು ವಕೀಲೆಗೆ ಹಿಗ್ಗಾಮುಗ್ಗಾ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ವಕೀಲೆಯ ಸೀರೆ ಜಾರಿದರೂ ಇದರ ಬಗ್ಗೆ ಚಿಂತೆ ಮಾಡಲು ತಾಯಿ ಮಗಳು ಚೆನ್ನಾಗಿ ಹೊಡೆಯುತ್ತಾರೆ. ಹೊಡೆತ ತಿಂದು ಬಲಹೀನಳಾದ ವಕೀಲೆ ಅಲ್ಲೇ ಕುಸಿಯುತ್ತಾಳೆ. ಅಕ್ರಮ ದಂಧೆಕೋರರು ಕಾನೂನನ್ನು ಕೈಗೆತ್ತಿಕೊಂಡು ಯಾವ ರೀತಿ ವರ್ತಿಸಬಲ್ಲರು ಎನ್ನುವುದು ಈ ವೀಡಿಯೋ ಸಾಕ್ಷಿಯಾಗಿದೆ.
ನ್ಯಾಯ ಸಿಗಲು ಸಾಧ್ಯವೇ?
ವಕೀಲೆಯ ಮಗನು ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಆತ ತನ್ನ ತಾಯಿಯನ್ನು ರಕ್ಷಿಸಲು ಹೋಗಿದ್ದರೆ ಮಹಿಳೆಯರು ಆತನ ಮೇಲೆಯೂ ದಾಳಿ ಮಾಡುವ ಸಾಧ್ಯತೆಯಿತ್ತು. ಅನ್ಯಾಯದ ವಿರುದ್ಧ ಮಾತನಾಡಲು ಹೋದವರಿಗೆ ಈ ಸ್ಥಿತಿ ಬರುವುದನ್ನು ನಾವು ಯಾವಾಗಲೂ ನೋಡುತ್ತೇವೆ. ಫೇಸ್ ಬುಕ್ ನಲ್ಲಿ ಈ ಘಟನೆಯ ವಿಚಾರವು ಕಾಡ್ಗಿಚ್ಚಿನಂತೆ ಹಬ್ಬುತ್ತಾ ಇದೆ. ಇದನ್ನು ನೀವು ನೋಡಬಹುದು.



Click it and Unblock the Notifications