Just In
Don't Miss
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2018ರಲ್ಲಿ ಈ 5 ರಾಶಿಯವರು ಯೋಚಿಸಿ ಹೆಜ್ಜೆ ಇಟ್ಟರೆ, ಅದೃಷ್ಟ ಬದಲಾಗಲಿದೆ...
ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ನೀವು ಅದೃಷ್ಟವಂತರಾಗಿದ್ದೀರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುವುದೇ ಜ್ಯೋತಿಷ್ಯ ಶಾಸ್ತ್ರವಾಗಿದೆ. ಒಂದೊಂದು ಗ್ರಹಗಳೂ ನಿಮ್ಮ ರಾಶಿಯಲ್ಲಿದ್ದರೆ ಆ ಗ್ರಹಗಳ ಪರಿಣಾಮಗಳಿಗೆ ಅನುಸಾರವಾಗಿ ನೀವು ಅದೃಷ್ಟವನ್ನು ಪಡೆದುಕೊಂಡು ಬರುತ್ತೀರಿ.
ವಿವಾಹ, ಗೃಹ, ಸಂಪತ್ತು, ದಾಂಪತ್ಯ, ಸಂತಾನ ಹೀಗೆ ಪ್ರತಿಯೊಂದು ವಿಷಯದ ಮೇಲೂ ಈ ಗ್ರಹಗತಿಗಳು ಪರಿಣಾಮವನ್ನು ಬೀರುತ್ತವೆ ಮತ್ತು ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ 2018ರ ರಾಶಿ ಭವಿಷ್ಯವನ್ನು ನಾವು ತಿಳಿದುಕೊಳ್ಳಲಿದ್ದು ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಅರ್ಥಿಕ ಸ್ಥಿತಿಗತಿಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳೋಣ....
ಮೇಷ
ಈ ಸಮಯದಲ್ಲಿ ನಿಮಗೆ ತಾಳ್ಮೆ ಅತಿ ಅಗತ್ಯವಾದುದು. ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ನಿಮ್ಮ ಸಹೋದ್ಯೋಗಿಗಳು ನಿಮ್ಮಿಂದ ಅತೃಪ್ತರಾಗುವಂತಹ ಸನ್ನಿವೇಶಗಳು ಎದುರಾಗಬಹುದು. ತಜ್ಞರನ್ನು ಸಂಪರ್ಕಿಸಿ ತದನಂತರವೇ ವ್ಯವಹಾರಗಳಿಗೆ ಮುಂದಡಿ ಇಡಿ. ಇನ್ನು ಈ ರಾಶಿಯವರು ಉತ್ಸಾಹಿಗಳು ಮತ್ತು ಸ್ಪರ್ಧಾತ್ಮಕ ನಾಯಕರು ಎಂದು ಹೇಳಲಾಗುವುದು. ಇವರಿಗೆ ಮಿಲಿಟರಿ, ಸರ್ಕಾರಿ ಉದ್ಯೋಗ, ಅಥ್ಲೆಟಿಕ್ಸ್, ಮ್ಯಾನೇಜ್ ಮೆಂಟ್ ಮತ್ತು ಜಾಹೀರಾತುಗಳಲ್ಲಿ ಉದ್ಯೋಗಗಳನ್ನು ಶ್ರಮಶೀಲರಾಗಿ ಮಾಡಬಹುದು. ಈ ಉದ್ಯೋಗಗಳು ಉತ್ತಮ ಲಾಭ ಹಾಗೂ ಗೌರವ ತಂದುಕೊಡುವುದು. ಇವರ ಬುದ್ಧಿ ಬಲಿಷ್ಠವಾಗಿರುವುದು. ಬೇರೆಯವರ ಸಲಹೆ ಅಥವಾ ಆದೇಶ ಪಾಲಿಸುವುದಿಲ್ಲ. ಇವರು ಯಾವಾಗಲೂ ನಾಯಕ ಅಥವಾ ಕಂಪನಿಯ ಮಾಲಕರಾಗುವರು. ಇವರಿಗೆ ಕೈಕೆಳಗೆ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ತುಂಬಾ ಸ್ಪರ್ಧೆಯಿರುವ ಕೆಲಸ ಬೇಕಾಗಿದೆ.
ವೃಷಭ
ಆದಷ್ಟು ಜ್ಞಾನವನ್ನು ವೃದ್ಧಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ. ನಿಮ್ಮ ಪ್ರಸ್ತುತ ಆಯ್ಕೆಗಳಾದ ಕಾಲೇಜು ಕೋರ್ಸ್ಗಳು, ವಿಶೇಷ ಅರಿವನ್ನು ಪಡೆದುಕೊಳ್ಳುವುದು, ಹೊಸ ಜ್ಞಾನವನ್ನು ಪಡೆದುಕೊಳ್ಳುವುದು ಇವೇ ಮೊದಲಾದ ಕಾರ್ಯಗಳನ್ನು ನಡೆಸಿ. ಇನ್ನು ಈ ರಾಶಿಯ ಜನರು ಕೆಲವೊಂದು ವಿಷಯಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳಬಲ್ಲರು. ಮಸಾಜ್ ಥೆರಪಿಸ್ಟ್, ಬಾಣಸಿಗ, ಹೂಗಾರ ಅಥವಾ ಕಲಾತ್ಮಕವಾಗಿ ಆಸಕ್ತಿ ತೋರಿದರೆ ಚಿತ್ರಕಲೆ, ಶಿಲ್ಪ ಕಲಾಕೃತಿ, ಸ್ಟಾಕ್ ಬ್ರೋಕರ್, ಆಭರಣ ವ್ಯಾಪಾರ, ವ್ಯವಹಾರ ಕಾರ್ಯನಿರ್ವಾಹಕ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ನಿರ್ವಹಿಸಬಹುದು. ಇವರು ಈ ಕೆಲಸವನ್ನು ಹೆಚ್ಚು ಆನಂದಿಸಿಕೊಂಡು ಕೆಲಸ ಮಾಡುವರು. ಈ ರಾಶಿಯವರಿಗೆ ಅಸುರಕ್ಷತೆ, ಹಠಾತ್ ಬದಲಾವಣೆ ಅಥವಾ ಅಚ್ಚರಿ, ತಕ್ಷಣ ನಿರೋದ್ಯೋಗಿ ಯಾಗುವುದನ್ನು ಸಂಭಾಲಿಸಲು ಆಗಲ್ಲ. ಇವರು ಹಣದ ರಿಸ್ಕ್ ತೆಗೆದುಕೊಳ್ಳುವರು. ಆದರೆ ಬೇರೆಯವರ ಹಣ ಮಾತ್ರ!. ಯಾವುದೇ ಸ್ಥಿರ ಕೆಲಸ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಇವರು ತುಂಬಾ ಸಂತೋಷವಾಗಿರುವರು.
ಮಿಥುನ
ವಿದ್ಯಾಸಂಸ್ಥೆಗಳಿಗೆ ಹೋಗಿ ಅಲ್ಲಿ ನೀಡುವ ಮಾರ್ಗದರ್ಶನದ ಮೂಲಕ ಮುಂದಡಿ ಇಡಿ. ಭಾವನಾತ್ಮಕ ಅಂಶಗಳು ನಿಮ್ಮನ್ನು ತಡೆಹಿಡಿಯಬಹುದು. ರಹಸ್ಯಗಳನ್ನು ಆದಷ್ಟು ಕಾಪಾಡಿ. ಇವರು ಇಬ್ಬರು ಸೇರಿ ಮಾಡುವ ಕೆಲಸದಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಇವರು ಬೇಸರದಿಂದ ಇರಲು ಇಷ್ಟಪಡುವುದಿಲ್ಲ. ಇವರಿಗೆ ಆಸಕ್ತಿದಾಯಕ ಮತ್ತು ಅತ್ಯಾಕರ್ಷಕ ಕೆಲಸ, ಸಹ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ.ಇವರು ಸ್ಟಾಕ್ ಬ್ರೋಕರ್, ಜಾಹೀರಾತು, ಮನರಂಜನೆ, ರೇಡಿಯೋ, ಮಾರ್ಕೆಟಿಂಗ್, ಟೆಕ್ ಸಪೋರ್ಟ್, ಶಿಕ್ಷಕ ವೃತ್ತಿ, ವಾಸ್ತು ಶಿಲ್ಪಗಳಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ಅಲ್ಲದೆ ಮಾನಸಿಕ ಉತ್ತೇಜನ ಸಂತೋಷವಾಗಿಡಲು ಈ ರಾಶಿಯವರಿಗೆ ಕೆಲಸ ಬೇಕು. ಇವರು ತಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಮಾಡಿಕೊಳ್ಳುತ್ತಾರೆ.ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಏಕತಾನತೆಯ ಕೆಲಸ ಇವರಿಗೆ ಇಷ್ಟವಿಲ್ಲ.ಇವರು ಸಾಮಾಜಿಕ ಕೆಲಸ ಕಾರ್ಯ ಅಥವಾ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಬೇಸರ ಕಡಿಮೆ ಮಾಡಿಕೊಳ್ಳುವರು.
ಕನ್ಯಾ ರಾಶಿ
ಅನಿರೀಕ್ಷಿತ ಸಂಭವಗಳನ್ನು ನೀವು ಎದುರಿಸಬಹುದು ಆದ್ದರಿಂದ ಈ ಕುರಿತು ಸಮಗ್ರ ಜ್ಞಾನವನ್ನು ಪಡೆದುಕೊಳ್ಳಿ. ನಿಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಹೊಸ ಒಪ್ಪಂದಗಳಿಗೆ ಸಹಿ ಹಾಕಿ. ವಿಶೇಷ ಕೋರ್ಸ್ಗಳ ಮೂಲಕ ನಿಮ್ಮನ್ನು ನೀವು ತರಬೇತಿಪಡಿಸಿಕೊಳ್ಳಿ.ಈ ರಾಶಿಯಲ್ಲಿ ಜನಿಸಿದವರು ಸಂಘಟಿತ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಅಚ್ಚುಕಟ್ಟನ್ನು ಪರಿಗಣಿಸುತ್ತಾರೆ. ಇವರಿಗೆ ಗ್ರಂಥಾಲಯಗಳು, ಹಸ್ತಾಲಂಕಾರಿಗಳು, ಯಂತ್ರ ಶಾಸ್ತ್ರಜ್ಞರು, ವಾಸ್ತು ಶಿಲ್ಪಿಗಳು, ಸಂಪಾದಕರು, ಬರಹಗಾರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಅಥವಾ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು.
ಕರ್ಕಾಟಕ ರಾಶಿ
ನಿಮ್ಮ ಸ್ನೇಹಿತನ ಸಹಾಯವನ್ನು ಪಡೆದುಕೊಂಡು ವ್ಯಾಪಾರದಲ್ಲಿ ಪ್ರಗತಿಯನ್ನು ಕಂಡುಕೊಳ್ಳಿ. ಆರ್ಥಿಕವಾಗಿ ಜೊತೆಗೆ ಸ್ನೇಹಿತರ ಸಹಾಯದಿಂದ ಕೂಡ ಯಶಸ್ಸನ್ನು ಪಡೆದುಕೊಳ್ಳಬಹುದು ಎಂಬುದನ್ನು ನೀವು ಅರಿತುಕೊಳ್ಳಬೇಕು. ಏಕಾಗ್ರತೆ ಮತ್ತು ಬುದ್ಧಿವಂತಿಕೆಯಿಂದ ಯಶಸ್ಸು ಪಡೆದುಕೊಳ್ಳಿ. ಇನ್ನು ಈ ರಾಶಿಯಲ್ಲಿ ಜನಿಸಿದವರಿಗೆ ಕಾಳಜಿ ಮತ್ತು ಪೋಷಣೆ ಮಾಡುವ ಕೆಲಸವು ಹೆಚ್ಚು ಆಸಕ್ತಿ ದಾಯಕವಾಗಿರುತ್ತದೆ. ಇವರು ಶಿಕ್ಷಕರಾಗಿ, ವೈದ್ಯರಾಗಿ, ತೋಟಗಾರಿಕೆ, ಭೂದೃಶ್ಯ, ಸಾಮಾಜಿಕ ಕಾರ್ಯಕರ್ತ ಅಥವಾ ದಾದಿಯ ವೃತ್ತಿಯನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರಿಗೆ ಕೆಲಸದಲ್ಲಿ ಸುರಕ್ಷತೆಯಿರುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದಾಗಿ ಒಳ್ಳೆಯ ಸಂಬಳ ಸಿಗುವ ಕೆಲಸ ಇವರು ಆಯ್ಕೆ ಮಾಡಿಕೊಳ್ಳುವರು. ಇವರು ಕೆಲವೊಮ್ಮೆ ತುಂಬಾ ಭಾವನಾತ್ಮಕವಾಗಿ ವರ್ತಿಸುವ ಕಾರಣದಿಂದ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕೆಲಸವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುವರು. ಇತರರನ್ನು ಪಾಲನೆ ಮಾಡುವ ಉದ್ಯೋಗ ಇವರಿಗೆ ಒಳ್ಳೆಯದು.