Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಂಬುತ್ತೀರೋ ಬಿಡುತ್ತೀರೋ, ಇಲ್ಲಿ ಪ್ರೇತ-ಭೂತಗಳದ್ದೇ ಕಾಟವಂತೆ!
ದೇವರನ್ನು ನಂಬಿದವರು ಭೂತಪ್ರೇತಗಳನ್ನು ಕೂಡ ನಂಬಲೇಬೇಕಾಗುತ್ತದೆ ಎನ್ನುವ ಮಾತಿದೆ. ಪ್ರೇತಭಾದೆ ಇರುವ ಬಗ್ಗೆ ನಾವು ಹಲವಾರು ಘಟನೆಗಳಿಂದ ತಿಳಿದುಕೊಂಡಿದ್ದೇವೆ. ಇಂತಹ ಕೆಲವೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ. ಕೆಲವರು ಇದನ್ನು ಮೂಢನಂಬಿಕೆ ಎಂದರೆ ಇನ್ನು ಕೆಲವರು ಇದು ನಿಜವೆನ್ನುತ್ತಾರೆ. ಪ್ರಸಿದ್ಧ ಹೋಟೆಲ್ಗಳು, ಈಗ ಭೂತದ ಕಾಟದಿಂದ ನಲುಗುತ್ತಿದೆ!
ಭಾರತದಲ್ಲಿ ಪ್ರೇತಭಾದೆಯಿರುವ ಹಲವಾರು ಪ್ರದೇಶಗಳ ಬಗ್ಗೆ ಕೇಳಿದ್ದೇವೆ. ಇದು ನಮ್ಮ ರಾತ್ರಿಯ ನಿದ್ರೆ ಕೆಡಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಸುಳ್ಳು ಅಥವಾ ಸತ್ಯ ಎಂದು ಒಪ್ಪಿಕೊಳ್ಳುವುದು ನಿಮಗೆ ಬಿಟ್ಟಿರುವ ವಿಚಾರ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?
ಈ ಲೇಖನದಲ್ಲಿ ರಾಜಸ್ಥಾನದ ಜೈಸಲ್ಮರ್ ಜಿಲ್ಲೆಯಲ್ಲಿರುವ ಪ್ರೇತಭಾದಿತ ಗ್ರಾಮವಾಗಿರುವ ಕುಲ್ದಾರ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಚಿತ್ರಗಳನ್ನು ನೋಡಿದರೆ ಈ ಪ್ರದೇಶದಲ್ಲಿ ಏನಾಗಿದೆಯೋ ಎನ್ನುವ ಭೀತಿ ನಿಮ್ಮನ್ನು ಕಾಡಬಹುದು. ಈ ಗ್ರಾಮದ ಬಗ್ಗೆ ಇರುವ ಕಥೆಯ ಬಗ್ಗೆ ತಿಳಿದುಕೊಳ್ಳಿ.

ಇದು ಎಲ್ಲಿದೆ?
ಜೈಸಲ್ಮರ್ ಜಿಲ್ಲೆಯಿಂದ 18 ಕಿ.ಮೀ. ನೈಋತ್ಯದಲ್ಲಿರುವ ಸಣ್ಣ ಹಳ್ಳಿ ಇದಾಗಿದೆ. ಗ್ರಾಮದ ಸಮುದಾಯವು ಸುಮಾರು 85 ಹಳ್ಳಿಗಳನ್ನು ಒಳಗೊಂಡಿದೆ. 1291ರಲ್ಲಿ ಈ ಗ್ರಾಮವನ್ನು ಪಾಲಿವಾಲ್ ಬ್ರಾಹ್ಮಣರು ಮೊದಲ ಸಲ ನಿರ್ಮಿಸಿದ್ದರು.

ಹಳ್ಳಿಯರು ಏನು ಮಾಡುತ್ತಲಿದ್ದರು?
ಈ ಗ್ರಾಮಸ್ಥರು ತುಂಬಾ ಪರೋಪಕಾರಿಗಳಾಗಿದ್ದರು ಮತ್ತು ಒಳ್ಳೆಯ ವ್ಯಾಪಾರಸ್ಥರು ಹಾಗೂ ರೈತರಾಗಿದ್ದರು. ಗ್ರಾಮದ ರೈತರು ಎಷ್ಟು ಬುದ್ದಿವಂತರಾಗಿದ್ದರು ಎಂದರೆ ರಾಜಸ್ಥಾನದಂತಹ ಶುಷ್ಕ ವಾತಾವರಣವಿದ್ದ ಪ್ರದೇಶದಲ್ಲೂ ಹೆಚ್ಚು ನೀರಿನ ಅಗತ್ಯವಿರುವ ಗೋಧಿಯನ್ನು ಬೆಳೆಯುತ್ತಲಿದ್ದರು.

ಗ್ರಾಮದ ಜನರಿಗೆ ಏನಾಯಿತು?
ಈ ಗ್ರಾಮದಲ್ಲಿ ಅಥವಾ ಇದರ ಆಸುಪಾಸಿನ ಸುಮಾರು 85 ಗ್ರಾಮಗಳಲ್ಲಿ ಯಾರೂ ವಾಸಮಾಡುತ್ತಿಲ್ಲ. ಯಾಕೆಂದರೆ ಈ ಗ್ರಾಮವನ್ನು ಪ್ರೇತಭಾದೆಯಿರುವ ಗ್ರಾಮವೆಂದು ನಂಬಲಾಗಿದೆ. 1825ರಲ್ಲಿ ಒಂದೇ ರಾತ್ರಿ ಇಲ್ಲಿನ ಕುಟುಂಬಗಳೆಲ್ಲವೂ ಗ್ರಾಮವನ್ನು ಬಿಟ್ಟು ತೆರಳಿದ್ದವು.

ರಕ್ಷಾಬಂಧನದ ದಿನ ಗ್ರಾಮ ತೊರೆದರು
ಪಲಿವಾಲ್ ಬ್ರಾಹ್ಮಣರು ರಕ್ಷಾಬಂಧನದ ದಿನ ಗ್ರಾಮವನ್ನು ತೊರೆದ ಹಿನ್ನೆಲೆಯಲ್ಲಿ ಇಂದಿಗೂ ಅವರು ರಕ್ಷಾಬಂಧನವನ್ನು ಆಚರಿಸುವುದಿಲ್ಲ. ಗ್ರಾಮವನ್ನು ಯಾಕೆ ತೊರೆದರು ಎನ್ನುವ ಬಗ್ಗೆ ಯಾವುದೇ ಸುಳಿವು ಅಥವಾ ದಾಖಲೆ ಸಿಕ್ಕಿಲ್ಲ.

ಇತಿಹಾಸ ತಜ್ಞರ ಪ್ರಕಾರ
ಜೈಸಲ್ಮರ್ ನ ದಿವಾನ್ ಆಗಿರುವಂತಹ ಸಲೀಂ ಸಿಂಗ್ ಎಂಬಾತನಿಗೆ ಗ್ರಾಮದ ಮುಖ್ಯಸ್ಥನ ಮಗಳ ಕಡೆ ಆಕರ್ಷಣೆ ಉಂಟಾಯಿತು. ಆಕೆ ಗ್ರಾಮದಲ್ಲಿದ್ದ ಅತ್ಯಂತ ಸುಂದರ ಯುವತಿಯಾಗಿದ್ದಳು. ಆಕೆಯನ್ನು ಪಡೆಯಲು ಆತ ತುಂಬಾ ಕೆಳಮಟ್ಟದ ಮಾರ್ಗವನ್ನು ಅನುಸರಿಸಿದ್ದ ಎನ್ನಲಾಗುತ್ತಿದೆ.

ಇದು ಮುಂದುವರಿಯಿತು.....
ತನ್ನ ಆಯ್ಕೆಯ ಹುಡುಗಿಯನ್ನು ಮದುವೆಯಾಗಲು ಬಿಡದೇ ಇದ್ದರೆ ಗ್ರಾಮಸ್ಥರಿಗೆ ತನ್ನ ಇಚ್ಛೆಯಂತೆ ಅತಿಯಾಗಿ ತೆರಿಗೆ ಹಾಕುವುದಾಗಿ ಆತ ಗ್ರಾಮಸ್ಥರನ್ನು ಬೆದರಿಸಿದ್ದ. ಆದರೆ ಗ್ರಾಮಸ್ಥರು ಇದಕ್ಕೆ ತಯಾರಾಗಿರಲಿಲ್ಲ.

ಗ್ರಾಮ ತೊರೆದರು.....
ಗ್ರಾಮದ ಗೌರವವನ್ನು ಕಾಪಾಡಲು ಮತ್ತು ಸ್ವಾಭಾಮಾನದಿಂದ ಗ್ರಾಮಸ್ಥರು ಗ್ರಾಮವನ್ನೇ ಬಿಟ್ಟು ತೆರಳಲು ಬಯಸಿದರು. ಗ್ರಾಮವನ್ನು ತೊರೆಯುವ ಸಂದರ್ಭದಲ್ಲಿ ಅವರು ಯಾವ ವಸ್ತುವನ್ನು ಇಲ್ಲಿಂದ ತೆಗೆದುಕೊಂಡು ಹೋಗಲಿಲ್ಲ. ಒಂದೇ ರಾತ್ರಿ ಸುಮಾರು 85 ಗ್ರಾಮಗಳ ಜನರು ಗ್ರಾಮವನ್ನು ತೊರೆದರು. ಒಂದೇ ರಾತ್ರಿಯಲ್ಲಿ ಗ್ರಾಮವನ್ನು ತೊರೆಯಲು ಅಲ್ಲಿ ಏನು ನಡೆಯಿತು ಎನ್ನುವ ಬಗ್ಗೆ ಈಗಲೂ ಯಾರಿಗೂ ತಿಳಿದಿಲ್ಲ. ಈ ವೀಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಗ್ರಾಮದ ಬಗ್ಗೆ ಎಲ್ಲಾ ಕಥೆಯನ್ನು ಹೇಳುತ್ತಾ ಇದ್ದಾರೆ.



Click it and Unblock the Notifications
