Just In
- 18 min ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 1 hr ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- 3 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 4 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
Don't Miss
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೂರು, ವಿವಾದಗಳಿಂದಲೇ ಸುದ್ದಿಯಾದ ನಟಿಮಣಿಯರು
ಯಾವಾಗ ಒಂದು ವಿಷಯವು ವಿವಾದದ ಮೂಲವಾಗುತ್ತದೆಯೋ, ಆಗ ಅದು ಕುತೂಹಲದ ಮೂಲವು ಸಹ ಆಗುತ್ತದೆ ಎಂದು ವಿಚಾರವಾದಿ ವಿಲಿಯಂ ಹಾಜ್ಲೆಟ್ ತಿಳಿಸಿದ್ದಾರೆ. ಹೀಗೆ ಹಲವಾರು ಸದ್ದಿಲ್ಲದೆ ಇರುವ ವಿಚಾರಗಳು ಮತ್ತು ವ್ಯಕ್ತಿಗಳು ಇದ್ದಕ್ಕಿದ್ದಂತೆ ವಿವಾದಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ವಿವಾದಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾದಷ್ಟು, ಸಾಮಾನ್ಯ ಸುದ್ದಿಗಳು ಜನಪ್ರಿಯವಾಗುವುದಿಲ್ಲ. ಮರ್ಯಾದ ಪುರುಷೋತ್ತಮ ರಾಮನನ್ನು ಸಹ ವಿವಾದ ಬಿಡಲಿಲ್ಲ. ಮಹಾ ಮಹಾಪುರುಷರು ಮತ್ತು ಮಹಿಳೆಯರು ಸಹ ವಿವಾದಗಳಿಗೆ ಗುರಿಯಾದವರೆ. ಹೆಚ್ಚು ಶಿಕ್ಷಿತ ಬಾಲಿವುಡ್ನ ಸೆಲೆಬ್ರಿಟಿ ಸ್ಟಾರ್ಗಳು
ಇನ್ನು ಸಾಮಾನ್ಯರ ಕತೆ ಏಕೆ ಹೇಳಿ. ಬುದ್ಧಿಜೀವಿ ಎನಿಸಿಕೊಂಡ ಸಾಹಿತಿಗಳು ಸಹ ವಿವಾದದ ದಾಸರಾಗಿದ್ದಾರೆ. ವಿವಾದಗಳನ್ನು ಸೃಷ್ಟಿಸಿ, ಅದನ್ನೆ ಬರೆದು, ಜನಪ್ರಿಯವಾದವರು ಸಹ ಇದ್ದಾರೆ. ಯಾವುದನ್ನು ಮಾತನಾಡಿದರೆ ದೊಡ್ಡ ಸುದ್ದಿಯಾಗುತ್ತದೆ ಎಂಬುದನ್ನು ಸಂಶೋಧನೆ ಮಾಡಿರುವ ಸಂಶೋಧಕರು ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ, ಬಳಸಿಕೊಳ್ಳುತ್ತಿದ್ದಾರೆ ಮತ್ತು ಮುಂದೆ ಸಹ ಬಳಸಿಕೊಳ್ಳುತ್ತಾರೆ. ವಿಚ್ಛೇದನ ಪಡೆದ ಪುರುಷರನ್ನು ವರಿಸಿದ ಖ್ಯಾತ ತಾರೆಯರು
ಇನ್ನು
ಚಲನಚಿತ್ರ
ರಂಗದಲ್ಲಿರುವವರಿಗು,
ವಿವಾದಗಳಿಗೂ,
ಅವಿನಾಭಾವ
ಸಂಬಂಧ.
ಸುಮ್ಮನಿದ್ದರು
ವಿವಾದಗಳನ್ನು
ಸುತ್ತಿಕೊಂಡುವರು
ಕೆಲವರಾದರೆ,
ವಿವಾದಗಳನ್ನು
ಹುಟ್ಟು
ಹಾಕುವುದರಲ್ಲಿ
ಹುಟ್ಟು
ಪರಿಣತರು
ತಾವು
ಎಂದು
ನಡೆದುಕೊಂಡವರು
ಕೆಲವರು.
ವಿವಾದವನ್ನು
ಮಾಡುವ
ಮೂಲಕ
ತಾವು
ಇನ್ನು
ಸಿನಿರಂಗದಲ್ಲಿದ್ದೇವೆ
ಎಂದು
ತೋರಿಸುವವರು
ಹಲವರು.
ಬನ್ನಿ
ಹಾಗೆ
ವಿವಾದಗಳನ್ನು
ಸೃಷ್ಟಿಸಿದ
ವಿವಾದ
ಶೂರ
ನಟಿಮಣಿಯರು
ಮತ್ತು
ಅವರ
ವಿವಾದಗಳನ್ನು
ಒಂದು
ಸುತ್ತು
ನೋಡಿಕೊಂಡು
ಬರೋಣ....
ರಾಗಿಣಿ ದ್ವಿವೇದಿ
ಹಲವಾರು ಕಾರಣಗಳಿಂದ ವಿವಾದಗಳ ಬೆಂಕಿಗೆ "ತುಪ್ಪ" ಸುರಿದ ಖ್ಯಾತಿ ಈ ತುಪ್ಪದ ಹುಡುಗಿಯದು. ರಾಣಾ ದಗ್ಗುಬಾಟಿಯವರೊಂದಿಗೆ ಇರುವ ಸಂಬಂಧದ ಕುರಿತಾಗಿ ಸಹ ಇವರ ಮೇಲೆ ಊಹಾ ಪೋಹಗಳು ಇವೆ. ಅದರ ಜೊತೆಗೆ ತಾವು ಧರಿಸುವ ಬಟ್ಟೆಗಳ ಕಾರಣದಿಂದಾಗಿ ಇವರು ಅತಿ ಹೆಚ್ಚು ವಿವಾದಕ್ಕೆ ಗುರಿಯಾಗಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ರಾಗಿಣಿ ದ್ವಿವೇದಿ
ಅದರಲ್ಲೂ ದುಬೈನಲ್ಲಿ SIIMA ಪ್ರಶಸ್ತಿ ಸಮಾರಂಭದಲ್ಲಿ ಇವರು ಧರಿಸಿದ್ದ ಬಟ್ಟೆ ಜಾರಿ, ಕಾರ್ಯಕ್ರಮದ ನಡುವೆಯೇ ಪರದೆಯ ಹಿಂದಕ್ಕೆ ಓಡಿದ ಖ್ಯಾತಿ ಸಹ ಇವರದು. ಚಿತ್ರರಂಗದವರ ಪ್ರಕಾರ ಇದನ್ನು ಆಕೆ ಉದ್ದೇಶ ಪೂರ್ವಕವಾಗಿ ಮಾಡಿದರಂತೆ. ಅದು ಸತ್ಯವೋ, ಸುಳ್ಳೋ ನಮಗೆ ಗೊತ್ತಿಲ್ಲ. ಆದರೂ ರಾಗಿಣಿಯವರು ಅದನ್ನು ಎದುರಿಸಿ, ಮತ್ತಷ್ಟು ವಿವಾದಗಳನ್ನು ಮಾಡಲು ಶುರು ಮಾಡಿದರು.
ಐಂದ್ರಿತಾ ರೇ
ಈ ನಟಿಯು ಸಹ ವಿವಾದಗಳ ಮೂಲಕ ಆಗಾಗ ನಮಗೆ ನೆನಪಾಗುತ್ತಾ ಇರುತ್ತಾರೆ. ದೂದ್ ಪೇಡಾ ದಿಗಂತ್ ಜೊತೆಗೆ ಇವರ ಸಂಬಂಧವು ಸಹ ಆಗಾಗ ಸದ್ದಾಗುತ್ತಾ ಇರುತ್ತದೆ, ಒಮ್ಮೊಮ್ಮೆ ವಿವಾದ ಸಹ ಆಗಿದೆ. ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಕೆನ್ನೆಗೆ ಬಾರಿಸಿದರು ಎಂದು ಟಿವಿಗಳಲ್ಲಿ ಕಣ್ಣೀರು ಹಾಕಿದ ನಟಿ ಇವರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಐಂದ್ರಿತಾ ರೇ
ಹಾಂಗ್ಕಾಂಗ್ನಲ್ಲಿ ಈ ಘಟನೆ ನಡೆಯಿತು, ಎಂದು ಇವರು ಹೇಳಿದರು. ಅಷ್ಟೇ ಅಲ್ಲದೆ ಈಕೆ ವೃತ್ತಿಪರ ನಟಿಯಲ್ಲ, ಈಕೆಯ ವರ್ತನೆಯಲ್ಲಿ ವೃತ್ತಿಪರತೆ ಇಲ್ಲ ಎಂದು ಹಲವಾರು ಜನರು ದೂರು ನೀಡಿದ್ದಾರೆ.
ಸಂಜನಾ
ಕನ್ನಡ ಮತ್ತು ತೆಲುಗಿನಲ್ಲಿ ಖ್ಯಾತಿಯನ್ನು ಪಡೆದಿರುವ ಈ ನಟಿಯು ಗಂಡ ಹೆಂಡತಿ ಚಿತ್ರದಲ್ಲಿ ತಿಲಕ್ ಜೊತೆಗೆ ಹಾಟ್ ಆಗಿ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದರು. ಇಷ್ಟು ಸಾಲದು ಎಂದು ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಮತ್ತದೆ ತಿಲಕ್ ಜೊತೆಗೆ ಜಗಳ ಸಹ ಮಾಡಿಕೊಂಡರು.
ಸಂಜನಾ
ಅಷ್ಟೇ ಅಲ್ಲದೆ ತನ್ನನ್ನು, ಎಲ್ಲರೂ ಗಮನಿಸಬೇಕು ಎಂದು ಇವರು ಇಷ್ಟಪಡುವ ಸ್ವಭಾವ ಇವರದು. ಕ್ರಿಕೆಟಿಗ ಶ್ರೀಶಾಂತ್ ಜೊತೆಗೆ ಇವರ ಸಂಬಂಧವು ಸಹ ವಿವಾದದ ಹುತ್ತದಲ್ಲಿ ಬಿದ್ದಿತ್ತು. ಆದರೆ ನಮ್ಮಿಬ್ಬರ ನಡುವೆ ಅಂತಹದು ಯಾವುದು ಇಲ್ಲ ಎಂದು ಇವರು ತಿಳಿಸಿದರು. ಐಪಿಲ್ ಸ್ಪಾಟ್ ಫಿಕ್ಸಿಂಗ್ ಸಂದರ್ಭದಲ್ಲಿ ಪೋಲಿಸರು ಇವರ ಹೇಳಿಕೆಯನ್ನು ಸಹ ಪಡೆದರು.
ಶ್ರುತಿ
ಅಳುಮುಂಜಿ ಎಂದು ಕರೆಯಿಸಿಕೊಂಡಿದ್ದ ಶ್ರುತಿಯವರು ವಿವಾದಗಳಲ್ಲಿ ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದವರು. ತಮಿಳು ಮತ್ತು ಕನ್ನಡದ ಸೂಪರ್ ಹಿಟ್ಗಳಲ್ಲಿ ನಟಿಸಿದ ಈ ನಟಿ, ಎರಡನೆ ಮದುವೆಯನ್ನು ವಿವಾದಾತ್ಮಕವಾಗಿ ಮಾಡಿಕೊಂಡರು.
ಶ್ರುತಿ
ಈಕೆ ಪತ್ರಕರ್ತ ಚಂದ್ರಚೂಡ್ ಚಕ್ರವರ್ತಿಯವರನ್ನು ಉಡುಪಿಯಲ್ಲಿ ಮದುವೆಯಾಗಿ, ಆ ವಿವಾದದಿಂದ ನ್ಯಾಯಾಲಯಕ್ಕೆ ಬಂದರು. ಚಂದ್ರಚೂಡ್ ಅವರ ಪತ್ನಿ, ನನಗೆ ವಿಚ್ಛೇದನ ನೀಡದೆ, ಶ್ರುತಿಯನ್ನು ಮದುವೆಯಾಗಿದ್ದಾರೆ ಎಂದು ಇವರಿಬ್ಬರನ್ನು ಕೋರ್ಟಿಗೆ ಬರುವಂತೆ ಮಾಡಿದರು. ಇದಾದ ಮೇಲೆ ಶ್ರುತಿಯವರು ಚಿತ್ರರಂಗದಲ್ಲಿ ಪಾತಾಳಕ್ಕೆ ಇಳಿದರು ಎಂದು ಹೇಳಬಹುದು.
ರಮ್ಯ
ಸ್ಯಾಂಡಲ್ವುಡ್ ಕ್ವೀನ್ ರಮ್ಯ, ತಮ್ಮ ವಿವಾದಗಳ ಮೂಲಕ ಕಾಂಟ್ರವರ್ಸಿ ಕ್ವೀನ್ ಎಂದು ಸಹ ಗುರುತಿಸಿಕೊಂಡರು. ಹಲವಾರು ವಿವಾದಗಳಿಗೆ ಗುರಿಯಾಗಿ, ಅದರಲ್ಲೂ ನಂಬರ್ ಒನ್ ಸ್ಥಾನಕ್ಕೆ ಬಂದ ನಟಿ ಇವರು. ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ ಇವರು ಈಗ ಸಕ್ರಿಯ ರಾಜಕಾರಿಣಿಯಾಗಿದ್ದಾರೆ. ಈಕೆಯ ಇತ್ತೀಚಿನ ವಿವಾದವು "ನೀರ್ ದೋಸೆ" ಚಿತ್ರಕ್ಕೆ ಸಂಬಂಧಪಟ್ಟದ್ದಾಗಿದೆ. ಈ ಚಿತ್ರದ ಸ್ಟಿಲ್ಗಳು ಆಕೆಯ ಅನುಮತಿಯಿಲ್ಲದೆ ಬಿಡುಗಡೆಯಾಗಿವೆಯಂತೆ.
ರಮ್ಯ
ಹಲವಾರು ಚಿತ್ರಗಳಲ್ಲಿ ವಿವಾದ ಮಾಡಿಕೊಂಡ ನಟಿ ಈಕೆ. ಸ್ಯಾಂಡಲ್ವುಡ್ನ ದೊಡ್ಡ ಬ್ಯಾನರ್ ಒಂದನ್ನು ಹೊರತುಪಡಿಸಿ ಎಲ್ಲಿ ಬಂದರು ಈಕೆ ವಿವಾದ ಮಾಡಿಕೊಳ್ಳುತ್ತಾರೆ ಎಂಬ ಮಾತು ಒಂದು ಕಾಲದಲ್ಲಿ ಚಾಲ್ತಿ ಇತ್ತು, ಇಂದಿಗು ಸಹ ಚಾಲ್ತಿಯಲ್ಲಿಟ್ಟಿದ್ದಾರೆ ಇವರು. ಒಮ್ಮೆ ಈಕೆ ಒಂದು ಚಿತ್ರದಲ್ಲಿ ವೇಶ್ಯೆಯ ಪಾತ್ರವನ್ನು ನಿರ್ವಹಿಸುವಾಗ, ಈಕೆಯ ಅನುಮತಿಯಿಲ್ಲದೆ ಮೂರು ಜನ ಛಾಯಾಗ್ರಾಹಕರು ಫೋಟೋವನ್ನು ತೆಗೆದರು ಎಂಬುದು ಈಕೆಯ ಅತ್ಯಂತ ದೊಡ್ಡ ವಿವಾದಗಳಲ್ಲಿ ಒಂದಾಗಿದೆ.