Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
109 ಬೀಜ ತಳಿಗಳನ್ನು ಬಿಡುಗಡೆ ಮಾಡಿದ ಮೋದಿ: ಇದರ ಹಿಂದಿದೆ ಇಷ್ಟೆಲ್ಲಾ ಅದ್ಭುತ ಲೆಕ್ಕಾಚಾರ
ಈ ವರ್ಷ ಅತಿವೃಷ್ಟಿ, ಅನಾವೃಷ್ಟಿಯೆಂದು ರೈತ ಕಂಗಲಾಗಿದ್ದಾನೆ, ಇನ್ನು ಕೆಲವು ಕಡೆ ಬೆಳೆದರು ಗುಣಮಟ್ಟದ ಬೀಜ ದೊರಕದೆ ಇಳುವರಿ ಕಡಿಮೆಯಾಗಿದೆ, ಈ ವರ್ಷ ರೈತ ಎದುರಿಸಿದ, ಎದುರಿಸುತ್ತಿರುವ ಕಷ್ಟವನ್ನು ನೋಡಿ ಕೇಂದ್ರ ಸರ್ಕಾರ ಇದೀಗ ರೈತರಿಗೆ ನೆರವಿಗೆ ಬಂದಿದೆ. ವ್ಯತಿರಿಕ್ತ ಹವಾಮಾನದಲ್ಲೂ ಕೈಹಿಡಿಯಬಲ್ಲ 109 ಬೀಜ ತಳಿಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ, ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಬೆಂಬಲವಾಗಿ ನಿ ನಿಂತುಕೊಂಡಿದೆ.

ಒಳ್ಳೆಯ ಬೀಜ ತಳಿಗಳ ಅವಶ್ಯಕತೆ ರೈತರಿಗೆ ತುಂಬಾನೇ ಇದೆ
ಹಲವಾರು ಬೀಜ ತಂದು ಉಳುಮೆ ಮಾಡಿ ಬೀಜ ಬಿತ್ತಿ ಫಸಲಿಗೆ ಕಾಯುವಾಗ ಅವರು ನಿರೀಕ್ಷೆ ಮಾಡಿದ ಬೆಳೆ ಸಿಗದೇ ಹೋದರೆ ಅವರಿಗೆ ತುಂಬಾನೇ ಕಷ್ಟ, ಅದರ ಜೊತೆಗೆ ಬೆಳೆದ ಬೆಳೆಗಳಿಗೆ ಕಾಡುವ ರೋಗಗಳು, ವ್ಯತಿರಿಕ್ತ ಹವಾಮಾನ ಎಲ್ಲವೂ ರೈತನಿಗೆ ಕೃಷಿ ಕಡೆ ಬೇಸರ ಮೂಡುವಂತೆ ಮಾಡುವುದು. ರೈತ ಬೆಳೆ ಬೆಳೆಯುವುದು ನಿಲ್ಲಿಸಿದ ಎಂದರೆ ಆಹಾರದ ಅಭಾವ ಉಂಟಾಗುವುದು, ಎಷ್ಟು ದುಡ್ಡಿದ್ದರೂ ರೈತ ಬೆಳೆ ಬೆಳೆಯದಿದ್ದರೆ ತಿನ್ನುವ ಆಹಾರಕ್ಕೆ ಪರಿದಾಡಬೇಕು, ಆಮದು ಮಾಡಿಕೊಂಡರು ಬೆಲೆಗಳು ಇನ್ನೂ ದುಬಾರಿಯಾಗುವುದು, ಮಧ್ಯಮವರ್ಗ, ಬಡ ಜನರ ಬದುಕು ದುಸ್ಥರವಾಗುವುದು ಹಾಗಾಗಿಯೇ ರೈತನನ್ನು ದೇಶದ ಬೆನ್ನುಲುಬು ಎಂದು ಕರೆಯಲಾಗುವುದು, ಬೆನ್ನಲುಬು ಮುರಿದರೆ ನೆಟ್ಟಿಗೆ ನಿಲ್ಲಲು ಸಾಧ್ಯನಾ?
ಇದನ್ನು ಮನಗಂಡ ಕೇಂದ್ರ ಸರ್ಕಾರ 109 ಬೀಜ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಅತ್ಯಧಿಕ ಇಳುವರಿ ಹಾಗೂ ಹವಾಮಾನ ನಿರೋಧಕ ಶಕ್ತಿ ಹೊಂದಿರುವ ಬೀಗಳಾಗಿದ್ದು ಈ ಬೀಜ ಬಿತ್ತಿದರೆ ಉತ್ಪಾದನೆ ಹೆಚ್ಚಾಗಲಿದೆ, ರೈತನಿಗೆ ಲಾಭವಾಗಲಿದೆ.
34 ಕ್ಷೇತ್ರ ಬೆಳೆ, 27 ತೋಟಗಾರಿಕಾ ಬೆಳೆ , ಇತರ 61 ಬೆಳೆಗಳನ್ನೊಳಗೊಂಡ 109 ಬೀಜ ತಳಿಯನ್ನು ಬಿಡುಗಡೆ ಮಾಡಿದೆ, ಈ ವಿಷಯ ಖಂಡಿತ ರೈತರಿಗೆ ಖುಷಿ ನೀಡಿದೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಕೇಂದ್ರ ಈ ಬೀಜಗಳನ್ನು ಅಭಿವೃದ್ಧಿ ಮಾಡಿದೆ. ಇದನ್ನು ವಿಜ್ಞಾನಿಗಳು ಹಲವು ಸಂಶೋಧನೆ ಮಾಡಿ ತಯಾರಿಸಿದ ಬೀಜಗಳಾಗಿದ್ದು ಅತ್ಮವಿಶ್ವಾಸದಿಂದ ಬೆಳೆ ಬೆಳೆಯಬಹುದಾಗಿದೆ, ಇದನ್ನು ಬಳಸಿದರೆ ರೈತರಿಗೆ ಆರ್ಥಿಕ ತೊಂದರೆಯಾಗಲ್ಲ, ಅವನ ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತದೆ.
ಕೃಷಿ ಕ್ಷೇತ್ರದಲ್ಲಿನ ಅಭಿವೃದ್ಧಿ ಯುವಕರನ್ನು ಆಕರ್ಷಿಸುತ್ತದೆ
ತುಂಬಾ ಜನ ಕೆಲಸ ಸಿಗುತ್ತಿಲ್ಲ ಎಂದು ಬೇಸರ ಪಡುತ್ತಿದ್ದಾರೆ, ಸ್ವಲ್ಪ ತೋಟ, ಜಮೀನು ಅಂತ ಇದ್ದರೂ ಅದರಲ್ಲಿ ಕೆಲಸ ಮಾಡಿದರೆ ಏನು ತಾನೆ ಸಿಗಲು ಸಾಧ್ಯ, ಮದುವೆ ಹೆಣ್ಣು ಸಿಗಲ್ಲ, ಮಕ್ಕಳ ವಿದ್ಯಾಭ್ಯಾಸ ಹಣ ಸಾಕಾಗುವುದಿಲ್ಲ ಎಂದು ಯೋಚಿಸಿ ನಗರದತ್ತ ವಲಸೆ ಹೋಗುತ್ತಿದ್ದಾರೆ, ಯುವಕರು ಕೂಡ ನಗರದಲ್ಲಿ ಒಂದು ಕೆಲಸ ಸಿಕ್ಕರೆ ಸಾಕು ಎಂದು ಅಂದುಕೊಂಡಿದ್ದಾರೆ, ಆದರೆ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಆದಾಯ ಗಳಿಸಲು ಸಾಧ್ಯವಾದರೆ ಯುವಕರು ಕೃಷಿಯತ್ತ ಆಕರ್ಷಿತರಾಗುತ್ತಾರೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಇರಲ್ಲ, ದೇಶದ ಆರ್ಥಿಕತೆ ಸಬಲವಾಗಿದೆ.
ಮೋದಿ ಈಗ ಅತ್ಯುತ್ತಮ ತಳಿಯ ಬೀಜಗಗಳನ್ನು ರೈತರಿಗೆ ದೊರೆಯುವಂತೆ ಮಾಡಿರುವುದು ರೈತರಿಗೆ ಮಾತ್ರ ಅನುಕೂಲಕವರಲ್ಲ, ಎಲ್ಲರಿಗೂ ಆರ್ಥಿಕವಾಗಿ ಸಹಾಯವಾಗಿದೆ, ನಮ್ಮಲ್ಲಿಯೇ ಬೆಳೆಗಳನ್ನು ಬೆಳೆದರೆ ರೇಟ್ ದುಬಾರಿಯಾಗಲ್ಲ... ಈ ಎಲ್ಲಾ ನಿಟ್ಟಿನಿಂದ ನೋಡುವುದಾದರೆ ಇದೊಂದು ಅತ್ಯುತ್ತಮವಾದ ಯೋಜನೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications