Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಿಸಿಗಾಳಿ ತಾಳದೆ ನೆಲಕ್ಕೆ ಬಿದ್ದ ಕೋತಿ ರಕ್ಷಿಸಿದ ಮಂದಿ..!
ಉತ್ತರ ಭಾರತ ಬಿಸಿ ಗಾಳಿಯಲ್ಲಿ ಕುದಿಯುತ್ತಿದೆ. ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿದೆ. ಬಿಸಿಲಿನ ತಾಪಕ್ಕೆ ಹಲವರು ಪ್ರಾಣ ಕಳೆದುಕೊಂಡಿದ್ದರೆ ನೂರಾರು ಮಂದಿ ಆಸ್ಪತ್ರೆ ಸೇರಿದ್ದಾರೆ. ಇಷ್ಟಾದರು ತಾಪಮಾನ ಇಳಿಕೆಯಾಗುವ ಲಕ್ಷಣ ಕಂಡುಬಂದಿಲ್ಲ.
ಇದರ ಜೊತೆ ಪ್ರಾಣಿ ಪಕ್ಷಿಗಳ ಪಾಡಂತು ಹೇಳತೀರದ್ದಾಗಿದೆ. ಏಕೆಂದರೆ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಈ ತಾಪದಲ್ಲಿ ಬದುಕುಳಿಯುವುದೇ ಕಷ್ಟಕರವಾಗಿದೆ. ಕಳೆದ ಎರಡು ದಿನದ ಹಿಂದೆ ಕಾಗೆಗಳು, ಬಾವಲಿಗಳು ಬಿಸಿಲಿನ ತಾಪಕ್ಕೆ ಪ್ರಾಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದಿದ್ದ ಘಟನೆಗಳು ವರದಿಯಾಗಿದ್ದವು.

ಆದ್ರೆ ಇಲ್ಲೊಂದು ಕಡೆ ಬಿಸಿಲಿನ ತಾಪಕ್ಕೆ ಕೋತಿಯೊಂದು ಮರದಿಂದ ಕೆಳಗೆ ಬಿದ್ದಿದ್ದು, ಜನರು ಅದರ ಜೀವ ಉಳಿಸಿದ್ದಾರೆ. ವಿಡಿಯೋದಲ್ಲಿ, ಜನರು ಕೋತಿಗೆ ತಣ್ಣೀರಿನಿಂದ ಮೈ ತೊಳೆದು ಅದಕ್ಕೆ ಒಆರ್ಎಸ್ ಕುಡಿಸುತ್ತಿರುವುದು ನೋಡಬಹುದು. ತಾಪಮಾನ ತಾಳಲಾಗದೆ ಆ ಕೋತಿ ಮರದಿಂದ ಬಿದ್ದು ಸಾವು ಬದುಕಿನ ನಡುವೆ ಹೋರಾಡುವಾಗ ಜನರು ಅದರ ಸಹಾಯಕ್ಕೆ ಬಂದಿದ್ಧಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹೆಚ್ಚಿನ ತಾಪಮಾನವು ಪ್ರಾಣಿಗಳು ಮತ್ತು ಪಕ್ಷಿಗಳ ಜೀವಕ್ಕೆ ಕುತ್ತು ತಂದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಕೋತಿಯನ್ನು ತಣ್ಣೀರು ಕುಡಿಸಿ ಜೀವ ಉಳಿಸಲು ಯತ್ನಿಸಿದ್ದಾರೆ. ಕೆಲವರು ORS ಕುಡಿಯುವಂತೆ ಮಾಡುತ್ತಾರೆ. ಇದು ಕೋತಿಗೆ ಮರುಜೀವ ನೀಡಿದಂತಾಗಿದೆ.
ಈ ರೀತಿ ನೀರು ಹಾಗೂ ಓಆರ್ಎಸ್ನಿಂದ ಕೋತಿಯ ಜೀವ ಉಳಿದಿದೆ. ಜನರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ಸಹ ಕೇಳಿಬಂದಿದೆ. ಇಂತಹ ಅಸಹಾಯಕ ಜೀವಿಗಳ ಪ್ರಾಣ ಉಳಿಸೋದು ಸಹ ಪುಣ್ಯದ ಕೆಲಸ. ಇಂತಹ ಕೆಲಸ ಮಾಡಿದ ಎಲ್ಲರಿಗೂ ದೇವರು ಒಳಿತು ಮಾಡುತ್ತಾನೆ ಎಂದು ನೆಟ್ಟಿಗರು ಹರಿಸಿದ್ದಾರೆ.
ಇದು ಜನರೇ ಮಾಡಿದ ಪಾಪ ಪ್ರತಿಫಲವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ನಾವು ಮರ ನೆಟ್ಟು ಅವುಗಳನ್ನು ಬೆಳೆಸುವುದು ನಮ್ಮ ಕರ್ತವ್ಯ ಆದರೆ ನಾವದನ್ನು ಮಾಡುತ್ತಿಲ್ಲ. ಈಗ ನಾವೇ ಅದನ್ನು ಅನುಭವಿಸಬೇಕಾಗಿದೆ. ಇದಕ್ಕೆಲ್ಲ ಪರಿಹಾ ಮರ ಬೆಳೆಸಿ, ನೀರು ಉಳಿಸುವುದು ಎಂದು ಬರೆದಿದ್ದಾರೆ.
'ನಾವು ಮನುಷ್ಯರು ಮತ್ತು ನಾವು ಸುಲಭವಾಗಿ ಫ್ಯಾನ್ಗಳು, ಕೂಲರ್ಗಳು ಮತ್ತುಎಸಿಗಳ ಅಡಿ ಬದುಕುತ್ತೇವೆ. ಈ ಬಡ ಪ್ರಾಣಿಗಳಿಗೆ ಏನು ಮಾಡಬೇಕೆಂದು ಅರ್ಥವಾಗುತ್ತಿಲ್ಲ. ಈ ದಿನಗಳಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಅವರಿಗೆ ಸಹಾಯ ಮಾಡಲು ಸಿದ್ಧರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಸಹ ಇಂತಹದ್ದೆ ಘಟನೆಯೊಂದು ನಡೆದಿತ್ತು. ಉತ್ತರ ಪ್ರದೇಶದ ಬುಲಂದ್ಶಹರ್ನ ಛಾತಾರಿಯಲ್ಲಿ ಹೀಟ್ ಸ್ಟ್ರೋಕ್ನಿಂದ ಕೋತಿಯೊಂದು ನೆಲಕ್ಕೆ ಬಿದ್ದಿತ್ತು. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ವಿಕಾಸ್ ತೋಮರ್ ಮೂರ್ಛೆ ಹೋದ ಮರಿ ಕೋತಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದರು.
ಅವರು ಕೋತಿಯ ಎದೆಯನ್ನು ನಿರಂತರವಾಗಿ ಒತ್ತಿ ಅದು ಮತ್ತೆ ಉಸಿರಾಡುವಂತೆ ಮಾಡಿದ್ದರು. ಇದರಿಂದ ಮತ್ತೆ ಜೀವ ಪಡೆದುಕೊಂಡಿತು. ಈ ಕಾರ್ಯಕ್ಕೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪೊಲೀಸ್ ಜೀವ ರಕ್ಷಕನಾಗಿ ಕೋತಿಯ ಉಳಿಸಿದ್ದ. ಅವರ ಕಾರ್ಯ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಪ್ರಶಂಸೆ ಗಳಿಸಿತ್ತು.
ಕೋತಿಗೆ ಸಿಪಿಆರ್ ಮಾಡಿದ್ದಲ್ಲದೆ ಅದಕ್ಕೆ ನೀರು ಕುಡಿಸಿ ಅದರ ಜೀವ ಉಳಿಸಿದ ಪೊಲೀಸ್ ಕಾರ್ಯ ಮೆಚ್ಚುಗೆ ಗಳಿಸಿದ್ದಲ್ಲದೆ. ಈ ರೀತಿಯ ತಾಪಮಾನ ಏರಿಕೆಗೆ ನೇರವಾಗಿ ಕಾರಣರಾದ ಮಾನವರ ಕೃತ್ಯ ಖಂಡಿಸಲಾಗಿತ್ತು. ಪ್ರಾಣಿಗಳು ಎಂದಿಗೂ ಪರಿಸರ ಹಾನಿ ಮಾಡುವುದಿಲ್ಲ ಇದೆಲ್ಲಾ ಮಾನವನ ಅತಿ ಆಸೆಯ ಪ್ರತಿಫಲ ಎಂದು ಜನರು ಆಕ್ರೋಶ ಹೊರಹಾಕಿದ್ದರು.



Click it and Unblock the Notifications