Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪರಮ ಏಕಾದಶಿ 2023 : ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವವೇನು?
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಏಕಾದಶಿಯನ್ನು ಪರಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯನ್ನು ಮಾಡೋದ್ರಿಂದ ನೀವು ಅನೇಕ ಶುಭ ಫಲಗಳನ್ನು ಪಡೆದುಕೊಳ್ಳಬಹುದು. ಈ ದಿನವನ್ನು ಕಮಲ ಅಥವಾ ಪುರುಷೋತ್ತಮಿ ಏಕಾದಶಿ ಅಂತಲೂ ಕರೆಯುತ್ತಾರೆ.
ಪರಮ ಏಕಾದಶಿಯಂದು ಭಗವಾನ್ ವಿಷ್ಣುವಿನ ಆರಾಧನೆ ಮಾಡೋದ್ರಿಂದ ನಮ್ಮ ದುಃಖ ಹಾಗೂ ಬಡತನಗಳು ನಿಗ್ರಹವಾಗುತ್ತೆ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಪರಮ ಏಕಾದಶಿ ಯಾವಾಗ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಪರಮ ಏಕಾದಶಿ ದಿನಾಂಕ :
ಶ್ರಾವಣ ಮಾಸದ ಎರಡನೇ ಏಕಾದಶಿಯಂದು ಪರಮ ಏಕಾದಶಿಯ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಆಗಸ್ಟ್ 12 ರ ಶನಿವಾರದಂದು ಈ ಶುಭ ದಿನವನ್ನು ಆಚರಿಸಲಾಗುತ್ತದೆ. ಪರಮ ಏಕಾದಶಿಯಂದು ಐದು ದಿನ ಉಪವಾಸ ಮಾಡಬೇಕೆಂಬ ನಿಯಮವಿದೆ. ಶ್ರಾವಣ ಮಾಸದ ಏಕಾದಶಿಯ ಪಂಚರಾತ್ರಿಯು ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಈ ಏಕಾದಶಿಯು ಪರಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ, ಕಾರಣ ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದ್ರೆ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದಂತೆ.
ಪರಮ ಏಕಾದಶಿ ಮುಹೂರ್ತ :
ಪಂಚಾಂಗದ ಪ್ರಕಾರ ಅಧಿಕಮಾಸದ ಕೃಷ್ಣ ಪಕ್ಷದ ಪರಮ ಏಕಾದಶಿಯು ಆಗಸ್ಟ್ 11 ಬೆಳಿಗ್ಗೆ 05.06 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಆಗಸ್ಟ್ 12 ರ ಬೆಳಿಗ್ಗೆ 06.31 ಕ್ಕೆ ಕೊನೆಗೊಳ್ಳುತ್ತದೆ.
ಪೂಜಾ ಸಮಯ - ಬೆಳಗ್ಗೆ 07.28 ರಿಂದ ಬೆಳಗ್ಗೆ 09.07ರವರಗೆ
ಪರಮ ಏಕಾದಶಿಯ ವ್ರತ ಪಾರಾಯಣ ಸಮಯ :
ಶ್ರಾವಣ ಪರಮ ಏಕಾದಶಿಯ ಉಪವಾಸವನ್ನು ಆಗಸ್ಟ್ 13 ರಂದು ಬೆಳಿಗ್ಗೆ 05.49 ರಿಂದ ಬೆಳಗ್ಗೆ 08.19 ರವರೆಗೆ ಆಚರಿಸಲಾಗುತ್ತದೆ.
ಪರಮ ಏಕಾದಶಿ ಮಹತ್ವವೇನು?
ದಂತಕಥೆಗಳ ಪ್ರಕಾರ ಶಂಕರನು ಪರಮ ಏಕಾದಶಿ ವ್ರತವನ್ನು ಆಚರಿಸುವ ಮೂಲಕ ಕುಬೇರನನ್ನು ಸಂಪತ್ತಿನ ಮುಖ್ಯಸ್ಥನನ್ನಾಗಿ ಮಾಡಿದನು. ಈ ವ್ರತದ ಪ್ರಭಾವದಿಂದ ಸತ್ಯವಂತ ರಾಜ ಹರಿಶ್ಚಂದ್ರನಿಗೆ ಪುತ್ರ, ಪತ್ನಿ, ರಾಜ್ಯ ಪುನಃ ಲಭಿಸಿತು. ಕೌಂಡಿನ್ಯ ಋಷಿಯ ವಾಗ್ದಾನದಂತೆ ಬ್ರಾಹ್ಮಣ ಮತ್ತು ಅವನ ಪತ್ನಿ ಪರಮ ಏಕಾದಶಿಯಂದು ಐದು ದಿನಗಳ ಕಾಲ ಉಪವಾಸ ಮಾಡಿದರು. ಈ ಏಕಾದಶಿಯಂದು ಐದು ದಿನಗಳ ಕಾಲ ಸ್ವರ್ಣದಾನ, ವಿದ್ಯಾದಾನ, ಅನ್ನದಾನ, ಭೂದಾನ, ಗೋದಾನವನ್ನು ಮಾಡಬೇಕು. ಇದರಿಂದ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಪರಮ ಏಕಾದಶಿ ಉಪವಾಸ ಮತ್ತು ಪೂಜಾ ವಿಧಾನವೇನು?
* ಪರಮ ಏಕಾದಶಿಯ ದಿನದಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.
* ಇದರ ನಂತರ ನಿಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಿ
* ನಂತರ ವಿಷ್ಣುವಿನ ಆರಾಧನೆ ಮಾಡಿ
* ಬ್ರಾಹ್ಮಣರಿಗೆ ಫಲ ಆಹಾರವನ್ನು ಅರ್ಪಿಸಿ ಮತ್ತು ಅವರಿಗೆ ದಕ್ಷಿಣೆಯನ್ನು ನೀಡಿ
* ಈ ದಿನ ಪರಮ ಏಕಾದಶಿ ವ್ರತ ಕಥಾವನ್ನು ಕೇಳಿ
* ಪಾರಣ ಮುಹೂರ್ತದಲ್ಲಿ ದ್ವಾದಶಿಯ ದಿನದಂದು ಏಕಾದಶಿ ಉಪವಾಸವನ್ನು ಮಾಡಿ
ಪರಮ ಏಕಾದಶಿಯ ದಿನ ನೀವು ಸಂಪೂರ್ಣವಾಗಿ ದೇವರ ಧ್ಯಾನದಲ್ಲಿ ತಲ್ಲೀನರಾಗಿದ್ದರೆ ನೀವು ಸಲ್ಲಿಸಿದ ಪೂಜೆ ಸಂಪೂರ್ನ ಫಲವನ್ನು ಪಡೆದುಕೊಳ್ಳಬಹುದು.



Click it and Unblock the Notifications