Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಪರಮ ಏಕಾದಶಿ 2023 : ಶುಭ ಮುಹೂರ್ತ, ಪೂಜಾ ವಿಧಿ, ಮಹತ್ವವೇನು?
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಏಕಾದಶಿಯನ್ನು ಪರಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯನ್ನು ಮಾಡೋದ್ರಿಂದ ನೀವು ಅನೇಕ ಶುಭ ಫಲಗಳನ್ನು ಪಡೆದುಕೊಳ್ಳಬಹುದು. ಈ ದಿನವನ್ನು ಕಮಲ ಅಥವಾ ಪುರುಷೋತ್ತಮಿ ಏಕಾದಶಿ ಅಂತಲೂ ಕರೆಯುತ್ತಾರೆ.
ಪರಮ ಏಕಾದಶಿಯಂದು ಭಗವಾನ್ ವಿಷ್ಣುವಿನ ಆರಾಧನೆ ಮಾಡೋದ್ರಿಂದ ನಮ್ಮ ದುಃಖ ಹಾಗೂ ಬಡತನಗಳು ನಿಗ್ರಹವಾಗುತ್ತೆ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಪರಮ ಏಕಾದಶಿ ಯಾವಾಗ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಪರಮ ಏಕಾದಶಿ ದಿನಾಂಕ :
ಶ್ರಾವಣ ಮಾಸದ ಎರಡನೇ ಏಕಾದಶಿಯಂದು ಪರಮ ಏಕಾದಶಿಯ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಆಗಸ್ಟ್ 12 ರ ಶನಿವಾರದಂದು ಈ ಶುಭ ದಿನವನ್ನು ಆಚರಿಸಲಾಗುತ್ತದೆ. ಪರಮ ಏಕಾದಶಿಯಂದು ಐದು ದಿನ ಉಪವಾಸ ಮಾಡಬೇಕೆಂಬ ನಿಯಮವಿದೆ. ಶ್ರಾವಣ ಮಾಸದ ಏಕಾದಶಿಯ ಪಂಚರಾತ್ರಿಯು ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಈ ಏಕಾದಶಿಯು ಪರಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ, ಕಾರಣ ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದ್ರೆ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದಂತೆ.
ಪರಮ ಏಕಾದಶಿ ಮುಹೂರ್ತ :
ಪಂಚಾಂಗದ ಪ್ರಕಾರ ಅಧಿಕಮಾಸದ ಕೃಷ್ಣ ಪಕ್ಷದ ಪರಮ ಏಕಾದಶಿಯು ಆಗಸ್ಟ್ 11 ಬೆಳಿಗ್ಗೆ 05.06 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಆಗಸ್ಟ್ 12 ರ ಬೆಳಿಗ್ಗೆ 06.31 ಕ್ಕೆ ಕೊನೆಗೊಳ್ಳುತ್ತದೆ.
ಪೂಜಾ ಸಮಯ - ಬೆಳಗ್ಗೆ 07.28 ರಿಂದ ಬೆಳಗ್ಗೆ 09.07ರವರಗೆ
ಪರಮ ಏಕಾದಶಿಯ ವ್ರತ ಪಾರಾಯಣ ಸಮಯ :
ಶ್ರಾವಣ ಪರಮ ಏಕಾದಶಿಯ ಉಪವಾಸವನ್ನು ಆಗಸ್ಟ್ 13 ರಂದು ಬೆಳಿಗ್ಗೆ 05.49 ರಿಂದ ಬೆಳಗ್ಗೆ 08.19 ರವರೆಗೆ ಆಚರಿಸಲಾಗುತ್ತದೆ.
ಪರಮ ಏಕಾದಶಿ ಮಹತ್ವವೇನು?
ದಂತಕಥೆಗಳ ಪ್ರಕಾರ ಶಂಕರನು ಪರಮ ಏಕಾದಶಿ ವ್ರತವನ್ನು ಆಚರಿಸುವ ಮೂಲಕ ಕುಬೇರನನ್ನು ಸಂಪತ್ತಿನ ಮುಖ್ಯಸ್ಥನನ್ನಾಗಿ ಮಾಡಿದನು. ಈ ವ್ರತದ ಪ್ರಭಾವದಿಂದ ಸತ್ಯವಂತ ರಾಜ ಹರಿಶ್ಚಂದ್ರನಿಗೆ ಪುತ್ರ, ಪತ್ನಿ, ರಾಜ್ಯ ಪುನಃ ಲಭಿಸಿತು. ಕೌಂಡಿನ್ಯ ಋಷಿಯ ವಾಗ್ದಾನದಂತೆ ಬ್ರಾಹ್ಮಣ ಮತ್ತು ಅವನ ಪತ್ನಿ ಪರಮ ಏಕಾದಶಿಯಂದು ಐದು ದಿನಗಳ ಕಾಲ ಉಪವಾಸ ಮಾಡಿದರು. ಈ ಏಕಾದಶಿಯಂದು ಐದು ದಿನಗಳ ಕಾಲ ಸ್ವರ್ಣದಾನ, ವಿದ್ಯಾದಾನ, ಅನ್ನದಾನ, ಭೂದಾನ, ಗೋದಾನವನ್ನು ಮಾಡಬೇಕು. ಇದರಿಂದ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಪರಮ ಏಕಾದಶಿ ಉಪವಾಸ ಮತ್ತು ಪೂಜಾ ವಿಧಾನವೇನು?
* ಪರಮ ಏಕಾದಶಿಯ ದಿನದಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.
* ಇದರ ನಂತರ ನಿಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಿ
* ನಂತರ ವಿಷ್ಣುವಿನ ಆರಾಧನೆ ಮಾಡಿ
* ಬ್ರಾಹ್ಮಣರಿಗೆ ಫಲ ಆಹಾರವನ್ನು ಅರ್ಪಿಸಿ ಮತ್ತು ಅವರಿಗೆ ದಕ್ಷಿಣೆಯನ್ನು ನೀಡಿ
* ಈ ದಿನ ಪರಮ ಏಕಾದಶಿ ವ್ರತ ಕಥಾವನ್ನು ಕೇಳಿ
* ಪಾರಣ ಮುಹೂರ್ತದಲ್ಲಿ ದ್ವಾದಶಿಯ ದಿನದಂದು ಏಕಾದಶಿ ಉಪವಾಸವನ್ನು ಮಾಡಿ
ಪರಮ ಏಕಾದಶಿಯ ದಿನ ನೀವು ಸಂಪೂರ್ಣವಾಗಿ ದೇವರ ಧ್ಯಾನದಲ್ಲಿ ತಲ್ಲೀನರಾಗಿದ್ದರೆ ನೀವು ಸಲ್ಲಿಸಿದ ಪೂಜೆ ಸಂಪೂರ್ನ ಫಲವನ್ನು ಪಡೆದುಕೊಳ್ಳಬಹುದು.



Click it and Unblock the Notifications