Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
ಅಕ್ಟೋಬರ್ 25ಕ್ಕೆ ಪಾಪಾಂಕುಶ ಏಕಾದಶಿ: ಪೂಜಾ ಮುಹೂರ್ತ ಯಾವಾಗ, ಈ ವ್ರತ ಕತೆ ಓದಿದರೆ ಒಳ್ಳೆಯದು
ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ತುಂಬಾ ಶ್ರೇಷ್ಠ ದಿನ. ಈ ದಿನ ಶ್ರೀ ವಿಷ್ಣುವನ್ನು ಉಪವಾಸವಿದ್ದು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು. ಅಕ್ಟೋಬರ್ 25ಕ್ಕೆ ಪಾಪಾಂಕುಶ ಏಕಾದಶಿ. ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ.

ಪಾಪಾಂಕುಶ ಏಕಾದಶಿ ಪೂಜಾ ಮುಹೂರ್ತ
ದಿನಾಂಕ: ಅಕ್ಟೋಬರ್ 25
ಏಕಾದಶಿ ತಿಥಿ ಅಕ್ಟೋಬರ್ 24 ಮಧ್ಯಾಹ್ನ 03:14ಕ್ಕೆ ಆರಂಭವಾಗಿದೆ
ಏಕಾದಶಿ ತಿಥಿ ಅಕ್ಟೋಬರ್ 25 ಮಧ್ಯಾಹ್ನ 12:32ಕ್ಕೆ ಮುಕ್ತಾಯವಾಗುತ್ತದೆ
ಪಾರಣ ಏಕಾದಶಿ: ಅಕ್ಟೋಬರ್ 26 ಬೆಳಗ್ಗೆ 06:28ರಿಂದ 08:43ರವರೆಗೆ
ಈ ದಿನ ಏನು ಮಾಡಬೇಕು?
* ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವನ್ನು ಆರಾಧಿಸಬೇಕು.
* ಈ ದಿನ ಪಾಪಾಂಕುಶ ಏಕಾದಶಿ ಕತೆ ಓದಿದರೆ ಅಥವಾ ಕೇಳಿದರೆ ಒಳ್ಳೆಯದು.
* ಸಂಜೆ ವಿಷ್ಣು ಸಹಸ್ರನಾಮ ಪಠಿಸಿ
* ಆರತಿ ಮಾಡಿದ ಸಾತ್ವಿಕ ಆಹಾರ ಸೇವಿಸಿ
ಈ ದಿನ ಏನು ಮಾಡಬಾರದು?
* ಈ ದಿನ ಕೋಪಗೊಳ್ಳಬಾರದು
* ಕೆಟ್ಟ ಕೆಲಸ ಮಾಡಬಾರದು
* ಮಾಂಸಾಹಾರ, ಮದ್ಯ ಸೇವನೆ ಮಾಡಬಾರದು
ಆಶ್ವಿನ್ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪಾಪಾಂಕುಶ ಏಕಾದಶಿ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲಿ ಈ ಪಾಪಾಂಕುಶ ಏಕಾದಶಿಯ ಮಹತ್ವದ ಬಗ್ಗೆ ಉಲ್ಲೇಖವಿದೆ. ಯುಧಿಷ್ಠರ ಶ್ರೀಕೃಷ್ಣನ ಬಳಿ ಪಾಪಾಂಕುಶ ಏಕಾದಶಿಯ ಮಹತ್ವದ ಬಗ್ಗೆ ಕೇಳುತ್ತಾನೆ, ಆಗ ಶ್ರೀ ಕೃಷ್ಣ ಪರಮಾತ್ಮನು ಪಾಪಾಂಕುಶ ಏಕಾದಶಿಯ ಮಹತ್ವದ ಕುರಿತು ಈ ಕತೆಯನ್ನು ಹೇಳುತ್ತಾನೆ....
ಪಾಪಾಂಕುಶ ಏಕಾದಶಿಯ ಕತೆ
ವಿಂಧ್ಯ ಪರ್ವತದ ಮೇಲೆ ಕ್ರೋಧನ ಎಂಬ ಬೇಟೆಗಾರನಿದ್ದ. ಅವನು ತುಂಬಾ ಕ್ರೂರಿ, ಅವನು ತುಂಬಾ ಪಾಪಗಳನ್ನು ಮಾಡುತ್ತಿದ್ದ. ಅವನ ಪಾಪದ ಕೊಡ ತುಂಬಿದ ಮೇಲೆ ಯಮಧೂತರು ಆತನ ಬಳಿ ಬರುತ್ತಾರೆ. ಯಮಧೂತರು ನಾಳೆ ನಿನ್ನ ಪ್ರಾಣ ಹೋಗಲಿದೆ ಎಂದು ಹೇಳಿ ಹೋಗುತ್ತಾರೆ. ಇದನ್ನು ಕೇಳಿದ ಆ ಕ್ರೂರಿಗೂ ಭಯ ಉಂಟಾಗುವುದು. ಆ ಕೊನೆಯ ಕ್ಷಣದಲ್ಲಿ ಆತನಿಗೆ ತಾನು ಮಾಡಿದ ಪಾಪದ ಅರಿವು ಉಂಟಾಗುತ್ತದೆ. ಆವಾಗ ಆತ ಪಾಪದಿಮದ ಮುಕ್ತನಾಗಲು ಬಯಸುತ್ತಾನೆ. ಆವಾಗ ಅಲ್ಲಿಗೆ ಬರುವ ಋಷಿ ಅವನಿಗೆ ಪಾಪಾಂಕುಶ ಏಕಾದಶಿ ಕುರಿತು ಮಹತ್ವದ ಕುರಿತು ತಿಳಿಸುತ್ತಾರೆ. ಅದರಂತೆ ಕ್ರೋಧನ ಪಾಪಾಂಕುಶ ಏಕಾದಶಿ ವ್ರತ ಮಾಡುತ್ತಾನೆ ಇದರಿಂದ ಆತನ ಪಾಪಗಳು ದೂರಾಗುವುದು. ಯಮಧೂತರು ಬರುತ್ತಾರೆ, ನೋಡಿದರೆ ಆತ ಪಾಪಮುಕ್ತನಾಗಿರುತ್ತಾನೆ, ಆತನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ.
ಪಾಪಾಂಕುಶ ಏಕಾದಶಿಯಂದು ಈ ಮಂತ್ರ ಪಠಿಸಿ
ಶಾಂತಾಕಾರಂ ಭುಜಂಗಶಯನಂ ಪದ್ಮನಾಭಂ ಸುರೇಶಂ|
ವಿಶ್ವಧರಂ ಗಗನ ಸದೃಶಂ ಮೇಘವರ್ಣ ಶುಭಾಂಗಂ|
ಲಕ್ಷ್ಮೀಕಾಂತ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣು ಭವಭಯಹರಂ ಸರ್ವ ಲೋಕೈಕನಾಥಂ||
ಯಂ ಬ್ರಹ್ಮ ವರುಣೈಂದ್ರು ರುದ್ರಮೃತಃ ಸ್ತುನ್ವಾನಿ ದಿವ್ಯೈ ಸ್ತವೈವೇದೇಃ|
ಸಾಂಗ ಪದಕ್ರಮೋಪನಿಷದೈ ಗಾರ್ಯಂತಿ ಯಂ ಸಾಮಗಾಃ||
ಧ್ಯಾನಾವಸ್ಥಿತ ತದ್ಗತೇನ್ ಮನಸಾ ಪಶ್ಯತಿ ಯಂ ಯೋಗಿನೋ|



Click it and Unblock the Notifications