Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
ಕೊ*ಯಾಗಿದ್ದ ಆ ನರ್ಸ್ ಮನೆಯಲ್ಲಿ ಸಿಕ್ಕಿತ್ತು 500 ಬಳಸಿದ ಕಾ...ಮ್ಗಳು: ಆಕೆಯ ಕರಾಳ ಕತೆ ಕೇಳಿ ಜನರು ದಂಗಾಗಿದ್ದರು
2021ರಲ್ಲಿ ತಮಿಳಿನಾಡಿನಲ್ಲಿ ಸೆಲ್ವಿ ಎಂಬ ಮಹಿಳೆ ಕೊ* ನಡೆಯುತ್ತೆ, ಆಕೆ ತಂಗಿದ್ದ ಮನೆಯೊಳಗೆ ಆಕೆಯ ಮೃತ ದೇಹ ಅರೆಬೆತ್ತಲೆಯಾಗಿ ಮಲಗಿತ್ತು, ಮೊದಲಿಗೆ ಯಾರೋ ಆಕೆಯನ್ನು ಬಲ..ರ ಮಾಡಿ ಕೊಂದಿರಬಹುದು ಅಥವಾ ಹಣ, ಒಡವೆಗಾಗಿ ಆ ಕೊ* ನಡೆದಿರಬಹುದು ಎಂದು ಊಹಿಸಿದ್ದರು, ಆದರೆ ಪೊಲೀಸರಿಗೆ ಇನ್ನೂ ಹಲವು ಸಂಶಯ ಮೂಡುತ್ತೆ ಆಗ ತಿಳಿದು ಬಂದಿದ್ದೆ ಸೆಲ್ವಿ ಎಂಬ ಮಹಿಳೆ ಪುರುಷ ದಾಹದ ಕತೆ, ಆಕೆ ಸಂಪರ್ಕದಲ್ಲಿದ್ದರು 150ಕ್ಕೂ ಅಧಿಕ ಪುರುಷರು, 500ಕ್ಕೂ ಅಧಿಕ ಬಳಸಿದ ಕಾಂಡೋಮ್ ಆಕೆ ಸತ್ತು ಬಿದ್ದಿದ್ದ ಮನೆಯಲ್ಲಿತ್ತು.

ಅಪ್ಪಟ ಗೃಹಿಣಿಯ ಸೋಗಿನಲ್ಲಿದ್ದಳು ಸೆಲ್ವಿ
ಸೆಲ್ವಿಗೆ ಗಂಡನಿದ್ದ, ಮಕ್ಕಳಿದ್ದರು, ಆದರೆ ಈಕೆ ಕೆಲಸದ ಕಾರಣದಿಂದಾಗಿ ಪತಿ-ಮಕ್ಕಳ ಜೊತೆ ವಾಸುತ್ತಿರಲಿಲ್ಲ, ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಮನೆ ಮಾಡಿ ಒಂಟಿಯಾಗಿದ್ದಳು, ಆಕೆಯ ಮನೆಯವರಿಗಷ್ಟೇ ಆಕೆ ಅಲ್ಲಿ ಒಂಟಿಯಾಗಿದ್ದಳು, ಆದರೆ ಈಕೆಗೆ ಸಾಕಷ್ಟು ಪುರುಷರ ಜೊತೆ ಸಂಪರ್ಕವಿತ್ತು, ಅದಕ್ಕೆ ಸಾಕ್ಷಿಯಾಗಿದ್ದು ಅವಳ ಮನೆಯಲ್ಲಿ ಸಿಕ್ಕ ಬಳಸಿದ್ದ 500 ಕಾಂಡೋಮ್ಗಳು. ಆಕೆಯ ಕಾಮದಾಹಕ್ಕೆ ಸಾಕ್ಷಿ ಎಂಬಂತೆ ಅವುಗಳು ಅಲ್ಲಿದ್ದವು.
ಸರ್ಕಾರಿ ಆಸ್ಪತ್ರೆಯಲ್ಲಿ ಸೀನಿಯರ್ ನರ್ಸ್ ಆಗಿದ್ದಳು ಸೆಲ್ವಿ
ಸೆಲ್ವಿಗೆ ಹೇಳಿಕೊಳ್ಳುವುದಕ್ಕೆ ಒಳ್ಳೆಯ ಕೆಲಸ ಇತ್ತು, ಆದರೆ ಪರಿ ಜೊತೆ ಭಿನ್ನಾಭಿಪ್ರಾಯದ ಕಾರಣ ದೂರ ವಾಸ ಮಾಡುತ್ತಿದ್ದಳು, ಮಕ್ಕಳು ಗಂಡನ ಜೊತೆಯೇ ಇದ್ದರು, ಫೋನ್ ಮಾಡಿ ಮಾತನಾಡುತ್ತಿದ್ದರು, ಗಂಡನೂ ಫೋನ್ ಮಾಡಿ ಮಾತನಾಡುತ್ತಿದ್ದ, ಅದರಂತೆ ಪತಿ ಆಕೆಗೆ ಆ ದಿನವೂ ಕರೆ ಮಾಡಿದ ಆದರೆ ಆಕೆ ಕರೆ ಸ್ವೀಕರಿಸಲಿಲ್ಲ, ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಟ್ರೈ ಮಾಡ್ತಾನೆ ಆದರೆ ಕರೆ ಸ್ವೀಕರಿಸುವುದಿಲ್ಲ, ನಂತರ ಅದೇ ಊರಿನಲ್ಲಿದ್ದ ಪರಿಚಯದವರಿಗೆ ಕರೆ ಮಾಡಿ ಆಕೆ ಮನೆಯಲ್ಲಿ ಇದ್ದಾರಾ ನೋಡಿ ಎದು ಹೇಳುತ್ತಾರೆ, ಅವರು ಬಂದು ಕಿಟಕಿಯಿಂದ ನೋಡಿದಾಗ ಸೆಲ್ವಿಯ ರಕ್ತಸಿಕ್ತ ಉಡುಪು ಕಾಣುತ್ತೆ, ಕೂಡಲೇ ಪೊಲೀಸರಿಗೆ ವಿಷಯ ತಿಳಿಸುತ್ತಾರೆ, ಅವರು ಬಂದು ನೋಡಿದಾಗ ಈಕೆಯ ಮೃತ ದೇಹ ಪತ್ತೆಯಾಗುತ್ತೆ. ಅಯ್ಯೋ ಆಕೆಯನ್ನುಯಾರೋ ಅನ್ಯಾಯವಾಗಿ ಕೊಂದು ಹಾಕಿದರು ಎಂದು ಮನೆಯವರು ಗೋಳಾಡುತ್ತಾರೆ, ಆದರೆ ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯ ಕರಾಳ ಚರಿತ್ರೆಅನಾವರಣವಾಗುತ್ತೆ, ಮನೆಯವರು ಅವಮಾನದಿಂದ ತಲೆ ತಗ್ಗಿಸುವಂತಾಗುವುದು.
ಸಾಯುವ ಮೊದಲು ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂತು
ಪೊಲೀಸರು ಆಕೆಯ ಮೊಬೈಲ್ ಪರಿಶೀಲಿಸಿದಾಗ ಆಕೆಗೆ ತುಂಬಾ ಪುರುಷರ ಜೊತೆ ಸಂಪರ್ಕದಲ್ಲಿರುವುದು ತಿಳಿದು ಬರುತ್ತೆ, ಅವರನ್ನೆಲ್ಲಾ ಕರೆಸಿ ವಿಚಾರಣೆ ಮಾಡಲಾಗುವುದು, ಅವರಲ್ಲಿ ರಾಮಚಂದ್ರ ಪ್ರಭು ಎಂಬ ವ್ಯಕ್ತಿಯ ಮೇಲೆ ಸಂಶಯ ಮೂಡುತ್ತೆ, ಆದರೆ ಆ ವ್ಯಕ್ತಿ ಫೋನ್ ಸಂಪರ್ಕಕ್ಕೆ ಸಿಗುವುದಿಲ್ಲ, ಆತನ ಪತ್ನಿ ಪತಿಯನ್ನು ಹುಡುಕಿಕೊಡಿ ಎಂದು ಪೊಲೀಸರ ಬಳ ಕೇಳುತ್ತಾಳೆ.
ಪೊಲೀಸರಿಗೆ ಆತನೇ ಕೊ* ಮಾಡಿರಬಹುದು ಎಂಬ ಸಂಶಯ ಬಲವಾಗುತ್ತೆ, ಆತನಿಗೆ ಈ ನರ್ಸ್ ಜೊತೆಗೆ ಅನೈತಿಕ ಸಂಬಂಧವಿರುವುದು ತಿಳಿಯುತ್ತೆ, ಆತನ ಪತ್ತೆಗೆ ಪೊಲೀಸರು ಮುಂದಾಗುತ್ತಾರೆ, ಆತನ ಶವ ಸಿಗುತ್ತೆ, ಆತನೂ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಆತನಿಗೆ ಈ ನರ್ಸ್ ಜೊತೆ ಸಂಬಂಧವಿತ್ತು, ಈಕೆಯೂ ಆತನಿಂದ ಸಾಕಷ್ಟು ಹಣ ಪಡೆದಿದ್ದಳು, ಆತನಿಗೆ ಹಣದ ಸಮಸ್ಯೆ ಬಂದಾಗ ಈಕೆ ಬಳಿ ಹಣ ಕೇಳಿದರೆ ಈಕೆ ಕೊಡುವುದಿಲ್ಲ ಇಬ್ಬರ ನಡುವೆ ಜಗಳವಾಗುತ್ತೆ, ಆತ ಆಕೆಯ ಕತೆ ಮುಗಿಸಿ ಬಿಡುತ್ತಾನೆ, ನಂತರ ಹೆದರಿ ತಾನೂ ಆತ್ಮಹತ್ಯೆ
ಮಾಡಿಕೊಂಡು ಬಿಡುತ್ತಾನೆ.
ದಾರಿ ತಪ್ಪಿ ನಡೆದ ಇಬ್ಬರ ಬದುಕು ಕೊನೆಯಾಗುತ್ತೆ. ಕ್ಷಣಿಕ ಸುಖಕ್ಕೆ, ಹಣದಾಸೆಗೆ ಆಸೆ ಪಟ್ಟರೆ ಅವರು ಯಾವತ್ತೂ ಸುಖವಾಗಿ ಬಾಳಲು ಸಾಧ್ಯವೇ ಇಲ್ಲ.



Click it and Unblock the Notifications