Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಮಾಜಿಕ ಜಾಲತಾಣ ನಿಷೇಧ ಹಿಂಪಡೆದ ನೇಪಾಳ: ಅಷ್ಟಕ್ಕೂ ಬ್ಯಾಕ್ ಮಾಡಿದ್ದೇಕೆ ಗೊತ್ತಾ?
ಯುವ ಜನತೆ ಸಾಮಾಜಿಕ ಜಾಲತಾಣ ಆ್ಯಪ್ಗಳಿಗೆ ಎಷ್ಟು ಒಗ್ಗಿಕೊಂಡಿದ್ದಾರೆ ಅನ್ನೋದಕ್ಕೆ ನೇಪಾಳವನ್ನು ಸಾಕ್ಷಿಯಾಗಿ ನೋಡಬಹುದು. ಅಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದನ್ನು ಖಂಡಿಸಿ ಇಡೀ ಯುವ ಸಮುದಾಯ ರಸ್ತೆಗಿಳಿದು ಪ್ರತಿಭಟನೆ ನಡೆಸಿತ್ತು. ಅಷ್ಟೇ ಅಲ್ಲ ಈ ಪ್ರತಿಭಟನೆ ಹಿಂಸಾರೂಪ ಪಡೆದಿರುವುದಲ್ಲದೆ. ಪೊಲೀಸರ ದಾಳಿಗೆ 19 ಮಂದಿ ಮತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನೇಪಾಳದಲ್ಲಿ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ಸೈಟ್ ಹಾಗೂ ಆ್ಯಪ್ಗಳನ್ನು ಬ್ಯಾನ್ ಮಾಡಲಾಗಿತ್ತು. ಫೇಸ್ಬುಕ್, ಇನ್ಸ್ಸ್ಟಾಗ್ರಾಮ್, ವಾಟ್ಸಾಪ್, ಎಕ್ಸ್, ಲಿಂಕ್ಡಿನ್, ವಿ ಚಾಟ್ ಸೇರಿದಂತೆ ಹಲವು ಆ್ಯಪ್ಗಳು ಬ್ಯಾನ್ ಆಗಿದ್ದವು. ಸರ್ಕಾರದ ಈ ನಿರ್ಧಾರದಿಂದ ಅಲ್ಲಿನ ಪೋಷಕರು ಸಂತಸ ಪಟ್ಟಿದ್ದರು, ಆದ್ರೆ ಯುವ ಸಮುದಾಯ ಟೀಕಿಸಿದ್ದಲ್ಲದೆ ದೊಡ್ಡ ಮಟ್ಟದ ಹೋರಾಟಕ್ಕಿಳಿದಿತ್ತು.

ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದವು, ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಾಗೆ ಪೊಲೀಸರು ಲಾಠಿ ಪ್ರಹಾರ ನಡೆದಿದ್ದರು. ಆದ್ರೆ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಹಾಗೆ ಈ ಸೋಶಿಯಲ್ ಮೀಡಿಯಾ ಮೇಲಿನ ನಿರ್ಬಂಧವನ್ನು ಈಗ ತೆರವುಗೊಳಿಸಲಾಗಿದೆ.
ಸೋಶಿಯಲ್ ಮೀಡಿಯಾಗಳ ಬ್ಯಾನ್ ಮಾಡಿದ್ದೇಕೆ?
ನೇಪಾಳ ಸರ್ಕಾರ ಹಾಗೂ ಸೋಶಿಯಲ್ ಮೀಡಿಯಾ ಸಂಸ್ಥೆಗಳ ನಡುವೆ ಹಲವು ವರ್ಷದಿಂದಲೂ ಇಂತಹದೊಂದು ಕಂದಕ ಉಂಟಾಗಿದೆ. ಅಲ್ಲಿನ ಸುಪ್ರೀಂಕೋರ್ಟ್ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ನಿಯಮಗಳು ಹಾಗೆ ಕಾನೂನಿನ ಅಡಿ ನಿಯಂತ್ರಣ ತರಲು ಹಿಂದಿನಿಂದಲೂ ಪ್ರಯತ್ನಿಸುತ್ತಿದೆ. ನೇಪಾಳದಲ್ಲಿ ಕಾರ್ಯ ನಿರ್ವಹಿಸುವ ಈ ಎಲ್ಲಾ ಆ್ಯಪ್ಗಳು ಆಯಾ ಕಾನೂನುಗಳಿಗೆ ಒಳಪಡಬೇಕು ಎಂದು ಸರ್ಕಾರ ತಿಳಿಸಿದೆ. ಎಲ್ಲಾ ಆ್ಯಪ್ಗಳು ಕೂಡ ಸರ್ಕಾರದ ಮಾಹಿತಿ ಪ್ರಸಾರ ಇಲಾಖೆಯಡಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಹಲವು ಬಾರಿ ನೋಟಿಸ್ ಕೂಡ ಜಾರಿ ಮಾಡಿದೆ. ಆದ್ರೆ ಸಾಮಾಜಿಕ ಜಾಲತಾಣದ ಸಂಸ್ಥೆಗಳಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಹಾಗೆ ನಿಯಂತ್ರಣ ಅಧಿಕಾರಿ, ದೂರು ಪರಿಶೀಲಿಸಲು ಸ್ಥಳೀಯ ಅಧಿಕಾರಿಗಳ ನೇಮಕ ಮಾಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈ ಯಾವುದೇ ವಿಚಾರ ಕುರಿತು ಗಮನ ನೀಡದ ಕಾರಣ 26ಕ್ಕೂ ಹೆಚ್ಚು ಆ್ಯಪ್ಗಳ ಬ್ಯಾನ್ ಮಾಡಲಾಗಿತ್ತು.
ಇದರಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್, ಡಿಸ್ಕೊರ್ಡ್, ಪಿನ್ಟ್ರೆಸ್ಟ್, ಸಿಗ್ನಲ್, ಥ್ರೇಡ್, ವಿಚಾಟ್, ಕ್ವಾರ, ಟಂಬ್ಲರ್, ಕ್ಲಬ್ಹೌಸ್, ರಂಬಲ್, ಲೈನ್, ಇಮೋ, ಜಲೋ, ಹಮ್ರೋ ಪ್ಯಾಟ್ರೋ, ಮಿ ವಿಡಿಯೋ, ಮಿ ವೈಕ್3 ಮತ್ತು ಸೋಲ್, ಟಿಕ್ಟಾಕ್, ವೈಬರ್, ವೀಟಾಕ್, ನಿಂಬಜ್, ಟೆಲಿಗ್ರಾಮ್ ಮತ್ತು ಗ್ಲೋಬಲ್ ಡೈರಿ ಸೇರಿದ್ದವು. ಹಾಗೆ ಕೆಲವೊಂದು ಆ್ಯಪ್ಗಳು ನೋಂದಣಿ ಮಾಡಿಕೊಳ್ಳುವ ಹಂತದಲ್ಲಿದ್ದವು. ಹೀಗಾಗಿ ಅವುಗಳನ್ನು ಬ್ಯಾನ್ ಮಾಡಿರಲಿಲ್ಲ.
ಹಾಗೆ ಈ ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಖಾತೆ ಸೃಷ್ಟಿಸಿ ದ್ವೇಷ ಭಾಷಣ, ಸುಳ್ಳು ಸುದ್ದಿಯನ್ನು ಹಬ್ಬಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಹಾಗೆ ಕಾನೂನಿನ ಎಲ್ಲಾ ನಿಯಮಗಳನ್ನು ಒಪ್ಪಿಕೊಂಡರೆ ಮಾತ್ರವೇ ನೇಪಾಳದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗುವುದು ಎಂದಿತ್ತು.
ಆದ್ರೆ ಸರ್ಕಾರದ ಈ ನಿರ್ಧಾರವನ್ನು ಯುವ ಜನತೆ ವಿರೋಧಿಸಿತ್ತು. ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸರ್ಕಾರ ನಿಷೇಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಹಾಗೆ ನೇಪಾಳದಲ್ಲೂ ಕೂಡ ಸಾಮಾಜಿಕ ಜಾಲತಾಣಗಳ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಸಾವಿರಾರು ಮಂದಿ ಇದ್ದಾರೆ. ಇನ್ನು ಕೆಲವೇ ಕೆಲವು ದೇಶೀಯ ಆಪ್ಗಳಿದ್ದರೂ ಕೂಡ ಅವುಗಳ ಬಳಕೆ ಬೆರಳೆಣಿಯಷ್ಟು ಮಂದಿ ಮಾತ್ರವೇ ಮಾಡುತ್ತಿದ್ದಾರೆ.



Click it and Unblock the Notifications