Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿರುವ ತುಂಬಾನೇ ವಿಸ್ಮಯಕಾರಿ ಹಾಗೂ ರಹಸ್ಯ ಹೊಂದಿರುವ ಶಿವ ದೇವಾಲಯಗಳಿವೆ
ನಮ್ಮ ದೇಶದಲ್ಲಿ ಹಲವಾರು ಶಿವ ದೇವಾಲಯಗಳಿವೆ, ಅವುಗಳಲ್ಲಿ ಕೆಲವೊಂದು ದೇವಾಲಯ ಅದರ ವಿನ್ಯಾಸ ಹಾಗೂ ಅಲ್ಲಿರುವ ರಹಸದ್ಯ ಇಂದಿಗೂ ಜನರ ಅಚ್ಚರಿಗೆ ಕಾರಣವಾಗಿದೆ. ಆ ದೇವಾಲಯವನ್ನು ಹೇಗೆ ಆ ರೀತಿ ನಿರ್ಮಿಸಲಾಗಿದೆ ಎಂಬುವುದನ್ನು ಬೇಧಿಸಲು ಯಾವ ಎಂಜಿನಿಯರ್ಗಳಿಗೂ ಸಾಧ್ಯವಾಗಿಲ್ಲ, ಅಂಥ ವಿಸ್ಮಯಕಾರಿ ಶಿವ ದೇವಾಲಯಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ತುಂಗನಾಥ ದೇವಾಲಯ:
ಇದು ವಿಶ್ವದ ಅತ್ಯಂತ ಎತ್ತರದ ಶಿವ ದೇವಾಲಯ, ಹಿಮಾಲಯದ 3, 680 ಮೀಟರ್ ಎತ್ತರದಲ್ಲಿದೆ. ಈ ದೇವಾಲಯ 1000 ವರ್ಷಕ್ಕಿಂತಲೂ ಹಳೆಯ ದೇವಾಲಯವಾಗಿದೆ. ಈ ದೇವಾಲಯ ವರ್ಷದಲ್ಲಿ ಅಲ್ಪ ಅವಧಿ ಮಾತ್ರ ತೆರೆದಿರುತ್ತದೆ. ಈ ದೇವಾಲಯ ಏಪ್ರಿಲ್ನಿಂದ ನವೆಂಬರ್ರವರೆಗೆ ಮಾತ್ರ ತೆರೆದಿರುತ್ತದೆ, ಉಳಿದ ಸಮಯ ಹಿಮದಿಂದ ಅವೃತವಾಗಿರುತ್ತದೆ.
ಬೃಹದೀಶ್ವರ ದೇವಾಲಯ
ಈ ದೇವಾಲಯ ತಮಿಳುನಾಡಿನಲ್ಲಿದೆ. ಇದು ಜೋಳವಂಶದ ಹತವೈಭವಕ್ಕೆ ಕೈನ್ನಡಿಯಾಗಿದೆ. ಈ ದೇವಾಲಯವನ್ನು ಜೋಳ ಸಾಮ್ರಾಜ್ಯದ ರಾಜರಾಜ ನಿರ್ಮಿಸಿರುವುದು. ಹೆಸರಿಗೆ ತಕ್ಕಂತೆ ಇದು ಬೃಹದಾಕಾರದ ದೇವಾಲಯವಾಗಿದೆ. ಈ ದೇವಾಲಯದ ವಿಶೇಷವೆಂದರೆ ವಿಷುವತ್ ಸಂಕ್ರಾಂತಿಯ ಮಧ್ಯಾಹ್ನ ಈ ದೇವಾಲಯದ ನೆರಳು ಬೀಳುವುದಿಲ್ಲ, ಇದು ಇಂದಿಗೂ ಎಂಜಿನಿಯರ್ಗಳಿಗೆ ಸೋಜಿಗ. ಅಲ್ಲದೆ ಇಲ್ಲಿ ಸಂಗೀತ ಸ್ತಂಭಗಳಿವೆ, ಕಂಬಗಳಿಗೆ ಹೊಡೆದಾಗ ಅದರಿಂದ ಸಂಗೀತ ಬರುತ್ತದೆ.
ಮುರುಡೇಶ್ವರ ದೇವಾಲಯ
ಅರಬಿ ಕಡಲ ತೀರದಲ್ಲಿರುವ ಈ ದೇವಾಲಯದಲ್ಲಿ ಬೃಹತ್ ರಾಜಗೋಪುರವಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಬಟ್ಕಳದಲ್ಲಿದೆ. ಇದು ಜಗತ್ತಿನ ಅತಿ ಎತ್ತರದ ರಾಜಗೋಪುರ ಹೊಂದಿರುವ ದೇವಾಲಯ, ಪ್ರಪಂಚದ 2ನೇ ಅತೀ ಎತ್ತರದ ಶಿವ ದೇವಾಲಯ ಇಲ್ಲಿದೆ. ಈ ದೇವಾಲಯದ ಮೂರು ಕಡೆ ನೀರಿನಿಂದ ಆವೃತವಾಗಿರುವ ದೇವಾಲಯ ಇದಾಗಿದೆ. ತುಂಬಾ ಪ್ರವಾಸಿಗರು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಾರೆ.
ಚಿದಂಬರ ದೇವಾಲಯ, ತಮಿಳುನಾಡು
ಈ ದೇವಾಲಯಕ್ಕೆ ತಮಿಳುನಾಡಿನ ಎಲ್ಲಾ ಭಾಗಗಳಿಂದಲೂ ಬರಬಹುದು, ಇಲ್ಲಿರುವ ನಟರಾಜನ ಕಾಲಿನ ಹೆಬ್ಬರಳು ಭೂಮಿಯ ಅಯಸ್ಕಾಂತೀಯ ಕೇಂದ್ರ ಸೂಚಿಸುವುದಂತೆ. ಈ ದೇವಾಲಯದ ಮೇಲ್ಛಾವಣೆ 21600 ಚಿನ್ನದ ಲೇಪನ ಹೊದಿಕೆ ಹೊಂದಿದ್ದು, ಮನುಷ್ಯ ಒಂದು ದಿನಕ್ಕೆ ಇಷ್ಟು ಬಾರಿ ಉಸಿರಾಡುತ್ತಾನೆ. ಈ ದೇವಾಲಯದ ರಂಗಮಂಟಪ ತಲುಪಲು 5 ಮೆಟ್ಟಿಲುಗಳಿವೆ, ಅವು ಶಿವ ಪಂಚಾಕ್ಷರಿ ಮಂತ್ರ ನಮಃಶಿವಾಯ ಸೂಚಿಸುತ್ತದೆ.
ನಟರಾಜನ ಬಳಿ ರಿಉವ ನಾಲ್ಕು ಕಂಬಗಳು ನಾಲ್ಕು ವೇದಗಳನ್ನು ಸೂಚಿಸುತ್ತದೆ.
ಉತ್ತರಾಖಂಡದಲ್ಲಿರುವ ಕೇದರನಾಥ ದೇವಾಲಯ
2013ರಲ್ಲಿ ಕೇದರನಾಥದಲ್ಲಿ ದೊಡ್ಡ ಪ್ರವಾಹ ಬಂತು, 5000ಕ್ಕೂ ಅಧೀಕ ಜನ ಕಾಣೆಯಾದರು, ಅಲ್ಲಿಯ ಪರಿಸರ ಕೊಚ್ಚಿಕೊಂಡು ಹೋಯ್ತು, ಆದರೆ ಈ ದೇವಾಲಯಕ್ಕೆ ಏನೂ ಆಗಿರಲಿಲ್ಲ. ಇದು ವರ್ಷದಲ್ಲಿ 6 ತಿಂಗಳು ಮುಚ್ಚಿರುತ್ತದೆ, ಈ ದೇವಾಲಯ ಅಕ್ಷಯ ತೃತೀಯದಂದು ಮರು ಓಪನ್ ಆಗುತ್ತೆ. ಈ ಅವಧಿಯಲ್ಲಿ ಭಕ್ತರು ಇಲ್ಲಿಗೆ ಬಂದು ಶಿವ ದೇವಾಲಯದ ದರ್ಶನ ಒಡೆಯುತ್ತಾರೆ, ಇಲ್ಲಿಗೆ ಬರಲು ಟ್ರಕ್ಕಿಂಗ್ ರಿತಿಯಲ್ಲಿ ಬರಬೇಕು.
ಅಮರನಾಥ ದೇವಾಲಯ
ಅಮರನಾಥ ದೇವಾಲಯ ಹಿಂದೂಗಳ ಪವಿತ್ರ ದೇವಾಲಯದಲ್ಲಿ ಒಂದಾಗಿದೆ. ಅಮರನಾಥ ಗುಹೆಯು ಶ್ರೀನಗರದ ಈಶಾನ್ಯದ ಸುಮಾರು 145 ಕಿ.ಮೀ ದೂರದಲ್ಲಿದೆ. ಇಲ್ಲಿ ಜುಲೈ ತಿಂಗಳಿನಲ್ಲಿ ಮಂಜುಗೆಡ್ಡೆಯಿಂದ ಶಿವಲಿಂಗ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಲಕ್ಷಾಂತ ಭಕ್ತರು ಇಲ್ಲಿಗೆ ಬಂದು ಶಿವಲಿಂಗದ ದರ್ಶನ ಪಡೆದು ಬರುತ್ತಾರೆ, ಏಕೆ ಇಲ್ಲಿ ಮಂಜುಗೆಡ್ಡೆಯ ಶಿವಲಿಂಗ ರೂಪುಗೊಳ್ಳುತ್ತದೆ ಎಂಬುವುದು ಇನ್ನೂ ಗೊತ್ತಿಲ್ಲ, ಹೀಗೆ ಈ ದೇವಾಲಯ ಅಚ್ಚರಿಯನ್ನು ಒಳಗೊಂಡಿರುವ ದೇವಾಲಯವಾಗಿದೆ.



Click it and Unblock the Notifications