Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹಾಸನಾಂಬೆಯ ಪೂಜೆ: ಈ ದೇವಾಲಯದಲ್ಲಿ ಹಚ್ಚಿಟ್ಟ ದೀಪ, ಇಟ್ಟ ನೈವೇದ್ಯ, ಹೂ ಮುಂದಿನ ವರ್ಷದವರೆಗೂ ಹಾಗೆಯೇ ಇರುತ್ತೆ!
ಹಾಸನಾಂಬೆ ದೇವಿಯ ಬಾಗಿಲು ನವೆಂಬರ್ 3ಕ್ಕೆ ಓಪನ್ ಆಗಿದೆ. ಮೊದಲೆಲ್ಲಾ ಊರ ಜಾತ್ರೆಯಂತೆ ಸರಳವಾಗಿ ನಡೆಯುತ್ತಿದ್ದ ಉತ್ಸವ ಇದೀಗ ತುಂಬಾನೇ ಪ್ರಸಿದ್ದು ಪಡೆದಿದ್ದು ಹಾಸನಾಂಬೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿ ದೇವಿಯ ದರ್ಶನ ಕೆಲವು ದಿನಗಳಷ್ಟೇ ಇರುವುದಾದರೂ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ತುಂಬಾನೇ ಅದ್ಧೂರಿಯಿಂದ ಆಚರಿಸಲಾಗುವುದು. ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಹಾಸನಾಂಬೆಯ ಪವಾಡವೇ ಕಾರಣ.

ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಭಾಗ್ ದೊರೆಯುವುದು
ಹಾಸನೆಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆಗೆಯಲಾಗುವುದು, ಉಳಿದ ಸಂದರ್ಭಗಳಲ್ಲಿ ಈ ದೇವಾಲಯದ ಬಾಗಿಲು ಮುಚ್ಚಿಯೇ ಇರುತ್ತದೆ. ಏಕೆ ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಸಿಗುವುದು ಎಂಬುವುದಕ್ಕೆ ಪೌರಾಣಿಕ ಕತೆಯಿದೆ. ಸಪ್ತ ಮಾತೃಕೆಯರ ಜೊತೆ ಅವರ ಸಹೋದರ ಸಿದ್ಧೇಶ್ವರ ಕೂಡ ದಕ್ಷಿಣದ ಕಡೆಗೆ ಬಂದಾಗ ಇಲ್ಲಿಯ ಪ್ರಕೃತಿ ಸೌಂದರ್ಯ ಇಷ್ಟಪಟ್ಟು ನೆಲೆಸಲು ಬಯಸುತ್ತಾರೆ, ಅವರ ಜೊತೆ ಸಹೋದರ ಸಿದ್ಧೇಶ್ವರ ಕೂಡ ಇರುತ್ತಾನೆ. ಸಿದ್ಧೇಶ್ವರ ಭಕ್ತರು ನೀಡಿದ ಪ್ರಸಾದವನ್ನು ಯಾವುದೇ ಮಡಿ ಮೈಲಿಗೆ ಎನ್ನದೆ ಸೇವಿಸುತ್ತಿದ್ದ, ಇದರಿಂದ ಬೇಸರಗೊಂಡ ಮತೃಕೆಯರು ವರ್ಷಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತೇವೆ, ಅದರಂತೆ ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಲಾಗುವುದು. ಇಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿಗೆ ಪ್ರತಿದಿನವೂ ಪೂಜೆಯನ್ನು ಮಾಡಲಾಗುವುದು.
ಹಾಸನಾಂಬೆಯ ಕುರಿತು ಇರುವ ಐತಿಹಾಸಿಕ ಕತೆ
12ನೇ ಶತಮಾನದಲ್ಲಿ ಹಾಸನವನ್ನು ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ ಆಳುತ್ತಿದ್ದ. ಒಮ್ಮೆ ಆತ ಪ್ರಯಾಣ ಮಾಡುವಾಗ ಮೊಲವೊಂದು ಅಡ್ಡ ಬರುತ್ತದೆ, ಇದನ್ನು ಅಪಶಕುನ ಎಂದು ಭಾವಿಸಿ ನೊಂದುಕೊಳ್ಳುತ್ತಾನೆ. ಆದ ದೇವಿ ಆತನಿಗೆ ಕನಸಿನಲ್ಲಿ ಬಂದು ಮಗು ಚಿಂತೆ ಬಿಡು ಇಲ್ಲಿ ಒಂದು ಕೋಟೆಯನ್ನು ಕಟ್ಟು ಎಂದು ಆದೇಶ ನೀಡುತ್ತಾಳೆ. ಕೃಷ್ಣಪ್ಪ ನಾಯಕ ಕೋಟೆಯನ್ನು ಕಟ್ಟಿ ಹಾಸನಾಂಬೆ ಎಂದು ಹೆಸರಿಟ್ಟ ಎಂದು ಐತಿಹಾಸಿಕ ಕತೆ ಹೇಳುತ್ತದೆ.
ಈ ಪವಾಡದ ಕಾರಣ ಹಾಸನಾಂಬೆ ದೇಗುಲ ಪ್ರಸಿದ್ಧಿಯನ್ನು ಪಡೆದಿದೆ
ವರ್ಷಕ್ಕೊಮ್ಮೆ ಈ ದೇವಾಲಯದ ಬಾಗಿಲು ತೆಗೆಯುವಾಗ ಅಲ್ಲಿ ತಳವಾರ ಮನೆತನದವರು ಇರಬೇಕು, ಅವರು ಪೂಜೆಯನ್ನು ಮಾಡಿ ಬಾಳೆ ಕಂದನ್ನು ಕತ್ತರಿಸಿ ನಂತರವಷ್ಟೇ ಬಾಗಿಲು ತೆರೆಯಲಾಗುವುದು. ಹಾಗೇ ತೆರೆದರೆ ದೇವಿಯ ಪ್ರಖರ ದೃಷ್ಟಿ ತಡೆಯುವ ಶಕ್ತಿ ಭಕ್ತರಿಗಿರಲ್ಲ ಎಂಬ ನಂಬಿಕೆಯಿದೆ. ಆದ್ದರಿಮದ ಬಾಳೆಗಿಡ ಕಡಿದು ದೃಷ್ಟಿ ನಿವಾರಿಸಿ ನಂತರವಷ್ಟೇ ಗರ್ಭಗುಡಿಗೆ ಪ್ರವೇಶ ಮಾಡಲಾಗುವುದು, ನಂತರ ಗರ್ಭಗುಡಿಗೆ ಪ್ರವೇಶ ಮಾಡಲಾಗುವುದು.
ಮೊದಲ ದಿನ ಹಾಸನಾಂಬೆಗೆ ಅಲಂಕಾರವಿರಲ್ಲ
ಮೊದಲ ದಿನ ಹಾಸನಾಂಬೆಗೆ ಅಲಂಕಾರವಿರಲ್ಲ, ಎರಡನೇ ದಿನ ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ವಸ್ತ್ರ- ಆಭರಣಗಳನ್ನು ತಂದು ಅಲಂಕರಿಸಿ, ಪೂಜೆ ಮಾಡಿ ನೈವೇದ್ಯ ಅರ್ಪಿಸಲಾಗುವುದು.
ಬಲಿಪಾಡ್ಯಮಿಯಂದು ದೇವಾಲಯದ ಬಾಗಿಲು ಮುಚ್ಚಲಾಗುವುದು
ಈ ದಿನ ತುಪ್ಪದ ದೀಪವನ್ನು ಹಚ್ಚಿ, ಹೂಗಳು, ನೈವೇದ್ಯ ಇಟ್ಟು ಬಾಗಿಲು ಮುಚ್ಚಲಾಗುವುದು. ಅಚ್ಚರಿಯೆಂದರೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ಆ ದೀಪ ಉರಿಯುತ್ತಲೇ ಇರುತ್ತದೆ, ಹೂಗಳು ಬಾಡಿರುವುದಿಲ್ಲ, ಪ್ರಸಾದ ಕೂಡ ಹಾಳಾಗಿರುವುದಿಲ್ಲ.
ಈ ಪವಾಡದ ಕಾರಣ ಇಲ್ಲಿ ಭಕ್ತರ ಸಾಗರವೇ ಹರಿದು ಬರುವುದು.



Click it and Unblock the Notifications