Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಕಲಿ ನೋಟಲ್ಲ ಇಡೀ ಬ್ಯಾಂಕ್ ನಕಲಿ..! ನಕಲಿ ಬ್ಯಾಂಕ್ ಕಟ್ಟಿ ಹಣ ಮಾಡಲು ಹೊರಟಿದ್ದಾತನ ಕಥೆ!
ನೀವು ನಕಲಿ ನೋಟುಗಳ ಬಗ್ಗೆ ಕೇಳಿರುತ್ತೀರ. ಅಸಲಿ ನೋಟಿನಂತೆ ನಕಲಿ ನೋಟುಗಳ ತಯಾರು ಮಾಡಿ ಮಾರುಕಟ್ಟೆಗೆ ಬಿಡುವ ದೊಡ್ಡ ದೊಡ್ಡ ಗ್ಯಾಂಗ್ಗಳ ಬಗ್ಗೆಯೂ ಕೇಳಿರುತ್ತೀರಿ. ನಕಲಿ ಎಂದರೆ ಯಾರಿಗೂ ತಿಳಿಯುವುದು ಇಲ್ಲ, ಅಸಲಿ ನೋಟು ಮತ್ತು ನಕಲಿಯನ್ನು ಒಟ್ಟಿಗೆ ಇಟ್ಟರೆ ಯಾವುದು ನಕಲಿ ಎಂಬುದೇ ತಿಳಿಯುವುದಿಲ್ಲ. ಅಷ್ಟೊಂದು ಯಥಾವತ್ತಾಗಿ ಕಳ್ಳರು ಈ ನಕಲು ಮಾಡುವಲ್ಲಿ ಪರಿಣಿತಿ ಪಡೆದಿರುತ್ತಾರೆ.
ಆದ್ರೆ ನೀವು ಎಂದಾದರು ನಕಲಿ ಬ್ಯಾಂಕ್ ಬಗ್ಗೆ ಕೇಳಿದ್ದೀರಾ..? ಹೌದು ಇಲ್ಲಿ ಬರಿ ನೋಟಲ್ಲ ಇಡೀ ಬ್ಯಾಂಕ್ ನಕಲಿ. ಈ ರೀತಿಯ ಅಚ್ಚರಿಯ ಘಟನೆಯೂ ನಡೆದಿತ್ತು. ಇಡೀ ಎಸ್ಬಿಐ ನಕಲಿ ಬ್ಯಾಂಕ್ ಅನ್ನೇ ಸೃಷ್ಟಿಸಿ ಹಣದ ವ್ಯವಹಾರಕ್ಕೂ ಸಿದ್ಧಗೊಂಡಿತ್ತು. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ಯಾವ ರೀತಿ ಇದು ನಕಲಿ ಬ್ಯಾಂಕ್ ಎಂಬುದನ್ನು ಪತ್ತೆ ಮಾಡಿದ್ರು, ಏನಿದು ಕಥೆ ಎಂಬುದನ್ನು ನೋಡಿ.

ನೀವು ದಿನ ಹಣ ಕಟ್ಟಿ ಬರುತ್ತಿದ್ದ ಬ್ಯಾಂಕ್ ಒಂದು ಇದ್ದಕ್ಕಿದ್ದಂತೆ ನಕಲಿ ಎಂದು ತಿಳಿದರೆ ಹೇಗಾಗುತ್ತೆ ಹೇಳಿ. ಇಲ್ಲಿ ಆಗಿದ್ದು ಅದೇ. ತಮಿಳುನಾಡಿನ ಕಡಲೂರಿನ ಪಂರುತಿಯಲ್ಲಿ ಎರಡು ವರ್ಷದ ಹಿಂದೆ ನಡೆದ ಘಟನೆ ಇದು. ಎಸ್ಬಿಐ ಬ್ಯಾಂಕ್ ಅನ್ನೇ ಇಲ್ಲಿ ನಕಲು ಮಾಡಿ ಹಣ ಕಟ್ಟಿಸಿಕೊಳ್ಳಲಾಗಿತ್ತು.
ಮಾಜಿ ಬ್ಯಾಂಕ್ ಉದ್ಯೋಗಿ ಪುತ್ರನೇ ಮಾಸ್ಟರ್ ಮೈಂಡ್
ಇಲ್ಲಿನ ನಗರದಲ್ಲಿ ಹೊಸದಾಗಿ ಒಂದು ಎಸ್ಬಿಐ ಬ್ಯಾಂಕ್ ಶಾಖೆ ಆರಂಭಗೊಂಡಿತ್ತು. ಅಲ್ಲಿದ್ದವರು ಸದ್ಯ ಹತ್ತಿರದಲ್ಲೇ ಬ್ಯಾಂಕ್ ಶಾಲೆ ಓಪನ್ ಆಯಿತಲ್ಲ ಎಂದು ದೂರದ ಶಾಖೆ ಬಿಟ್ಟು ಇದೇ ಶಾಖೆಯಲ್ಲಿ ಖಾತೆ ತೆರೆಯಲು ಮುಂದಾಗಿದ್ರು, ಒಂದಿಷ್ಟು ಮಂದಿ ನಿತ್ಯ ತಮ್ಮ ಉಳಿತಾಯದ ಹಣ ಕಟ್ಟಲು ಹತ್ತಿರದ ಶಾಖೆ ಇದೆ ಎಂದು ಹಿರಿ ಹಿರಿ ಹಿಗ್ಗಿದ್ರು. ಇಷ್ಟೆಲ್ಲಾ ಮಾಡಿದ್ದು ಓರ್ವ ಬ್ಯಾಂಕ್ ಉದ್ಯೋಗಿಯ ಮಗನಾಗಿದ್ದ.
ಕಮಲ್ ಬಾಬು ಎಂಬಾತನ ತಂದೆ 10 ವರ್ಷಗಳ ಹಿಂದೆ ನಿಧನರಾದರು ಮತ್ತು ಅವರ ತಾಯಿ ಲಕ್ಷ್ಮಿ ಎರಡು ವರ್ಷಗಳ ಹಿಂದೆ ಬ್ಯಾಂಕ್ನಿಂದ ನಿವೃತ್ತರಾಗಿದ್ದರು. ನಿರುದ್ಯೋಗಿಯಾಗಿದ್ದ ಕಮಲ್ ಅವರು ಎಸ್ಬಿಐ ನಕಲಿ ಶಾಖೆ ತೆರೆಯುವ ಆಲೋಚನೆ ಮಾಡಿದ್ದ.
ಸಹಾಯಕ್ಕೆ ಬಂದ ಸ್ನೇಹಿತ
ಆತ ನಕಲಿ ಬ್ಯಾಂಕ್ ತೆರೆಯುವ ಪ್ಲಾನ್ಗೆ ಆತನ ಸ್ನೇಹಿತ ಸಹಾಯಕ್ಕೆ ಬಂದಿದ್ದ, ಶಾಖೆಗೆ ಒಳ್ಳೆಯ ಜಾಗ ಹುಡುಕಿದರು, ಅದೊಂದು ಬಾಡಿಗೆ ಕಟ್ಟಡವಾಗಿತ್ತು, ಒಂದಿಷ್ಟು ಲೋನ್ ಮಾಡಿ ತಾವೇ ಮೇಲ್ವಿಚಾರಣೆ ನಡೆಸಿ ಶಾಖೆ ನಿರ್ಮಿಸಿದರು. ಅಷ್ಟೆ ಅಲ್ಲ ಶಾಖೆಗೆ ಬೇಕಾದ ಬೋರ್ಡ್, ಪಾಸ್ಬುಕ್, ಚೆಕ್ ಬುಕ್, ಚಲನ್ ಸೇರಿ ಎಲ್ಲವೂ ಯಥಾ ವತ್ತಾಗಿ ನಕಲು ಮಾಡಿದ್ದರು. ಯಾರೊಬ್ಬರಿಗೂ ಇದು ನಕಲಿ ಬ್ಯಾಂಕ್ ಎಂಬುದೇ ತಿಳಿಯದಂತೆ ಮಾಡಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ಒಂದಿಷ್ಟು ದಿನ ಈ ಬ್ಯಾಂಕ್ ನಿರ್ಮಾಣದ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಒಮ್ಮೆ ಶಾಖಾ ವ್ಯವಸ್ಥಾಪಕರು ಅದೇ ಮಾರ್ಗದಲ್ಲಿ ತೆರಳುವಾಗ ಹೊಸ ಬ್ಯಾಂಕ್ ಕಟ್ಟುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಎಲ್ಲವೂ ಗೊಂದಲವಾಗಿ ಕಂಡಿತ್ತು. ಹೀಗಾಗಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಇದೊಂದು ನಕಲಿ ಬ್ಯಾಂಕ್ ಎಂದು ತಿಳಿದುಬಂದಿತ್ತು.
ಸ್ಥಳಕ್ಕೆ ಬಂದ ಶಾಖಾ ವ್ಯವಸ್ಥಾಪಕ ದಂಗು
ಇನ್ನು ನಕಲಿ ಶಾಖೆಯನ್ನು ಪರಿಶೀಲನೆ ನಡೆಸಲು ಬಂದ ಶಾಖಾ ವ್ಯವಸ್ಥಾಪಕರು ಅಕ್ಷರಶಃ ದಂಗಾಗಿದ್ದರು, ಅಸಲಿ ಶಾಖೆಯಂತೆ ಎಲ್ಲ ವ್ಯವಸ್ಥೆಯೂ ಅಲ್ಲಿತ್ತು. ಇದನ್ನು ಕಂಡ ಅವರು ಬೆಚ್ಚಿಬಿದ್ದಿದ್ದರು. ಕೂಡಲೇ ದೂರು ದಾಖಲಿಸಿದರು. ಸ್ಥಳಕ್ಕೆ ಬಂದ ಪೊಲೀಸರು
ಮಾಸ್ಟರ್ ಮೈಂಡ್ ಕಮಲ್ ಬಾಬು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಬ್ಬರ್ ಸ್ಟಾಂಪ್ ತಯಾರಿ ಮಾಡಿದ್ದ ಮಾಲೀಕ ಮಾಣಿಕ್ಕಂ (52), ಪ್ರಿಂಟಿಂಗ್ ಪ್ರೆಸ್ ಮಾಲೀಕ ಕುಮಾರ್ (42) ಬಂಧಿಸಿದರು. ಆದರೆ ಬ್ಯಾಂಕ್ ಹೊಸದಾಗಿ ಇನ್ನೇನು ಕಾರ್ಯಾಚರಣೆ ನಡೆಸಲು ಮುಂದಾಗಿತ್ತು, ಯಾರ ಹಣವನ್ನು ಇವರು ಪಡೆದಿರಲಿಲ್ಲ ಎಂದು ತಿಳಿದುಬಂದಿತು.



Click it and Unblock the Notifications